Showing posts with label ಆಚಾರಧರ್ಮ. Show all posts
Showing posts with label ಆಚಾರಧರ್ಮ. Show all posts

ರಾತ್ರಿಯ ಸಮಯದಲ್ಲಿ ಕೂದಲನ್ನು ಏಕೆ ಬಾಚಬಾರದು?

ರಾತ್ರಿಯ ಸಮಯದಲ್ಲಿ ವಾಯುಮಂಡಲದಲ್ಲಿ ತ್ರಾಸದಾಯಕ ಲಹರಿಗಳ ಪ್ರಮಾಣವು ಹೆಚ್ಚಿಗೆ ಇರುತ್ತದೆ. ವೇಗವಾಗಿ ಸಂಚರಿಸುವ ಈ ತ್ರಾಸದಾಯಕ ಲಹರಿಗಳಿಂದ ವಾತಾವರಣದಲ್ಲಿ ಉಷ್ಣ ಇಂಧನದ ನಿರ್ಮಿತಿಯಾಗುತ್ತಿರುತ್ತದೆ. ‘ಕೂದಲನ್ನು ಬಾಚುವ’ ಘರ್ಷಣಾತ್ಮಕ ಪ್ರಕ್ರಿಯೆಯಿಂದ ಹಾಗೂ ಕೂದಲಿನ ಚಲನವಲನದಿಂದ ನಿರ್ಮಾಣವಾಗುವ ನಾದಲಹರಿಗಳ ಕಡೆಗೆ ವಾಯುಮಂಡಲದಲ್ಲಿ ಸಂಚರಿಸುವ ತ್ರಾಸದಾಯಕ ಲಹರಿಗಳು ಆಕರ್ಷಿತವಾಗುತ್ತವೆ. ಕೂದಲುಗಳ ತುದಿಗಳಿಂದ ತ್ರಾಸದಾಯಕ ಲಹರಿಗಳು ಜೀವದ ದೇಹವನ್ನು ವೇಗವಾಗಿ ಪ್ರವೇಶಿಸುತ್ತವೆ. ಇದರಿಂದ ಜೀವಕ್ಕೆ ಅಸ್ವಸ್ಥವಾಗುವುದು, ಶರೀರ ಜಡವೆನಿಸುವುದು, ಕೆಟ್ಟ ಕನಸುಗಳು ಬೀಳುವುದು, ಜುಮ್ಮುಗಟ್ಟಿದಂತಾಗಿ ಶರೀರಕ್ಕೆ ಸ್ಪರ್ಶಜ್ಞಾನವಿಲ್ಲದಂತಾಗುವುದು ಮುಂತಾದ ತೊಂದರೆಗಳು ಆಗುತ್ತವೆ. ವೇಗವಾಗಿ ಸಂಕ್ರಮಿತವಾಗುವ ಈ ತ್ರಾಸದಾಯಕ ಲಹರಿಗಳಿಂದ ಕೆಲವೊಮ್ಮೆ ಯಾವುದಾದರೊಂದು ಕೆಟ್ಟ ಶಕ್ತಿಯು ದೇಹವನ್ನು ಪ್ರವೇಶಿಸಬಹುದು. ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ರಾತ್ರಿ ಸಮಯದಲ್ಲಿ ಕೂದಲನ್ನು ಬಾಚಬಾರದು.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)


ಆಚಾರಧರ್ಮದ ಬಗೆಗಿನ ಇತರ ಲೇಖನಗಳನ್ನು ಇಲ್ಲಿ ಓದಿ.

ಆಚಾರಧರ್ಮದ ಬಗೆಗಿನ ಲೇಖನಗಳು

ಈ ಬ್ಲಾಗ್‌ನಲ್ಲಿರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ನಮ್ಮ ಅನುಮತಿ ಪಡೆದು, ಆಧಾರಗ್ರಂಥವನ್ನು ಉಲ್ಲೇಖಿಸಬೇಕು ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ - dharma.granth0@gmail.com

ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು; ಹೆಸರುವಾಸಿಯಾಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಆಯಾ ಧರ್ಮಶಿಕ್ಷಣದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ನೀವು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. - ಧರ್ಮಗ್ರಂಥ (ಸನಾತನ ಸಂಸ್ಥೆ)

ಆಚಾರಧರ್ಮದ ಬಗೆಗಿನ ಲೇಖನಗಳು
  1. ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು?
  2. ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
  3. ಕೂದಲನ್ನು ಬಿಸಿಲಿನಲ್ಲಿ ಒಣಗಿಸುವುದರಿಂದಾಗುವ ಲಾಭ ಮತ್ತು ಯಂತ್ರದಿಂದ ಒಣಗಿಸುವುದರಿಂದಾಗುವ ಹಾನಿ
  4. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು?
  5. ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?
  6. ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
  7. ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
  8. ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
  9. ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?
  10. ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?
  11. ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
  12. ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
  13. ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
  14. ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ
  15. ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ
  16. ನಿಮ್ಮ ಜನ್ಮತಿಥಿ ಇಲ್ಲಿ ಪಡೆಯಿರಿ.
  17. ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ!
  18. ಸೂರ್ಯನಮಸ್ಕಾರ ಮಾಡುವ ಪದ್ಧತಿ
  19. ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಏಕೆ ನೋಡಬಾರದು?
  20. ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?
  21. ಮಲಮೂತ್ರ ವಿಸರ್ಜನೆ ಮಾಡುವಾಗ ಜನಿವಾರವನ್ನು ಬಲಗಿವಿಯ ಮೇಲೆ ಏಕೆ ಇಡಬೇಕು?
  22. ಮುಸ್ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚುವುದರ ಶಾಸ್ತ್ರ
  23. ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು
  24. ಸ್ನಾನವನ್ನು ಮಾಡುವಾಗ ಪಠಿಸಬೇಕಾದ ಶ್ಲೋಕಗಳು
  25. ಕರದರ್ಶನ
  26. ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳು
  27. ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
  28. ರಾತ್ರಿಯ ಸಮಯದಲ್ಲಿ ಕೂದಲನ್ನು ಏಕೆ ಬಾಚಬಾರದು?

ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಏಕೆ ಮಾಡಬಾರದು?


ಶಾಸ್ತ್ರ - ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುಗಳು ಹರಡಿ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ: ‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ. ಜೀರ್ಣ ದೇವಸ್ಥಾನಗಳ ಭಗ್ನ ಅವಶೇಷಗಳಿಂದ ವಾಯುಮಂಡಲದಲ್ಲಿ ಹೊರಬೀಳುವ ದೇವತೆಯ ಚೇತನವು ಕಡಿಮೆಯಾಗಿದ್ದರೂ ಆ ದೇವತೆಯ ಪೃಥ್ವಿ ಮತ್ತು ಆಪತತ್ತ್ವಗಳೊಂದಿಗೆ ಸಂಬಂಧಿಸಿದ ಶಕ್ತಿಸ್ವರೂಪ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿ ಸುಪ್ತ ರೂಪದಲ್ಲಿ ಇರುವುದರಿಂದ ಅದು ಒಂದು ಪವಿತ್ರ ವಾಯುಮಂಡಲವೇ ಆಗಿರುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಮತ್ತು ವಾಯುಗಳ ಹರಡುವಿಕೆಗೆ ಕಾರಣವಾಗುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದರಿಂದ ಆ ಸ್ಥಳದಲ್ಲಿರುವ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ ಮತ್ತು ಇದು ಒಂದು ಪಾಪಭರಿತ ಕರ್ಮವಾಗುತ್ತದೆ.
ಟಿಪ್ಪಣಿ : ಜೀರ್ಣ ದೇವಸ್ಥಾನಗಳ ಬಳಿ ಅಷ್ಟೇ ಅಲ್ಲದೇ, ದೇವಸ್ಥಾನದ ಸುತ್ತಮುತ್ತಲಿನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಪಾಪಕರ್ಮವೇ ಆಗಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

ಇತರ ವಿಷಯಗಳು
Dharma Granth

ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳು


ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ: ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ...’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ. ಆಕರ್ಷಿತಗೊಂಡ ದೇವತ್ವರೂಪಿ ಲಹರಿಗಳು ಬೊಗಸೆಯಲ್ಲಿಯೇ ಘನೀಕೃತವಾಗುತ್ತವೆ ಮತ್ತು ಬೊಗಸೆಯ ರೂಪದಲ್ಲಿ ತಯಾರಾದ ಟೊಳ್ಳಿನಲ್ಲಿ ಆಕಾಶದ ವ್ಯಾಪಕತ್ವವನ್ನು ಪಡೆದುಕೊಂಡು ಅಲ್ಲಿಯೇ ಸುತ್ತಾಡುತ್ತಿರುತ್ತವೆ. ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ತಯಾರಾಗಿ ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಸುಷುಮ್ನಾನಾಡಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿದೆ. ರಾತ್ರಿಯ ಸಮಯ ಮಾಡಿದ ತಮೋಗುಣೀ ನಿದ್ರೆಯಿಂದ ದೇಹದಲ್ಲಿ ತಮೋಗುಣವು ನಿರ್ಮಾಣವಾಗಿದ್ದರೆ ಸುಷುಮ್ನಾನಾಡಿಯ ಜಾಗೃತಿಯಿಂದ ಅದನ್ನು ಹೊರಹಾಕಲು ಸಹಾಯವಾಗುತ್ತದೆ. 
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೧೦.೨೦೦೭, ಬೆಳಗ್ಗೆ ೯.೪೬)

ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ...’ ಎಂಬ ಶ್ಲೋಕವನ್ನು ಪಠಿಸುವುದರಿಂದಾಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ 
(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು / ಝೂಮ್ ಮಾಡಲು ಚಿತ್ರವನ್ನು ಕ್ಲಿಕ್ ಮಾಡಿ.)


೧. ಸೂಕ್ಷ್ಮಜ್ಞಾನದ ಚಿತ್ರದ ಸತ್ಯತೆ : ಶೇ.೮೦
೨. ಚಿತ್ರದಲ್ಲಿನ ಒಳ್ಳೆಯ ಸ್ಪಂದನಗಳು: ಶೇ.೨ - ಪ.ಪೂ.ಡಾ.ಆಠವಲೆ
೩. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ: ಈಶ್ವರೀ ತತ್ತ್ವ ಶೇ.೧, ಚೈತನ್ಯ ಶೇ.೧.೨೫ ಮತ್ತು ಶಕ್ತಿ ಶೇ.೧.೭೫

೪. ಇತರ ಅಂಶಗಳು
ಅ. ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುವುದು, ಈಶ್ವರನೊಂದಿಗೆ ಅವನ ಅನುಸಂಧಾನವಾಗುವುದು ಮತ್ತು ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗುವುದು: ರಾತ್ರಿಯ ನಿದ್ರೆಯಿಂದ ವ್ಯಕ್ತಿಯ ದೇಹದಲ್ಲಿ ತಮೋಗುಣಿ ಸ್ಪಂದನಗಳು ನಿರ್ಮಾಣವಾಗುತ್ತವೆ. ಇದರಿಂದ ಅವನ ಮೇಲೆ ತ್ರಾಸದಾಯಕ ಶಕ್ತಿಯ ದಪ್ಪ ಆವರಣ ಬರುತ್ತದೆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ...’ ಎಂಬ ಶ್ಲೋಕವನ್ನು ಪಠಿಸುವುದರಿಂದ ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುತ್ತದೆ. ಹಾಗೆಯೇ ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗಿ, ಈಶ್ವರನ ಅನುಸಂಧಾನ ಪ್ರಾರಂಭವಾಗುತ್ತದೆ ಮತ್ತು ಆ ವ್ಯಕ್ತಿಯು ದಿನವಿಡೀ ಅದೇ ಸ್ಥಿತಿಯಲ್ಲಿರಲು ಸಹಾಯವಾಗುತ್ತದೆ.

ಆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ...’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು: ಹಿಂದೂ ಧರ್ಮದಲ್ಲಿ ‘ಅಯಮ್ ಆತ್ಮಾ ಬ್ರಹ್ಮ|’ ಅಂದರೆ ‘ಆತ್ಮವೇ ಬ್ರಹ್ಮ’ವಾಗಿದೆ ಎಂಬುದನ್ನು ಕಲಿಸಲಾಗುತ್ತದೆ. ‘ಕರಾಗ್ರೇ ವಸತೇ ಲಕ್ಷ್ಮೀಃ...’ ಈ ಶ್ಲೋಕವು ಇದರ ಒಂದು ಉದಾಹರಣೆಯಾಗಿದೆ. ಆದುದರಿಂದ ಪ್ರಾತಃಕಾಲ ಎದ್ದ ಮೇಲೆ ಕರದರ್ಶನ ಪಡೆಯುತ್ತಾ ಈ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದಾಗಿದೆ. ಹಿಂದೂ ಧರ್ಮವು ಬಾಹ್ಯಶುದ್ಧಿಗಿಂತ ಅಂತರ್ಮನಸ್ಸಿನ ಶುದ್ಧಿಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ.

ಇ. ವ್ಯಕ್ತಿಯಿಂದ ಅರಿವಿಲ್ಲದೇ ಘಟಿಸುವ ಅಯೋಗ್ಯ ಕರ್ಮಗಳ ಸಮಯದಲ್ಲಿ ಅವನ ಅಂತರ್ಮನಸ್ಸಿಗೆ ಅವುಗಳ ಅರಿವಾಗಿ ಅವುಗಳನ್ನು ತಡೆಗಟ್ಟಬಹುದು: ವ್ಯಕ್ತಿಯಿಂದ ದಿನವಿಡೀ ಅನೇಕ ಕರ್ಮಗಳು ಘಟಿಸುತ್ತಿರುತ್ತವೆ. ಈ ಯೋಗ್ಯ ಮತ್ತು ಅಯೋಗ್ಯ ಕರ್ಮಗಳು ವ್ಯಕ್ತಿಯ ಪಾಪ-ಪುಣ್ಯಕ್ಕೆ ಕಾರಣವಾಗುತ್ತವೆ. ವ್ಯಕ್ತಿಯು ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ ...’ ಎಂಬ ಶ್ಲೋಕವನ್ನು ಪಠಿಸುವುದರಿಂದ ಅವನಿಂದ ತಿಳಿಯದೇ ಘಟಿಸುವ ಅಯೋಗ್ಯ ಕರ್ಮಗಳ ಸಮಯದಲ್ಲಿ ಅವನ ಅಂತರ್ಮನಸ್ಸಿಗೆ ಅವುಗಳ ಅರಿವಾಗಿ ಅವನಿಂದ ಅಯೋಗ್ಯ ಕರ್ಮಗಳು ಘಟಿಸುವುದಿಲ್ಲ.

ಈ. ವ್ಯಕ್ತಿಯಲ್ಲಿರುವ ಭಾವದಿಂದ ಅವನ ಕೈಗಳ ಅಗ್ರಭಾಗದಲ್ಲಿ ಲಕ್ಷ್ಮೀದೇವಿತತ್ತ್ವ, ಮಧ್ಯಭಾಗದಲ್ಲಿ ಸರಸ್ವತಿದೇವಿತತ್ತ್ವ ಮತ್ತು ಮೂಲದಲ್ಲಿ ಶ್ರೀಕೃಷ್ಣತತ್ತ್ವವು ಗ್ರಹಣವಾಗುತ್ತದೆ.

ಉ. ಈ ಶ್ಲೋಕವು ಸಂಸ್ಕ ತ ಭಾಷೆಯಲ್ಲಿ, ಅಂದರೆ ದೇವಭಾಷೆಯಲ್ಲಿರುವುದರಿಂದ ವ್ಯಕ್ತಿಗೆ ಸಂಸ್ಕೃತದಲ್ಲಿನ ಚೈತನ್ಯವೂ ಸಿಗುತ್ತದೆ.
- ಕು.ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ (ಶ್ರಾವಣ ಶು.೭, ಕಲಿಯುಗ ವರ್ಷ ೫೧೧೨ (೧೬.೮.೨೦೧೦))

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

ಕರದರ್ಶನ


ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ, ಬೊಗಸೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಮುಂದಿನ ಶ್ಲೋಕವನ್ನು ಹೇಳಬೇಕು.

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||

ಅರ್ಥ: ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು.
(ಅಪವಾದ: ಕೈಗಳ ಮೂಲಭಾಗದಲ್ಲಿ ಬ್ರಹ್ಮನಿದ್ದಾನೆ / ಗೌರಿ ಇದ್ದಾಳೆ.)

ಶ್ಲೋಕದ ಭಾವಾರ್ಥ

ಅ. ಲಕ್ಷ್ಮೀಯ ಮಹತ್ವ: ಕೈಗಳ ಅಗ್ರಭಾಗದಲ್ಲಿ (ಕರಾಗ್ರೆ) ಲಕ್ಷ್ಮೀ ಇದ್ದಾಳೆ, ಅಂದರೆ ಬಾಹ್ಯ ಭೌತಿಕ ಭಾಗವು ಲಕ್ಷ್ಮೀಯ ರೂಪದಲ್ಲಿ ವಿಲಾಸ ಮಾಡುತ್ತಿದೆ. ಅಂದರೆ ಭೌತಿಕ ವ್ಯವಹಾರಕ್ಕಾಗಿ ಲಕ್ಷ್ಮೀಯ (ಧನ ಮಾತ್ರವಲ್ಲ, ಪಂಚಮಹಾಭೂತಗಳು, ಅನ್ನ, ವಸ್ತ್ರ ಇತ್ಯಾದಿ) ಆವಶ್ಯಕತೆಯಿದೆ.

ಆ. ಸರಸ್ವತಿಯ ಮಹತ್ವ: ಧನ ಅಥವಾ ಲಕ್ಷ್ಮೀಯನ್ನು ಪ್ರಾಪ್ತಮಾಡಿಕೊಳ್ಳುವಾಗ ಜ್ಞಾನ ಮತ್ತು ವಿವೇಕವು ಇಲ್ಲದಿದ್ದರೆ ಲಕ್ಷ್ಮೀಯು ಅವಲಕ್ಷ್ಮೀಯಾಗಿ ನಾಶಕ್ಕೆ ಕಾರಣವಾಗುತ್ತಾಳೆ. ಆದುದರಿಂದ ಸರಸ್ವತಿಯ ಆವಶ್ಯಕತೆ ಇದೆ.

ಇ. ಎಲ್ಲವೂ ಗೋವಿಂದನೇ ಆಗಿರುವುದು: ಗೋವಿಂದನೇ ಸರಸ್ವತಿಯ ರೂಪದಲ್ಲಿ ಮಧ್ಯ ಭಾಗದಲ್ಲಿ ಮತ್ತು ಲಕ್ಷ್ಮೀಯ ರೂಪದಲ್ಲಿ ಅಗ್ರಭಾಗದಲ್ಲಿದ್ದಾನೆ. ಸಂತ ಜ್ಞಾನೇಶ್ವರ ಮಹಾರಾಜರು ಅಮೃತಾನುಭವದ ಶಿವ-ಪಾರ್ವತಿ ಸ್ತವನದಲ್ಲಿ ಹೀಗೆ ಹೇಳುತ್ತಾರೆ, ‘ಮೂಲ, ಮಧ್ಯ ಮತ್ತು ಅಗ್ರ ಈ ಮೂರೂ ರೂಪಗಳು ಬೇರೆಬೇರೆ ಕಾಣಿಸುತ್ತಿದ್ದರೂ ಈ ಮೂರರಲ್ಲಿಯೂ ಗೋವಿಂದನೇ ಕಾರ್ಯವನ್ನು ಮಾಡುತ್ತಿದ್ದಾನೆ. ಹೆಚ್ಚುಕಡಿಮೆ ಎಲ್ಲ ಉದ್ಯೋಗಗಳು (ಕಾರ್ಯಗಳು) ಕೈಗಳ ಬೆರಳುಗಳ ಅಗ್ರಭಾಗದಿಂದಲೇ ಆಗುತ್ತವೆ ಆದುದರಿಂದ ಅಲ್ಲಿ ಲಕ್ಷ್ಮೀಯ ವಾಸ್ತವ್ಯವಿದೆ; ಆದರೆ ಆ ಕೈಯಲ್ಲಿ ಮೂಲ ಸ್ರೋತದಿಂದ ಬರುವ ಅನುಭವೀ ಜ್ಞಾನದ ಪ್ರವಾಹವು ಹೋಗದೇ ಇದ್ದರೆ ಅವನು ಕಾರ್ಯವನ್ನು ಮಾಡಲಾರನು.’ - ಪ.ಪೂ.ಪರಶುರಾಮ ಪಾಂಡೆ ಮಹಾರಾಜರು

ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳನ್ನು ಓದಲು ಕ್ಲಿಕ್ ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

ಊಟ ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು?

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುವುದರಿಂದ ಊಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದಾಗ ಅವನಿಗೆ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬಾರದು. - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೮.೬.೨೦೦೬, ಸಾಯಂ. ೭.೪೭)

ಸಂಕಲನಕಾರರು: ಓರ್ವ ವ್ಯಕ್ತಿಯು ಊಟಕ್ಕೆ ಕುಳಿತಾಗ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಪ್ರಕ್ಷೇಪಣೆ ಆಗುವುದಿಲ್ಲವೇನು? ಓರ್ವ ವ್ಯಕ್ತಿಯು ಮಣೆಯ ಮೇಲೆ ಊಟಕ್ಕೆ ಕುಳಿತಾಗಲೂ ಕೆಟ್ಟ ಶಕ್ತಿಯು ಆಕರ್ಷಿತವಾಗಬಹುದೇನು?
ಓರ್ವ ಜ್ಞಾನಿ: ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ. ಆದುದರಿಂದ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ. ಆದುದರಿಂದ ತಟ್ಟೆಯಲ್ಲಿ ಬಡಿಸಿರುವ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳು ಅತ್ಯಲ್ಪ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿಗೆ ಹೋಗುತ್ತವೆ. ಈ ಲಹರಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಕೆಟ್ಟ ಶಕ್ತಿಗಳ ವಾಸನೆ ಜಾಗೃತವಾಗುವುದು ಹೆಚ್ಚುಕಡಿಮೆ ಅಸಾಧ್ಯವೇ ಆಗಿದೆ.

ಕೆಲವೊಮ್ಮೆ ವ್ಯಕ್ತಿಗೆ ತೊಂದರೆಗಳನ್ನು ಕೊಡಲು ದೊಡ್ಡ ಕೆಟ್ಟ ಶಕ್ತಿಗಳು ಅನ್ನದ ಮಾಧ್ಯಮದಿಂದ ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತವೆ. ಹಿಂದೂ ಸಂಸ್ಕೃತಿಯಂತೆ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನು ಹಾಕಿ, ಆಪತತ್ತ್ವಾತ್ಮಕ ಕವಚವನ್ನು ನಿರ್ಮಾಣ ಮಾಡಿ ಅನ್ನವನ್ನು ಸ್ವೀಕರಿಸುವ ವ್ಯಕ್ತಿಗೆ, ಇತರ ವ್ಯಕ್ತಿಗಳ ತುಲನೆಯಲ್ಲಿ ಮೈಯಲ್ಲಿ ಸೇರುವುದು ಅಥವಾ ವ್ಯಕ್ತಿಯ ಮೇಲೆ ಹಿಡಿತ ಸಾಧಿಸಲು ಕೆಟ್ಟ ಶಕ್ತಿಗಳಿಗೆ ಶೇ.೨೦ರಷ್ಟು ಹೆಚ್ಚು ಕಠಿಣವಾಗಿರುತ್ತದೆ. (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೮.೬.೨೦೦೬, ಸಾಯಂ.೭.೪೭)

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು

ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?


ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಹಾಕಬೇಕು ಮತ್ತು ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು

ಕೃತಿ
ಅ. ಸ್ನಾನದ ಪ್ರಾರಂಭದಲ್ಲಿ ಇನ್ನೊಂದು ಚಿಕ್ಕ ಬಾಲ್ದಿಯಲ್ಲಿ ಎರಡು-ಮೂರು ತಂಬಿಗೆ ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಂಡು ಆ ನೀರಿನಲ್ಲಿ ೨ ಚಹಾ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪನ್ನು ಹಾಕಬೇಕು.
ಆ. ಉಪಾಸ್ಯ ದೇವತೆಗೆ ‘ನನ್ನ ಶರೀರದಲ್ಲಿನ ತೊಂದರೆದಾಯಕ ಶಕ್ತಿಯು ಉಪ್ಪುನೀರಿನಲ್ಲಿ ಸೆಳೆಯಲ್ಪಟ್ಟು ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು.
ಇ. ನಾಮಜಪ ಮಾಡುತ್ತಾ ಆ ಕಲ್ಲುಪ್ಪಿನ ನೀರನ್ನು ತಂಬಿಗೆಯಿಂದ ಮೈಮೇಲೆ ಸುರಿಯಬೇಕು.
ಈ. ಅನಂತರ ನಿತ್ಯದಂತೆ ಸ್ನಾನ ಮಾಡಬೇಕು. 

೧. ಸ್ನಾನದ ನೀರಿನಲ್ಲಿ ಉಪ್ಪು ಹಾಕುವುದರ ಶಾಸ್ತ್ರ:

ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ: ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಸಂಪೂರ್ಣ ಶರೀರದಲ್ಲಿರುವ ದೇಹಶುದ್ಧಿ ಮಾಡುವ ೧೦೬ ಚಕ್ರಗಳ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ನಾಶವಾಗಿ ದೇಹವನ್ನು ಶುದ್ಧಮಾಡುವ ಚಕ್ರಗಳು ಶೇ. ೨-೩ ರಷ್ಟು ಪ್ರಮಾಣದಲ್ಲಿ ಜಾಗೃತವಾಗಿ ತ್ರಾಸದಾಯಕ ಶಕ್ತಿಯು ಶರೀರದಿಂದ ಹೊರಬೀಳುತ್ತದೆ. ಹಾಗೆಯೇ ಉಪ್ಪಿನ ನೀರಿಗೆ ಆಪತತ್ತ್ವದಿಂದ ಶೇ.೧೦೦ರಷ್ಟು ಸಹಾಯವು ಸಿಗುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ. - ಶ್ರೀಗುರುತತ್ತ್ವ (ಶ್ರೀ.ನಿಷಾದ ದೇಶಮುಖರ ಮಾಧ್ಯಮದಿಂದ, ೧೬.೪.೨೦೦೬, ರಾತ್ರಿ ೯.೩೩)

ಅನುಭೂತಿ - ಕೀರ್ತನೆಯಲ್ಲಿ (ಹರಿಕಥೆ) ಧರ್ಮದ ವಿಷಯದಲ್ಲಿ ಮಾತನಾಡಿದುದರಿಂದ ಆಧ್ಯಾತ್ಮಿಕ ತೊಂದರೆಯಾಗುವುದು ಮತ್ತು ಕಲ್ಲುಪ್ಪಿನ ನೀರಿನಿಂದ ಉಪಾಯ ಮಾಡಿದ ನಂತರ ಒಳ್ಳೆಯದೆನಿಸುವುದು : ನಾನು ಕೀರ್ತನೆಗಾಗಿ ಎದ್ದು ನಿಂತಾಗ ನನ್ನ ಶರೀರ ಜಡವಾಗುತ್ತಿತ್ತು ಮತ್ತು ನಿದ್ದೆ ಬರುತ್ತಿತ್ತು. ಬಹಳಷ್ಟು ಸಲ ನನಗೆ ಏನೂ ಹೊಳೆಯುತ್ತಿರಲಿಲ್ಲ. ನಿದ್ದೆಯನ್ನು ದೂರಗೊಳಿಸಲು ನಾನು ಸ್ವಲ್ಪ ಹೊತ್ತು ನಾಮಜಪ ಮಾಡಿದಾಗ ಸ್ವಲ್ಪ ಸಮಯದ ನಂತರ ನನಗೆ ಒಳ್ಳೆಯದೆನಿಸುತ್ತಿತ್ತು. ನಾನು ಕೀರ್ತನೆಗಳಿಂದ ಧರ್ಮದ ವಿಷಯದಲ್ಲಿ ಪ್ರಬೋಧನೆ ಮಾಡುತ್ತೇನೆಂದು ನನಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ‘ತೊಂದರೆದಾಯಕ ಶಕ್ತಿ ಎಂದರೇನು’ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಬಹಳ ತೊಂದರೆಯಾಗುತ್ತಿತ್ತು. ಸನಾತನದ ಆಶ್ರಮಕ್ಕೆ ಬಂದ ನಂತರ ನನಗೆ ಕೆಟ್ಟ ಶಕ್ತಿಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯು ದೊರಕಿತು. ಈಗ ನಾನು ಕಲ್ಲುಪ್ಪಿನ ನೀರಿನ ಉಪಾಯ ಮಾಡುತ್ತೇನೆ. ಅದರಿಂದ ನನಗೆ ಒಳ್ಳೆಯದೆನಿಸುತ್ತದೆ. - ಹ.ಭ.ಪ.ಆಂಧಳೆ ಮಹಾರಾಜರು, ಸಂಭಾಜಿನಗರ.

ಕಲ್ಲುಪ್ಪು ರಜ-ತಮಯುಕ್ತವಾಗಿದೆ. ಹೀಗಿರುವಾಗ ಉಪಾಯಕ್ಕಾಗಿ ನಾವು ಅದನ್ನೇಕೆ ಉಪಯೋಗಿಸುತ್ತೇವೆ?
ಉತ್ತರ : ಕೇವಲ ಕಲ್ಲುಪ್ಪಿನಿಂದ ಉಪಾಯವಾಗುವುದಿಲ್ಲ, ಕಲ್ಲುಪ್ಪು ನೀರಿನ ಸಂಪರ್ಕಕ್ಕೆ ಬರುವುದರಿಂದ ಉಪಾಯವಾಗುತ್ತದೆ. ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕೃತಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲಿರುವ ಆಪತತ್ತ್ವಾತ್ಮಕ ಸೂಕ್ಷ್ಮ ಕೋಶವು ಬಾಹ್ಯ ವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವಲ್ಲಿ ಅಗ್ರೇಸರವಾಗಿದೆ. ಉಪ್ಪುನ್ನು ನೀರಿನಲ್ಲಿ ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡ ರಜ-ತಮಾತ್ಮಕ ಲಹರಿಗಳು ಕೂಡಲೇ ನೀರಿನಲ್ಲಿ ವಿಸರ್ಜನೆಯಾಗುತ್ತವೆ ಮತ್ತು ರಜ-ತಮಾತ್ಮಕ ಲಹರಿಗಳ ಕಾರ್ಯ ಮಾಡುವ ತೀವ್ರತೆಯು ಕೂಡಲೇ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿರುವ ರಜ-ತಮವು ಕೂಡಲೇ ನೀರಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಜಡತ್ವವೂ ಕೂಡಲೇ ಕಡಿಮೆಯಾಗುತ್ತದೆ.

ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ಆದುದರಿಂದ ಉಪ್ಪಿನ ಗುಣಧರ್ಮವನ್ನು ಉಪಯೋಗಿಸಿಕೊಂಡು ದೇಹದಿಂದ ಸೆಳೆದುಕೊಂಡ ರಜ-ತಮವನ್ನು ಕೂಡಲೇ ನೀರು ತನ್ನಲ್ಲಿ ವಿಸರ್ಜಿಸಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ನೀರು ಆಧ್ಯಾತ್ಮಿಕ ಉಪಾಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ಶೇ.೩೦ರಷ್ಟು ಪ್ರಮಾಣದಲ್ಲಿ ಕಲ್ಲುಪ್ಪು ರಜ-ತಮವನ್ನು ಸೆಳೆದುಕೊಳ್ಳುವ ಕಾರ್ಯವನ್ನು ಮಾಡುತ್ತದೆ ಮತ್ತು ಶೇ.೭೦ರಷ್ಟು ನೀರು ಈ ಸ್ಪಂದನಗಳನ್ನು ತನ್ನಲ್ಲಿ ವಿಸರ್ಜಿಸಿಕೊಳ್ಳುವ ಕಾರ್ಯವನ್ನು ಮಾಡಿ ವ್ಯಕ್ತಿಯನ್ನು ಪೃಥ್ವಿತತ್ತ್ವಜನ್ಯ ತ್ರಾಸದಾಯಕ ಜಡತ್ವದಿಂದ ಮುಕ್ತಗೊಳಿಸುತ್ತದೆ.
- ಓರ್ವ ವಿದ್ವಾಂಸರು (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೧೨, ಬೆಳಗ್ಗೆ ೮.೩೨)

ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡುವುದರ ಮಹತ್ವ

ಶಾಸ್ತ್ರ: ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ದೇವತ್ವವು ಪ್ರಾಪ್ತವಾಗಿ ದಿನವಿಡೀ ಮಾಡುವ ಕೃತಿಗಳನ್ನು ಚೈತನ್ಯದ ಸ್ತರದಲ್ಲಿ ಮಾಡಲು ದೇಹವು ಸಕ್ಷಮವಾಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೦.೧೦.೨೦೦೭, ಮಧ್ಯಾಹ್ನ ೧.೨೩)

(ಆಧಾರ - ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿತ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ ಸ್ನಾನವನ್ನು ಮಾಡುವಾಗ ಹೇಳಬೇಕಾದ ಶ್ಲೋಕಗಳು
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
Dharma Granth

ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?

‘ಆಚಾರಧರ್ಮ’ವೆಂದರೆ ಜೀವನದ ಆಧ್ಯಾತ್ಮೀಕರಣ!

‘ಆಚಾರಧರ್ಮ’ವೆಂದರೆ ಯೋಗ್ಯ ಆಚಾರ-ವಿಚಾರಗಳ ಪಾಲನೆಯನ್ನು ಮಾಡುವುದು, ಕರ್ತವ್ಯಕರ್ಮಗಳು ಮತ್ತು ಧರ್ಮಾಚರಣೆಯ ಕೃತಿಗಳು, ಇಷ್ಟೇ ಹೆಚ್ಚಿನವರ ಕಣ್ಣೆದುರಿಗೆ ಬರುತ್ತವೆ. ಯಾರೂ ಆಚಾರಧರ್ಮದ ಬಗ್ಗೆ ಇಷ್ಟು ಸಂಕುಚಿತ ಅರ್ಥವನ್ನಿಟ್ಟುಕೊಳ್ಳಬಾರದು. ‘ಈಶ್ವರನ ಚರಣಗಳವರೆಗೆ ತಲುಪಲು ಸಹಾಯ ಮಾಡುವ ಜೀವನದಲ್ಲಿನ ಪ್ರತಿಯೊಂದು ಕೃತಿಯೆಂದರೆ ಆಚರಣೆ ಮತ್ತು ಅವುಗಳನ್ನು ಕಲಿಸುವ ಧರ್ಮವೆಂದರೆ ‘ಆಚಾರಧರ್ಮ’ ಎಂಬ ವ್ಯಾಪಕ ಅರ್ಥದಲ್ಲಿ ಅದರ ವ್ಯಾಖ್ಯೆಯನ್ನು ಮಾಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ‘ಆಚಾರಧರ್ಮ’ವೆಂದರೆ ದೈನಂದಿನ ಜೀವನದಲ್ಲಿನ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣಗೊಳಿಸುವುದು; ಅಂದರೆ ಪ್ರತಿಯೊಂದು ವಿಷಯವನ್ನು ಸಾತ್ತ್ವಿಕ ಮತ್ತು ಚೈತನ್ಯಮಯಗೊಳಿಸುವುದು. ಆದುದರಿಂದಲೇ ಆಚಾರಧರ್ಮದ ಪಾಲನೆಯಿಂದ ಈಶ್ವರಪ್ರಾಪ್ತಿಯ ಕಡೆಗೆ ಬೇಗನೇ ಮಾರ್ಗಕ್ರಮಣವಾಗಲು ಸಹಾಯವಾಗುತ್ತದೆ. ಕಸ ತೆಗೆಯುವಾಗ ಒಳಗಿನಿಂದ ಹೊರಗಿನ ದಿಕ್ಕಿನತ್ತ ಅಂದರೆ ಬಾಗಿಲಿನ ಕಡೆಗೆ ತೆಗೆಯುವುದು, ಪುರುಷರು ಪ್ಯಾಂಟ್-ಶರ್ಟ್ ಧರಿಸುವ ಬದಲು ಜುಬ್ಬಾ-ಪೈಜಾಮವನ್ನು ಧರಿಸುವುದು ಮತ್ತು ಸ್ತ್ರೀಯರು ಸಲ್ವಾರ್-ಕುರತಾದ ಬದಲು ಸೀರೆಯನ್ನುಟ್ಟುಕೊಳ್ಳುವುದು, ಕಡಿಮೆ ಬಟ್ಟೆ ಧರಿಸಬಾರದು, ಸ್ತ್ರೀ-ಪುರುಷರು ಪ್ರತಿದಿನ ಹಣೆಗೆ ಕುಂಕುಮ-ತಿಲಕವನ್ನು ಇಟ್ಟುಕೊಳ್ಳುವುದು, ಸ್ತ್ರೀಯರು ಕೂದಲನ್ನು ಬಾಚುವಾಗ ಒಂದು ಜಡೆಯ ಬದಲು ಎರಡು ಜಡೆಗಳನ್ನು ಹಾಕಿಕೊಳ್ಳುವುದು, ಕೂದಲನ್ನು ಹಾಗೆಯೇ ಬಿಡಬಾರದು ಇಂತಹ ಅನೇಕ ವಿಷಯಗಳು ಆಚಾರಧರ್ಮದಲ್ಲಿ ಬರುತ್ತವೆ.’

‘ಆಚಾರಧರ್ಮ’ವು ಧರ್ಮ ಮತ್ತು ಸಾಧನೆಯ ಅಡಿಪಾಯವಾಗಿದೆ!

‘ಆಚಾರಃ ಪ್ರಭವೋ ಧರ್ಮಃ’ ಅಂದರೆ ‘ಧರ್ಮವು ಆಚಾರದಿಂದ ಉತ್ಪನ್ನವಾಗಿದೆ’. ನಮ್ಮ ಧಾರ್ಮಿಕ ಜೀವನದ ನಿರ್ಮಿತಿಯು (ರಚನೆಯು) ಆಚಾರಧರ್ಮದ ಮೇಲೆ ಅವಲಂಬಿಸಿರುತ್ತದೆ. ಧರ್ಮಾಚರಣೆಯ, ಸಾಧನೆಯ ಉದ್ದೇಶವು ‘ಈಶ್ವರಪ್ರಾಪ್ತಿ’ ಯಾಗಿರುತ್ತದೆ. ಧರ್ಮಾಚರಣೆಯನ್ನು, ಸಾಧನೆಯನ್ನು ಮಾಡುವ ಮನಸ್ಸಿನ ಪ್ರವೃತ್ತಿಯು ಸತ್ತ್ವಗುಣದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯ ಜನರು ರಜೋಗುಣಿ-ತಮೋಗುಣಿ ಯಾಗಿರುವುದರಿಂದ ಅವರು ಕೂಡಲೇ ಸಾಧನೆಯ ಕಡೆಗೆ ಹೊರಳುವುದಿಲ್ಲ. ಆಚಾರ ಧರ್ಮದ ಪಾಲನೆಯಿಂದ ಜನರ ಸಾತ್ತ್ವಿಕತೆಯು ನಿಧಾನವಾಗಿ ಹೆಚ್ಚಾಗತೊಡಗಿದಂತೆ ಮುಂದೆ ಅವರು ಸಾಧನೆಯ ಕಡೆಗೆ ಹೊರಳುತ್ತಾರೆ. ಅಲ್ಲದೇ ಆಚಾರಧರ್ಮದ ಪಾಲನೆಯನ್ನು ದಿನದ ೨೪ ಗಂಟೆ ಮಾಡಬೇಕಾಗುವುದರಿಂದ ಮುಂದೆ ದಿನವಿಡೀ ಸಾಧನೆಯನ್ನು ಮಾಡುವ ಅಡಿಪಾಯವೂ ನಿರ್ಮಾಣವಾಗುತ್ತದೆ.

ಆಚಾರಧರ್ಮದಿಂದ ವ್ಯಾವಹಾರಿಕ ಮತ್ತು ರಾಷ್ಟ್ರೀಯ ಜೀವನದ ಉತ್ಕರ್ಷವೂ ಆಗುತ್ತದೆ!

ಆಚಾರಗಳ ಪಾಲನೆಯಿಂದ ಕೇವಲ ಆಧ್ಯಾತ್ಮಿಕ ಲಾಭವಷ್ಟೇ ಆಗುತ್ತದೆ ಎಂದೇನಿಲ್ಲ, ಅದರೊಂದಿಗೆ ವ್ಯಕ್ತಿಯ ವ್ಯಾವಹಾರಿಕ ಜೀವನದ ಉತ್ಕರ್ಷವೂ ಆಗುತ್ತದೆ. ಉದಾ. ‘ಸತ್ಯದಿಂದ ನಡೆದುಕೊಳ್ಳಬೇಕು’ ಎಂಬ ಆಚಾರದ ಪಾಲನೆಯಿಂದ ವ್ಯಕ್ತಿಗೆ ಸುಳ್ಳು ಮಾತನಾಡಿದ ಪಾಪವು ತಗಲುವುದಿಲ್ಲ, ಮಾತ್ರವಲ್ಲದೇ ಅವನಲ್ಲಿ ನೈತಿಕತೆ ಮತ್ತು ಸುಸಂಸ್ಕೃತತೆ ಎಂಬ ಗುಣಗಳ ವಿಕಾಸವೂ ಆಗುತ್ತದೆ. ಆಚಾರಗಳ ಪಾಲನೆಯಿಂದ ವ್ಯಕ್ತಿಗೆ ಒಂದು ರೀತಿಯ ಶಿಸ್ತು ಬರುತ್ತದೆ. ಶಿಸ್ತುಬದ್ಧತೆಯು ಆದರ್ಶ ಜೀವನಪದ್ಧತಿಯ ಒಂದು ಮಹತ್ವದ ಗುಣವಾಗಿದೆ. ಆಚಾರವು ಹಿಂದೂಗಳ ಶ್ರದ್ಧೆಯ ಮತ್ತು ಸಂಸ್ಕೃತಿಯ ನಿಯಮವಾಗಿದೆ. 

ವಿವಿಧ ಉಪಾಸನಾ ಪಂಥ ಮತ್ತು ಸಂಪ್ರದಾಯಗಳಲ್ಲಿನ ಹಿಂದೂಗಳ ಧರ್ಮಾಚರಣೆಯ ಪದ್ಧತಿಗಳು ವಿಭಿನ್ನವಾಗಿದ್ದರೂ, ಸದಾಚಾರ ಅಥವಾ ಶಿಷ್ಟಾಚಾರ ಇವು ಧರ್ಮದ ಒಂದು ಪ್ರಮಾಣವೆಂದು ಪರಿಗಣಿಸಲ್ಪಟ್ಟಿರುವುದರಿಂದ ಧರ್ಮದ ಈ ಸಮಾನ ನಿಯಮದಿಂದ ಹಿಂದೂಗಳು ಪರಸ್ಪರ ಬಂಧಿಸಲ್ಪಟ್ಟಿದ್ದಾರೆ. ಹಿಂದೂಗಳ ಧಾರ್ಮಿಕ ಒಗ್ಗಟ್ಟಿನ ಮೇಲೆ ಹಿಂದೂಗಳ ಐಕ್ಯವು ಅವಲಂಬಿಸಿಕೊಂಡಿದೆ. ಐಕ್ಯದ ಮೇಲೆ ಸಮಾಜದ ಉನ್ನತಿ ಮತ್ತು ಪರ್ಯಾಯವಾಗಿ ರಾಷ್ಟ್ರದ ಉತ್ಕರ್ಷವೂ ಅವಲಂಬಿಸಿಕೊಂಡಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ 'ಆಚಾರಧರ್ಮದ ಪ್ರಾಸ್ತಾವಿಕ')

ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಏಕೆ ನೋಡಬಾರದು?


ರಾತ್ರಿಯ ಸಮಯವು ರಜ-ತಮಾತ್ಮಕ ವಾಯುವಿಗೆ ಪೂರಕವಾಗಿರುವುದರಿಂದ, ಅದು ಸೂಕ್ಷ್ಮ ರಜ-ತಮಾತ್ಮಕ ಚಲನವಲನಗಳೊಂದಿಗೆ ಮತ್ತು ಕೆಟ್ಟ ಶಕ್ತಿಗಳ ಚಟುವಟಿಕೆಗಳೊಂದಿಗೆ ಸಂಬಂಧಿತವಾಗಿರುತ್ತದೆ. ಕನ್ನಡಿಯಲ್ಲಿ ಕಾಣಿಸುವ ದೇಹದ ಪ್ರತಿಬಿಂಬವು ಅತಿ ಹೆಚ್ಚು ಪ್ರಮಾಣದಲ್ಲಿ ದೇಹದಿಂದ ಪ್ರಕ್ಷೇಪಿತವಾಗುವ ಜೀವದ ಸೂಕ್ಷ್ಮಲಹರಿಗಳಿಗೆ ಸಂಬಂಧಿಸಿರುವುದರಿಂದ ಈ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಬೇಗನೆ ಹಲ್ಲೆ ಮಾಡಬಲ್ಲವು.

ಇದಕ್ಕೆ ವಿರುದ್ಧವಾಗಿ ಬೆಳಗ್ಗಿನ ಸಮಯದಲ್ಲಿ ವಾಯುಮಂಡಲವು ಸಾತ್ತ್ವಿಕ ಲಹರಿಗಳಿಂದ ತುಂಬಿರುವುದರಿಂದ ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬದ ಮೇಲೆ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳ ಸಹಾಯದಿಂದ ಆಧ್ಯಾತ್ಮಿಕ ಉಪಚಾರವಾಗಿ ಸ್ಥೂಲದೇಹಕ್ಕೆ ತನ್ನಿಂದತಾನೇ ಹಗುರತನವು ಪ್ರಾಪ್ತವಾಗುತ್ತದೆ. ಇದರಿಂದ ಬೆಳಗ್ಗಿನ ಸಮಯದಲ್ಲಿ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡುವುದು ಲಾಭದಾಯಕವಾಗಿದ್ದು; ಅದೇ ಪ್ರತಿಬಿಂಬವನ್ನು ರಾತ್ರಿಯ ರಜ-ತಮಾತ್ಮಕ ಚಲನವಲನಗಳಿಗೆ ಪೂರಕವಾಗಿರುವಂತಹ ಕಾಲದಲ್ಲಿ ನೋಡಿದರೆ ಅಪಾಯಕಾರಿಯಾಗುವ ಸಾಧ್ಯತೆಯಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೫.೧೨.೨೦೦೭, ರಾತ್ರಿ ೭.೫೦)

ಕನ್ನಡಿಯಲ್ಲಿ ಮೂಡಿದ ವ್ಯಕ್ತಿಯ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಹಲ್ಲೆ ಮಾಡಿದರೆ ಅದರಿಂದ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ?
ಜೀವಕ್ಕೆ ಸಂಬಂಧಿಸಿದ ಪ್ರತಿಬಿಂಬದಲ್ಲಿನ ಲಹರಿಗಳು ಅತಿಹೆಚ್ಚು ಪ್ರಮಾಣದಲ್ಲಿ ಅವನ ಸೂಕ್ಷ್ಮದೇಹಕ್ಕೆ ಸಂಬಂಧಿಸಿರುವುದರಿಂದ ಕೆಟ್ಟ ಶಕ್ತಿಗಳ ಹಲ್ಲೆಗಳ ಹೆಚ್ಚಿನ ಪರಿಣಾಮವು ಆಧ್ಯಾತ್ಮಿಕ ಸ್ತರದಲ್ಲಿ ಆಗುತ್ತದೆ. ಈ ಹಲ್ಲೆಯಿಂದ ಜೀವಗಳ ಶರೀರ ಮತ್ತು ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಪ್ರಾಣಶಕ್ತಿ ಕಡಿಮೆಯಾಗುವುದು, ಆಯಾಸವಾಗುವುದು, ಅಸ್ವಸ್ಥವೆನಿಸುವುದು, ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರಗಳು ಬರುವುದು, ಕೆಟ್ಟ ಶಕ್ತಿಗಳು ದೇಹದಲ್ಲಿ ಸೇರಿಕೊಳ್ಳುವುದು, ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಸ್ವಂತದ ಅಸ್ತಿತ್ವವು ಕಡಿಮೆಯಾಗುವುದು ಮುಂತಾದ ಆಧ್ಯಾತ್ಮಿಕ ತೊಂದರೆಗಳನ್ನು ಜೀವವು ಎದುರಿಸಬೇಕಾಗುತ್ತದೆ.

ಪ್ರತ್ಯಕ್ಷ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದಕ್ಕಿಂತ ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದು ಕೆಟ್ಟ ಶಕ್ತಿಗಳಿಗೆ ಹೆಚ್ಚು ಲಾಭದಾಯಕವಾಗಿದೆಯೇ?
ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ಕೆಟ್ಟ ಶಕ್ತಿಗಳಿಗೆ ಜೀವದ ಒಂದು ಸೂಕ್ಷ್ಮ ರೂಪವೇ ಪ್ರತ್ಯಕ್ಷ ದೃಶ್ಯರೂಪದಲ್ಲಿ ಸಿಗುತ್ತದೆ. ಸೂಕ್ಷ್ಮರೂಪದ ಮೇಲೆ ಹಲ್ಲೆಯನ್ನು ಮಾಡಿದರೆ ಹಲ್ಲೆಯ ಪರಿಣಾಮವು ಆ ಜೀವದ ಮೇಲೆ ದೀರ್ಘಕಾಲ ಉಳಿದುಕೊಳ್ಳುತ್ತದೆ ಮತ್ತು ಹಲ್ಲೆಯ ಪರಿಣಾಮವು ದೇಹದಲ್ಲಿ ತುಂಬಾ ಆಳವಾಗಿ ಆಗುವುದರಿಂದ ಅದನ್ನು ಉಪಯೋಗಿಸಿ ಕೆಟ್ಟ ಶಕ್ತಿಗಳಿಗೆ ಜೀವದ ಸೂಕ್ಷ್ಮಕೋಶಗಳಲ್ಲಿ ತ್ರಾಸದಾಯಕ ಶಕ್ತಿಯ ಸ್ಥಾನಗಳನ್ನು ಮಾಡಲು ಸುಲಭವಾಗುತ್ತದೆ. ಆದುದರಿಂದ ಸ್ಥೂಲದೇಹದ ಮೇಲೆ ಹಲ್ಲೆಯನ್ನು ಮಾಡುವುದಕ್ಕಿಂತ ವ್ಯಕ್ತಿಯ ಸೂಕ್ಷ್ಮರೂಪವನ್ನು ಉಪಯೋಗಿಸಿಕೊಂಡು, ಜೀವಕ್ಕೆ ದೀರ್ಘಕಾಲ ತೊಂದರೆ ನೀಡಲು ಮತ್ತು ಅದರ ದೇಹದಲ್ಲಿ ನುಗ್ಗಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
Dharma Granth

ಕಾಲ್ಗೆಜ್ಜೆಗಳು - ಮಹತ್ವ ಮತ್ತು ಲಾಭ


ಮಹತ್ವ ಮತ್ತು ಲಾಭಗಳು

೧. ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲುಗಳ ರಕ್ಷಣೆಯಾಗುತ್ತದೆ

ಅ. ‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತ ವಾಗುತ್ತವೆ. ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ತೇಜತತ್ತ್ವ ಮತ್ತು ಸಾತ್ತ್ವಿಕ ನಾದಲಹರಿಗಳಿಂದಾಗಿ, ಪಾತಾಳ ಮತ್ತು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲ್ಗೆಜ್ಜೆಗಳನ್ನು ಧರಿಸುವ ಜೀವದ ರಕ್ಷಣೆಯಾಗುತ್ತದೆ.’

ಆ. ‘ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ನಾದದಿಂದ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಈಶ್ವರೀ ತತ್ತ್ವವು ಸ್ತ್ರೀಯರೆಡೆಗೆ ಆಕರ್ಷಿತವಾಗುತ್ತದೆ. ಇದರಿಂದ ಪಾತಾಳದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಸ್ತ್ರೀಯರ ರಕ್ಷಣೆಯಾಗಲು ಸಹಾಯವಾಗುತ್ತದೆ.’

೨. ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ: ‘ಕಾಲ್ಗೆಜ್ಜೆಯ ನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದ ರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳ ವಿಭಜನೆಯನ್ನು ಮಾಡಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ನಾದರೂಪೀ ಕ್ರಿಯಾಲಹರಿಗಳ ಈ ಲಹರಿಗಳು ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಿಸುತ್ತವೆ, ಹಾಗೆಯೇ ಈ ನಾದಲಹರಿಗಳಿಂದಾಗಿ ಸ್ತ್ರೀಯಲ್ಲಿನ ಶಕ್ತಿರೂಪೀ ರಜೋಗುಣಕ್ಕೆ ಗತಿ ಸಿಗುತ್ತದೆ ಮತ್ತು ಅವಳೇ ಒಂದು ಸ್ವಯಂಸಿದ್ಧಸ್ವರೂಪವಾಗುತ್ತಾಳೆ.

೩. ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.

೪. ಕಾಲ್ಗೆಜ್ಜೆಗಳಲ್ಲಿರುವ ಘುಂಗುರುಗಳಲ್ಲಿನ ಸಾತ್ತ್ವಿಕ ನಾದಲಹರಿಗಳಿಂದ ವಾಯು ಮಂಡಲದ ಶುದ್ಧೀಕರಣವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಸಂಬಂಧಿತ ವಿಷಯಗಳು
ಬಳೆಗಳು (ಕಂಕಣಗಳು)
ಕಾಲುಂಗುರ - ಮಹತ್ವ ಮತ್ತು ಲಾಭ
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ಕಾಲುಂಗುರ - ಮಹತ್ವ ಮತ್ತು ಲಾಭ

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ.


ಮಹತ್ವ ಮತ್ತು ಲಾಭ

೧. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ಸ್ತ್ರೀಧರ್ಮದ ಅರಿವಾಗುತ್ತದೆ: ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮ ಪಾಲನೆ ಮಾಡುತ್ತಾರೆ.

೨. ಕಾಲುಂಗುರಗಳಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗುತ್ತದೆ: ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣ ದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ.

೩. ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯಾಗುತ್ತದೆ: ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ತ್ವವನ್ನು ಪ್ರಕ್ಷೇಪಿಸುವಲ್ಲಿ ಅಗ್ರೇಸರವಾಗಿರುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿತತ್ತ್ವವು ಅವಶ್ಯಕತೆಗನುಸಾರ ವಾಯುತತ್ತ್ವದ ಆಧಾರದಲ್ಲಿ ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯ ಕಾರ್ಯವನ್ನು ಮಾಡುತ್ತದೆ. ಇದರಿಂದ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣವು ಹೆಚ್ಚುಕಡಿಮೆ ಶೇ.೧೦ರಷ್ಟು ಕಡಿಮೆಯಾಗುತ್ತದೆ.-ಓರ್ವ ವಿದ್ವಾಂಸರು, (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೩.೧೧.೨೦೦೫, ಮಧ್ಯಾಹ್ನ ೩.೧೯)

ಮಾಸೋಳಿ (ಮತ್ಸ್ಯಾಕಾರದ ಕಾಲುಂಗುರ)

ಅವಿವಾಹಿತ ಹುಡುಗಿಯರು ಕಾಲಿನ ನಾಲ್ಕನೆಯ ಬೆರಳಿನಲ್ಲಿ (ಕಿರುಬೆರಳಿನ ಸಮೀಪದ ಬೆರಳು) ಮಾಸೋಳಿಯನ್ನು ಧರಿಸುತ್ತಾರೆ. ಮಾಸೋಳಿಯು ಒಂದು ರೀತಿಯ ಕಾಲುಂಗುರವೇ ಆಗಿದೆ. ಅದರ ಆಕಾರವು ಮೀನಿನಂತಿರುತ್ತದೆ; ಆದುದರಿಂದ ಅದಕ್ಕೆ ಮಾಸೋಳಿ (ಮೀನು) ಎಂದು ಹೇಳುತ್ತಾರೆ.

ಅ. ಕಾಲ್ಬೆರಳುಗಳಲ್ಲಿ ಮಾಸೋಳಿಯನ್ನು ಧರಿಸುವುದರಿಂದ ಬಿಂದುಒತ್ತಡದ ಉಪಾಯವಾಗಿ ಕಪ್ಪು ಶಕ್ತಿಯು ನಾಶವಾಗುತ್ತದೆ: ಮಾಸೋಳಿಯ ವಿಶಿಷ್ಟ ಆಕಾರದಿಂದಾಗಿ ಆ ಸ್ಥಳದಲ್ಲಿರುವ ಬಿಂದುವಿನ ಮೇಲೆ ಒತ್ತಡವು ಬರುತ್ತದೆ, ಅಂದರೆ ಬಿಂದುಒತ್ತಡದ ಉಪಾಯ ವಾಗುತ್ತದೆ. ಇದರಿಂದ ಜೀವದ ತೊಂದರೆಗಳು ಕಡಿಮೆಯಾಗುತ್ತವೆ. ಆ ಸ್ಥಳದಲ್ಲಿ ಕೆಟ್ಟ ಶಕ್ತಿಯು ಸಂಗ್ರಹಿಸಿಟ್ಟಿರುವ ಕಪ್ಪು ಶಕ್ತಿಯೂ (ತೊಂದರೆದಾಯಕ ಶಕ್ತಿಯೂ) ನಾಶವಾಗುತ್ತದೆ. - ಓರ್ವ ಅಜ್ಞಾತ ಶಕ್ತಿ (ಕು.ರಂಜನಾ ಗಾವಸರವರ ಮಾಧ್ಯಮದಿಂದ, ೧೯.೮.೨೦೦೮ ಮಧ್ಯಾಹ್ನ ೪.೫೫)

ಆ. ಇತರ ಅಂಶಗಳು
೧. ಅವಿವಾಹಿತ ಯುವತಿಯರು ಕಾಲಿನ ಕಿರುಬೆರಳಿನ ಪಕ್ಕದ ಬೆರಳಿನಲ್ಲಿ ಮಾಸೋಳಿಯನ್ನು ಧರಿಸುತ್ತಾರೆ.
೨. ಮಾಸೋಳಿಯನ್ನು ಧರಿಸುವುದರಿಂದ ಕಿರುಬೆರಳಿನ ಪಕ್ಕದ ಬೆರಳಿನಲ್ಲಿನ ಅಪ್ರಕಟ ಸ್ವರೂಪದಲ್ಲಿನ ಆಪತತ್ತ್ವವು ಪ್ರಕಟವಾಗುತ್ತದೆ ಮತ್ತು ಮಾಸೋಳಿಯಲ್ಲಿನ ಸಗುಣತತ್ತ್ವದಿಂದ ಅದಕ್ಕೆ ಚಾಲನೆಯು ಸಿಗುತ್ತದೆ.
೩. ವ್ಯಕ್ತಿಯು ನಡೆದಾಡುವಾಗ ಮಾಸೋಳಿಯಲ್ಲಿನ ಸ್ಪಂದನಗಳು ಕಾರ್ಯನಿರತವಾಗುತ್ತವೆ. ನಡಿಗೆಯ ವೇಗದಿಂದ ಅವರಿಗೆ ಮಾರಕ ಮತ್ತು ತಾರಕ ಸ್ಪಂದನಗಳು ಸಿಗುತ್ತವೆ.
೪. ನಡೆದಾಡುವಾಗ ಭೂಮಿಯ ಮೇಲೆ ಬೀಳುವ ಒತ್ತಡ ಮತ್ತು ಭೂಮಿಗಾಗುವ ಸ್ಪರ್ಶದಿಂದ ಶಕ್ತಿಯ ಮಾರಕ ಸ್ಪಂದನಗಳು ನಿರ್ಮಾಣವಾಗಿ ಪ್ರಕ್ಷೇಪಿಸುತ್ತವೆ, ಇದರಿಂದ ಪಾತಾಳದಿಂದ ಆಕ್ರಮಣ ಮಾಡುವ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ.’
- ಕು.ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ, ಗೋವಾ. ೬.೧೧.೨೦೦೯)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಕಾಲುಂಗುರದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವೇನು?

ಭಾರತದಲ್ಲಿ ಸ್ತ್ರೀಯರು ಕಾಲುಂಗರ ಧರಿಸಿದರೆ ಅವರನ್ನು ವಿವಾಹಿತರು ಎಂದು ಗುರುತಿಸುತ್ತಾರೆ. ಬಹುತೇಕ ಭಾರತೀಯ ನಾರಿಯರು, ವಿವಾಹವಾದ ಬಳಿಕ ಕಾಲುಂಗುರವನ್ನು ಧರಿಸುತ್ತಾರೆ. ಇದು ಕೇವಲ ಸ್ತ್ರೀಯೋರ್ವಳು ವಿವಾಹಿತೆ ಎಂಬುದರ ಸೂಚಕವಷ್ಟೇ ಅಲ್ಲ, ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ.

ಭಾರತೀಯ ವೇದಶಾಸ್ತ್ರಗಳ ಪ್ರಕಾರ (Vedham, ಅಥವಾ vedam), ಎರಡೂ ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ, ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು, ಸಮರ್ಪಕವಾದ ಅಂತರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.

ಇದು ವಿವಾಹಿತ ಸ್ತ್ರೀಯರಿಗೆ, ಗರ್ಭ ಧರಿಸಲು ಉತ್ತಮ ವೇದಿಕೆಯನ್ನುಂಟು ಮಾಡುತ್ತದೆ. ಮಾತ್ರವಲ್ಲದೇ, ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳನ್ನು ಗರ್ಭಾಶಯಕ್ಕೆ ಸಂಪರ್ಕಿಸುವಾಗ, ಅದು ಹೃದಯದ ಮೂಲಕ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ. ಅದ್ದರಿಂದ, ಕಾಲುಂಗುರಗಳನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಿಗೇ ಧರಿಸಿರುವುದನ್ನು ನೀವು ಗಮನಿಸಿರಬಹುದು. ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ ಮತ್ತು ಗರ್ಭಾಶಯಕ್ಕೆ ಸಮಪ್ರಮಾಣದ, ಸಂತುಲಿತ ರಕ್ತದೊತ್ತಡವನ್ನು ನಿರ್ವಹಿಸುವುದರ ಮೂಲಕ ಅದರ ಆರೋಗ್ಯವನ್ನು ಕಾಪಾಡುತ್ತದೆ.

ಬೆಳ್ಳಿಯು ಒಂದು ಉತ್ತಮ ವಾಹಕವಾಗಿದ್ದು, ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು, ಭೂಮಿಯ ಧ್ರುವ ಶಕ್ತಿಗಳನ್ನು ಹೀರಿ ಶರೀರಕ್ಕೆ ವರ್ಗಾಯಿಸುತ್ತವೆ ಹಾಗೂ ತನ್ಮೂಲಕ ಸಂಪೂರ್ಣ ದೈಹಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಒದಗಿಸುತ್ತವೆ.

ಮಹಾನ್ ಭಾರತೀಯ ಕಾವ್ಯವಾದ ರಾಮಾಯಣದಲ್ಲಿ ಕಾಲುಂಗುರವು ಮಹತ್ವದ ಪಾತ್ರವಹಿಸುತ್ತದೆ. ಸೀತೆಯು ರಾವಣನಿಂದ ಅಪಹರಿಸಲ್ಪಟ್ಟಾಗ, ಆಕೆಯು ಕಾಲುಂಗುರಗಳನ್ನು (kaniazhi) ಮಾರ್ಗದ ಮೇಲೆ, ಭಗವಾನ್ ಶ್ರೀರಾಮನ ಅವಗಾಹನೆಗಾಗಿ, ಅಪಹರಣಕ್ಕೆ ತಾನು ಗುರಿಯಾಗಿ ಈ ಮಾರ್ಗದ ಮೂಲಕ ಒಯ್ಯಲ್ಪಟ್ಟಿರುವೆನೆಂದು ಶ್ರೀರಾಮನು ಗುರುತಿಸಲೆಂದು ಎಸೆಯುತ್ತಾಳೆ. ಕಾಲುಂಗುರಗಳು ಅತಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದವು ಎಂಬುದನ್ನು ಇದು ಸೂಚಿಸುತ್ತದೆ. (kannada.boldsky.com)

ಕಾಲ್ಗೆಜ್ಜೆ, ಕಾಲುಂಗುರ ಮತ್ತು ಮಾಸೋಳಿ (ಮೀನಿನ ಆಕಾರದ ಕಾಲುಂಗುರ) ಇವುಗಳನ್ನು ಬೆಳ್ಳಿಯಿಂದಲೇ ಏಕೆ ತಯಾರಿಸುತ್ತಾರೆ?

ಪಾತಾಳದಿಂದ ಪ್ರಕ್ಷೇಪಿತವಾಗುವ ಕನಿಷ್ಠಲಹರಿಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಸೊಂಟದಲ್ಲಿನ ಮತ್ತು ಕಾಲುಗಳಲ್ಲಿನ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ: ‘ಸಾಮಾನ್ಯವಾಗಿ ಸ್ತ್ರೀಯರ ಸೊಂಟದಲ್ಲಿ ಮತ್ತು ಕಾಲುಗಳಲ್ಲಿ ಧರಿಸುವ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ. ರಜೋಗುಣೀ ಮತ್ತು ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಿಸುವ ಕ್ಷಮತೆಯು ಬೆಳ್ಳಿಯಲ್ಲಿ ಹೆಚ್ಚಿರುವುದರಿಂದ ಆಯಾ ಕಾರ್ಯಕ್ಕೆ ಪೂರಕವಾಗಿರುವ ಲೋಹದ ಆಭರಣಗಳನ್ನು ಆಯಾಯ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ. ವೇಗದಿಂದ ಆಘಾತ ಮಾಡುವುದು ರಜೋಗುಣದ ವೈಶಿಷ್ಟ್ಯವಾಗಿರುವುದರಿಂದ ಬೆಳ್ಳಿಯ ಲೋಹದ ಆಭರಣಗಳನ್ನು ಪಾತಾಳದಿಂದ ಪ್ರಕ್ಷೇಪಿತವಾಗುವ ಪೃಥ್ವಿ ಮತ್ತು ಆಪತತ್ತ್ವಯುಕ್ತ ತೊಂದರೆದಾಯಕ ಆಘಾತದಾಯಕ ಲಹರಿಗಳಿಂದ ರಕ್ಷಣೆ ಪಡೆಯಲು ವಿಶೇಷವಾಗಿ ಉಪಯೋಗಿಸಲಾಗುತ್ತದೆ.’ - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೧೨.೨೦೦೫, ಮಧ್ಯಾಹ್ನ ೧.೦೨)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಸಂಬಂಧಿತ ವಿಷಯಗಳು
ಬಳೆಗಳು (ಕಂಕಣಗಳು)
ಕಾಲ್ಗೆಜ್ಜೆಗಳು - ಮಹತ್ವ ಮತ್ತು ಲಾಭ
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ಆಹಾರ ಮತ್ತು ಕಪ್ಪು ಶಕ್ತಿ ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ


ಜಠರಾಗ್ನಿ ಮಂದವಾದಾಗ (ಅಗ್ನಿಮಾಂದ್ಯ) ಜಡ ಆಹಾರವನ್ನು ಸೇವಿಸುವುದರಿಂದ ಆಮದೋಷಗಳ (ವಾಯುದೋಷಗಳ) ನಿರ್ಮಿತಿಯಾಗುವುದು: ‘ಶರೀರದಲ್ಲಿನ ಅಗ್ನಿಯು ಮಂದವಾಗಿದ್ದಾಗ ಲಘು ಆಹಾರವನ್ನು ತೆಗೆದುಕೊಳ್ಳಬೇಕು. ಜಠರಾಗ್ನಿ ಮಂದವಾದಾಗ ವಾತವನ್ನು ಹೆಚ್ಚಿಸುವ, ಜಡ, ಎಣ್ಣೆಯ ಪದಾರ್ಥಗಳನ್ನು ಸೇವಿಸಿದರೆ ಅಗ್ನಿಯು ಇನ್ನಷ್ಟು ದುರ್ಬಲವಾಗಿ ಶರೀರದಲ್ಲಿ ಆಮದೋಷ (ಅಜೀರ್ಣವಾಗಿ ವಿಷಸಮಾನವಾದ ಘಟಕಗಳ) ಉತ್ಪನ್ನವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ.

ಅಸಮತೋಲ ಆಹಾರದಿಂದ ಶರೀರದಲ್ಲಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಯಲ್ಲಿ ನಾಲ್ಕು ಘಟಕಗಳು ಕಾರ್ಯ ಮಾಡುತ್ತವೆ. ಅವು ಮನಸ್ಸು, ನಾಲಿಗೆ, ಅಗ್ನಿ ಮತ್ತು ಜಠರ. ಈ ಎಲ್ಲ ಘಟಕಗಳ ವಿಚಾರ ಮಾಡಿ ಸಮತೋಲ ಮತ್ತು ಆವಶ್ಯಕ ಆಹಾರವನ್ನು ಸೇವಿಸಬೇಕು, ಆದರೆ ಈಗ ಹೆಚ್ಚಿನ ಜನರ ಒಲವು ಆಹಾರದ ಪೌಷ್ಟಿಕತೆಗಿಂತ ರುಚಿಯ ಕಡೆಗಿರುವುದು ಕಂಡುಬರುತ್ತದೆ. ಇದರಿಂದ ಜಠರ ಮತ್ತು ಅಗ್ನಿಯ ವಿಚಾರವನ್ನು ಮಾಡದೇ ಮನಸ್ಸು ಮತ್ತು ನಾಲಿಗೆಯ ವಿಚಾರ ಮಾತ್ರ ಆಗುತ್ತದೆ. ಇಂತಹ ಆಹಾರವನ್ನು ಸೇವಿಸಿದರೆ ಅದು ಪ್ರಾಣಶಕ್ತಿಯನ್ನು ಕೊಡದೇ, ಶರೀರದಲ್ಲಿ ಆಮವನ್ನು (ಕಪ್ಪು ಶಕ್ತಿಯನ್ನು) ನಿರ್ಮಿಸುತ್ತದೆ. ಈ ಕಪ್ಪು ಶಕ್ತಿಯು ಅಪಾನ ವಾಯುವಿನ ಮೂಲಕ ಮಸ್ತಕದವರೆಗೆ (ತಲೆಯವರೆಗೆ) ಹೋಗಿ ನಮಗೆ ತೊಂದರೆಯನ್ನು ಕೊಡುತ್ತದೆ.

ಸಮತೋಲ ಆಹಾರದಿಂದ ಅನ್ನವು ಜೀರ್ಣವಾಗಿ (ಪಚನವಾಗಿ) ಪ್ರಾಣಶಕ್ತಿಯು ಹೆಚ್ಚುವುದು, ಮತ್ತು ಅಸಮತೋಲ ಆಹಾರದಿಂದ ಅಜೀರ್ಣವಾಗಿ ಅಪಾನ ವಾಯುವಿನ ವಿಕೃತಿಯಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರಶಾಸ್ತ್ರಕ್ಕನುಸಾರ ಹೊಟ್ಟೆಯ ಅರ್ಧ ಭಾಗದಷ್ಟು ಮಾತ್ರ ಆಹಾರವನ್ನು ಸೇವಿಸಬೇಕು, ಕಾಲು ಭಾಗದಷ್ಟು ನೀರು ಕುಡಿಯಬೇಕು ಮತ್ತು ಉಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು. ಇದರಿಂದ ಆಹಾರವು ಜೀರ್ಣವಾಗಲು ಸಾಕಷ್ಟು ಜಾಗವಿರುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಆಹಾರವನ್ನು ಸೇವಿಸಿದರೆ ಮುಂದಿನ ಪ್ರಕ್ರಿಯೆ ನಡೆಯುತ್ತದೆ.

ಅತಿಯಾದ ಆಹಾರವನ್ನು ಸೇವಿಸಿದರೆ ಹೊಟ್ಟೆಯಲ್ಲಿ ಆಮ (ವಾಯು) ಸಂಚಯವಾಗುತ್ತದೆ ಮತ್ತು ಆಹಾರದ ಜೀರ್ಣಪ್ರಕ್ರಿಯೆಯು ಕೆಡುತ್ತದೆ. ಆಮದೋಷದಿಂದ ವಿಕೃತ ವಾಯು (ಕಪ್ಪು ಶಕ್ತಿ) ನಿರ್ಮಾಣವಾಗಿ ಅಜೀರ್ಣವಾಗುತ್ತದೆ. ಇದರಿಂದ ಆಹಾರದಲ್ಲಿನ ಎಲ್ಲ ಪೋಷಕಾಂಶಗಳು ಹೀರಲ್ಪಡುವುದಿಲ್ಲ ಮತ್ತು ಬಹಳಷ್ಟು ಪೋಷಕ ಘಟಕಗಳು ಮಲದ ಮೂಲಕ ಹೊರಬೀಳುತ್ತವೆ. ಹೇಗೆ ಬೀಸುವ ಕಲ್ಲಿನಲ್ಲಿ ಸ್ವಲ್ಪ ಸ್ವಲ್ಪ ಧಾನ್ಯ ಹಾಕಿದರೆ ಹಿಟ್ಟು ಸರಿಯಾಗಿ ಬರುತ್ತದೆಯೋ ಮತ್ತು ಹೆಚ್ಚು ಧಾನ್ಯವನ್ನು ಹಾಕಿದರೆ ರವೆಯಂತಹ ಹಿಟ್ಟು ಸಿಗುತ್ತದೆಯೋ, ಹಾಗೆಯೇ ಸಮತೋಲ ಆಹಾರವನ್ನು ಸೇವಿಸಿದರೆ ಅದರಲ್ಲಿನ ಎಲ್ಲಾ ಪೋಷಕಾಂಶಗಳು ಹೀರಲ್ಪಟ್ಟು ಪ್ರಾಣಶಕ್ತಿಯು ಸಿಗುತ್ತದೆ ಮತ್ತು ಅತಿಯಾಗಿ ಆಹಾರವನ್ನು ಸೇವಿಸಿದರೆ ಅದು ಪೂರ್ಣವಾಗಿ ಜೀರ್ಣವಾಗದೇ ಮಲದ್ವಾರದಿಂದ ಹೊರಬೀಳುತ್ತದೆ. ಅದರೊಂದಿಗೆ ಅಪಾನ ವಾಯುವಿನ ಪ್ರಕೋಪವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ. ಕಪ್ಪು ಶಕ್ತಿಯನ್ನು ಹೋಗಲಾಡಿಸಲು ಅದರ ಮೂಲ ಕಾರಣವಾದ ಆಮದೋಷವನ್ನು ನಿವಾರಿಸಬೇಕು. ಔಷಧದಿಂದ ತಾತ್ಕಾಲಿಕ ಉಪಾಯವಾಗುತ್ತದೆ, ಅದಕ್ಕೆ ನಿತ್ಯದ ಉಪಾಯವೆಂದರೆ ಸಮತೋಲ ಆಹಾರ.
- ಪ.ಪೂ.ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು

ಎಂಜಲನ್ನವನ್ನು ಏಕೆ ತಿನ್ನಬಾರದು?


ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು

೧. ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶದಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗಿರುತ್ತದೆ.
೨. ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇವಿಸುವ ವ್ಯಕ್ತಿಯ ವಾಸನೆಯು ಅನ್ನದ ಮೇಲೆ ಮೂಡಿರುತ್ತದೆ. ಆದುದರಿಂದ ಎಂಜಲನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣವೂ ಹೆಚ್ಚಿರುತ್ತದೆ, ಹಾಗೆಯೇ ಕೆಲವು ಕೆಟ್ಟ ಶಕ್ತಿಗಳು ಎಂಜಲನ್ನವನ್ನು ಸೂಕ್ಷ್ಮದಲ್ಲಿ ಗ್ರಹಿಸುತ್ತವೆ.
- ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೫.೧೧.೨೦೦೭, ರಾತ್ರಿ ೮.೨೫)

ಎಂಜಲನ್ನವನ್ನು ಏಕೆ ತಿನ್ನಬಾರದು, ಇದರ ಹಿಂದಿನ ಶಾಸ್ತ್ರ

೧. ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಮಾಘ ಕೃಷ್ಣ ದ್ವಾದಶಿ (೪.೩.೨೦೦೮) ಸಾಯಂಕಾಲ ೭.೧೫)

೨. ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ. ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ. - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೨೦.೬.೨೦೦೭, ಸಾಯಂ.೭.೪೩)
(ಉನ್ನತರ ಅಥವಾ ಸಂತರ ಉಚ್ಛಿಷ್ಟವನ್ನು ಪ್ರಸಾದವೆಂದು ತಿಂದರೆ ತೊಂದರೆಯಾಗುವುದಿಲ್ಲ, ಅದರಿಂದ ಚೈತನ್ಯವೇ ಸಿಗುತ್ತದೆ. - ಸಂಕಲನಕಾರರು)

ಉಚ್ಛಿಷ್ಟ (ಎಂಜಲು) ಅನ್ನವನ್ನು ತಿನ್ನಬಾರದು

‘ಬಹುತೇಕ ರೋಗಗಳು ಕಲುಷಿತ ಆಹಾರ ಸೇವನೆಯಿಂದ ಆಗುತ್ತವೆ’ ಎಂದು ಆಧುನಿಕ ವೈದ್ಯಕೀಯಶಾಸ್ತ್ರವು ಹೇಳುತ್ತದೆ. ಆಧುನಿಕ ಪಾಶ್ಚಾತ್ಯ ವೈದ್ಯರು ‘ಉಚ್ಛಿಷ್ಟ ಅನ್ನದ ದೋಷ’ಗಳನ್ನು ಹೇಳುತ್ತಾರೆ; ಆದರೂ ಇಂದಿಗೂ ಉಪಾಹಾರಗೃಹಗಳಲ್ಲಿ ಈ ಎಂಜಲು ಅನ್ನವನ್ನು ಉಪಯೋಗಿಸುತ್ತಾರೆ. ಚಿತ್ರಮಂದಿರ, ವಿಹಾರಸಂಘ (ಕ್ಲಬ್) ಇತ್ಯಾದಿ ಮನರಂಜನೆಯ ಸ್ಥಳಗಳಲ್ಲಿ ತಟ್ಟೆಯಲ್ಲಿನ ಉಚ್ಛಿಷ್ಟ ಅನ್ನವನ್ನು ಜನರಿಗೆ ಕೊಡುತ್ತಾರೆ, ಇದು ಮಹಾಪಾಪವಾಗಿದೆ. ಇದನ್ನು ಯಾರೂ ವಿರೋಧಿಸುವುದಿಲ್ಲ.’ - ಗುರುದೇವ ಡಾ.ಕಾಟೇಸ್ವಾಮೀಜಿ

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳ ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
Dharma Granth

ಸೂರ್ಯನಮಸ್ಕಾರ ಮಾಡುವ ಪದ್ಧತಿ

ಸೂರ್ಯನಮಸ್ಕಾರವು ಹತ್ತು ಆಸನಗಳನ್ನು ಒಳಗೊಂಡಿದೆ.
ಪ್ರತಿಸಲ ಸೂರ್ಯನಮಸ್ಕಾರವನ್ನು ಮಾಡುವ ಮೊದಲು "ಓಂ ಮಿತ್ರಾಯ ನಮಃ" ದಿಂದ ಎಲ್ಲ ಹದಿಮೂರು ಜಪಗಳನ್ನೂ ಮಾಡಬೇಕು.


ಸೂರ್ಯನಮಸ್ಕಾರ ಮಾಡುವಾಗ ಪಠಿಸಬೇಕಾದ ನಾಮಗಳು

ಓಂ ಮಿತ್ರಾಯ ನಮಃ
ಓಂ ರವಯೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪೂಷ್ಣೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚ್ಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

ಆಸನ ೧

ಪ್ರಾರ್ಥನಾಸನ : ಎರಡೂ ಕಾಲುಗಳು ಒಂದಕ್ಕೊಂದು ಕೂಡಿಕೊಂಡಿರಲಿ, ಎರಡೂ ಹಸ್ತಗಳನ್ನು ಜೋಡಿಸಿ ನಮಸ್ಕಾರ ಮಾಡುವ ರೀತಿಯಲ್ಲಿ ಎದೆಯ ಮಟ್ಟಕ್ಕೆ ತರಬೇಕು. ಬೆನ್ನು ಮತ್ತು ಕತ್ತು ನೇರವಾಗಿರಲಿ ಹಾಗೂ ನೇರವಾಗಿ ಎದುರಿಗೆ ನೋಡುತ್ತಿರಬೇಕು.
ಪ್ರಾಣಾಯಾಮ : ಕುಂಭಕ
ಲಾಭ : ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಆಸನ ೨

ಆಸನ : ಪ್ರಾರ್ಥನಾಸನದಿಂದ ಮುಂದುವರಿಯುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಬೆನ್ನನ್ನು ಹಿಗ್ಗಿಸುವ ರೀತಿಯಲ್ಲಿ ಹಿಂಬದಿಗೆ ಸ್ವಲ್ಪ ಬಾಗಬೇಕು. ಹಸ್ತಗಳನ್ನು ಜೋಡಿಸಿರಬೇಕು ಮತ್ತು ಮೊಣಕೈಗಳನ್ನು ಮಡಚಬಾರದು. ತಲೆಯನ್ನು ಎರಡೂ ತೋಳುಗಳಮಧ್ಯದಲ್ಲಿರಿಸಿ ಮೇಲಕ್ಕೆ ನೋಡುತ್ತಾ ಸೊಂಟದಿಂದ ಸ್ವಲ್ಪ ಹಿಂದಕ್ಕೆ ಬಾಗಬೇಕು.
ಪ್ರಾಣಾಯಾಮ : ಪೂರಕ (ಮೊದಲ ಆಸನದಿಂದ ಎರಡನೆಯ ಆಸನಕ್ಕೆ ಹೋಗುವಾಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು)
ಲಾಭ : ಎದೆಯ ಮಾಂಸಖಂಡಗಳನ್ನು ನೇರವಾಗಿಸುತ್ತದೆ ಮತ್ತು ಉಸಿರಾಟವು ಯೋಗ್ಯರೀತಿಯಲ್ಲಿ ಆಗುವಂತೆ ಮಾಡುತ್ತದೆ.

ಆಸನ ೩

ಉತ್ಥಾನಾಸನ : ಎರಡನೆಯ ಆಸನದಿಂದ ಮುಂದುವರಿಯುತ್ತಾ ಕೈಗಳನ್ನು ಮೇಲಕ್ಕೆ ಎತ್ತಿರುವಂತೆಯೇ ಮುಂದಕ್ಕೆ ಬಾಗುತ್ತಾ ಕೈಗಳನ್ನು ಪಾದಗಳ ಅಕ್ಕಪಕ್ಕದಲ್ಲಿ ನೆಲಕ್ಕೆ ಊರಬೇಕು. ಮೊಣಕಾಲು ನೇರವಾಗಿರಬೇಕು ಮತ್ತು ತಲೆಯನ್ನು ಮೊಣಕಾಲುಗಳಿಗೆತಾಗಿಸಲು ಪ್ರಯತ್ನಿಸಬೇಕು.
ಪ್ರಾಣಾಯಾಮ : ರೇಚಕ (ಆಸನ ೨ ರಿಂದ ೩ ಕ್ಕೆ ಬರುವಾಗ ನಿಧಾನವಾಗಿ ಉಸಿರನ್ನು ಹೊರಗೆ ಹಾಕಬೇಕು)
ಲಾಭ : ಸೊಂಟ ಮತ್ತು ಬೆನ್ನು ಮೂಳೆಯನ್ನು ಮೆತುವಾಗಿಸುತ್ತದೆ. ಮಾಂಸಖಂಡಗಳು ಬಲಗೊಳ್ಳೂತ್ತವೆ ಮತ್ತು ಯಕೃತ್ತಿನ ಕಾರ್ಯಕ್ಕೆ ಸಹಾಯಕಾರಿಯಾಗುತ್ತದೆ.

ಆಸನ ೪

ಏಕಪಾದಪ್ರಸರಣಾಸನ : ಮೂರನೆಯ ಆಸನದಿಂದ ಮುಂದುವರಿದು ಕೆಳಗೆ ಕುಳಿತುಕೊಳ್ಳುತ್ತಾ ಒಂದು ಕಾಲನ್ನು ಹಿಂದಕ್ಕೆ ನೇರವಾಗಿ ಚಾಚಬೇಕು. ಹಸ್ತಗಳು ಕಾಲುಗಳ ಎರಡೂ ಕಡೆಗಳಲ್ಲಿ ನೆಲಕ್ಕೆ ಊರಿರಬೇಕು. ಇನ್ನೊಂದು ಕಾಲನ್ನು ಮಡಚಿರಬೇಕು.ಎದೆಯ ಭಾರವನ್ನು ಮುಂದಿರುವ ಮೊಣಕಾಲಿನಮೇಲೆ ಹಾಕಬೇಕು, ಕಣ್ಣುಗಳ ದೃಷ್ಟಿಯು ನೇರವಾಗಿ ಮೇಲಕ್ಕೆ ಇರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಕಾಲುಗಳ ಮಾಂಸಖಂಡಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಮತ್ತು ಕತ್ತಿನ ಮಾಂಸಗಳು ಮೆತುವಾಗುತ್ತವೆ.


ಆಸನ ೫

ಚತುರಾಂಗ ದಂಡಾಸನ : ಈಗ ನಿಧಾನವಾಗಿ ಮಡಚಿರುವ ಕಾಲನ್ನು ಹಿಂದಕ್ಕೆ ಚಾಚಿ ಈಗಾಗಲೇ ಚಾಚಿರುವ ಕಾಲಿನ ಪಕ್ಕದಲ್ಲಿಡಬೇಕು. ಮೊಣಕಾಲುಗಳು ಸಮಾನಾಂತರವಾಗಿರಲಿ. ಇಡೀ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲಿರಲಿ.ಕಾಲು, ಸೊಂಟ ಮತ್ತು ತಲೆ ಒಂದೇ ರೇಖೆಯಂತೆ ನೇರವಾಗಿರಲಿ.ನೇರವಾಗಿ ನೆಲವನ್ನು ನೋಡುತ್ತಿರಬೇಕು. (ಈ ಆಸನಕ್ಕೆ ಚತುರಾಂಗದಂಡಾಸನವೆಂದು ಏಕೆ ಕರೆಯುತ್ತಾರೆಂದರೆ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲೆ ಇರುತ್ತದೆ)
ಪ್ರಾಣಾಯಾಮ : ರೇಚಕ
ಲಾಭ : ತೋಳುಗಳ ಬಲವೃದ್ಧಿಯಾಗುತ್ತದೆ ಮತ್ತು ದೇಹದ ಆಕೃತಿಯು ಸರಿಯಾಗಿ ಬೆಳವಣಿಗೆಯಾಗುತ್ತದೆ.

ಆಸನ ೬

ಅಷ್ಟಾಂಗಾಸನ : ಎದೆಯನ್ನು ನೆಲದಕಡೆಗೆ ತರುತ್ತಾ ಎರಡೂ ಮೊಣಕೈಗಳನ್ನು ಮಡಚಬೇಕು. ಮುಂದೆ ಕೊಟ್ಟಿರುವ ಎಂಟು ಅವಯವಗಳು ನೆಲಕ್ಕೆ ತಾಗಬೇಕು.ಹಣೆ, ಎದೆ, ಎರಡೂ ಹಸ್ತಗಳು, ಎರಡೂ ಮೊಣಕಾಲುಗಳು ಮತ್ತು ಕಾಲಿನ ಹೆಬ್ಬೆರಳುಗಳು. (ಈಆಸನದಲ್ಲಿ ದೇಹದ ಎಂಟು ಅವಯವಗಳು ನೆಲವನ್ನು ಸ್ಪರ್ಷಿಸುತ್ತವೆಯಾದ್ದರಿಂದ ಇದಕ್ಕೆ ಅಷ್ಟಾಂಗಾಸನವೆಂದು ಕರೆಯುತ್ತಾರೆ)
ಪ್ರಾಣಾಯಾಮ : ಕುಂಭಕ (ಬಹಿರ್‌ಕುಂಭಕ)
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತದೆ.

ಆಸನ ೭

ಭುಜಂಗಾಸನ : ಈಗ ಸೊಂಟದ ಮೇಲ್ಭಾಗವನ್ನು ಮೇಲಕ್ಕೆತ್ತಬೇಕು. ಹಿಂದಕ್ಕೆ ಸ್ವಲ್ಪಬಾಗಬೇಕು ಮತ್ತು ಹಿಂದೆ ನೋಡಬೇಕು. ಕಾಲ್ಬೆರಳುಗಳು ಮತ್ತು ತೊಡೆಗಳು ನೆಲಕ್ಕೆ ಸ್ಪರ್ಷಿಸುತ್ತಿರುವಂತೆ ನೋಡಿಕೊಳ್ಳಬೇಕು ಮತ್ತು ಬೆನ್ನು ಅರ್ಧವೃತ್ತಾಕಾರದಲ್ಲಿ ಬಾಗಿದಸ್ಥಿತಿಯಲ್ಲಿರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತವೆ.( ೫, ೬ ಮತ್ತು ೭ನೆಯ ಆಸನಗಳು ಒಟ್ಟಾಗಿ ತೋಳುಗಳನ್ನು ಬಲಶಾಲಿಯನ್ನಾಗಿಸುತ್ತವೆ ಮತ್ತು ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಕೊಬ್ಬನ್ನುಕರಗಿಸುತ್ತವೆ)

ಆಸನ ೮

ಅಧೋಮುಖ ಸ್ವನಾಸನ : ಈಗ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಕೈಗಳು ನೇರವಾಗಿ ಚಾಚಿಕೊಂಡಿರಲಿ,ಹಸ್ತಗಳು ಮತ್ತು ಪಾದಗಳನ್ನು ನೆಲಕ್ಕೆ ಊರಬೇಕು.ಗದ್ದವನ್ನು ಎದೆಗೆ ತಾಗಿಸುವ ಪ್ರಯತ್ನ ಮಾಡಬೇಕು
ಪ್ರಾಣಾಯಾಮ : ರೇಚಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟದ ಮಾಂಸಖಂಡಗಳಿಗೆ ಉಪಯುಕ್ತ.

ಆಸನ ೯

ಏಕಪಾದ ಪ್ರಸರಣಾಸ : ನಾಲ್ಕನೆಯ ಆಸನದಂತೆ ಮಾಡುವುದು ಆದರೆ ಇಲ್ಲಿ ವಿರುದ್ಧ ಕಾಲು ಹಿಂದೆ ಚಾಚಿಕೊಂಡಿರುತ್ತದೆ.
ಪ್ರಾಣಾಯಾಮ : ಪೂರಕ.

ಆಸನ ೧೦

ಅಷ್ಟಾಂಗಾಸನ : ಮೂರನೆಯ ಆಸನದಂತೆ ಮಾಡಬೇಕು (ಉತ್ಥಾನಾಸನ).
ಪ್ರಾಣಾಯಾಮ : ರೇಚಕ
ಇದರ ನಂತರ ನಿಧಾನವಾಗಿ ಮೊದಲನೆಯ ಆಸನ ಎಂದರೆ ಪ್ರಾರ್ಥನಾಸಕ್ಕೆ ಬರಬೇಕು. ಈ ರೀತಿ ಮಾಡಿದಾಗ ಒಂದು ಸೂರ್ಯನಮಸ್ಕಾರ ಆಯಿತು. ಈ ರೀತಿಯಾಗಿ ಪ್ರತಿದಿನ ಹನ್ನೆರಡುಸಲ ಮಾಡಬೇಕು.

ಸೂಚನೆ : ಕತ್ತಿನಲ್ಲಿ ಸಮಸ್ಯೆ ಇರುವವರು ಸೂರ್ಯನಮಸ್ಕಾರ ಮಾಡುವ ಮೊದಲು ವೃತ್ತಿಪರ ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')

ಇತರ ಲೇಖನಗಳು
ವಾಸ್ತು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು

ಅ. ದೇವತೆಗಳ ಆಶೀರ್ವಾದ ಸಿಗುತ್ತದೆ: ಹಬ್ಬ, ಶುಭದಿನ ಮತ್ತು ಧಾರ್ಮಿಕ ವಿಧಿಗಳಿರುವ ದಿನ ಕೆಲವೊಮ್ಮೆ ದೇವತೆಗಳು ಸೂಕ್ಷ್ಮದಲ್ಲಿ ಭೂಮಿಗೆ ಬಂದಿರುತ್ತಾರೆ. ಇಂತಹ ದಿನ ವಸ್ತ್ರಾಲಂಕಾರಗಳಿಂದ ಸುಶೋಭಿತರಾಗುವುದೆಂದರೆ ಒಂದು ರೀತಿಯಲ್ಲಿ ಅವರನ್ನು ಸ್ವಾಗತಿಸುವುದೇ ಆಗಿದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದ ನೀಡುತ್ತಾರೆ ಮತ್ತು ನಮಗೆ ದೇವತೆಗಳ ಲಹರಿಗಳನ್ನು ಸೆಳೆದುಕೊಳ್ಳಲು ಸಾಧ್ಯವಾಗುತ್ತದೆ.

ಆ. ದೇವತೆಗಳ ತತ್ತ್ವಲಹರಿಗಳಿಂದ ವರ್ಷವಿಡೀ ಲಾಭವಾಗುತ್ತದೆ: ಹಬ್ಬಗಳ ದಿನ ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ಬಟ್ಟೆಗಳಲ್ಲಿ ದೇವತೆಗಳ ತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗಿ ಬಟ್ಟೆಗಳು ಸಾತ್ತ್ವಿಕವಾಗುತ್ತವೆ. ಬಟ್ಟೆಗಳಲ್ಲಿ ಆಕರ್ಷಿತವಾದ ದೇವತೆಗಳ ತತ್ತ್ವಲಹರಿಗಳು ದೀರ್ಘಕಾಲ ಉಳಿದುಕೊಳ್ಳುತ್ತವೆ. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ವರ್ಷವಿಡೀ ದೇವತೆಗಳ ತತ್ತ್ವಲಹರಿಗಳ ಲಾಭವು ಸಿಗುತ್ತದೆ.

ಇ. ದೇವತೆಗಳ ತತ್ತ್ವಲಹರಿಗಳಿಂದ ದೇಹಗಳ ಶುದ್ಧಿಯಾಗುತ್ತದೆ: ದೇವತೆಗಳ ತತ್ತ್ವಲಹರಿಗಳು ಜೀವದ ಸ್ಥೂಲದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣ ದೇಹಗಳೆಡೆಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವುದರಿಂದ ಆ ದೇಹಗಳ ಶುದ್ಧಿಯಾಗಿ ಅವು ಸಾತ್ತ್ವಿಕವಾಗುತ್ತವೆ.

ಈ. ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಜೀವದ ರಕ್ಷಣೆಯಾಗುತ್ತದೆ: ಹಬ್ಬ, ಯಜ್ಞ, ಉಪನಯನ, ವಿವಾಹ, ವಾಸ್ತುಶಾಂತಿಯಂತಹ ಧಾರ್ಮಿಕ ವಿಧಿಗಳ ಸಮಯದಲ್ಲಿ ದೇವತೆಗಳು ಮತ್ತು ಆಸುರೀ ಶಕ್ತಿಗಳ ನಡುವೆ ಅನುಕ್ರಮವಾಗಿ ಬ್ರಹ್ಮಾಂಡ, ವಾಯುಮಂಡಲ ಮತ್ತು ವಾಸ್ತು ಈ ಸ್ಥಳಗಳಲ್ಲಿ ಸೂಕ್ಷ್ಮ ಯುದ್ಧವು ನಡೆದಿರುತ್ತದೆ. ಹಬ್ಬವನ್ನು ಆಚರಿಸುವ ಮತ್ತು ಧಾರ್ಮಿಕ ವಿಧಿಗಳ ಸ್ಥಳಗಳಲ್ಲಿ ಉಪಸ್ಥಿತರಿರುವ ವ್ಯಕ್ತಿಗಳ ಮೇಲೆ ಈ ಸೂಕ್ಷ್ಮ ಯುದ್ಧದ ಪರಿಣಾಮವಾಗಿ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ವಿವಿಧ ಸುವರ್ಣಾಲಂಕಾರ ಮತ್ತು ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ವ್ಯಕ್ತಿಯ ಸುತ್ತಲೂ ಈಶ್ವರನ ಸಗುಣ-ನಿರ್ಗುಣ ಸ್ತರದ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಆ ವ್ಯಕ್ತಿಯ ರಕ್ಷಣೆಯಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮ ದಿಂದ, ೧೨.೧೧.೨೦೦೭, ರಾತ್ರಿ ೮.೧೫)

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು?')

ಸಂಬಂಧಿತ ಲೇಖನಗಳು
ವಾಸ್ತು
ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು?
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

ಎಡಗೈಯಿಂದ ಊಟ ಏಕೆ ಮಾಡಬಾರದು? ಬಲಗೈಯಿಂದ ಏಕೆ ಮಾಡಬೇಕು?


ಎಡಗೈಯಿಂದ ಊಟ ಏಕೆ ಮಾಡಬಾರದು?

೧. ಎಡಗೈಯಿಂದ ಊಟವನ್ನು ಮಾಡುವುದರಿಂದ, ಎಡಗೈಯಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಬ್ರಹ್ಮಾಂಡದಲ್ಲಿನ ಉಚ್ಚದೇವತೆಗಳ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವದ ಶರೀರದಲ್ಲಿನ ಇಚ್ಛಾಶಕ್ತಿಯು ಕಾರ್ಯನಿರತವಾಗುತ್ತದೆ.

೨. ಎಡಗೈಯಿಂದ ಊಟವನ್ನು ಮಾಡುವುದರಿಂದ, ಜೀವದ ಚಂದ್ರನಾಡಿಯು ಜಾಗೃತವಾಗುವುದರಿಂದ ಈ ನಾಡಿಯ ಕಾರ್ಯಶಕ್ತಿಯಿಂದ ಉಪಪ್ರಾಣಗಳ ಕಾರ್ಯವು ಹೆಚ್ಚುತ್ತದೆ. ಉಪಪ್ರಾಣಗಳ ಕಾರ್ಯವು ಹೆಚ್ಚಾಗುವುದರಿಂದ ಅನ್ನವು ಸರಿಯಾಗಿ ಜೀರ್ಣವಾಗುವುದಿಲ್ಲ. ಎಡಗೈಯಿಂದ ಊಟವನ್ನು ಮಾಡುವುದರಿಂದ ಉಪಪ್ರಾಣಗಳು ಕಾರ್ಯನಿರತವಾಗಿ ಅನ್ನದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳ ಲಾಭವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೩. ಬಲನಾಡಿಯು ಕ್ರಿಯಾಶೀಲ ಮತ್ತು ಮಾರಕತತ್ತ್ವವನ್ನು ಪ್ರತಿನಿಧಿಸುತ್ತದೆ; ಆದುದರಿಂದ ಶುಭಕಾರ್ಯವನ್ನು ಮಾಡಲು ಇದಕ್ಕೆ ಅಗ್ರಸ್ಥಾನವನ್ನು ಕೊಡಲಾಗಿದೆ. ಬಲನಾಡಿಯು ಕ್ರಿಯೆಯಲ್ಲಿ ಶಿವಸ್ವರೂಪವಾಗಿದೆ. ಎಡಗೈಯನ್ನು ಅಶುಭ ಕರ್ಮಗಳನ್ನು ಮಾಡುವುದರ ಪ್ರತೀಕವೆಂದು ಪರಿಗಣಿಸಲಾಗಿದೆ, ಏಕೆಂದರೆ ಎಡಗೈಯಿಂದ ಮಾಡುವ ಕೃತಿಗಳಿಂದ ದೇಹದಲ್ಲಿನ ಉಪಪ್ರಾಣಗಳು ಜಾಗೃತವಾಗಿ, ಅವುಗಳ ವೇಗವಾದ ತಳ್ಳುವಿಕೆಯಿಂದ ಶರೀರದಲ್ಲಿನ ಇತರ ತ್ಯಾಜ್ಯವಾಯುಗಳೂ ಜಾಗೃತವಾಗುತ್ತವೆ. ಇದರಿಂದ ದೇಹವು ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಹೋಗುತ್ತದೆ, ಆದುದರಿಂದ ಎಡಗೈಯಿಂದ ಊಟ ಮಾಡುವುದನ್ನು ನಿಷೇಧಿಸಲಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)

೪. ಎಡಗೈಯಿಂದ ಮಾಡಿದ ಕೃತಿಗಳನ್ನು ಅಶುಭದ ಪ್ರತೀಕವೆಂದು ತಿಳಿಯಲಾಗಿದೆ, ಏಕೆಂದರೆ ಎಡಗೈಯಿಂದ ಮಾಡಿದ ಕೃತಿಗಳಲ್ಲಿ ತೇಜತತ್ತ್ವದ ಅಧಿಷ್ಠಾನವು ಬಲಗೈಯ ತುಲನೆಯಲ್ಲಿ ಕಡಿಮೆ ಇರುವುದರಿಂದ, ಈ ಕೃತಿಗಳಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವಾಗುವ ಪ್ರಮಾಣವು ಹೆಚ್ಚಿರುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜೇಷ್ಠ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೨ ೪.೭.೨೦೧೦ ಬೆಳಗ್ಗೆ ೧೧.೧೯)

ಬಲಗೈಯಿಂದ ಏಕೆ ಊಟವನ್ನು ಮಾಡಬೇಕು?

೧. ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ನಾಭಿಯ ಸುತ್ತಲೂ ಇರುವ ಪಂಚಪ್ರಾಣಗಳು ಕಾರ್ಯನಿರತವಾಗುತ್ತವೆ. ಈ ಪಂಚಪ್ರಾಣಗಳ ಕಾರ್ಯದಿಂದ ಪ್ರಾಣಶಕ್ತಿಯು ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ಅನ್ನವು ಸೂಕ್ಷ್ಮ-ಸ್ತರದಲ್ಲಿ ಚೆನ್ನಾಗಿ ಜೀರ್ಣವಾಗಿ ಜೀವದ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ. ಆದುದರಿಂದ ಎಡಗೈಗಿಂತ ಬಲಗೈಯಿಂದ ಊಟವನ್ನು ಮಾಡುವುದು ಹೆಚ್ಚು ಫಲದಾಯಕವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೨. ಬಲಗೈಯಿಂದ ಊಟವನ್ನು ಮಾಡುವಾಗ ಜೀವಕ್ಕೆ ಬಲ, ಅಂದರೆ ಸೂರ್ಯನಾಡಿಯಿಂದ ಕಾರ್ಯನಿರತವಾದ ತೇಜತತ್ತ್ವದ ಸ್ಪಂದನಗಳ ಲಾಭವಾಗಲು ಸಹಾಯವಾಗುತ್ತದೆ. ಬೆರಳುಗಳಿಂದ ಪ್ರಕ್ಷೇಪಿತವಾಗುವ ತೇಜದ ಸ್ಪರ್ಶದಿಂದ ಅನ್ನದ ತುತ್ತುಗಳಲ್ಲಿನ ರಜ-ತಮಯುಕ್ತ ಸ್ಪಂದನಗಳು ನಾಶವಾಗುತ್ತವೆ. ಈ ರೀತಿಯಲ್ಲಿ ತುತ್ತು ಹೊಟ್ಟೆಯಲ್ಲಿ ಹೋಗುವುದಕ್ಕಿಂತ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಾಗಲು ಸಹಾಯವಾಗುತ್ತದೆ, ಆದುದರಿಂದ ಬಲಗೈಯಿಂದ ಊಟವನ್ನು ಮಾಡಬೇಕೆಂದು ಹೇಳಲಾಗಿದೆ. ಇದು ಯೋಗ್ಯ ಆಚಾರವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಅಧಿಕ ವೈಶಾಖ ಕೃಷ್ಣ ಪಕ್ಷ ಅಷ್ಟಮಿ, ಕಲಿಯುಗ ವರ್ಷ ೫೧೧೨ (೬.೫.೨೦೧೦) ಮಧ್ಯಾಹ್ನ ೪.೨೭)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
Dharma Granth

ಪುರುಷರು ಮತ್ತು ಸ್ತ್ರೀಯರು ಊಟಕ್ಕೆ ಕುಳಿತುಕೊಳ್ಳುವ ಪದ್ಧತಿ


ಪುರುಷರು ಊಟಕ್ಕೆ ಕಾಲುಗಳನ್ನು ಮಡಚಿಕೊಂಡು ಏಕೆ ಕುಳಿತುಕೊಳ್ಳಬೇಕು?
ಅ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನ ಜೀರ್ಣವಾಗಲು ಸಹಾಯವಾಗುತ್ತದೆ: ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನವು ಸರಿಯಾಗಿ ಜೀರ್ಣವಾಗುತ್ತದೆ. ಸುಖಾಸನದ ವಿಶಿಷ್ಟ ಅವಸ್ಥೆಯಿಂದ ಅನ್ನವು ಹೊಟ್ಟೆಯಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತದೆ. ಮುಂದಕ್ಕೆ ಬಾಗಿ ಊಟವನ್ನು ಮಾಡಬೇಕಾಗುವುದರಿಂದ ಹೊಟ್ಟೆಯ ಸ್ನಾಯುಗಳು ಪದೇಪದೇ ಕುಗ್ಗುತ್ತವೆ ಮತ್ತು ಹಿಗ್ಗುತ್ತವೆ. ಇದರಿಂದ ಜೀರ್ಣವಾಗಲು ಆವಶ್ಯಕವಾದ ರಕ್ತದ ಪೂರೈಕೆಯು ಹೆಚ್ಚುತ್ತದೆ. ಹಾಗೆಯೇ ಅನ್ನವನ್ನು ಸೇವಿಸುವಾಗ ನಿರ್ಮಾಣವಾಗುವ ವಾಯು (ಗ್ಯಾಸ್) ಹೊರ ಬೀಳಲು ಸಹಾಯವಾಗುತ್ತದೆ.

ಆ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತುಕೊಳ್ಳುವುದರಿಂದ ಭೋಜನದಲ್ಲಿನ ಸಾತ್ತ್ವಿಕತೆಯು ಜೀವದ ಸಂಪೂರ್ಣ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಡುತ್ತದೆ: ಊಟವನ್ನು ಮಾಡುವಾಗ ಪುರುಷರು ಸುಖಾಸನದಲ್ಲಿ (ಕಾಲುಗಳನ್ನು ಮಡಚಿ) ಕುಳಿತುಕೊಳ್ಳಬೇಕು. ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ಜೀವದ ದೇಹದಲ್ಲಿನ ಸೂಕ್ಷ್ಮವಾಯು ಮತ್ತು ಅವುಗಳ ಪ್ರವಾಹವು ಸರಾಗವಾಗಿ ಕಾರ್ಯನಿರತವಾಗುತ್ತವೆ. ಹಾಗೆಯೇ ಜೀವದ ದೇಹದಲ್ಲಿರುವ ತ್ರಿಗುಣಗಳೂ ಕೆಲವು ಪ್ರಮಾಣದಲ್ಲಿ ಸ್ಥಿರವಾಗುತ್ತವೆ. ಇದರಿಂದ ಜೀವವು ಸೇವಿಸಿದ ಭೋಜನದಲ್ಲಿನ ಸಾತ್ತ್ವಿಕತೆಯು ಅದರ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಟ್ಟು ಸ್ಥೂಲದೇಹ ಮತ್ತು ಪ್ರಾಣದೇಹಕ್ಕೆ ಆವಶ್ಯಕ ಪ್ರಮಾಣದಲ್ಲಿ ಇಂಧನದ ಪೂರೈಕೆಯಾಗುತ್ತದೆ. - ಶ್ರೀ ಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೦.೬.೨೦೦೭, ಮಧ್ಯಾಹ್ನ ೩.೩೫)

ಸ್ತ್ರೀಯರು ಊಟಕ್ಕೆ ಬಲಮಂಡಿಯನ್ನು ಹೊಟ್ಟೆಗೆ (ಮೈಗೆ) ತಗಲಿಸಿಕೊಂಡು ಏಕೆ ಕುಳಿತುಕೊಳ್ಳಬೇಕು?
ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುವುದರಿಂದ ಮಣಿಪುರಚಕ್ರವು (ನಾಭಿಸ್ಥಾನ) ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಸ್ಥಿತಿಯಿಂದ ಜೀವದ ದೇಹದ ರಜೋಗುಣಿ ವಿಚಾರಗಳ ವೇಗದ ಮೇಲೆಯೂ ನಿಯಂತ್ರಣವುಂಟಾಗಿ ಊಟ ಮಾಡುವ ಕ್ರಿಯೆಯಲ್ಲಿ ಯಾವುದೇ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುವುದಿಲ್ಲ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಸ್ತ್ರೀಯರು ತಮ್ಮಲ್ಲಿನ ರಜೋಗುಣಿ ಕಾರ್ಯಕಾರಿ ಶಕ್ತಿಯನ್ನು ನಿಯಂತ್ರಣದಲ್ಲಿಡಲು ಪೂಜೆಯನ್ನು ಮಾಡುವಾಗ ಅಥವಾ ಊಟಕ್ಕೆ ಕುಳಿತುಕೊಳ್ಳುವಾಗ ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುತ್ತಿದ್ದರು. 

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?

ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವ ಮತ್ತು ಲಾಭಗಳು 


೧. ‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.

೨. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.

೩. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’
- ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೬.೧೧.೨೦೦೭, ಮಧ್ಯಾಹ್ನ ೨.೩೦)

೪. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ: ‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’ - ಬ್ರಹ್ಮತತ್ತ್ವ (ಸೌ.ಪಾಟೀಲರ ಮಾಧ್ಯಮದಿಂದ, ೧೭.೧.೨೦೦೫, ಮಧ್ಯಾಹ್ನ ೧.೩೦)

ಕುಂಕುಮದ ಪರಿಮಳ, ಬಣ್ಣ ಮತ್ತು ಶಕ್ತಿಗಳಿಂದಾಗುವ ಲಾಭಗಳ ಪ್ರಮಾಣ ಮತ್ತು ಜೀವದ ಮೇಲಾಗುವ ಪರಿಣಾಮಗಳು


- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೪.೨೦೦೭, ಸಾಯಂ. ೬.೦೧ ಮತ್ತು ೧೩.೪.೨೦೦೭, ರಾತ್ರಿ ೯)

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
ಶಾಸ್ತ್ರ : ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.

ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೮.೨೦೦೪, ಮಧ್ಯಾಹ್ನ ೩.೪೬ ಮತ್ತು ೮.೬.೨೦೦೮, ಸಾಯಂ. ೬.೪೧)

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!

ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!

ಮನುಷ್ಯನ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದರೆ ವಸತಿ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು, ನಿವಾಸವು ಸುಖದಾಯಕವಾಗಲು ಇತ್ತೀಚೆಗೆ ಅನೇಕ ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತದೆ. ಆದರೆ ವಾಸ್ತುವು ಚೈತನ್ಯದಾಯಕವಾಗಿದ್ದರೆ, ಆಧ್ಯಾತ್ಮಿಕ, ಅಂದರೆ ಸೂಕ್ಷ್ಮ ಸ್ತರದಲ್ಲಾಗುವ ಲಾಭಗಳು ಎಷ್ಟೋ ಪಟ್ಟು ಅಧಿಕವಿರುತ್ತವೆ. ವಾಸ್ತುವು ಚೈತನ್ಯದಾಯಕವಾಗಿರಲು ಅದನ್ನು ಸ್ವಚ್ಛ ಹಾಗೂ ಶುದ್ಧವಾಗಿರಿಸುವುದು ಎಷ್ಟು ಮಹತ್ವಪೂರ್ಣವೋ ವಾಸ್ತುವಿನಲ್ಲಿರುವವರು ಆಚಾರ ಧರ್ಮವನ್ನು ಪಾಲಿಸುವುದೂ ಅಷ್ಟೇ ಮಹತ್ವಪೂರ್ಣವಾಗಿದೆ. ಆಚಾರಪಾಲನೆಯಿಂದ ವ್ಯಕ್ತಿಯ ಆಂತರಿಕ ಶುದ್ಧಿಯಾಗತೊಡಗುತ್ತದೆ. ಇದರ ಪರಿಣಾಮವು ವಾಸ್ತುವಿನ ಮೇಲೆಯೂ ಆಗುತ್ತದೆ. ವಾಸ್ತುಶುದ್ಧಿಗಾಗಿ ಸಹಾಯಕವಾಗುವ ಆಚಾರಪಾಲನೆಯ ಕೆಲವು ಕೃತಿಗಳ ಮಾಹಿತಿ ಪಡೆಯೋಣ.

ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?

ಕುಂಕುಮವು ಪಾವಿತ್ರ್ಯದ ಮತ್ತು ಮಾಂಗಲ್ಯದ ಪ್ರತೀಕವಾಗಿದೆ. ಕೃತಕ ವಸ್ತುಗಳಿಗಿಂತ ನೈಸರ್ಗಿಕ ವಸ್ತುಗಳಲ್ಲಿ ದೇವತೆಗಳ ಚೈತನ್ಯಲಹರಿಗಳನ್ನು ಸೆಳೆದುಕೊಳ್ಳುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ. ಕುಂಕುಮವನ್ನು ಅರಿಶಿನದಿಂದ ತಯಾರಿಸಿರುವುದರಿಂದ ಟಿಕಲಿಗಿಂತ ಕುಂಕುಮವು ಹೆಚ್ಚು ನೈಸರ್ಗಿಕವಾಗಿದೆ, ಅಲ್ಲದೇ ಕುಂಕುಮದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಪರಿಮಳದಲ್ಲಿ ಬ್ರಹ್ಮಾಂಡದಲ್ಲಿನ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆಯಿರುವುದರಿಂದ ಕುಂಕುಮವು ತಾರಕ-ಮಾರಕ ಚೈತನ್ಯಲಹರಿಗಳನ್ನು ಪ್ರಕ್ಷೇಪಿಸಿ ಜೀವವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಆದುದರಿಂದ ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಹೆಚ್ಚು ಫಲದಾಯಕವಾಗಿದೆ.

ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ. ಈ ಲಹರಿಗಳು ಜೀವದ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳುವುದರಿಂದ ಶರೀರದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಸತತವಾಗಿ ಟಿಕಲಿಯನ್ನು ಹಚ್ಚಿಕೊಳ್ಳುವುದರಿಂದ ಆ ಸ್ಥಳದಲ್ಲಿ ಕೆಟ್ಟಶಕ್ತಿಗಳ ಸ್ಥಾನವು ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ.

(ಈ ಶಾಸ್ತ್ರದ ಮಾಹಿತಿಯಿಲ್ಲದಿರುವುದರಿಂದ ಮತ್ತು ಹಿಂದೂ ಧರ್ಮದಲ್ಲಿನ ಮಂಗಲಕರ ವಿಷಯಗಳೆಡೆಗೆ ನೋಡುವ ಆಸಕ್ತಿಯೂ ಇಲ್ಲದಿರುವುದರಿಂದ ಇತ್ತೀಚೆಗೆ ಸ್ತ್ರೀಯರು ಹಾಗೂ ಯುವತಿಯರು ಕುಂಕುಮವನ್ನು ಹಚ್ಚಿಕೊಳ್ಳುವುದರ ಬದಲು ಟಿಕಲಿಯನ್ನು ಉಪಯೋಗಿಸುತ್ತಿದ್ದಾರೆ.)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

ಆಚಾರಧರ್ಮಕ್ಕೆ ಸಂಬಂಧಿತ ಲೇಖನಗಳು 
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?