Showing posts with label ಆಧ್ಯಾತ್ಮಿಕ ಪರಿಹಾರ. Show all posts
Showing posts with label ಆಧ್ಯಾತ್ಮಿಕ ಪರಿಹಾರ. Show all posts

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವವರೆಗೆ ಮಾಡಬಹುದು !


೧. ಶ್ರಾದ್ಧವನ್ನು ಮಾಡದಿದ್ದರೆ ಅದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನೂ ಸಹಿಸಿಕೊಳ್ಳಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ

ಸಹೋದರರೆಲ್ಲರೂ ಒಂದೇ ಕುಟುಂಬದಲ್ಲಿದ್ದರೆ ಹಿರಿಯ ಸಹೋದರನು ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ (ಉದಾ. ಶಾರೀರಿಕ ತೊಂದರೆ) ಹಿರಿಯ ಸಹೋದರನಿಗೆ ಮಾಡಲು ಸಾಧ್ಯವಾಗದಿದ್ದರೆ ಇತರ ಸಹೋದರರಲ್ಲಿ ಯಾರಾದರೂ ಮಾಡಬಹುದು; ಏಕೆಂದರೆ ಶ್ರಾದ್ಧವನ್ನು ಮಾಡದಿರುವುದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನು ಸಹ ಅನುಭವಿಸಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಅದು ಪೂರ್ವಜರನ್ನು ತೃಪ್ತಿಗೊಳಿಸಲು ಉಪಯೋಗವಾಗುವುದರಿಂದ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ. ಸಹೋದರರೆಲ್ಲರೂ ವಿಭಕ್ತ ಕುಟುಂಬದಲ್ಲಿದ್ದರೆ ಪ್ರತಿಯೊಬ್ಬರೂ ಶ್ರಾದ್ಧ ವಿಧಿಯನ್ನು ಮಾಡಬಹುದು.

೨. ಮಹಾಲಯ ಶ್ರಾದ್ಧದಲ್ಲಿ ತಂದೆ-ತಾಯಿಯ ಜೊತೆಗೆ ಇತರ ಆಪ್ತರು ಸಹ ಬರುವುದರಿಂದ ಅವರಿಗೂ ಪಿಂಡ ನೀಡಲು ಸಾಧ್ಯವಾಗುತ್ತದೆ

ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ. ಇದರಲ್ಲಿ ತಂದೆಯ ಶ್ರಾದ್ಧವಿದ್ದರೆ ತಂದೆ, ಅಜ್ಜ, ಮುತ್ತಜ್ಜ ಹಾಗೂ ತಾಯಿಯದ್ದಾಗಿದ್ದರೆ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿ ಪಿತೃಗಳು ಬರುತ್ತಾರೆ. ಮಹಾಲಯ ಶ್ರಾದ್ಧದಲ್ಲಿ ಮಾತ್ರ ಅವರೊಂದಿಗೆ ಚಿಕ್ಕಪ್ಪ, ಮಾವ, ಅತ್ತೆ, ಸಹೋದರಿ, ಚಿಕ್ಕಮ್ಮ, ಇನ್ನೂ ಇತರ ಬಂಧುಗಳು ಹೀಗೆ ತುಂಬ ಪಿತೃಗಳು ಬರುತ್ತಿರುತ್ತಾರೆ. ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ ಪಿತೃಪಕ್ಷದಲ್ಲಿ ಮಹಾಲಯವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವ ವರೆಗೆ ಮಹಾಲಯ ಶ್ರಾದ್ಧವನ್ನು ಮಾಡಬಹುದು.

೩. ಸಾಧಕರು ಸನಾತನದ ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ) ಈ ಧ್ವನಿಚಿತ್ರಸುರುಳಿಯನ್ನು ನೋಡಿ ಅದರಂತೆ ಶ್ರಾದ್ಧವಿಧಿಯನ್ನು ಮಾಡಬೇಕು !

ಅ. ಸಾಧಕರು ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ಸನಾತನದ "ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ)" ಎಂಬ ಧ್ವನಿಚಿತ್ರಸುರುಳಿಯನ್ನು ನೋಡಿ ಹಾಗೂ ತಾವು ಯಾವ ಪುರೋಹಿತರಿಂದ ಶ್ರಾದ್ಧವನ್ನು ಮಾಡಿಸಿಕೊಳ್ಳುವವರಿರುವಿರೋ ಆ ಪುರೋಹಿತರಿಗೂ ಈ ಧ್ವನಿಚಿತ್ರಸುರುಳಿಯನ್ನು ಅವಶ್ಯಕತೆಗನುಸಾರ ನೋಡಲು ವಿನಂತಿಸಿಕೊಳ್ಳಿರಿ.

ಆ. ನಮಗೆ ಇದೇ ರೀತಿ ವಿಧಿ ಮಾಡಬೇಕೆಂದು ಹೇಳಿ ಹಾಗೂ ಅದರಲ್ಲಿರುವಂತೆ ಶ್ರಾದ್ಧವನ್ನು ಮಾಡಿರಿ.

ಇ. ಶ್ರಾದ್ಧವಿಧಿಯನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕೆಂಬುದು ಎಲ್ಲರಿಗೂ ತಿಳಿಯಲೆಂದು ಧ್ವನಿಚಿತ್ರಸುರುಳಿಯಲ್ಲಿ ಭೋಜನಕ್ಕಾಗಿ ಪ್ರತ್ಯಕ್ಷವಾಗಿ ಬ್ರಾಹ್ಮಣರನ್ನು ಕೂರಿಸಿ ವಿಧಿ ಮಾಡಲಾಗಿದೆ. ಬ್ರಾಹ್ಮಣ ಭೋಜನ ಸಾಧ್ಯವಿಲ್ಲದ್ದಿದ್ದರೆ ಬ್ರಾಹ್ಮಣರ ಜಾಗದಲ್ಲಿ ದರ್ಬೆಯಿಟ್ಟು ಚಟಶ್ರಾದ್ಧವನ್ನು ಮಾಡಬಹುದು.

ಈ. ವಿಧಿಯ ಪೌರೋಹಿತ್ಯ ಮಾಡಲು ಮಾತ್ರ ಒಬ್ಬ ಬ್ರಾಹ್ಮಣರ ಆವಶ್ಯಕತೆಯಿರುತ್ತದೆ.

೪. ಯಾವ ಸಾಧಕರು ಈ ವರ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲಿಲ್ಲವೋ, ಅವರು ೧೫.೧೧.೨೦೧೬ ರ ವರೆಗೆ ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಮಾಡಿರಿ.

ಸನಾತನ ಪಂಚಾಂಗದಲ್ಲಿ ಈ ವರ್ಷ ಅಂದರೆ ನವೆಂಬರ್ ೨೦೧೬ ರಲ್ಲಿ ಮಹಾಲಯ ಸಮಾಪ್ತಿ ಎಂದು ನೀಡಲಾಗಿದೆ. ಆ ದಿನದ ವರೆಗೆ ಮಹಾಲಯ ಶ್ರಾದ್ಧವನ್ನು ಯಾವುದೇ ತಿಥಿಯಂದು ಮಾಡಬಹುದು. ಆದ್ದರಿಂದ ಯಾರು ಪಿತೃಪಕ್ಷದ ಸಮಯದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲಿಲ್ಲವೋ ಅವರು ಈ ವರ್ಷದ ೧೫.೧೧.೨೦೧೬ ರ ವರೆಗೆ ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಆಚರಿಸಿ ಪೂರ್ವಜರ ತೊಂದರೆಯಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಿರಿ.

– ಶ್ರೀ. ದಾಮೋದರ ವಝೇ ಗುರೂಜಿ (ಸನಾತನ ಸಾಧಕ-ಪುರೋಹಿತ ಪಾಠಶಾಲೆಯ ಸಂಚಾಲಕರು), ಫೋಂಡಾ, ಗೋವಾ.

(ಆಧಾರ : ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ')

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳುನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?

'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಕರ್ಪೂರ’ದ ಪುಡಿಯನ್ನು ಹಚ್ಚುವುದು ಅಥವಾ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುವುದು 
(ತತ್ತ್ವ : ತೇಜತತ್ತ್ವ)


ಅ. ‘ಸನಾತನ ಕರ್ಪೂರ’ದ ವೈಶಿಷ್ಟ್ಯಗಳು

೧. ‘ಸನಾತನ ಕರ್ಪೂರ’ವು ಭೀಮಸೇನಿ ಕರ್ಪೂರವಾಗಿದೆ. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ.
೨. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಕ್ಷಮತೆಯೂ ಹೆಚ್ಚಿರುತ್ತದೆ.

ಆ. ಉಪಯುಕ್ತತೆ /ಲಾಭ

೧. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಶ್ವಾಸಮಾರ್ಗದಲ್ಲಿನ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.
೨. ಕರ್ಪೂರದ ಸುಗಂಧವನ್ನು ತೆಗೆದುಕೊಂಡರೆ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗಿ ಬುದ್ಧಿಯ ತೀಕ್ಷ್ಣತೆ ಹೆಚ್ಚಾಗುತ್ತದೆ: ಕರ್ಪೂರದ ಸುಗಂಧದಿಂದ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಅದರಲ್ಲಿ ಆಧ್ಯಾತ್ಮಿಕ ಶಕ್ತಿಯು ಸಂಗ್ರಹವಾಗುವುದರಿಂದ ಅದರ ತೀಕ್ಷ್ಣತೆಯೂ ಹೆಚ್ಚಾಗುತ್ತದೆ. ಕರ್ಪೂರದ ಸುಗಂಧದಿಂದ ಸೇವೆಯಲ್ಲಿನ ಬುದ್ಧಿಯ ಅಡಚಣೆಯು ದೂರವಾಗುವುದರಿಂದ ಸೇವೆಯ ಪರಿಣಾಮವೂ ಹೆಚ್ಚಾಗುತ್ತದೆ.
೩. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ದೂಷಿತ ವಾಯು ನಾಶವಾಗಿ ಕಣ್ಣುಗಳು ಶಾಂತವಾಗಲು ಮತ್ತು ಮುಖಚರ್ಯೆ ಮತ್ತು ಮನಸ್ಸು ಪ್ರಸನ್ನವಾಗಲು ಸಹಾಯವಾಗುತ್ತದೆ.
೪. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ, ಕಣ್ಣುಗಳಿಗೆ ಮಸುಕಾಗಿ ಕಾಣಿಸುತ್ತಿದ್ದರೆ ದೃಷ್ಟಿಯು ಸ್ಪಷ್ಟವಾಗುತ್ತದೆ, ನಿದ್ರೆಯು ಪೂರ್ಣವಾಗಿದ್ದರೂ ಬರುವಂತಹ ನಿದ್ರೆಯು ದೂರವಾಗುತ್ತದೆ, ಮನಸ್ಸಿನ ನಿರಾಶೆ ದೂರವಾಗುತ್ತದೆ; ಇವೇ ಮುಂತಾದ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೧.೧೨.೨೦೧೦)
೫. ಸನಾತನದ ‘ಭೀಮಸೇನಿ ಕರ್ಪೂರ’ವು ದೃಷ್ಟಿಯನ್ನು ತೆಗೆಯಲೂ ಉಪಯುಕ್ತವಾಗಿದೆ.
(‘ಕರ್ಪೂರದಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು?’ ಈ ವಿಷಯದ ವಿವೇಚನೆಯನ್ನು ಸನಾತನ ನಿರ್ಮಿತ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ಇ. ಕರ್ಪೂರವನ್ನು ಹೇಗೆ ಉಪಯೋಗಿಸಬೇಕು?

೧. ಕರ್ಪೂರದ ಪುಡಿಯನ್ನು ಮುಖಕ್ಕೆ ಹಚ್ಚಿ ಅದರ ಪರಿಮಳವನ್ನೂ ತೆಗೆದುಕೊಳ್ಳಬೇಕು.
ಅ. ಚಿಟಿಕೆಯಷ್ಟು ಪುಡಿಯಾಗುವಷ್ಟು ಕರ್ಪೂರದ ತುಂಡನ್ನು ಕೈಯಲ್ಲಿ ತೆಗೆದುಕೊಂಡು ನಾಮಜಪ ಮಾಡುತ್ತಾ ಅದನ್ನು ಅಂಗೈಯಲ್ಲಿ ಪುಡಿ ಮಾಡಬೇಕು. ಕಣ್ಣುಗಳನ್ನು ಮುಚ್ಚಿ ಪುಡಿಯನ್ನು ಕಣ್ಣುಗಳೊಂದಿಗೆ ಇಡೀ ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಮುಖದ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ಕಡಿಮೆಯಾಗುತ್ತದೆ.
ಆ. ಈ ಪುಡಿಯನ್ನು ಆಜ್ಞಾಚಕ್ರದ ಮೇಲೆ (ಎರಡೂ ಹುಬ್ಬುಗಳ ನಡುವೆ) ಹೆಚ್ಚು ಪ್ರಮಾಣದಲ್ಲಿ ತಿಕ್ಕಬೇಕು. ಇದರಿಂದ ಆಜ್ಞಾಚಕ್ರ ಜಾಗೃತವಾಗಲು ಸಹಾಯವಾಗುತ್ತದೆ.
ಇ. ಉಳಿದ ಪುಡಿಯನ್ನು ಎರಡೂ ಅಂಗೈಗಳಿಗೆ ತಿಕ್ಕಬೇಕು. ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮೂಗಿನೊಂದಿಗೆ ಮುಖವನ್ನು ಮುಚ್ಚಿಕೊಳ್ಳಬೇಕು.
ಈ. ಎರಡೂ ಕೈಗಳ ಬೊಗಸೆಯಲ್ಲಿ ಕಣ್ಣುಗಳ ರೆಪ್ಪೆಗಳನ್ನು ೪-೫ ಬಾರಿ ಮುಚ್ಚುವುದು ತೆರೆಯುವುದು ಮಾಡಬೇಕು. ಬೊಗಸೆಯ ಟೊಳ್ಳಿನಿಂದ ದೀರ್ಘಶ್ವಾಸವನ್ನು ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಒಂದು ಸಲಕ್ಕೆ ೩-೪ ಬಾರಿ ಮಾಡಬೇಕು.

೨. ಇತರ ಉಪಯೋಗಗಳು
ಅ. ಖಾಲಿ ಡಬ್ಬಿಯಲ್ಲಿ ಕರ್ಪೂರದ ತುಂಡುಗಳನ್ನಿಟ್ಟು ಆ ಡಬ್ಬಿಯ ಟೊಳ್ಳಿನ ಸುಗಂಧವನ್ನು ಆಗಾಗ ತೆಗೆದುಕೊಳ್ಳಬೇಕು, ನಮ್ಮ ಮೇಲೆ ಸತತವಾಗಿ ಬರುವ ತ್ರಾಸದಾಯಕ ಶಕ್ತಿಯ ಆವರಣದೊಂದಿಗೆ ಹೋರಾಡಲು ಈ ಉಪಾಯವನ್ನು ನಡೆದಾಡುವಾಗ, ಇತರರೊಂದಿಗೆ ಚರ್ಚೆ ಮಾಡುವಾಗ, ಸಭೆ / ಸತ್ಸಂಗ ಇವುಗಳಲ್ಲಿಯೂ ಮಾಡಬಹುದು.
ಆ. ವೈದ್ಯಕೀಯ ಉಪಚಾರವನ್ನು ಮಾಡಿಯೂ ಶರೀರ ತುರಿಸುವುದು, ಶರೀರದ ಮೇಲೆ ಗುಳ್ಳೆ ಅಥವಾ ಪರಚಿದ ಗುರುತುಗಳು ಮೂಡುವುದು, ಶರೀರದ ಉಷ್ಣತೆ ಹೆಚ್ಚಾಗುವುದು, ಹಾಗೆಯೇ ತಲೆನೋವು, ಏನೂ ಹೊಳೆಯದಿರುವುದು ಮುಂತಾದ ತೊಂದರೆಯಾಗುತ್ತಿದ್ದಲ್ಲಿ ಆಜ್ಞಾಚಕ್ರದ ಮೇಲೆ ಅಥವಾ ಶಾರೀರಿಕ ತೊಂದರೆಯ ಅರಿವಾಗುತ್ತಿರುವ ಸ್ಥಳದ ಮೇಲೆ ‘ಸನಾತನದ ಕರ್ಪೂರ’ದ ತುಂಡನ್ನು ಹಚ್ಚಿಕೊಳ್ಳಬೇಕು. ಸಾಮಾನ್ಯವಾಗಿ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಆ ತುಂಡು ತಾನಾಗಿಯೇ ಅಂಟಿಕೊಳ್ಳುತ್ತದೆ ಮತ್ತು ತೊಂದರೆ ಕಡಿಮೆಯಾದ ನಂತರ ಕೆಳಗೆ ಬೀಳುತ್ತದೆ.
ಇ. ಶರೀರ ಅಥವಾ ತಲೆಗೆ ಎಣ್ಣೆಯಿಂದ ಮರ್ದನ (ಮಾಲೀಶ್) ಮಾಡುವ ಮೊದಲು ಒಂದು ಕೈಯಲ್ಲಿ ಕರ್ಪೂರದ ಸ್ವಲ್ಪ ಪುಡಿ ಮಾಡಬೇಕು; ಅದರಲ್ಲಿ ಎಣ್ಣೆ ಹಾಕಿ ಅನಂತರ ಮರ್ದನ (ಮಾಲೀಶ್) ಮಾಡಬೇಕು. ಇದರಿಂದ ಕರ್ಪೂರದಲ್ಲಿನ ಶಿವತತ್ತ್ವರೂಪೀ ಗಂಧದಿಂದ ನಮಗೆ ಅತ್ಯಧಿಕ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭ ಸಿಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೫.೧೧.೨೦೧೦)
ಈ. ರಾತ್ರಿ ಮಲಗುವಾಗ ಹಾಸಿಗೆಯ ಮೇಲೆ ಕರ್ಪೂರದ ಪುಡಿಯನ್ನು ಹರಡಬೇಕು

ಈ. ಅನುಭೂತಿ

೧. ‘ಸನಾತನ ಕರ್ಪೂರ’ದ ಸುಗಂಧ ತೆಗೆದುಕೊಂಡ ನಂತರ ಶೀತ (ನೆಗಡಿ) ದೂರವಾಗುವುದು : ೧೭.೧೦.೨೦೦೭ರಂದು ಬೆಳಗ್ಗಿನಿಂದ ನನಗೆ ನೆಗಡಿಯಿಂದ ತೊಂದರೆಯಾಗುತ್ತಿತ್ತು. ನಾನು ‘ಸನಾತನ ಕರ್ಪೂರ’ದ ತುಂಡನ್ನು ಕೈಯಲ್ಲಿ ತೆಗೆದುಕೊಂಡೆ. ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿ ಆ ಕರ್ಪೂರದ ಪುಡಿ ಮಾಡಿ ಅದರ ಸುಗಂಧವನ್ನು ತೆಗೆದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ನನ್ನ ನೆಗಡಿ ನಿಂತಿತು. - ಶ್ರೀ.ದತ್ತಾತ್ರೇಯ ಅಣ್ಣಪ್ಪ ಲೋಹಾರ, ಖಡಕೆವಾಡಾ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ.
೨. ಕರ್ಪೂರದ ಉಪಾಯ ಮಾಡಿದ ನಂತರ ಶರೀರ ತುರಿಸುವುದು ನಿಂತಿತು : ಒಂದು ಸಲ ನನಗೆ ಹಾಸಿಗೆಯ ಮೇಲೆ ಮಲಗಿದ ಕೂಡಲೆ ಶರೀರ ತುರಿಸಲು ಪ್ರಾರಂಭವಾಯಿತು. ನಾನು ‘ಸನಾತನ ಕರ್ಪೂರ’ದ ಪುಡಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರಾರ್ಥನೆಯನ್ನು ಮಾಡಿ ಶರೀರದ ಮೇಲೆ ಹಚ್ಚಿದೆ. ಕೂಡಲೇ ತುರಿಸುವುದು ನಿಂತಿತು. ಹೀಗೆ ಸತತವಾಗಿ ಮೂರು ದಿನ ಮಾಡಿದ ಮೇಲೆ ನಾಲ್ಕನೆಯ ದಿನದಿಂದ ತುರಿಸಲೇ ಇಲ್ಲ.
- ಕು.ವತ್ಸಲಾ ರೆವಂಡಕರ, ಮಾಝಗಾವ, ಮುಂಬೈ (ಜೂನ್ ೨೦೦೯)

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ,  ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಅತ್ತರು’ (ಸುಗಂಧದ್ರವ್ಯ) ಹಚ್ಚಿಕೊಂಡು ಅದರ ಸುಗಂಧ ತೆಗೆದುಕೊಳ್ಳುವುದು 
(ತತ್ತ್ವ : ಪೃಥ್ವಿ-ಆಪತತ್ತ್ವ)


ಅ. ಕಾರ್ಯ/ಉಪಯುಕ್ತತೆ

೧.ಶ್ವಾಸಮಾರ್ಗದ ಶುದ್ಧಿಯಾಗುತ್ತದೆ : ಶ್ವಾಸದೊಂದಿಗೆ ‘ಸನಾತನ ಅತ್ತರ’ನಲ್ಲಿರುವ ಸುಗಂಧವು ಶರೀರದೊಳಗೆ ಹೋಗಿ ಶ್ವಾಸಮಾರ್ಗವು ಚೈತನ್ಯದ ಸ್ತರದಲ್ಲಿ ಶುದ್ಧವಾಗುತ್ತದೆ. ಇದರಿಂದ ವಾತಾವರಣದಲ್ಲಿನ ರಜ-ತಮ ಕಣಗಳು, ನಕಾರಾತ್ಮಕ ವಿಚಾರ ಮತ್ತು ತ್ರಾಸದಾಯಕ ಶಕ್ತಿಯು ಶ್ವಾಸದ ಮಾರ್ಗದಿಂದ ಒಳಗೆ ಬರುವುದು ತಡೆಗಟ್ಟಲ್ಪಡುತ್ತದೆ.
೨.ಮನಸ್ಸಿನಲ್ಲಿನ ನಕಾರಾತ್ಮಕತೆಯನ್ನು ದೂರಗೊಳಿಸಲು ಮತ್ತು ಸೇವೆಯಲ್ಲಿ ಮನಸ್ಸನ್ನು ಪ್ರಸನ್ನವಾಗಿರಿಸಲು ‘ಸನಾತನ ಅತ್ತರಿನ’ ದೈವೀ ಸುಗಂಧವು ಉಪಯುಕ್ತವಾಗಿದೆ.
೩.‘ಸನಾತನ ಅತ್ತರ’ ಇದರಲ್ಲಿನ ಸುವಾಸನೆಯ ಸಹವಾಸದಲ್ಲಿ ಮಾಡಿದ ಕರ್ಮವು ಸಾತ್ತ್ವಿಕವಾಗುತ್ತದೆ.

ಆ. ‘ಸನಾತನ ಅತ್ತರ’ನ್ನು ಹೇಗೆ ಉಪಯೋಗಿಸಬೇಕು?

೧. ಸನಾತನ ಅತ್ತರನ್ನು ಕೈಗೆ ಹಚ್ಚಿಕೊಂಡು ಅದರ ಪರಿಮಳವನ್ನು ದೀರ್ಘ ಶ್ವಾಸದೊಂದಿಗೆ ತೆಗೆದುಕೊಳ್ಳಬೇಕು.
೨. ಹತ್ತಿಯ ಚಿಕ್ಕ ಉಂಡೆಗೆ ಅತ್ತರು ಹಚ್ಚಿ ಆ ಉಂಡೆಯನ್ನು ಕಿವಿಯ ಹಾಲೆಯ ಮೇಲಿನ ಭಾಗದಲ್ಲಿ ಇಡಬೇಕು ಮತ್ತು ಆಗಾಗ ಆ ಉಂಡೆಯಿಂದ ಕೈಗೆ ಅತ್ತರು ಹಚ್ಚಿಕೊಂಡು ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೩. ಕರವಸ್ತ್ರಕ್ಕೆ (ರುಮಾಲು) ಸ್ವಲ್ಪ ಅತ್ತರು ಹಚ್ಚಿ ಆಗಾಗ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೪. ಶರೀರಕ್ಕೆ ದುರ್ಗಂಧ ಬರುತ್ತಿದ್ದಲ್ಲಿ ಎಣ್ಣೆಯಲ್ಲಿ ಒಂದು ಹನಿ ಸನಾತನದ ‘ಚಮೇಲಿ’ ಅತ್ತರು ಹಾಕಿ ಅದರ ಮೂಲಕ ಮರ್ದನ (ಮಾಲಿಶ್) ಮಾಡಿದರೆ ಶರೀರದ ಆಯಾ ಭಾಗದಲ್ಲಿನ ದುರ್ಗಂಧಯುಕ್ತ ವಾಯು ನಾಶವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೩.೪.೨೦೦೯)

ಇ. ಲೋಲಕದ ಮೂಲಕ ದೃಢಪಟ್ಟಿರುವ ‘ಸನಾತನ ಅತ್ತರ’ನ ಸಾತ್ತ್ವಿಕತೆ : 

ಅಂತರರಾಷ್ಟ್ರೀಯ ಸ್ತರದಲ್ಲಿ ಮಾನ್ಯತೆ ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತುಗಳು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿನ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿದ್ದಲ್ಲಿ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಪೇಟೆಯಲ್ಲಿ (ಮಾರುಕಟ್ಟೆ) ನ ಅತ್ತರು ಮತ್ತು ‘ಸನಾತನ ಅತ್ತರು’ ಇವುಗಳ ಬಾಟಲಿಗಳ ಮೇಲೆ ಪ್ರತ್ಯೇಕವಾಗಿ ಲೋಲಕವನ್ನು ಹಿಡಿದಾಗ ನನಗೆ ಮುಂದಿನಂತೆ ಅರಿವಾಯಿತು.

ಇ೧. ಪೇಟೆಯಲ್ಲಿನ ಅತ್ತರು : ಇದರ ಮೇಲೆ ಲೋಲಕವು ನಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ವಿರುದ್ಧ ದಿಕ್ಕಿನಲ್ಲಿ) ತಿರುಗಿತು.
ಇ೨. ಸನಾತನ ಅತ್ತರು : ಇದರ ಮೇಲೆ ಲೋಲಕವು ಸಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ದಿಕ್ಕಿನಲ್ಲಿ) ತಿರುಗಿತು. ಇದರಿಂದ ‘ಸನಾತನದ ಅತ್ತರಿನಲ್ಲಿ’ ಚೈತನ್ಯವಿದೆ ಎಂದು ಸ್ಪಷ್ಟವಾಗುತ್ತದೆ.
- ಶ್ರೀ.ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ (೨೦೦೯)

ಈ. ಅನುಭೂತಿ - ಕುತ್ತಿಗೆಯ ನರ ನೋಯುವುದು ಮತ್ತು ತಲೆ ಜೋಮುಗಟ್ಟಿದಂತಾಗುವುದು, ಔಷಧಿಗಳಿಂದ ಕಡಿಮೆಯಾಗದೇ, ಸನಾತನದ ಅತ್ತರು ಹಚ್ಚಿದ ಒಂದು ಗಂಟೆಯಲ್ಲಿ ಕಡಿಮೆಯಾಗುವುದು : ಬಹಳಷ್ಟು ದಿನಗಳಿಂದ ನನ್ನ ಕುತ್ತಿಗೆಯ ಬಲಬದಿಯ ನರವು ಬಹಳ ನೋಯುತ್ತಿತ್ತು ಮತ್ತು ತಲೆಯೂ ಜೋಮುಗಟ್ಟುತ್ತಿತ್ತು. ವೈದ್ಯಕೀಯ ಔಷಧೋಪಚಾರ ಮಾಡಿಯೂ ನೋವು ಕಡಿಮೆಯಾಗುತ್ತಿರಲಿಲ್ಲ. ಅನಂತರ ಸನಾತನದ ಓರ್ವ ಸಾಧಕರು ನನಗೆ ಸನಾತನದ ‘ಚಂದನ’ ಅತ್ತರನ್ನು ಕುತ್ತಿಗೆಗೆ ಹಚ್ಚಲು ಹೇಳಿದರು. ನಾನು ಹಾಗೆ ಮಾಡಿದ ಒಂದು ಗಂಟೆಯೊಳಗೆ ಕುತ್ತಿಗೆಯ ನರದ ನೋವು ಮತ್ತು ತಲೆ ಜೋಮುಗಟ್ಟುವುದು ಸಂಪೂರ್ಣ ನಿಂತು ಹೋಯಿತು. - ಶ್ರೀ.ಅಮೋಲ ಪಾಟೀಲ, ಸಾಂಗ್ಲಿ.

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
"ಸನಾತನ ಅತ್ತರ್"ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ


ಅ. ಸನಾತನದ ಉತ್ಪಾದನೆಗಳಲ್ಲಿ ದೈವೀ ತತ್ತ್ವವಿರುವುದರ ಕಾರಣಗಳು
೧. ಪರಾತ್ಪರಗುರುಗಳಾದ ಪ.ಪೂ.ಡಾ.ಜಯಂತ ಆಠವಲೆಯವರು ಸಾತ್ತ್ವಿಕ ಉತ್ಪಾದನೆಗಳ ನಿರ್ಮಿತಿಯ ಸಂಕಲ್ಪವನ್ನು ಮಾಡಿದ್ದಾರೆ. ಅವರ ಸಂಕಲ್ಪಶಕ್ತಿಯಿಂದ ಈ ಉತ್ಪಾದನೆಗಳಲ್ಲಿನ ದೈವೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ.
೨. ಬಹಳಷ್ಟು ಉತ್ಪಾದನೆಗಳಲ್ಲಿ ಗೋಮೂತ್ರ ಮತ್ತು ಯಜ್ಞದ ವಿಭೂತಿಯಂತಹ ಸಾತ್ತ್ವಿಕ ಘಟಕಗಳನ್ನು ಉಪಯೋಗಿಸಲಾಗಿದೆ.
೩. ಸನಾತನ ಊದುಬತ್ತಿ, ಅತ್ತರು ಮುಂತಾದ ಉತ್ಪಾದನೆಗಳಲ್ಲಿನ ಸುಗಂಧವು ಯಾವುದಾದರೊಂದು ದೇವತೆಯ ತತ್ತ್ವವನ್ನು ಆಕರ್ಷಿಸುವಂತಹದ್ದಾಗಿದೆ.
೪. ಹೆಚ್ಚಿನ ಉತ್ಪಾದನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲಾಗಿದೆ ಮತ್ತು ಕೆಲವು ವಸ್ತುಗಳಲ್ಲಿ ಆವಶ್ಯಕತೆಗನುಸಾರ ರಾಸಾಯನಿಕಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ. ನೈಸರ್ಗಿಕ ವಸ್ತುಗಳಲ್ಲಿ ದೈವೀ ತತ್ತ್ವಗಳ ಪ್ರಮಾಣವು ಹೆಚ್ಚಿರುತ್ತದೆ.

ಆ. ಓರ್ವ ತಜ್ಞರು ಸನಾತನದ ಸಾತ್ತ್ವಿಕ ಉತ್ಪಾದನೆಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ: ಬೆಂಗಳೂರಿನಲ್ಲಿ ಶ್ರೀ.ಸುಬ್ರಹ್ಮಣ್ಯಮ್ ಅಯ್ಯರ್ ಎಂಬ ಹೆಸರಿನ ಓರ್ವ ‘ಹೀಲಿಂಗ್ ಮಾಸ್ಟರ್’ ಇದ್ದಾರೆ. ಸನಾತನದ ಸಾಧಕಿ ಸೌ.ಶೈಲಜಾ ಫಡ್ಕೆಯವರು ಅವರಿಗೆ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಮಹತ್ವ ಮತ್ತು ‘ಅವುಗಳನ್ನು ಹೇಗೆ ಉಪಯೋಗಿಸಬೇಕು’ ಎಂಬುದನ್ನು ಹೇಳಿದರು. ಶ್ರೀ.ಅಯ್ಯರ್‌ರವರು ‘ಸನಾತನ ಕರ್ಪೂರ’ ಮತ್ತು ‘ಸನಾತನ ಉದುಬತ್ತಿ’ಗಳನ್ನು ಕೂಡಲೇ ಉಪಯೋಗಿಸಲು ಪ್ರಾರಂಭಿಸಿದರು. ಅನಂತರ ಅವರು ಸೌ.ಫಡ್ಕೆಯವರಿಗೆ, ‘ಈ ವಸ್ತುಗಳಿಂದ ಬಹಳ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ನಾನು ಇತರರಿಗೆ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ನನ್ನ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಆವರಣವನ್ನು ಸನಾತನದ ಊದುಬತ್ತಿಯಿಂದ ತೆಗೆಯುತ್ತೇನೆ, ಹಾಗೆಯೇ ಸನಾತನದ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ಈಗ ಅವರು ಪ್ರತಿವಾರ ಸನಾತನ ನಿರ್ಮಿತ ಊದುಬತ್ತಿ, ಕರ್ಪೂರ ಮತ್ತು ಸನಾತನದ ಇತರ ಉತ್ಪಾದನೆಗಳನ್ನು ಖರೀದಿಸುತ್ತಾರೆ ಮತ್ತು ಅವರಲ್ಲಿಗೆ ಬರುವ ರೋಗಿಗಳಿಗೂ ವಿತರಿಸುತ್ತಾರೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು. (೪.೧೧.೨೦೧೧)

ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಗಮನದಲ್ಲಿಡಬೇಕಾದ ಸಾಮಾನ್ಯ ಸೂಚನೆಗಳು

ಅ. ಆಧ್ಯಾತ್ಮಿಕ ಉಪಾಯದ ಆರಂಭದಲ್ಲಿ ಪ್ರಾರ್ಥನೆ, ಉಪಾಯವನ್ನು ಮಾಡುವಾಗ ನಾಮಜಪ ಮತ್ತು ಉಪಾಯ ಮುಗಿದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು

ಅ೧. ಪ್ರಾರ್ಥನೆ ಮಾಡುವುದು
ಅ೧ಅ. ಪ್ರಾರ್ಥನೆ : ಆಧ್ಯಾತ್ಮಿಕ ಉಪಾಯವನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು, ‘ಹೇ ದೇವತೆಯೇ, ನಿನ್ನ ಕೃಪೆಯಿಂದ ಈ ವಸ್ತುವಿನ ಮೂಲಕ (ವಸ್ತು ಇದ್ದಲ್ಲಿ ಅದನ್ನು ಉಲ್ಲೇಖಿಸಬೇಕು) ನನ್ನ ಮೇಲೆ (ತಮ್ಮ ಹೆಸರು ಹೇಳಬೇಕು) ಹೆಚ್ಚೆಚ್ಚು ಆಧ್ಯಾತ್ಮಿಕ ಉಪಾಯವಾಗಿ ನನ್ನ ಆಧ್ಯಾತ್ಮಿಕ ತೊಂದರೆಗಳು ಬೇಗನೇ ನಾಶವಾಗಲಿ.’
ಆಧ್ಯಾತ್ಮಿಕ ಉಪಾಯ ನಡೆಯುತ್ತಿರುವಾಗ ಆಗಾಗ ಪ್ರಾರ್ಥನೆ ಮಾಡಬೇಕು.

ಅ೧ಆ. ವಾಸ್ತುಶುದ್ಧಿ ಮತ್ತು ವಾಹನಶುದ್ಧಿಗಾಗಿ ಮಾಡಬೇಕಾದ ಪ್ರಾರ್ಥನೆ : ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ‘ಹೇ ದೇವತೆ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ತಮ್ಮ ಹೆಸರನ್ನು ಹೇಳಬೇಕು) ರಕ್ಷಾ ಕವಚ ನಿರ್ಮಾಣವಾಗಲಿ, ಹಾಗೆಯೇ ಈ ವಾಸ್ತುವಿನಲ್ಲಿರುವ / ವಾಹನದಲ್ಲಿರುವ ಕೆಟ್ಟ ಶಕ್ತಿಗಳ ಅಸ್ತಿತ್ವ ಮತ್ತು ಕೆಟ್ಟ ಸ್ಪಂದನಗಳು ನಾಶವಾಗಲಿ’.
ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಮಾಡುವಾಗಲೂ ಮಧ್ಯಮಧ್ಯದಲ್ಲಿ ಪ್ರಾರ್ಥನೆ ಮಾಡಬೇಕು.
ಅ೨. ನಾಮಜಪ ಮಾಡುವುದು: ಉಪಾಯವನ್ನು ಮಾಡುವಾಗ ಮನಸ್ಸಿನಲ್ಲಿ ಅಥವಾ ದೊಡ್ಡ ಧ್ವನಿಯಲ್ಲಿ ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಅ೨ಅ. ವಾಸ್ತುಶುದ್ಧಿಯನ್ನು ಮಾಡುವುದರ ಮೊದಲು ೧೫ ನಿಮಿಷ ಶ್ರೀ ಗಣೇಶನ ಅಥವಾ ಉಪಾಸ್ಯದೇವತೆಯ ನಾಮಜಪ ಮಾಡುವುದು ವಿಶೇಷ ಲಾಭದಾಯಕವಾಗಿದೆ.

ಅ೩. ಕೃತಜ್ಞತೆಯನ್ನು ವ್ಯಕ್ತ ಪಡಿಸುವುದು : ಉಪಾಯ ಪೂರ್ಣವಾದ ನಂತರ ಉಪಾಸ್ಯದೇವತೆ ಮತ್ತು ಉಪಾಯಕ್ಕೆ ಸಹಾಯಕವಾದಂತಹ ವಸ್ತುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು.

ಆ.ಉಪಾಯಗಳ ಬಗ್ಗೆ ಮನಸ್ಸಿನಲ್ಲಿ ಭಾವವಿರಬೇಕು!
೧. ದೇವರ ಕೃಪೆಯಿಂದ ನನಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಅವಕಾಶ ಲಭಿಸಿ ನನ್ನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತಿವೆ ಎಂಬ ಭಾವವಿರಬೇಕು.
೨. ಉಪಾಯಗಳ ವಸ್ತುಗಳ ಬಗ್ಗೆಯೂ ಭಾವವಿರಬೇಕು, ಉದಾ. ‘ಸನಾತನ ಊದುಬತ್ತಿ’ ಎಂದರೆ ‘ದೇವರು ಕಳುಹಿಸಿದ ರಕ್ಷಕ’ವಾಗಿದೆ ಅಥವಾ ‘ಸನಾತನದ ಅತ್ತರಿನ’ ಸುಗಂಧ ತೆಗೆದುಕೊಳ್ಳುವಾಗ ‘ಶ್ರೀ ದುರ್ಗಾದೇವಿಯ ಚರಣಗಳಿಗೆ ಅರ್ಪಿಸಿದ ಹೂವುಗಳ ಸುವಾಸನೆಯನ್ನು ಆಘ್ರಾಣಿಸುತ್ತಿದ್ದೇನೆ’ ಎಂಬ ಭಾವವಿರಬೇಕು.

ಇ.ಆಧ್ಯಾತ್ಮಿಕ ತೊಂದರೆಗಳ ತೀವ್ರತೆಗನುಸಾರ ಉಪಾಯಗಳನ್ನು ಮಾಡಬೇಕು! : ‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?' ಎಂಬುದರಲ್ಲಿ ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ಅವುಗಳಿಂದ ಸಾಧಾರಣ ನಮಗಿರುವ ತೊಂದರೆಗಳ ಅಂದಾಜು ಮಾಡಬಹುದು. ತೊಂದರೆಗಳ ತೀವ್ರತೆಗನುಸಾರ ಆಧ್ಯಾತ್ಮಿಕ ಉಪಾಯಗಳ ವಿಧ ಮತ್ತು ಉಪಾಯಗಳ ಪುನರಾವರ್ತನೆಯನ್ನು ಹೆಚ್ಚಿಸಬೇಕು.

ಈ. ಹುಣ್ಣಿಮೆ ಮತ್ತು ಅಮಾವಾಸ್ಯೆ ಈ ತಿಥಿಗಳಿಗೆ, ಹಾಗೆಯೇ ಈ ತಿಥಿಗಳ ಎರಡು ದಿನ ಮೊದಲು ಹಾಗೂ ಎರಡು ದಿನಗಳ ನಂತರ ಉಪಾಯಗಳನ್ನು ಹೆಚ್ಚಿಸುವುದರೊಂದಿಗೆ ಪ್ರಾರ್ಥನೆ, ನಾಮಜಪ ಮುಂತಾದ ಸಾಧನೆಗಳನ್ನೂ ಹೆಚ್ಚೆಚ್ಚು ಮಾಡಬೇಕು!

ಉ. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಕಾಣಿಸದಿದ್ದರೂ, ಕಡಿಮೆ ಪ್ರಮಾಣದಲ್ಲಾದರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲೇಬೇಕು!

ಊ. ಆಧ್ಯಾತ್ಮಿಕ ಉಪಾಯ ಮಾಡುವಾಗ ‘ಕೆಲವೊಮ್ಮೆ ಏನಾದರೊಂದು ತೊಂದರೆಯಾಗುವುದು’ ಸಹ ಉಪಾಯದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಬೇಕು!
ಊ೧. ಆಧ್ಯಾತ್ಮಿಕ ಉಪಾಯವೆಂದರೆ ಒಂದು ರೀತಿಯಲ್ಲಿ ಕೆಟ್ಟ ಶಕ್ತಿಗಳ ವಿರುದ್ಧದ ಸೂಕ್ಷ್ಮದಲ್ಲಿನ ಯುದ್ಧವೇ ಆಗಿದೆ!
ಊ೨. ಕೆಟ್ಟ ಶಕ್ತಿಗಳ ವಿರುದ್ಧದ ಯುದ್ಧದಿಂದ ವ್ಯಕ್ತಿಯ ಶರೀರ ಮತ್ತು ಮನಸ್ಸಿನ ಮೇಲಾಗುವ ಪರಿಣಾಮಗಳ ಕೆಲವು ಉದಾಹರಣೆಗಳು : ವ್ಯಕ್ತಿಗೆ ಆರಂಭದಲ್ಲಿ ಕೆಲವು ಸಮಯ / ಕೆಲವು ದಿನ ಅಸ್ವಸ್ಥವೆನಿಸುವುದು, ತಲೆ ಭಾರವಾಗುವುದು, ಆಯಾಸಗೊಂಡಂತಾಗುವುದು, ಉಪಾಯ ಮಾಡುವಾಗ ಸತತವಾಗಿ ತೇಗು / ಆಕಳಿಕೆಗಳು ಬರುವುದು ಮುಂತಾದ ತೊಂದರೆಗಳಾಗಬಹುದು. ಇಂತಹ ಸಮಯದಲ್ಲಿ ಹೆದರಬಾರದು. ಏಕೆಂದರೆ ಇವು ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆಗಳ ಮೇಲೆ ಉಪಾಯವಾಗುತ್ತಿರುವುದರ ಲಕ್ಷಣವಾಗಿವೆ.

ಊ೩. ಉಪಾಯಗಳನ್ನು ಮಾಡುವಾಗ ತೊಂದರೆಯಾದರೆ ಅಥವಾ ಅಡಚಣೆಗಳು ಬಂದರೆ ಏನು ಮಾಡಬೇಕು?
ಅ. ಹೇಗೆ ಶರೀರದಲ್ಲಿನ ರೋಗಜಂತುಗಳನ್ನು ನಾಶಗೊಳಿಸಲು ‘ಇಂಜೆಕ್ಷನ್’ ಚುಚ್ಚಿಕೊಳ್ಳುವಾಗ ನಾವು ವೇದನೆಯನ್ನು ಸಹಿಸುತ್ತೇವೆಯೋ, ಹಾಗೆಯೇ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಉಪಾಯಗಳ ಪರಿಣಾಮವೆಂದು ಸ್ವಲ್ಪ ತೊಂದರೆಯಾದರೆ ಅದನ್ನೂ ಸಹಿಸಬೇಕು. ಹೀಗೆ ತೊಂದರೆಗಳಾಗುತ್ತಿದ್ದಲ್ಲಿ ಅಥವಾ ಅಡಚಣೆಗಳು ಉಂಟಾದಲ್ಲಿ ಉಪಾಯಗಳನ್ನು ಜಿಗುಟುತನದಿಂದ ಮಾಡಬೇಕು. ದೃಢನಿಶ್ಚಯದಿಂದ ಉಪಾಯಗಳನ್ನು ಮಾಡುತ್ತಾ ಹೋದರೆ ನಿಧಾನವಾಗಿ ನಮಗಾಗುವ ಸೂಕ್ಷ್ಮದಲ್ಲಿನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗತೊಡಗುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳ ಮೇಲೆ ವಿಜಯ ಸಾಧಿಸುವುದು ಸುಲಭವಾಗುತ್ತದೆ.
ಆ. ಯಾವುದಾದರೊಂದು ಉಪಾಯವನ್ನು ಮಾಡುವಾಗ ಉಪಾಯದ ಪರಿಣಾಮವೆಂದು ಅಸಹನೀಯ ತೊಂದರೆಯಾಗುತ್ತಿದ್ದಲ್ಲಿ (ಉದಾ. ತಲೆ ತುಂಬಾ ನೋಯುತ್ತಿದ್ದಲ್ಲಿ) ಸ್ವಲ್ಪ ಹೊತ್ತು ಆ ಉಪಾಯವನ್ನು ಮಾಡಬಾರದು. ತೊಂದರೆ ಕಡಿಮೆಯಾದ ನಂತರ ಮತ್ತೊಮ್ಮೆ ಉಪಾಯ ಮಾಡಿ ನೋಡಬೇಕು. ಆ ಉಪಾಯದಿಂದ ತೊಂದರೆಯು ಹಾಗೆಯೇ ಆಗುತ್ತಿದ್ದರೆ, ಇತರ ಯಾವುದಾದರೊಂದು ಉಪಾಯ ಮಾಡಿ ನೋಡಬೇಕು. ಪ್ರತಿಯೊಂದು ಉಪಾಯದ ಸಮಯದಲ್ಲಿ ತೀವ್ರ ತೊಂದರೆಯಾಗುತ್ತಿದ್ದಲ್ಲಿ ಅದರ ಬಗ್ಗೆ ತಿಳಿದವರಿಗೆ ಅಥವಾ ಸಂತರನ್ನು ಕೇಳಬೇಕು.

ಸೂಚನೆ : ಸನಾತನದ ಸಾತ್ತ್ವಿಕ ಉತ್ಪಾದನೆಗಳಿಂದ ಆಧ್ಯಾತ್ಮಿಕ ಉಪಾಯವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ತಮ್ಮ ಸಮೀಪದ ಸನಾತನದ ಸತ್ಸಂಗವನ್ನು ಅಥವಾ ಸನಾತನದ ಸಾಧಕರನ್ನು ಸಂಪರ್ಕಿಸಿರಿ.

(ವಿವರವಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಸಂಬಂಧಿತ ಲೇಖನಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
‘ದೃಷ್ಟಿ ತಗಲುವುದು’ ಎಂದರೇನು?ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
Dharma Granth

ವಾಹನವನ್ನು ದೃಷ್ಟಿ ತಗಲುವುದರಿಂದ ಹೇಗೆ ರಕ್ಷಿಸುವುದು?

ವಾಹನ ಮತ್ತು ವಾಹನದಲ್ಲಿನ ವ್ಯಕ್ತಿಗಳು ಬಾಧಿತರಾಗುವ ಕಾರಣಗಳು ಮತ್ತು ಅದರ ಪರಿಣಾಮ
೧. ವಾಹನದಲ್ಲಿ ಪ್ರವಾಸ ಮಾಡುವಾಗ ಅದು ಅನೇಕ ಸ್ಥಳಗಳಲ್ಲಿನ ರಜ-ತಮಾತ್ಮಕ ವಾಯುಮಂಡಲದಿಂದ ಹೋಗುತ್ತಿರುತ್ತದೆ. ಈ ವಾಯುಮಂಡಲದಲ್ಲಿನ ತ್ರಾಸದಾಯಕ ಲಹರಿಗಳಿಂದ ಕೇವಲ ವಾಹನವಷ್ಟೇ ಅಲ್ಲದೇ, ವಾಹನದಲ್ಲಿನ ವ್ಯಕ್ತಿಗಳೂ ತೊಂದರೆಗೀಡಾಗುತ್ತಾರೆ.
೨. ಈ ಪ್ರಕ್ರಿಯೆಯಲ್ಲಿ ವಾಹನವು ರಜ-ತಮಾತ್ಮಕ ಲಹರಿಗಳಿಂದ ಬಾಧಿತವಾಗುವುದರಿಂದ ವಾಹನವು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಆ. ವಾಹನಕ್ಕೆ ದೃಷ್ಟಿ ತಗಲಬಾರದೆಂದು ಮಾಡಬೇಕಾದ ಉಪಾಯಗಳು - ವಾಹನದಲ್ಲಿ ಮೆಣಸಿನಕಾಯಿ-ಲಿಂಬೆಯನ್ನು ನೇತಾಡಿಸುವುದು ಅಥವಾ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸುವುದು: ವಾಹನವು ರಜ-ತಮಾತ್ಮಕ ದೋಷಗಳಿಂದ ಮುಕ್ತ ವಾಗಬೇಕೆಂದು ಅದರಲ್ಲಿ ಚಾಲಕನ ಆಸನದ ಎದುರಿನ ಗಾಜಿನ ಬದಿಗೆ (ಮಧ್ಯಭಾಗಕ್ಕೆ ಬರುವಂತೆ) ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸಬೇಕು ಅಥವಾ ಮೆಣಸಿನಕಾಯಿ ಮತ್ತು ಲಿಂಬೆಯನ್ನು ದಾರದಲ್ಲಿ ಪೋಣಿಸಿ (ಚಿತ್ರ ನೋಡಿ) ನೇತಾಡಿಸಬೇಕು.


೧. ಪ್ರಕ್ರಿಯೆ: ಕಪ್ಪು ಗೊಂಬೆ, ಮೆಣಸಿನಕಾಯಿ ಅಥವಾ ಲಿಂಬೆಕಾಯಿಯಲ್ಲಿನ ರಜ- ತಮಾತ್ಮಕ ಸ್ಪಂದನಗಳು ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸಿಕೊಳ್ಳುವ ಮಾಧ್ಯಮಗಳಾಗಿವೆ.
೨. ಘಟಕಗಳ ಮಿತಿ: ವಾಹನದಲ್ಲಿ ಒಂದೆರಡು ದಿನ ಪ್ರವಾಸ ಮಾಡಿದರೆ ಈ ಘಟಕಗಳನ್ನು ವಿಸರ್ಜನೆ ಮಾಡಿ ಅವುಗಳ ಬದಲಿಗೆ ಹೊಸ ಘಟಕಗಳನ್ನು ಹಾಕಬೇಕು, ಇಲ್ಲವಾದರೆ ಈ ಘಟಕಗಳಲ್ಲಿ ಘನಿಭವಿಸಿದ ರಜ-ತಮಾತ್ಮಕ ಸ್ಪಂದನಗಳ ತೊಂದರೆಯಾಗಿ ವಾಹನದ ಮೇಲೆ ಮತ್ತು ವಾಹನದಲ್ಲಿನ ವ್ಯಕ್ತಿಗಳ ಮೇಲೆ ತ್ರಾಸದಾಯಕ ಸ್ಪಂದನಗಳ ಆವರಣವು ಬರಬಹುದು ಮತ್ತು ವಾಯುಮಂಡಲವು ಅಶುದ್ಧವಾಗುವ ಸಾಧ್ಯತೆಯಿರುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜ್ಯೇಷ್ಠ ಶುಕ್ಲ ೧೦, ಕಲಿಯುಗ ವರ್ಷ ೫೧೧೧ ೨.೬.೨೦೦೯ ಮಧ್ಯಾಹ್ನ ೩.೨೬)

ವಾಹನದ ದೃಷ್ಟಿಯನ್ನು ತೆಗೆಯುವುದು
೧. ಪ್ರವಾಸದಲ್ಲಿ ಕೆಟ್ಟ ಶಕ್ತಿಗಳು ತೊಂದರೆ ಕೊಡಬಾರದೆಂದು ಪ್ರವಾಸಕ್ಕೆ ಹೊರಡುವ ಮೊದಲೇ ವಾಹನದ ದೃಷ್ಟಿಯನ್ನು ತೆಗೆಯಬೇಕು : ವಾಹನದಲ್ಲಿ ಪ್ರವಾಸ ಮಾಡುವಾಗ ಕೆಟ್ಟ ಶಕ್ತಿಗಳು ವಾಹನವನ್ನು ಹಾಳುಮಾಡಿ ಅಥವಾ ಅಪಘಾತವನ್ನು ಮಾಡಿ ಆಡಚಣೆಗಳನ್ನು ತರುವ ಸಾಧ್ಯತೆಗಳಿರುತ್ತವೆ. ಆದುದರಿಂದ ಯಾವುದೇ ಶುಭಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವಾಗ ವಾಹನದ ದೃಷ್ಟಿಯನ್ನು ತೆಗೆಯಬೇಕು.

೨. ವಾಹನಕ್ಕೆ ದೃಷ್ಟಿ ತಗಲಿದ್ದರೆ ವಾಹನದ ದೃಷ್ಟಿಯನ್ನು ತೆಗೆಯಬೇಕು: ವಾಹನದಲ್ಲಿ ಸತತವಾಗಿ ಒಂದಲ್ಲ ಒಂದು ಕಾರಣದಿಂದ ತೊಂದರೆಗಳು ನಿರ್ಮಾಣ ವಾಗುವುದು, ಅಪಘಾತದ ಪ್ರಸಂಗಗಳು ಎದುರಾಗುವುದು, ವಾಹನದಲ್ಲಿ ಕುಳಿತ ನಂತರ ತಲೆ ಭಾರವಾಗುವುದು, ವಾಹನದಲ್ಲಿ ಪ್ರವಾಸ ಮಾಡಿ ಬಂದ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ವಾಹನಕ್ಕೆ ದೃಷ್ಟಿ ತಗಲಿದೆ ಎಂದು ತಿಳಿದುಕೊಳ್ಳಬೇಕು ಮತ್ತು ವಾಹನದ ದೃಷ್ಟಿಯನ್ನು ತೆಗೆಯಬೇಕು.

೩. ವಾಹನದ ದೃಷ್ಟಿಯನ್ನು ತೆಗೆಯುವ ಪದ್ಧತಿ
ಅ. ಪ್ರವಾಸದಲ್ಲಿರುವಾಗ ವಾಹನದ ದೃಷ್ಟಿಯನ್ನು ತೆಗೆಯುವುದಿದ್ದರೆ ದಾರಿಯಲ್ಲಿ ಮಾರುತಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನವಿದ್ದರೆ ಅಥವಾ ಯಾವುದಾದರೊಂದು ಜಲಾಶಯವಿದ್ದರೆ ಅಲ್ಲಿ ದೃಷ್ಟಿಯನ್ನು ತೆಗೆಯಲು ವಾಹನವನ್ನು ನಿಲ್ಲಿಸಬೇಕು.

ಆ. ದೃಷ್ಟಿಯನ್ನು ತೆಗೆಯುವ ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು (ಬಾನೆಟ್) ತೆರೆದಿಡಬೇಕು. ವಾಹನದ ಮುಂದೆ ನಿಂತುಕೊಂಡು ವಾಹನದ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲಿನ ಮೇಲೆ ಒಡೆಯಬೇಕು ಅಥವಾ ತೆಂಗಿನಕಾಯಿಯನ್ನು ಜಲಾಶಯದಲ್ಲಿ ವಿಸರ್ಜಿಸಬೇಕು. ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ತ್ರಾಸದಾಯಕ ಸ್ಪಂದನಗಳು ದೇವತೆಯ ಕೃಪಾಶೀರ್ವಾದದಿಂದ ನಾಶವಾಗುತ್ತವೆ ಅಥವಾ ನೀರಿನಲ್ಲಿ ವಿಸರ್ಜನೆಯಾಗುತ್ತವೆ.

ಇ. ಹೆಚ್ಚಾಗಿ ದಾರಿಯಲ್ಲಿ ಮಾರುತಿಯ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳು ಅಥವಾ ಜಲಾಶಯಗಳು ಇರುವುದಿಲ್ಲ. ಇಂತಹ ಸಮಯದಲ್ಲಿ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ಆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯಬೇಕು. ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿನಿಂದ ನಾಲ್ಕೂ ದಿಕ್ಕುಗಳಿಗೆ ಎಸೆಯಬೇಕು. ದೃಷ್ಟಿತೆಗೆದ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯುವುದರಿಂದ ತೆಂಗಿನಕಾಯಿಯಲ್ಲಿನ ತ್ರಾಸದಾಯಕ ಸ್ಪಂದನಗಳು ಭೂಮಿಯಲ್ಲಿ ವಿಸರ್ಜಿಸಲ್ಪಡುತ್ತವೆ.

ಈ. ದೃಷ್ಟಿಯನ್ನು ತೆಗೆದ ನಂತರ ವಾಹನಕ್ಕೆ ಊದುಬತ್ತಿಗಳಿಂದ ಬೆಳಗಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಬೇಕು. ಊದುಬತ್ತಿಗಳಿಂದ ಬೆಳಗುವುದರಿಂದ ಆ ಸ್ಥಳದ ಶುದ್ಧೀಕರಣವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ (ವಾಸ್ತು, ವಾಹನ ಮತ್ತು ಗಿಡಗಳಿಗೆ ದೃಷ್ಟಿ ತಗಲಬಾರದೆಂದು ಮಾಡುವ ಉಪಾಯಗಳೊಂದಿಗೆ)’)

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು? ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಅಗ್ನಿಹೋತ್ರದ ಮಹತ್ವ


‘ಮೂರನೇ ಮಹಾಯುದ್ಧದಲ್ಲಿ ಪೃಥ್ವಿಯ ಮೇಲಿನ ಶೇ.೨೦ರಷ್ಟು ಜನಸಂಖ್ಯೆ, ಅಂದರೆ ೧೩೦ ಕೋಟಿ ಜನರು ನಾಶವಾಗುವವರಿದ್ದಾರೆ; ಜೊತೆಗೆ ಯುದ್ಧದಲ್ಲಿ ಅಣುಬಾಂಬಿನ ವಿಕಿರಣಗಳಿಂದಾಗುವ ಪ್ರದೂಷಣೆಯಿಂದ (Radiation) ಇನ್ನೂ ೨ ಕೋಟಿ ಜನರು ಸಾಯುವರು. ಅದರಲ್ಲಿ ನಮ್ಮ ಜೀವ ಹೋಗಬಾರದು ಮತ್ತು ಇತರರ ಜೀವ ಉಳಿಯಬೇಕು ಎಂಬುದಕ್ಕಾಗಿ ಅಗ್ನಿಹೋತ್ರ ಸಾಧನೆಯನ್ನು ಮಾಡಿರಿ!’ - ಪ.ಪೂ.ಡಾ.ಜಯಂತ ಆಠವಲೆ (೩೦.೯.೨೦೦೭)

ಅಗ್ನಿಹೋತ್ರದ ವ್ಯಾಖ್ಯೆ

೧. ‘ಅಗ್ನಿಹೋತ್ರವೆಂದರೆ ತೇಜದ ಆಧಾರದಲ್ಲಿ ಈಶ್ವರನ ಪ್ರತ್ಯಕ್ಷ ಸಗುಣ ಮತ್ತು ತತ್ತ್ವರೂಪದಲ್ಲಿರುವ ಈಶ್ವರನ ನಿರ್ಗುಣಸ್ವರೂಪ ಚೈತನ್ಯವನ್ನು ಆಕರ್ಷಿಸಲು ಮಾಡಿದ ವ್ರತರೂಪಿ ಅನುಷ್ಠಾನವಾಗಿದೆ.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜ್ಯೇಷ್ಠ ಶುಕ್ಲ ೧೧, ಕಲಿಯುಗ ವರ್ಷ ೫೧೧೧ ೩.೬.೨೦೦೯ ಮಧ್ಯಾಹ್ನ ೪.೪೯)
೨. ‘ಅಗ್ನಿಹೋತ್ರವೆಂದರೆ ಅಗ್ನ್ಯಂತರ್ಯಾಮಿ (ಅಗ್ನಿಯಲ್ಲಿ) ಆಹುತಿಯನ್ನು ಅರ್ಪಿಸಿ ಮಾಡಲಾಗುವ ಈಶ್ವರನ ಉಪಾಸನೆ.’ - ಡಾ.ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

ಅಣುಯುದ್ಧದ ಸಂದರ್ಭದಲ್ಲಿ ಅಗ್ನಿಹೋತ್ರದ ಮಹತ್ವ

೧. ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ-ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ಸಂರಕ್ಷಣಾ ಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ತೇಜದ ಸ್ಪರ್ಶಕ್ಕೆ ಅತ್ಯಂತ ಸಂವೇದನಶೀಲವಾಗಿರುತ್ತದೆ. ಸೂಕ್ಷ್ಮದಿಂದ ಈ ಕವಚವು ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ.

೨. ಯಾವಾಗ ಒಳ್ಳೆಯ ವಿಷಯಗಳಿಗೆ ಸಂಬಂಧಿಸಿದ ತೇಜವು ಈ ಕವಚದ ಸಮೀಪ ಬರುತ್ತದೆಯೋ, ಆಗ ಕವಚದಲ್ಲಿನ ನಸುಗೆಂಪು ಬಣ್ಣದ ತೇಜದಲ್ಲಿನ ಕಣಗಳು ಈ ತೇಜವನ್ನು ತಮ್ಮಲ್ಲಿ ಸಮಾವೇಶಗೊಳಿಸಿಕೊಂಡು ಕವಚವನ್ನು ಬಲಶಾಲಿಯಾಗಿ ಮಾಡುತ್ತವೆ.

೩. ರಜ-ತಮಾತ್ಮಕ ತೇಜಕಣಗಳು ಕರ್ಕಶ ಸ್ವರೂಪದಲ್ಲಿ ಆಘಾತವನ್ನು ನಿರ್ಮಾಣ ಮಾಡುತ್ತವೆ; ಆದುದರಿಂದ ಅವು ಹತ್ತಿರ ಬರುವುದು ಕವಚಕ್ಕೆ ಮೊದಲೇ ತಿಳಿಯುತ್ತದೆ ಮತ್ತು ಅದು ಪ್ರತ್ಯುತ್ತರವೆಂದು ತನ್ನಿಂದ ಅನೇಕ ತೇಜಲಹರಿಗಳನ್ನು ವೇಗದಿಂದ ಹೊರಸೂಸಿ ಆ ಕರ್ಕಶ ನಾದವನ್ನೇ ನಾಶ ಮಾಡುತ್ತದೆ ಮತ್ತು ಅದರಲ್ಲಿನ ನಾದವನ್ನು ಉತ್ಪನ್ನಮಾಡುವ ತೇಜಕಣಗಳನ್ನೂ ನಾಶ ಮಾಡುತ್ತದೆ. ಇದರಿಂದ ಆ ಲಹರಿಗಳಲ್ಲಿನ ತೇಜವು ಆಘಾತ ಮಾಡಲು ಸಾಮರ್ಥ್ಯಹೀನವಾಗುತ್ತದೆ; ಅಂದರೆ ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ಕ್ರಿಯವಾಗುತ್ತದೆ. ಆದುದರಿಂದ ಅದನ್ನು ಹಾಕಿದರೂ ಮುಂದೆ ಆಗುವ ಮನುಷ್ಯಹಾನಿಯು ಕೆಲವು ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ. ಬಾಂಬ್ ಸ್ಫೋಟವಾದರೂ, ಅದರಿಂದ ವೇಗವಾಗಿ ಹೋಗುವ ತೇಜರೂಪಿ ರಜ-ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿನ ಸೂಕ್ಷ್ಮತರ ಅಗ್ನಿಕವಚಕ್ಕೆ ಅಪ್ಪಳಿಸಿ ಅಲ್ಲಿಯೇ ವಿಘಟನೆಯಾಗುತ್ತವೆ ಮತ್ತು ಅವುಗಳ ಸೂಕ್ಷ್ಮ-ಪರಿಣಾಮವೂ ಅಲ್ಲಿಯೇ ಕೊನೆಗೊಳ್ಳುವುದರಿಂದ ವಾಯುಮಂಡಲವು ಮುಂದಿನ ಪ್ರದೂಷಣೆಯ ಅಪಾಯದಿಂದ ಮುಕ್ತವಾಗುತ್ತದೆ. (ಚಿತ್ರವನ್ನು ಗ್ರಂಥದಲ್ಲಿ ಕೊಡಲಾಗಿದೆ.) - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೮.೨.೨೦೦೮, ಸಾಯಂ. ೬.೫೫)

(ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ ಇದರಿಂದ ಚಿತ್ರ ದೊಡ್ಡದಾಗುತ್ತದೆ ಮತ್ತು ಚಿತ್ರದಲ್ಲಿರುವ ವಿಷಯವನ್ನು ಕ್ರಮಸಂಖ್ಯೆಗನುಸಾರ ಓದಿ. ಇದರಿಂದ ಸೂಕ್ಷ್ಮದಲ್ಲಾಗುವ ಪ್ರಕ್ರಿಯೆ ತಿಳಿದುಕೊಳ್ಳಬಹುದು.)


ಭಗವದ್ಗೀತೆಯಲ್ಲಿ ಹೇಳಿದ ನಿತ್ಯ ಅಗ್ನಿಹೋತ್ರದ ಮಹತ್ವ

‘ಅಗ್ನಿಹೋತ್ರದಲ್ಲಿ ಆಹುತಿಯನ್ನು ಅರ್ಪಿಸದೇ, ತಾವೇ ಭಕ್ಷಣ ಮಾಡುವವರು ಸ್ವಾರ್ಥಿಗಳಾಗಿದ್ದಾರೆ’, ಇಂತಹ ಶಬ್ದಗಳಲ್ಲಿ ಭಗವದ್ಗೀತೆಯು ನಿತ್ಯ ಅಗ್ನಿಹೋತ್ರದ ಮಹತ್ವವನ್ನು ಹೇಳಿದೆ.

ಅಗ್ನಿಹೋತ್ರದಲ್ಲಿ ಆಹುತಿಯನ್ನು ಕೊಡುವುದರ ಭಾವಾರ್ಥ

ಅಗ್ನಿಹೋತ್ರದಲ್ಲಿ ಕೊಡಲಾಗುವ ಆಹುತಿಯೆಂದರೆ, ಪರಮಾತ್ಮನ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಕೃತಜ್ಞತೆ. ಯಾವನು ಸಂಪೂರ್ಣ ಸೃಷ್ಟಿಯನ್ನು ನಿರ್ಮಿಸಿದ್ದಾನೆಯೋ, ಆ ಸರ್ವಶಕ್ತಿವಂತ ಈಶ್ವರನಿಗೆ ನಮ್ಮಂತಹ ಪಾಮರರೇನು ಕೊಡಬಹುದು? ನಾವು ಈಶ್ವರನು ಕೊಟ್ಟಿದ್ದನ್ನೇ ಮತ್ತೆ ಈಶ್ವರನಿಗೆ ಅರ್ಪಿಸುತ್ತೇವೆ. ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಮತ್ತು ಏನೆಲ್ಲ ಕಾಣಿಸುತ್ತದೆಯೋ, ಅದು ಆ ಪರಮಶಕ್ತಿವಂತ ಈಶ್ವರನದ್ದೇ ಆಗಿದೆ. ನಿಮ್ಮ ಬಳಿ ಏನೇನು ಇದೆಯೋ, ಅದನ್ನು ಅವನಿಗೆ ಮತ್ತು ಇತರರಿಗೆ ಕೊಡಿ. ದಾನದಿಂದ ಮತ್ತು ತ್ಯಾಗದಿಂದ ಆನಂದಿತ ಮತ್ತು ತೃಪ್ತರಾಗಿರಿ. ತ್ಯಾಗ ಮಾಡಿ ಇದನ್ನು ಉಪಭೋಗಿಸಿರಿ. - ಪರಮಸದ್ಗುರು ಶ್ರೀಗಜಾನನಮಹಾರಾಜ

(ವಿವರವಾದ ಮಾಹಿತಿಗಾಗಿ : ಸನಾತನ ಸಂಸ್ಥೆಯ ಗ್ರಂಥ ‘ಅಗ್ನಿಹೋತ್ರ’)

ಅಗ್ನಿಹೋತ್ರದ ಮಂತ್ರಗಳನ್ನು ಹೇಗೆ ಉಚ್ಚರಿಸಬೇಕು? ಮಂತ್ರ ಹೇಳುವಾಗ ಭಾವ ಹೇಗಿರಬೇಕು? ಮಂತ್ರವನ್ನು ಯಾರು ಹೇಳಬೇಕು? ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಏಕೆ ಮಾಡಬೇಕು? ಅಗ್ನಿಹೋತ್ರದ ನಂತರ ಮಾಡಬೇಕಾದ ಕೃತಿಗಳು ಯಾವುವು? ಅಗ್ನಿಹೋತ್ರ ಮಾಡುವ ಬಗ್ಗೆ ವಿವರವಾದ ಮಾಹಿತಿಗಾಗಿ ಸನಾತನದ ಗ್ರಂಥ ‘ಅಗ್ನಿಹೋತ್ರ’ ವನ್ನು ಓದಿರಿ.

ಸಂಬಂಧಿತ ಲೇಖನಗಳು
ಅಗ್ನಿಹೋತ್ರದ ಲಾಭಗಳು
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

ಯುವತಿಯನ್ನು ‘ಲವ್ ಜಿಹಾದ್’ನಿಂದ ರಕ್ಷಿಸಲು ಮಾಡಬೇಕಾದ ಕೆಲವು ಆಧ್ಯಾತ್ಮಿಕ ಉಪಾಯಗಳು

ಯುವತಿಯನ್ನು ‘ಲವ್ ಜಿಹಾದ್’ನ ಮೂಲಕ ವಶಪಡಿಸಿಕೊಳ್ಳಲು ಮಾಡಲಾದ ವಶೀಕರಣದ ಅಥವಾ ಮಾಟ-ಮಂತ್ರಗಳ ಪ್ರಭಾವವನ್ನು ನಾಶಗೊಳಿಸಲು ಮಾಡಬೇಕಾದ ಕೆಲವು ಆಧ್ಯಾತ್ಮಿಕ ಉಪಾಯಗಳು

ಒಂದು ವೇಳೆ ಯಾವುದಾದರೊಂದು ಪ್ರಕರಣದಲ್ಲಿ ಓರ್ವ ಯುವತಿಯ ಮೇಲೆ ವಶೀಕರಣವಾಗಿದೆ ಎಂಬುದು ಗಮನಕ್ಕೆ ಬಂದರೆ, ಅವಳಿಗೆ ಈ ಮುಂದಿನಂತೆ ಆಧ್ಯಾತ್ಮಿಕ ಉಪಾಯ ಮಾಡಬೇಕು.

೧. ಯುವತಿಯ ಬಳಿ ಇರುವ ತಾಯಿತ, ಮಂತ್ರಿಸಿದ ದಾರ, ವಿಭೂತಿ ಇತ್ಯಾದಿ ವಸ್ತುಗಳನ್ನು ಅವಳಿಂದ ತೆಗೆದು ಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕುವುದು: ಮೊತ್ತಮೊದಲು ಯುವತಿಯ ವಶೀಕರಣಕ್ಕಾಗಿ ಅವಳಿಗೆ ಕಟ್ಟಿದ ತಾಯಿತ, ಮಂತ್ರಿಸಿದ ದಾರ, ಪರ್ಸ್‌ನಲ್ಲಿ ಇಡಲಾದ ಇಂತಹ ವಸ್ತುಗಳನ್ನು ಅವಳಿಂದ ತೆಗೆದುಕೊಳ್ಳಬೇಕು. ಆ ವಶೀಕರಣದ ವಸ್ತುಗಳನ್ನು ಅಗ್ನಿಗೆ ಹಾಕಿ ನಾಶಗೊಳಿಸಬೇಕು. ಅವಳಲ್ಲಿರುವ ಎಲ್ಲ ವಸ್ತುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು.

೨. ಆ ಯುವತಿಯ ತಲೆಯ ಮೇಲೆ ಕೈಯಿಟ್ಟು ಅರ್ಧ ಗಂಟೆ ಅವಳ ಕುಲದೇವತೆಯ ನಾಮಜಪ ಮಾಡಬೇಕು.

೩. ಲಿಂಬೆ ಮತ್ತು ಊದುಬತ್ತಿಯ ವಿಭೂತಿಯಿಂದ ನಿವಾಳಿಸುವುದು: ಆ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ನಿವಾಳಿಸುವ ವ್ಯಕ್ತಿ ತನ್ನ ಎರಡೂ ಕೈಗಳನ್ನು ಒಟ್ಟು ಮಾಡಿ ಅದರಲ್ಲಿ ಪೂರ್ಣ ಲಿಂಬೆ ಮತ್ತು ವಿಭೂತಿಯನ್ನು ತೆಗೆದುಕೊಂಡು ಅದನ್ನು ಆ ಪೀಡಿತ ಯುವತಿಯ ಮುಂದೆ ಹಿಡಿಯಬೇಕು. ಅನಂತರ ‘ಈ ಯುವತಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯು ಈ ನಿವಾಳಿಸುವಿಕೆಯಿಂದ ದೂರವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ತಮ್ಮ ಕೈಯಲ್ಲಿರುರುವ ಲಿಂಬೆ ಮತ್ತು ವಿಭೂತಿಯಿಂದ ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಕೊನೆಗೆ ಆ ವಸ್ತುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ನಿವಾಳಿಸುವ ವ್ಯಕ್ತಿಯು ಆ ವಸ್ತುಗಳನ್ನು ವಿಸರ್ಜನೆ ಮಾಡುವ ವರೆಗೆ ಮನಸ್ಸಿನಲ್ಲಿ ತನ್ನ ಉಪಾಸ್ಯದೇವತೆಯ ನಾಮಜಪ ಮಾಡಬೇಕು ಹಾಗೂ ಅನಂತರ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು. ಆ ಯುವತಿಗೂ ಕೈ-ಕಾಲುಗಳನ್ನು ತೊಳೆದುಕೊಳ್ಳಲು ಹೇಳಬೇಕು. ಅನಂತರ ತನ್ನ ಹಾಗೂ ಅವಳ ಮೈಮೇಲೆ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸ ಬೇಕು. ಯುವತಿಯ ಹಣೆಗೆ ದೇವರ ಎದುರಿಗೆ ಇರುವ ಅಥವಾ ಪವಿತ್ರ ಸ್ಥಾನದ ವಿಭೂತಿಯನ್ನು ಹಚ್ಚಬೇಕು.

೪. ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಅದನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದು ಅಥವಾ ಅಗ್ನಿಗೆ ಅರ್ಪಿಸುವುದು: ಈ ಮೇಲಿನ ಉಪಾಯದ ನಂತರವೂ ಆ ಯುವತಿಯ ಮೇಲಿನ ವಶೀಕರಣದ ಪ್ರಭಾವ ಕಡಿಮೆಯಾಗದೆ ಅವಳು ಭ್ರಮಿಷ್ಟಳಾಗಿ ವರ್ತಿಸುತ್ತಿದ್ದರೆ ಅಥವಾ ಅವಳನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿದ ಮುಸಲ್ಮಾನನನ್ನು ಸ್ಮರಿಸುತ್ತಿದ್ದರೆ, ತೆಂಗಿನಕಾಯಿಯಿಂದ ಅವಳ ದೃಷ್ಟಿ ನಿವಾಳಿಸಬೇಕು. ದೃಷ್ಟಿ ನಿವಾಳಿಸುವುದರಿಂದ ಯುವತಿಯಲ್ಲಿ ಮಾಟ-ಮಂತ್ರದ ದೋಷವಿದ್ದರೆ ದೂರವಾಗುತ್ತದೆ. ಈ ಪದ್ಧತಿಯಲ್ಲಿ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ದೃಷ್ಟಿ ನಿವಾಳಿಸಲು ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಳ್ಳ ಬೇಕು. ದೃಷ್ಟಿ ನಿವಾಳಿಸುವವರು ಈ ತೆಂಗಿನಕಾಯಿಯನ್ನು ಬೊಗಸೆಯಲ್ಲಿ ಹಿಡಿದುಕೊಂಡು ಆ ಯುವತಿಯ ಎದುರು ನಿಂತುಕೊಳ್ಳಬೇಕು. ತೆಂಗಿನಕಾಯಿಯ ಜುಟ್ಟು ಯುವತಿಯ ಎದುರು ಇರುವಂತೆ ಹಿಡಿದುಕೊಂಡು ‘ಹೇ ಮಾರುತಿರಾಯಾ, ನೀನು ಈ ಯುವತಿಯ ದೇಹದಲ್ಲಿ ಮತ್ತು ದೇಹದ ಹೊರಗಿರುವ ತೊಂದರೆದಾಯಕ ಸ್ಪಂದನಗಳನ್ನು ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ಅವುಗಳನ್ನು ಸಂಪೂರ್ಣವಾಗಿ ನಾಶಗೊಳಿಸು’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ಆ ತೆಂಗಿನಕಾಯಿಯನ್ನು ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಅನಂತರ ಆ ಯುವತಿಯ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುವಾಗ ತೆಂಗಿನಕಾಯಿಯ ಜುಟ್ಟು ಯುವತಿಯ ಕಡೆಗಿರಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು ಅಥವಾ ಬೆಂಕಿಗೆ ಅರ್ಪಿಸಬೇಕು. ಆಗ ‘ಹನುಮಂತನಿಗೆ ವಿಜಯವಾಗಲಿ!’, ಎಂದು ಜಯಘೋಷ ಮಾಡಬೇಕು. (‘ಲವ್ ಜಿಹಾದ್’ನಲ್ಲಿ ಸಿಲುಕಿದ ಯುವತಿ ಹಿಂತಿರುಗಿ ಬರದಿದ್ದರೂ, ಅವಳ ಮೇಲಿನ ವಶೀಕರಣ ಅಥವಾ ಮಂತ್ರ-ತಂತ್ರದ ತೊಂದರೆಯನ್ನು ಹೋಗಲಾಡಿಸಲು ಅವಳ ಛಾಯಾಚಿತ್ರವನ್ನಿಟ್ಟು ಕೂಡ ಈ ಮೇಲಿನಂತೆ ದೃಷ್ಟಿ ತೆಗೆಯಬಹುದು.)

೫. ಯುವತಿಗೆ ಉಪ್ಪು ನೀರಿನಲ್ಲಿ ಸ್ನಾನ ಮಾಡಲು ಹೇಳುವುದು: ಪೀಡಿತ ಯುವತಿಯ ದೃಷ್ಟಿ ನಿವಾಳಿಸಿದ ನಂತರ ಅಥವಾ ತೆಂಗಿನಕಾಯಿಯಿಂದ ಅವಳ ದೃಷ್ಟಿ ತೆಗೆದ ನಂತರ ಒಂದು ಬಾಲ್ದಿ ನೀರಿಗೆ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ಅವಳಿಗೆ ಆ ನೀರಿನಿಂದ ಸ್ನಾನ ಮಾಡಲು ಹೇಳಬೇಕು.

೬. ನಾಮಜಪ ಮಾಡಲು ಹಾಗೂ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಪಠಣ ಮಾಡಲು ಹೇಳುವುದು: ಯುವತಿಗೆ ಪುನಃ ವಶೀಕರಣ ಅಥವಾ ಮಂತ್ರ-ತಂತ್ರಗಳ ತೊಂದರೆಯಾಗದಿರಲು ಅವಳಿಗೆ ದೇವರಿಗೆ ಪ್ರಾರ್ಥನೆ ಮಾಡಲು ಹಾಗೂ ಒಂದು ಗಂಟೆ ಅವಳ ಕುಲದೇವತೆ ಅಥವಾ ಉಪಾಸ್ಯ ದೇವತೆಯ ನಾಮಜಪ ಮಾಡಲು ಹೇಳಬೇಕು. ಅವಳಿಗೆ ದಿನನಿತ್ಯ ೧ಬಾರಿ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಹೇಳಲು ಹೇಳಬೇಕು. ಹಾಗೆಯೇ ಅವಳಿಗೆ ಪ್ರತಿದಿನ ಈ ಉಪಾಸನೆಯನ್ನು ಮಾಡಲು ಹೇಳಬೇಕು.

೭. ಗಾಣಗಾಪುರದಂತಹ ಜಾಗೃತ ತೀರ್ಥಕ್ಷೇತ್ರದಲ್ಲಿ ಅಥವಾ ಸಂತರ ಆಶ್ರಮದಲ್ಲಿ ಸ್ವಲ್ಪ ಸಮಯ ಹೋಗಿ ವಾಸಿಸಬೇಕು.

ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು? ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

ಅನೇಕರು ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳನ್ನು ಅನುಭವಿಸಿರಬಹುದು. ನಮ್ಮಲ್ಲಿರುವ ಸ್ವಭಾವದೋಷಗಳು ಮತ್ತು ಅಹಂ ಅಥವಾ ಇತರರಲ್ಲಿರುವ ಮತ್ಸರ, ಅಸೂಯೆಗಳಿಂದಲೂ ನಮಗೆ ಅನೇಕ ಸಲ ತೊಂದರೆಗಳಾಗುತ್ತವೆ. ಸ್ವಭಾವದೋಷ ಮತ್ತು ಅಹಂಗಳಿಂದ ಕೆಟ್ಟ ಶಕ್ತಿಗಳು ಮನುಷ್ಯನಿಗೆ ತೊಂದರೆ ಕೊಡಲು ಶರೀರದಲ್ಲಿ ಕಪ್ಪು ಶಕ್ತಿಯನ್ನು ಹಾಕುತ್ತವೆ ಮತ್ತು ಅದರ ಮೂಲಕ ಅವನಿಗೆ ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಕೊಡುತ್ತವೆ. ಉದಾಹರಣೆಗೆ ಕೆಲಸ ಮಾಡುವಾಗ, ಕಚೇರಿ ಅಥವಾ ಹೊರಗಿನಿಂದ ಮನೆಗೆ ಬಂದಾಗ ಆಯಾಸವಾಗುವುದು, ನಿರುತ್ಸಾಹವೆನಿಸುವುದು, ಕಾರಣವಿಲ್ಲದೇ ಕಿರಿಕಿರಿಯಾಗುವುದು, ಜಗಳಗಳಾಗುವುದು, ವಾದಗಳಾಗುವುದು ಇತ್ಯಾದಿ. ಈ ರೀತಿ ಕೆಟ್ಟ ಶಕ್ತಿಗಳು ಮನುಷ್ಯನಿಗೆ ತೊಂದರೆ ಕೊಡುವುದನ್ನು ದೂರಗೊಳಿಸಲು ಅಥವಾ ನಾಶ ಮಾಡಲು ಅನೇಕ ಆಧ್ಯಾತ್ಮಿಕ ಪರಿಹಾರೋಪಾಯಗಳಿವೆ.

ನಿಯಮಿತವಾಗಿ ಆಧ್ಯಾತ್ಮಿಕ ಸಾಧನೆಯನ್ನು (ನಾಮಜಪ ಇತ್ಯಾದಿ) ಮಾಡುತ್ತಿದ್ದಲ್ಲಿ ಇಂತಹ ತೊಂದರೆಗಳಿಂದ ನಮಗೆ ಆಗಾಗಲೇ ರಕ್ಷಣೆಯಾಗುತ್ತದೆ. ಆದರೆ ಹಲವಾರು ಜನರು ಈಗಿನ ಗಡಿಬಿಡಿಯ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಿಲ್ಲ ಅಥವಾ ಅದರ ಮೇಲೆ ವಿಶ್ವಾಸವನ್ನೂ ಇಡುವುದಿಲ್ಲ. ಅಧ್ಯಾತ್ಮದ ಮೇಲೆ ವಿಶ್ವಾಸವಿರುವವರಿಗೆ ಈ ರೀತಿಯ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳಿಗೆ ದೃಷ್ಟಿ ತೆಗೆಯುವುದು, ನಿವಾಳಿಸುವುದು, ಧೂಪ ಹಾಕುವುದು, ಮಾರುತಿಗೆ ಎಳ್ಳು-ಉದ್ದು ಅರ್ಪಿಸುವುದು ಮುಂತಾದ ಅನೇಕ ಉಪಾಯಗಳಿವೆ. ಅದರಲ್ಲಿ ಒಂದು ಮಹತ್ವದ ಉಪಾಯವೆಂದರೆ ಉಪ್ಪು ನೀರಿನಲ್ಲಿ ಕಾಲುಗಳನ್ನಿಟ್ಟು ೧೫ ನಿಮಿಷ ಉಪಾಸ್ಯದೇವರ ನಾಮಜಪ ಮಾಡುವುದು. ಅನೇಕರು ಈ ಉಪಾಯವನ್ನು ಕೇಳಿರುವುದಿಲ್ಲ. ಆದುದರಿಂದ ಇದನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ವಿವರವಾಗಿ ಕೊಡುತ್ತಿದ್ದೇವೆ.
ವಿಷಯದ ಕೊನೆಯಲ್ಲಿ ಇರುವ ವಿಡಿಯೋವನ್ನು (ಆಂಗ್ಲ) ನೋಡಿ. ಕಪ್ಪು ಶಕ್ತಿ ಎಂದರೇನು, ಉಪಾಯ ಮಾಡುವ ಪದ್ಧತಿ ಎಲ್ಲವನ್ನೂ ಅತ್ಯುತ್ತಮವಾಗಿ ವಿವರಿಸಲಾಗಿದೆ. ಏನಾದರೂ ಸಂದೇಹವಿದ್ದರೆ ವಿ-ಅಂಚೆ ಮಾಡಿ.

ಕಲ್ಲುಪ್ಪಿನ ನೀರಿನಲ್ಲಿ ಎರಡೂ ಕಾಲುಗಳನ್ನಿಟ್ಟು ಕುಳಿತುಕೊಳ್ಳುವುದು
 

೧. ಕೃತಿ
 

ಅ. ಒಂದು ಬಾಲ್ದಿಯಲ್ಲಿ ಅಥವಾ ಬಾಲ್ದಿಯಂತಹ ಪಾತ್ರೆಯಲ್ಲಿ, ನಮ್ಮ ಕಾಲುಗಳ ಗಂಟುಗಳ ತನಕದ ಭಾಗವು ಮುಳುಗುವಷ್ಟು ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಳ್ಳಬೇಕು.
ಆ. ಆ ನೀರಿನಲ್ಲಿ ಚಹಾ ಚಮಚದಿಂದ ೨ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪು ಹಾಕಬೇಕು.
ಇ. ಕಲ್ಲುಪ್ಪಿನ ನೀರಿನಲ್ಲಿ ಕಾಲುಗಳನ್ನು ಮುಳುಗಿಸುವ ಮೊದಲು ಉಪಾಸ್ಯ ದೇವತೆಯಲ್ಲಿ, ‘ನನ್ನ ಶರೀರದಲ್ಲಿನ ತ್ರಾಸದಾಯಕ ಶಕ್ತಿಯು ಈ ಕಲ್ಲುಪ್ಪಿನ ನೀರಿನಲ್ಲಿ ಸೆಳೆಯಲ್ಪಡಲಿ’ ಎಂದು ಪ್ರಾರ್ಥನೆ ಮಾಡಬೇಕು.
ಈ. ಉಪ್ಪಿನ ನೀರಿನಲ್ಲಿ ಕಾಲುಗಳನ್ನು ಮುಳುಗಿಸಿಟ್ಟ ನಂತರ ಕಾಲುಗಳ ನಡುವೆ ಸಾಧಾರಣ ೨-೩ ಸೆಂ.ಮೀ. ನಷ್ಟು ಅಂತರವಿರಿಸಬೇಕು.
ಉ. ಉಪಾಯ ಮಾಡುವಾಗ ನೇರವಾಗಿ ಕುಳಿತುಕೊಳ್ಳಬೇಕು ಮತ್ತು ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಊ. ಉಪಾಯ ಮಾಡುವಾಗ ಮಧ್ಯದಲ್ಲಿ ಏಳಬಾರದು. ಕಾರಣಾಂತರದಿಂದ ಏಳಬೇಕಾಗಿ ಬಂದಲ್ಲಿ ವಾಪಾಸು ಬಂದ ನಂತರ ಉಪ್ಪಿನ ನೀರನ್ನು ಬದಲಾಯಿಸದೇ ಅದನ್ನೇ ಉಪಯೋಗಿಸಬೇಕು.
ಎ. ೧೫ ನಿಮಿಷಗಳ ಕಾಲ ಈ ಉಪಾಯವನ್ನು ಮಾಡಬೇಕು. ಅನಂತರ ನೀರಿನಿಂದ ಕಾಲುಗಳನ್ನು ಹೊರತೆಗೆದು ಹತ್ತಿಯ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಏ. ಉಪಾಸ್ಯದೇವತೆಯ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹಾಗೆಯೇ ಸ್ವಂತದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಲು ಪ್ರಾರ್ಥನೆ ಮಾಡಿ ೨-೩ ನಿಮಿಷ ನಾಮಜಪ ಮಾಡಬೇಕು.
ಒ. ‘ಈ ನೀರಿನಲ್ಲಿರುವ ಎಲ್ಲ ತ್ರಾಸದಾಯಕ ಶಕ್ತಿ ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಿ ಉಪಾಯದ ನೀರನ್ನು ಶೌಚಾಲಯದಲ್ಲಿ ಎಸೆಯಬೇಕು.
ಔ. ಉಪಾಯಕ್ಕಾಗಿ ಉಪಯೋಗಿಸಿದ ಬಾಲ್ದಿಯನ್ನು ವಿಭೂತಿ ಹಾಕಿ ನೀರಿನಿಂದ ಸ್ವಚ್ಛವಾಗಿ ತೊಳೆಯಬೇಕು.
ಅಂ. ಕೊನೆಗೆ ಒಳ್ಳೆಯ ನೀರಿನಿಂದ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು.


ಟಿಪ್ಪಣಿ - 1. ಉಪಾಸ್ಯದೇವತೆ ಎಂದರೆ ನಮ್ಮ ಕುಲದೇವಿ/ಕುಲದೇವರು ಅಥವಾ ಇಷ್ಟದೇವರು ಅಥವಾ ಹಿಂದಿನಿಂದ ಉಪಾಸನೆ ಮಾಡಿಕೊಂಡ ಬಂದ ದೇವರು, ಹೀಗೆ ಯಾವುದಾದರೊಂದು ದೇವರು.
2. ಈ ಉಪಾಯವನ್ನು ದಿನಕ್ಕೆರಡು ಸಲ ಮಾಡಬೇಕು. ತೊಂದರೆ ಜಾಸ್ತಿ ಇದ್ದು ಉಪಾಯ ಮಾಡಿದ ನಂತರ ಅದರ ಪರಿಣಾಮ ಪುನಃ ಕಡಿಮೆಯಾದಲ್ಲಿ 3-4 ಗಂಟೆಗಳಿಗೊಮ್ಮೆ ಮಾಡಬಹುದು.

೨. ಪ್ರಯೋಗಗಳ ಮೂಲಕ ದೃಢಪಟ್ಟಿರುವ ಕಲ್ಲುಪ್ಪಿನ ನೀರಿನ ಉಪಾಯದ ಮಹತ್ವ
 

ಅ. ತೇಲುವ ವಸ್ತುವಿನ ಪ್ರಯೋಗ : ಚೈತನ್ಯದ ಲಹರಿಗಳು ಯಾವಾಗಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತವೆ ಮತ್ತು ರಜ-ತಮ ಲಹರಿಗಳು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತವೆ ಎಂದು ನಾನು ಓದಿದ್ದೆ. ಅದನ್ನು ನೋಡಲು ೨೫.೯.೨೦೦೬ ರಂದು ನಾನು ಆಧ್ಯಾತ್ಮಿಕ ಉಪಾಯಕ್ಕಾಗಿ ಕಲ್ಲುಪ್ಪಿನ ನೀರಿನಲ್ಲಿ ಕಾಲುಗಳನ್ನಿಡುವ ಮೊದಲು ಅದರಲ್ಲಿ ಒಂದು ತೇಲುವ ವಸ್ತುವನ್ನು ಇಟ್ಟೆ. ಆಗ ಆ ವಸ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗತೊಡಗಿತು. ಅನಂತರ ಕಲ್ಲುಪ್ಪಿನ ನೀರಿನಿಂದ ಉಪಾಯ ಮಾಡಿದ ನಂತರ ಆ ನೀರಿನಲ್ಲಿ ನಾನು ಅದೇ ವಸ್ತುವನ್ನು ಮತ್ತೊಮ್ಮೆ ಹಾಕಿದೆ. ಆಗ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗತೊಡಗಿತು. ಈ ಪ್ರಯೋಗವನ್ನು ನಾನು ಎರಡು ಬಾರಿ ಮಾಡಿದೆ. ಎರಡೂ ಬಾರಿ ಹೀಗೆಯೇ ಆಯಿತು.
- ಶ್ರೀ.ಸಂಜೋಗ ಸಾಳಸಕರ, ಕುಡಾಳ, ಸಿಂಧುದುರ್ಗ ಜಿಲ್ಲೆ.
 

ಆ. ಲೋಲಕದ ಪ್ರಯೋಗ : ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ, ನಕಾರಾತ್ಮಕ ಶಕ್ತಿಯಿದ್ದಲ್ಲಿ ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ.
 

೧.ಆಧ್ಯಾತ್ಮಿಕ ಉಪಾಯವನ್ನು ಪ್ರಾರಂಭಿಸುವ ಮೊದಲು ಬಾಲ್ದಿಯಲ್ಲಿರುವ ಕಲ್ಲುಪ್ಪಿನ ನೀರಿನ ಮೇಲೆ ಲೋಲಕವನ್ನು ಹಿಡಿದಾಗ ಅದು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗಿತು.
 

೨.ಕಲ್ಲುಪ್ಪಿನ ನೀರಿನಲ್ಲಿ ಕಾಲು ಮುಳುಗಿಸಿಡುವ ಉಪಾಯ ಮಾಡಿದ ನಂತರ ಆ ನೀರಿನ ಮೇಲೆ ಲೋಲಕವನ್ನು ಹಿಡಿದಾಗ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗಿತು.
 

- ಶ್ರೀ. ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ.

(Click bottom right corner of the video to full screen view)

ಇದನ್ನು ತೊಂದರೆಯಾಗುತ್ತಿರುವವರು ಅಥವಾ ತೊಂದರೆಯಾಗಬಾರದೆಂದು ಅನಿಸುವವರು ಖಂಡಿತ ಮಾಡಿ ನೋಡಿ. ಇಂತಹ ಆಧ್ಯಾತ್ಮಿಕ ಉಪಾಯಗಳ ಬಗ್ಗೆ ನಂಬಿಕೆ ಇದ್ದರೂ ಇಲ್ಲದಿದ್ದರೂ (ನಾಸ್ತಿಕರೂ) ಕೇವಲ ಒಂದು ಸಲ ಮಾಡಿದರೂ ಬಹಳ ಪರಿಣಾಮ ಕಾಣಿಸುತ್ತದೆ. ನೀವೇ ಅನುಭವಿಸಿ ನೋಡಿ...

ಈ ಉಪಾಯವನ್ನು ಮಾಡಿದಾಗ ಸೂಕ್ಷ್ಮಸ್ತರದಲ್ಲಿ ಯಾವ ರೀತಿ ಪರಿಣಾಮವಾಗುತ್ತದೆ ಎಂದು ಓದಿ

ಅ. ಕಾರ್ಯ / ಉಪಯುಕ್ತತೆ
 

ಕೇವಲ ಕಲ್ಲುಪ್ಪಿನಿಂದ ಉಪಾಯವಾಗುವುದಿಲ್ಲ, ಕಲ್ಲುಪ್ಪು ನೀರಿನ ಸಂಪರ್ಕಕ್ಕೆ ಬರುವುದರಿಂದ ಉಪಾಯವಾಗುತ್ತದೆ. ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕೃತಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲಿರುವ ಆಪತತ್ತ್ವಾತ್ಮಕ ಸೂಕ್ಷ್ಮ ಕೋಶವು ಬಾಹ್ಯ ವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವಲ್ಲಿ ಅಗ್ರೇಸರವಾಗಿದೆ. ಉಪ್ಪುನ್ನು ನೀರಿನಲ್ಲಿ ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡ ರಜ-ತಮಾತ್ಮಕ ಲಹರಿಗಳು ಕೂಡಲೇ ನೀರಿನಲ್ಲಿ ವಿಸರ್ಜನೆಯಾಗುತ್ತವೆ ಮತ್ತು ರಜ-ತಮಾತ್ಮಕ ಲಹರಿಗಳ ಕಾರ್ಯ ಮಾಡುವ ತೀವ್ರತೆಯು ಕೂಡಲೇ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿರುವ ರಜ-ತಮವು ಕೂಡಲೇ ನೀರಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಜಡತ್ವವೂ ಕೂಡಲೇ ಕಡಿಮೆಯಾಗುತ್ತದೆ.
 

ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ಆದುದರಿಂದ ಉಪ್ಪಿನ ಗುಣಧರ್ಮವನ್ನು ಉಪಯೋಗಿಸಿಕೊಂಡು ದೇಹದಿಂದ ಸೆಳೆದುಕೊಂಡ ರಜ-ತಮವನ್ನು ಕೂಡಲೇ ನೀರು ತನ್ನಲ್ಲಿ ವಿಸರ್ಜಿಸಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ನೀರು ಆಧ್ಯಾತ್ಮಿಕ ಉಪಾಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ಶೇ.೩೦ರಷ್ಟು ಪ್ರಮಾಣದಲ್ಲಿ ಕಲ್ಲುಪ್ಪು ರಜ-ತಮವನ್ನು ಸೆಳೆದುಕೊಳ್ಳುವ ಕಾರ್ಯವನ್ನು ಮಾಡುತ್ತದೆ ಮತ್ತು ಶೇ.೭೦ರಷ್ಟು ನೀರು ಈ ಸ್ಪಂದನಗಳನ್ನು ತನ್ನಲ್ಲಿ ವಿಸರ್ಜಿಸಿಕೊಳ್ಳುವ ಕಾರ್ಯವನ್ನು ಮಾಡಿ ವ್ಯಕ್ತಿಯನ್ನು ಪೃಥ್ವಿತತ್ತ್ವಜನ್ಯ ತ್ರಾಸದಾಯಕ ಜಡತ್ವದಿಂದ ಮುಕ್ತಗೊಳಿಸುತ್ತದೆ.

(ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೧೨, ಬೆಳಗ್ಗೆ ೮.೩೨)
(ಆಧಾರ : ಸನಾತನ ಸಂಸ್ಥೆಯ ಗ್ರಂಥ " "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಸದ್ಯ ಕೆಟ್ಟ ಶಕ್ತಿಗಳಿಂದ ಸ್ಥೂಲದಲ್ಲಿ ಹಲ್ಲೆಯಾಗುವ ಪ್ರಮಾಣವು ಹೆಚ್ಚಾಗಿದೆ. ಈ ಕಾಲದಲ್ಲಿ ಅನೇಕ ಸಾಧಕರಿಗೆ ಸೇವೆ ಮಾಡುವಾಗ ದಣಿವಾಗುವುದು, ಮಲಗಿ ಕೊಂಡೇ ಇರಬೇಕು ಎಂದೆನಿಸುವುದು, ಮೈನೋವು, ಶರೀರಕ್ಕೆ ಬಾವು ಬರುವುದು, ಹೊಟ್ಟೆ ನೋವು, ತಲೆ ನೋವು ಇಂತಹ ಶಾರೀರಿಕ ತೊಂದರೆಗಳೊಂದಿಗೆ ನಕಾರಾತ್ಮಕ ವಿಚಾರಗಳು ಬರುವುದು, ವಿಕಲ್ಪ ಬರುವುದು, ಆಕ್ರಮಕ ಕೃತಿ ಮಾಡಬೇಕೆನಿಸುವುದು, ಸೇವೆ (ಕೆಲಸ) ಮಾಡುವುದು ಬೇಡವೆನಿಸುವುದು, ಇಂತಹ ಮಾನಸಿಕ ತೊಂದರೆಗಳನ್ನೂ ಎದುರಿಸಬೇಕಾಗುತ್ತಿದೆ. ಈ ತೊಂದರೆಗಳನ್ನು ಕಡಿಮೆ ಮಾಡಲು ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬಹುದು.

೧. ಮಾಟದ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
೧ಅ.ಮಾಟದ ಮಾಧ್ಯಮದಿಂದ ಎಸೆಯುವ ಕಪ್ಪು ಶಕ್ತಿಯು ಮನೆಯಲ್ಲಿ ಬರಬಾರದೆಂದು ಮಾಡಬೇಕಾದ ಉಪಾಯಗಳು (ಮನೆಯ ಬಾಗಿಲಿನಲ್ಲಿ ಲೋಳೆಸರ ಇಡುವುದು): ಮನೆಯ ಬಾಗಿಲಿನಲ್ಲಿ ಚುಕ್ಕೆಗಳಿರುವ ಲೋಳೆಸರದ ಕುಂಡವನ್ನು ಇಡಬೇಕು ಅಥವಾ ಲೋಳೆಸರವನ್ನು ಭೂಮಿಯಲ್ಲಿ ನೆಡಬೇಕು. ಚುಕ್ಕೆಗಳಿರುವ ಲೋಳೆಸರದಲ್ಲಿ ಮಾಟದ ಮಾಧ್ಯಮದಿಂದ ಮನೆಯ ಮೇಲೆ ಮಾಡಿದ ಕಪ್ಪು ಶಕ್ತಿಯನ್ನು ಹಿಂದಿರುಗಿಸುವ ಕ್ಷಮತೆಯಿರುತ್ತದೆ. ಲೋಳೆಸರಕ್ಕೆ ಇರುವ ಮತ್ತು ನೆಲದ ದಿಕ್ಕಿನಲ್ಲಿ ಬಾಗಿದ ಮುಳ್ಳುಗಳು ಕಪ್ಪು ಶಕ್ತಿಯನ್ನು ಶೋಷಿಸಿ ಅದನ್ನು ಭೂಮಿಗೆ ವಿಸರ್ಜಿಸಬಲ್ಲದು. ಎಲೆಗಳಿಗೆ ಚುಕ್ಕೆಗಳಿಲ್ಲ ದಿರುವ ಲೋಳೆಸರ ಮಾತ್ರ ಔಷಧಿಯಾಗಿರುತ್ತದೆ. ಅದು ರಕ್ಷಣೆಗಾಗಿ ಉಪಯೋಗವಾಗುವುದಿಲ್ಲ.

೧ಆ. ವಾಸ್ತುವಿನಲ್ಲಿನ ಮಾಟದ ತೊಂದರೆಯನ್ನು ಕಡಿಮೆ ಮಾಡಬೇಕಾದ ಉಪಾಯ (ಉಪ್ಪು-ಮೆಣಸು ಸುಡುವುದು): ಮನೆಯ ಗೋಡೆಯಲ್ಲಿ ಅಡ್ಡಗೆರೆ (ಕ್ರಾಸ್) ಆಕಾರ, ವಿಚಿತ್ರ ಮುಖಗಳು, ಆಕೃತಿಗಳು, ಅಂಗೈ-ಅಂಗಾಲು ಮುಂತಾದವುಗಳು ಮೂಡುವುದು, ನೆಲದ ಮೇಲೆ ರಕ್ತದ ಗುರುತು ಬೀಳುವುದು, ಮನೆಯಲ್ಲಿ ಬಟ್ಟೆಗಳು ಕಾಣೆಯಾಗುವುದು, ಮನೆಯ ವ್ಯಕ್ತಿಗಳಿಗೆ ಮಾಟದ ತೊಂದರೆಯಾಗುವುದು, ಇಂತಹ ತೊಂದರೆಗಳಾದಲ್ಲಿ ಕೋಣೆಯ ಗೋಡೆ ಬದಿಯ ನಾಲ್ಕು ದಿಕ್ಕುಗಳಲ್ಲಿ ನೆಲದ ಮೇಲೆ ಎರಡೆರಡು ಅಡಿ ಅಂತರದಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು ಮತ್ತು ಅದರ ಮೇಲೆ ಮೂರು-ನಾಲ್ಕು ಕೆಂಪು ಮೆಣಸುಗಳನ್ನು ಇಡಬೇಕು. ನಾಲ್ಕೂ ಕಡೆಗಳಲ್ಲಿ ನೆಲದ ಮೇಲೆ ಈ ರೀತಿಯ ಮಂಡಲ ಮಾಡಬೇಕು. ೧೫ ನಿಮಿಷದಲ್ಲಿ ಕೆಂಪು ಮೆಣಸು ಮತ್ತು ಕಲ್ಲುಪ್ಪನ್ನು ಕಸಬರಿಕೆಯಿಂದ ಒಟ್ಟು ಮಾಡಿ ಮನೆಯ ಹೊರಗೆ ಕೊಂಡೊಯ್ದು ಬೆಂಕಿಯಲ್ಲಿ ಸುಡಬೇಕು. ಈ ಉಪಾಯವನ್ನು ಒಂದೇ ಬಾರಿ ಮಾಡಲಿಕ್ಕಿರುತ್ತದೆ.

೧ಇ. ಮನೆಯ ಬಾಗಿಲಿನಲ್ಲಿ ಮಾಟದ ವಸ್ತುಗಳು ದೊರಕಿದರೆ ಅದರ ಮೇಲೆ ಕಲ್ಲುಪ್ಪಿನ ನೀರು ಸುರಿಯಬೇಕು ಅಥವಾ ಎಣ್ಣೆ ಹಾಕಿ ಆ ವಸ್ತುಗಳನ್ನು ಸುಟ್ಟು ಬಿಡಬೇಕು.

೧ಈ. ಮಾಟ ಮಾಡುವ ವ್ಯಕ್ತಿಯ ಛಾಯಾಚಿತ್ರವು ದೊರೆತಲ್ಲಿ ಆ ವ್ಯಕ್ತಿಯ ಮಾಧ್ಯಮದಿಂದಾಗುವ ತೊಂದರೆಯ ಪ್ರಮಾಣವನ್ನು ಕಡಿಮೆ ಮಾಡಲು ಮಾಡಬೇಕಾದ ಉಪಾಯಗಳು: ಮನೆಯ ಯಾವುದಾದರೊಬ್ಬ ವ್ಯಕ್ತಿಗೆ ಮಾಟದ ತೊಂದರೆಯಾಗುತ್ತಿದ್ದಲ್ಲಿ ಮತ್ತು ಮಾಟ ಮಾಡುವ ಮನುಷ್ಯನ ಛಾಯಾಚಿತ್ರ ಉಪಲಬ್ಧವಿದ್ದರೆ ಆ ಮನುಷ್ಯನ ಛಾಯಾಚಿತ್ರದ ಹಣೆಯ ಮೇಲೆ ಲೇಖನಿಯಿಂದ ತ್ರಿಶೂಲ ಬಿಡಿಸಬೇಕು ಮತ್ತು ಅವನ ಮುಖಕ್ಕೆ ಚರ್ಮದ ತುಂಡು ತಾಗಿಸಿ, ಅಂತಹ ಛಾಯಾಚಿತ್ರವನ್ನು ಹತ್ತು ದಿನಗಳ ಕಾಲವಿಟ್ಟು ನಂತರ ನದಿಯಲ್ಲಿ ವಿಸರ್ಜಿಸಬೇಕು.

೨. ಮನೆಗೆ ದೃಷ್ಟಿ ತಗುಲಬಾರದೆಂದು ಮಾಡಬೇಕಾದ ಉಪಾಯ
೨ಅ. ಮನೆಯ ಮುಖ್ಯ ಚೌಕಟ್ಟಿಗೆ ಕಹಿಬೇವಿನ ಎಲೆಗಳ ಹೂವಿನ ತುರಾಯಿ ಕಟ್ಟುವುದು: ಕಹಿಬೇವಿನ ಕಡ್ಡಿಗಳೊಂದಿಗೆ ಎಲೆಗಳ ತುರಾಯಿಯನ್ನು ಮನೆಯ ಬಾಗಿಲಿನ ಮುಖ್ಯ ಚೌಕಟ್ಟಿಗೆ ಸಿಲುಕಿಸಬೇಕು ಮತ್ತು ಅದರ ಸುತ್ತಲೂ ಸಾಯಂಕಾಲ ಊದುಬತ್ತಿಯನ್ನು ತೋರಿಸಬೇಕು. ಇದರಿಂದ ಯಾರದ್ದೇ ಅಶುಭ ಛಾಯೆಯು ತಮ್ಮ ಮನೆಯ ಮೇಲೆ ಬೀಳುವುದಿಲ್ಲ. ಈ ತುರಾಯಿಯು ಒಣಗಿದ ನಂತರ ಅದನ್ನು ವಿಸರ್ಜಿಸಿ ಮತ್ತೊಂದು ಹಾಕಬಹುದು.

೩. ವಾಸ್ತುದೋಷ ಕಡಿಮೆ ಮಾಡಲು ಮಾಡಬೇಕಾದ ಉಪಾಯಗಳು
೩ಅ. ವಾಸ್ತುವಿನಲ್ಲಿ ಧೂಪ ಹಾಕುವುದು: ವಾಸ್ತುವಿನ ದೋಷ ಕಡಿಮೆಯಾಗಲು ಸಾಯಂಕಾಲ ಸೂರ್ಯಾಸ್ತದ ನಂತರ ಒಂದು ಗಂಟೆಯೊಳಗೆ ಮನೆಯಲ್ಲಿ ಹೆಚ್ಚು ತೊಂದರೆಯಿರುವ ಕೋಣೆಯಲ್ಲಿ ದಕ್ಷಿಣ ದಿಕ್ಕಿಗೆ ಧೂಪ ಹಾಕಿಡಬೇಕು. ಧೂಪ ಹಾಕುವ ಮೊದಲು ನೆಲವನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇದರಿಂದ ಉಪಾಯದ ಪರಿಣಾಮಕಾರಕತೆ ಹೆಚ್ಚುತ್ತದೆ.

೪. ಆರೋಗ್ಯ ಒಳ್ಳೆಯದಾಗಿರಲು ಮಾಡಬೇಕಾದ ಉಪಾಯಗಳು
೪ಅ. ರಾತ್ರಿ ಮಲಗುವಾಗ ನಾಭಿಗೆ (ಹೊಕ್ಕಳಿಗೆ) ಕೊಬ್ಬರಿಎಣ್ಣೆ ಅಥವಾ ಗೋವಿನ ತುಪ್ಪವನ್ನು ಹಚ್ಚಿಕೊಂಡು ಮಲಗಬೇಕು.
೪ಆ. ಸಂಪೂರ್ಣ ಬೆನ್ನಿಗೆ ಮತ್ತು ಹೊಟ್ಟೆಗೆ ವಿಭೂತಿ ಹಚ್ಚುವುದರಿಂದ ಮೈನೋವು ಕಡಿಮೆಯಾಗುವುದು:
ತೀವ್ರ ಮೈನೋವು ಹಾಗೂ ಹೊಟ್ಟೆಯ ಮತ್ತು ಬೆನ್ನಿನ ತೊಂದರೆ ಕಡಿಮೆ ಮಾಡಲು ಸ್ನಾನದ ನಂತರ ಸಂಪೂರ್ಣ ಬೆನ್ನಿಗೆ ಹಾಗೂ  ಕುತ್ತಿಗೆಯಿಂದ ಹಿಡಿದು ಹೊಟ್ಟೆಯ ವರೆಗೆ ವಿಭೂತಿಯನ್ನು ಹಚ್ಚಬೇಕು. ರಾತ್ರಿ ಮಲಗುವ ಮೊದಲೂ ಈ ಉಪಾಯವನ್ನು ಮಾಡಬೇಕು. ಇದರಿಂದ ಮೈ ನೋವಿನ ಪ್ರಮಾಣವು ಬಹಳಷ್ಟು ಅಲ್ಪವಾಗುತ್ತದೆ. ಆಗ, ‘ದೇವರೇ, ನನ್ನ ಸುತ್ತಲೂ ವಜ್ರದಂತಹ ಕಠಿಣ ಕವಚವು ನಿರ್ಮಾಣವಾಗಲಿ’ ಎಂದು ಪ್ರಾರ್ಥನೆಯನ್ನು ಮಾಡಬೇಕು. - ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (ವೈಶಾಖ ಶುಕ್ಲ ಪಕ್ಷ ೬, ಕಲಿಯುಗ ವರ್ಷ ೫೧೧೫ (೧೬.೫.೨೦೧೩))

ಇವೆಲ್ಲವುಗಳೊಂದಿಗೆ ಸತತವಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಮೇಲಿನಂತಹ ಪರಿಹಾರೋಪಾಯಗಳನ್ನು ಸತತವಾಗಿ ಮಾಡಲು ಕಠಿಣವಾಗಿರುತ್ತದೆ. ಆದುದರಿಂದ ಕುಲದೇವರ ಅಥವಾ ಕಾಲಕ್ಕನುಸಾರ ಶ್ರೀಕೃಷ್ಣನ ನಾಮಜಪವನ್ನು ಮತ್ತು "ಶ್ರೀ ಗುರುದೇವ ದತ್ತ" ನಾಮಜಪವನ್ನು ಸತತವಾಗಿ ಮಾಡುವುದೊಂದೇ ಶಾಶ್ವತ ಪರಿಹಾರವಾಗಿದೆ.
ಆಧಾರ - ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ'

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ

ಈಗ ಕಲಿಯುಗವಾಗಿರುವುದರಿಂದ ಹೆಚ್ಚಿನ ವಾಸ್ತುಗಳು ಕೆಟ್ಟ ಶಕ್ತಿಗಳಿಂದ ಪ್ರಭಾವಿತವಾಗುತ್ತವೆ. ಈ ತೊಂದರೆಯು ಮಂದ ಅಂದರೆ ಶೇ.೧-೨ರಿಂದ, ತೀವ್ರ ಅಂದರೆ ಶೇ.೬ ರಷ್ಟಿರಬಹುದು. ವಾಸ್ತುವಿನಲ್ಲಿ ತೀವ್ರ ತೊಂದರೆಯಿದ್ದರೆ ವಾಸ್ತುವನ್ನು ಬಿಟ್ಟು ಹೋಗುವುದು ಅಧಿಕ ಉಪಯುಕ್ತವಾಗಿದೆ. ಆದರೆ ಹೊಸ ವಾಸ್ತುವಿನಲ್ಲಿ ತೊಂದರೆಯಾಗುವುದಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ ಮತ್ತು ಇಂದು ವಾಸ್ತುವಿನ ಬಗ್ಗೆ ತಿಳಿಸುವ ತಜ್ಞ ವ್ಯಕ್ತಿ ಅಂದರೆ ಸಂತರು ಸಿಗುವುದೂ ಕಷ್ಟ. ಇಂತಹ ಸ್ಥಿತಿಯಲ್ಲಿ ವಾಸ್ತುದೋಷದ ಕೆಲವು ಲಕ್ಷಣಗಳನ್ನು ಗಮನದಲ್ಲಿಟ್ಟರೆ ವಾಸ್ತುದೋಷವಿದೆಯೋ ಅಥವಾ ಇಲ್ಲವೋ ಎಂದು ಅರಿಯಬಹುದು.

೧. ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆಯು ಉಂಟಾಗದಿರುವುದು, ತಂದೆ-ತಾಯಿಯ ಮಾತು ಕೇಳದಿರುವುದು, ಮನೆಯಲ್ಲಿ ನಿಯಮಿತ ಕಾರ್ಯವನ್ನು ಮಾಡದಿರುವುದು, ಬಹಳ ಹೊತ್ತಿನವರೆಗೂ ಮಲಗಿರುವುದು
೨. ಮನೆಯಲ್ಲಿ ನಾಮಜಪ ಅಥವಾ ಧ್ಯಾನ ಮುಂತಾದ ಸಾಧನೆ ಮಾಡಲು ಮನಸ್ಸಾಗದಿರುವುದು
೩. ಮನೆಯಲ್ಲಿ ವಿನಾಕಾರಣ ವಿವಾದವು ಉಂಟಾಗುವುದು
೪. ಔಷಧೋಪಚಾರ ಮಾಡಿದ ನಂತರವೂ ರೋಗ ದೂರವಾಗದಿರುವುದು

ಈ ಪ್ರಕಾರದ ಕೆಲವು ಲಕ್ಷಣಗಳು ನಮಗೆ ಕಂಡುಬಂದರೆ ಅವುಗಳನ್ನು ದೂರಗೊಳಿಸಲು ಇತರ ಉಪಾಯಗಳೊಂದಿಗೆ ವಾಸ್ತುಶುದ್ಧಿಗಾಗಿ ನಾಮಜಪ ಮಾಡುವುದೂ ಅತ್ಯಾವಶ್ಯಕವಿದೆ.

ವಾಸ್ತುಶುದ್ಧಿಗಾಗಿ ನಾಮಜಪ ಮಾಡಿ

ನಾಮಜಪ ಮಾಡುವುದು ವಾಸ್ತುಶುದ್ಧಿಗಾಗಿ ಅತ್ಯಂತ ಲಾಭದಾಯಕ ಉಪಚಾರವಾಗಿದೆ. ಆದ್ದರಿಂದ ಪ್ರತಿದಿನ ಪೂಜೆ- ಅರ್ಚನೆಯಂತಹ ಧರ್ಮಾಚರಣೆಯ ಕೃತಿಗಳೊಂದಿಗೆ ನಾಮಜಪ-ಸಾಧನೆಯನ್ನು ಅಗತ್ಯವಾಗಿ ಮಾಡಬೇಕು. ಈ ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡುವುದರಿಂದ ವ್ಯಕ್ತಿಯ ಸಾತ್ತ್ವಿಕತೆಯಲ್ಲಿ ವೃದ್ಧಿಯಾಗುತ್ತದೆ. ವ್ಯಕ್ತಿಯಿಂದ ಈ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುಶುದ್ಧಿಯಾಗುತ್ತದೆ.

ವೈಖರಿಯಲ್ಲಿ ನಾಮಜಪ ಮಾಡಿ

ವೈಖರಿಯಲ್ಲಿ (ಏರುಧ್ವನಿಯಲ್ಲಿ) ನಾಮಜಪ ಮಾಡುವುದೂ ವಾಸ್ತುಶುದ್ಧಿಗೆ ಲಾಭದಾಯಕವಾಗುತ್ತದೆ. ಎತ್ತರಧ್ವನಿಯಲ್ಲಿ ನಾಮಜಪ ಮಾಡುವುದರಿಂದ ಜಪಿಸುವ ವ್ಯಕ್ತಿಯ ಮುಖದಿಂದ ಈಶ್ವರೀಯ ಶಕ್ತಿಯ ಪ್ರಕ್ಷೇಪಣೆಯಾಗುತ್ತದೆ ಮತ್ತು ಇದರಿಂದ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ದೂರವಾಗುತ್ತವೆ. ಆದ್ದರಿಂದ ವಾಸ್ತುಶುದ್ಧಿಗಾಗಿ ಪ್ರತಿದಿನ ಸ್ವಲ್ಪ ಸಮಯ ವೈಖರಿಯಲ್ಲಿ ನಾಮಜಪವನ್ನು ಮಾಡಬೇಕು.

ಯಾವ ದೇವತೆಯ ನಾಮಜಪ ಮಾಡಬೇಕು ?

ಸಾಮಾನ್ಯವಾಗಿ ವಾಸ್ತುಶುದ್ಧಿಗಾಗಿ ನಮ್ಮ ಕುಲದೇವತೆಯ ನಾಮವನ್ನು ಜಪಿಸಬೇಕು. ಆದರೆ ಯಾರ ಮನೆಯಲ್ಲಿ ಪೂರ್ವಜರ ತೊಂದರೆಯು ಅಧಿಕವಿದೆಯೋ, ಉದಾಹರಣೆಗೆ ಮದುವೆಯಾಗಲು ಅಡ್ಡಿಯುಂಟಾಗುವುದು, ಮದುವೆಯ ನಂತರ ಗಂಡ-ಹೆಂಡತಿಯಲ್ಲಿ ಹೊಂದಾಣಿಕೆ ಆಗದಿರುವುದು, ಅಪಮೃತ್ಯು ಅಥವಾ ಅಪಘಾತದಿಂದ ಮೃತ್ಯುವಾಗುವುದು ಇತ್ಯಾದಿ. ಅಂತಹವರು ‘ಶ್ರೀ ಗುರುದೇವ ದತ್ತ |’ ಎಂದು ಜಪಿಸಬೇಕು. ವಾಸ್ತುವಿಗಾಗಿ ಪ್ರತಿದಿನ ಅರ್ಧ ಗಂಟೆ ನಾಮಜಪ ಮಾಡಬೇಕು.

ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು

ವಾಸ್ತುವಿನಲ್ಲಿನ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರಗೊಳಿಸಿ, ಅಲ್ಲಿ ಉತ್ತಮ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುವಿನ ಶುದ್ಧೀಕರಣ ಮಾಡುವುದು. ಇತ್ತೀಚೆಗೆ, ವಾಸ್ತುವಿನಲ್ಲಿ ದೋಷಗಳು ಇರಬಾರದೆಂದು ವಾಸ್ತುಶಾಸ್ತ್ರದ ಬಗ್ಗೆ ಗಂಭೀರವಾಗಿ ವಿಚಾರ ಮಾಡುತ್ತಾರೆ. ಇದಕ್ಕಾಗಿ ವಾಸ್ತುದೋಷದಿಂದಾಗುವ ದುಷ್ಪರಿಣಾಮಗಳ ಕೆಲವು ಉದಾಹರಣೆಗಳು ಮತ್ತು ವಾಸ್ತುದೋಷಗಳನ್ನು ದೂರಗೊಳಿಸಲು ಪ್ರಚಲಿತವಿರುವ ಪದ್ಧತಿಗಳಿಗಿಂತ ಕಡಿಮೆ ಖರ್ಚಿನ ಮತ್ತು ಸುಲಭ ವಿಧಾನಗಳ ಮಾಹಿತಿಯನ್ನು ಮುಂದೆ ಕೊಟ್ಟಿದ್ದೇವೆ.

ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?

ದೇವರಪೂಜೆಯ ನಂತರ ದೇವರಿಗೆ ಧೂಪ ತೋರಿಸುವ ಪದ್ಧತಿಯಿದೆ. ಧೂಪ ತೋರಿಸಿದರೆ ವಾಸ್ತುವಿನ ಶುದ್ಧಿಯಾಗುತ್ತದೆ. ದೇವರಿಗೆ ಸುಗಂಧಿತ ಧೂಪವು ಪ್ರಿಯವಾದ್ದರಿಂದ ಧೂಪ ತೋರಿಸಿದಾಗ ದೇವರು ಪ್ರಸನ್ನರಾಗುತ್ತಾರೆ. ಪ್ರಾತಃಕಾಲದಲ್ಲಿ ಧೂಪ ತೋರಿಸುವುದು ಸಾಧ್ಯವಾಗದಿದ್ದಲ್ಲಿ, ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದ ನಂತರವೂ ಧೂಪ ತೋರಿಸಬಹುದು.

ಧೂಪಕ್ಕಾಗಿ ಬೇಕಾಗುವ ಸಾಮಗ್ರಿಗಳು

ಎಂಟು-ಹತ್ತು ಇದ್ದಿಲು ಅಥವಾ ಎರಡು ಹಸುವಿನ ಬೆರಣಿಗಳು, ಬೆಂಕಿಯನ್ನು ಹಚ್ಚಲು ಧೂಪ ಪಾತ್ರೆ, ಇದ್ದಿಲನ್ನು ಉರಿಸಲು ಕರ್ಪೂರ ಅಥವಾ ತುಪ್ಪ, ಬೆಂಕಿಪೆಟ್ಟಿಗೆ, ಧೂಪ ಮತ್ತು ಕಾರ್ಡ್ ಬೋರ್ಡ್.

ಪ್ರತ್ಯಕ್ಷ ಕೃತಿ

ಧೂಪದ ಪಾತ್ರೆಯಲ್ಲಿ ಇದ್ದಿಲು ಅಥವಾ ಬೆರಣಿಯನ್ನು ಇಡಿರಿ. ಕರ್ಪೂರದ ಮಾಧ್ಯಮದಿಂದ ಅದನ್ನು ಉರಿಸಿರಿ. ಪ್ರಜ್ವಲಿತ ಬೆಂಕಿಯ ಮೇಲೆ ಧೂಪ ಹಾಕಿರಿ. ಈಗ ಧೂಪದ ಪಾತ್ರೆಯನ್ನು ವಾಸ್ತುವಿನ ಎಲ್ಲ ಕಕ್ಷೆಗಳಿಗೆ ಒಯ್ಯಿರಿ. ಆದರೆ ಗಮನದಲ್ಲಿಡಿರಿ, ಧೂಪವನ್ನು ಕೈಯಿಂದ ಹರಡಲೇಬೇಡಿ.

ಕೋಣೆಯಲ್ಲಿ ಧೂಪ ತೋರಿಸುವುದು

೧. ಧೂಪದ ಪಾತ್ರೆಯನ್ನು ಎಡಗೈಯಲ್ಲಿ ಹಿಡಿದುಕೊಳ್ಳಿರಿ.
೨. ಬಲಗೈಯಲ್ಲಿ ಬೀಸಣಿಕೆ ಹಿಡಿದು ಹೊರ ದಿಕ್ಕಿಗೆ ಬೀಸುತ್ತಾ ಹೊಗೆ ಹರಡಿರಿ.

ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ; ಆದರೆ ಪ್ರತಿದಿನ ಧೂಪ ತೋರಿಸುವುದು ಸಾಧ್ಯವಾಗದಿದ್ದರೆ ವಾರದಲ್ಲಿ ಒಮ್ಮೆಯಾದರೂ ಅವಶ್ಯವಾಗಿ ಧೂಪ ತೋರಿಸಿರಿ.

ಬೇವಿನ ಎಲೆ ಮತ್ತು ಧೂಪ ಅಥವಾ ಊದುಬತ್ತಿಯಿಂದ ವಾಸ್ತುಶುದ್ಧಿ ಹೇಗೆ ಮಾಡಬೇಕು ಎಂದು ಈ ವೀಡಿಯೋದಲ್ಲಿ ನೋಡಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ಪ್ರಕಟಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)

ಸಂಬಂಧಿತ ವಿಷಯಗಳು
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

ಶಾಂತ ನಿದ್ರೆಗಾಗಿ ಏನು ಮಾಡಬೇಕು?


ಇತ್ತೀಚೆಗೆ ಬಹಳಷ್ಟು ಜನರಿಗೆ ನಿದ್ರೆ ಮಾಡಿದಾಗ ಭಯಂಕರ ಕನಸುಗಳು ಬೀಳುವುದು, ನಿದ್ರೆಯಲ್ಲಿ ಕಿರುಚಾಡುವುದು, ನಿದ್ರೆ ಮಾಡಿದಾಗ ಸುತ್ತಮುತ್ತಲೂ ಯಾರದ್ದಾದರೂ ಸಂಚಾರವಿದೆ ಎಂದು ಅನಿಸುವುದು, ನೆರಳು ಕಾಣಿಸುವುದು, ನಿದ್ರೆಯಾದ ನಂತರವೂ ಉತ್ಸಾಹವೆನಿಸದಿರುವುದು ಮುಂತಾದ ಅನೇಕ ತೊಂದರೆಗಳಾಗುತ್ತವೆ. ಈ ಎಲ್ಲ ತೊಂದರೆಗಳಿಗೆ ಮಾನಸಿಕ ಕಾರಣಗಳೊಂದಿಗೆ ಶೇ.೮೦ರಷ್ಟು ಕಾರಣಗಳೂ ಆಧ್ಯಾತ್ಮಿಕವಾಗಿರುತ್ತವೆ. ಇದರಿಂದ ರಕ್ಷಣೆಯಾಗಿ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಿ ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಓದಿ.

ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ

೧. ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವುದರ ಮಹತ್ವ

ಅ. ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ ಅಲ್ಲದೇ, ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಕಡಿಮೆ ಸಮಯದಲ್ಲಿ ಆಕರ್ಷಿಸುತ್ತವೆ. ತೆಂಗಿನಕಾಯಿಯು ಸಾತ್ತ್ವಿಕವಾಗಿರುವುದರಿಂದ ಬಹಳಷ್ಟು ರಜ-ತಮಾತ್ಮಕ ಲಹರಿಗಳು ಅದರ ಒಳಗೆ ವಿಘಟನೆಯಾಗುತ್ತವೆ.

ಆ. ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುವುದರಿಂದ, ವ್ಯಕ್ತಿಯ ಸೂಕ್ಷ್ಮದೇಹದಲ್ಲಿರುವ ಕಪ್ಪು ಶಕ್ತಿಯ ಆವರಣವನ್ನು ಸೆಳೆದುಕೊಳ್ಳುವಲ್ಲಿ ಅದು ಶ್ರೇಷ್ಠವಾಗಿದೆ. ಯಾವುದೇ ರೀತಿಯ ದೊಡ್ಡ ದೃಷ್ಟಿಯೂ ಸಹ ತೆಂಗಿನಕಾಯಿಯಿಂದ ಕಡಿಮೆಯಾಗುತ್ತದೆ.

ಇ. ತೆಂಗಿನಕಾಯಿಯು ಸರ್ವಸಮಾವೇಶಕವಾಗಿರುವುದರಿಂದ ಅದು ಎಲ್ಲ ವಿಧದ ದೃಷ್ಟಿಯನ್ನು ಅಥವಾ ಮಾಟವನ್ನು ತೆಗೆಯಲು ಉಪಯುಕ್ತವಾಗಿದೆ.

ದೃಷ್ಟಿಯನ್ನು ಹೇಗೆ ತೆಗೆಯಬೇಕು?


ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ಕೃತಿಗಳನ್ನು ಮುಂದೆ ಕೊಡಲಾಗಿದೆ. ಇದರಲ್ಲಿನ ಹೆಚ್ಚಿನ ಕೃತಿಗಳ ಹಿಂದಿನ ಶಾಸ್ತ್ರವನ್ನು ಗ್ರಂಥದಲ್ಲಿ ಕೊಡಲಾಗಿದೆ.

೧. ದೃಷ್ಟಿ ತಗಲಿರುವ ವ್ಯಕ್ತಿಯನ್ನು ಮಣೆಯ ಮೇಲೆ ಕೂರಿಸಬೇಕು.

೨. ದೃಷ್ಟಿಯನ್ನು ತೆಗೆಯುವ ಮೊದಲು ಪ್ರಾರ್ಥನೆಯನ್ನು ಮಾಡಬೇಕು.

ಅ. ದೃಷ್ಟಿ ತಗಲಿದ ವ್ಯಕ್ತಿಯು ಉಪಾಸ್ಯದೇವತೆಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು: ನನ್ನ ಶರೀರದಲ್ಲಿನ ಹಾಗೂ ನನ್ನ ಶರೀರದ ಹೊರಗಿನ ತ್ರಾಸದಾಯಕ ಸ್ಪಂದನಗಳನ್ನು ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸುವ ವಸ್ತುಗಳು ಸೆಳೆದುಕೊಳ್ಳಲಿ ಮತ್ತು ಅವು ಸಂಪೂರ್ಣ ನಾಶವಾಗಲಿ.’

ಆ. ದೃಷ್ಟಿ ತೆಗೆಯುವ ವ್ಯಕ್ತಿಯು ಉಪಾಸ್ಯದೇವತೆಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು: ದೃಷ್ಟಿ ತಗಲಿದ ಜೀವದ ದೇಹದಲ್ಲಿನ ಮತ್ತು ದೇಹದ ಹೊರಗಿನ ತ್ರಾಸದಾಯಕ ಸ್ಪಂದನಗಳನ್ನು ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸುವ ವಸ್ತುಗಳು ಸೆಳೆದುಕೊಳ್ಳಲಿ ಮತ್ತು ಅವು ಸಂಪೂರ್ಣವಾಗಿ ನಾಶವಾಗಲಿ. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗಲಿ.’

೩. ದೃಷ್ಟಿಯನ್ನು ತೆಗೆಸಿಕೊಳ್ಳುವ ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವ ಹಾಗೂ ಎರಡೂ ಕೈಗಳನ್ನಿಡುವ ಪದ್ಧತಿ: ಚಿತ್ರವನ್ನು ನೋಡಿ.

೪. ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು ಮಾಡಬೇಕಾದ ಕೃತಿಗಳು

ಅ. ಉಪ್ಪು-ಸಾಸಿವೆ, ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿ, ಲಿಂಬೆಕಾಯಿ, ತೆಂಗಿನಕಾಯಿ ಇತ್ಯಾದಿ ವಿವಿಧ ವಸ್ತುಗಳನ್ನು ದೃಷ್ಟಿ ತೆಗೆಯಲು ಉಪಯೋಗಿಸುತ್ತಾರೆ. (ಈ ವಸ್ತುಗಳ ಬಗೆಗಿನ ಸವಿಸ್ತಾರವಾದ ಮಾಹಿತಿಯನ್ನು ಹಾಗೂ ಅವುಗಳಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿಗಳನ್ನು ಗ್ರಂಥದಲ್ಲಿ ಆಯಾ ವಸ್ತುಗಳ ಮಾಹಿತಿಯಲ್ಲಿ ಕೊಡಲಾಗಿದೆ.) ಯಾವ ವಸ್ತುಗಳಿಂದ ದೃಷ್ಟಿಯನ್ನು ತೆಗೆಯುವುದಿದೆಯೋ, ಆ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಮುಂದೆ ನಿಂತುಕೊಳ್ಳಬೇಕು.

ಆ. ‘ಬಂದವರ-ಹೋದವರ, ದಾರಿಹೋಕರ, ಪಶು-ಪಕ್ಷಿಗಳ, ದನಕರುಗಳ, ಭೂತ-ಪ್ರೇತಗಳ, ರಾಕ್ಷಸರ, ಮಾಟ-ಮಂತ್ರ ಮಾಡುವವರ ಮತ್ತು ಈ ಜಗತ್ತಿನಲ್ಲಿರುವ ಯಾವುದೇ ಶಕ್ತಿಯ ದೃಷ್ಟಿಯು ತಗಲಿದ್ದರೆ ಅದು ದೂರವಾಗಲಿ’ ಎನ್ನುತ್ತಾ ದೃಷ್ಟಿ ತೆಗೆಯುವ ವಸ್ತುಗಳಿಂದ ತೊಂದರೆಯಿರುವ ವ್ಯಕ್ತಿಯ ಮೇಲಿನಿಂದ ಸಾಮಾನ್ಯವಾಗಿ ೩ ಸಲ ನಿವಾಳಿಸಬೇಕು. (ವಸ್ತುಗಳನ್ನು ನಿವಾಳಿಸುವ ಪದ್ಧತಿಯು, ಆಯಾ ವಸ್ತುಗಳಿಗನುಸಾರ ಸ್ವಲ್ಪ ಬೇರೆಯಾಗಿರುತ್ತದೆ. ಈ ಪದ್ಧತಿಯನ್ನು ಗ್ರಂಥದಲ್ಲಿ ಆಯಾ ವಸ್ತುಗಳ ಮಾಹಿತಿಯಲ್ಲಿ ಕೊಡಲಾಗಿದೆ.)

ಇ. ದೃಷ್ಟಿಯನ್ನು ತೆಗೆಯುವ ವಸ್ತುಗಳನ್ನು ನಿವಾಳಿಸುವಾಗ ಪ್ರತಿಯೊಂದು ಸಲ ಕೈಗಳನ್ನು ಭೂಮಿಗೆ ತಗಲಿಸಬೇಕು. (ಹೀಗೆ ಮಾಡುವುದರಿಂದ ಆ ವಸ್ತುಗಳು ಸೆಳೆದುಕೊಂಡ ತ್ರಾಸದಾಯಕ ಸ್ಪಂದನಗಳನ್ನು ಭೂಮಿಯಲ್ಲಿ ವಿಸರ್ಜನೆ ಮಾಡಲು ಸಹಾಯವಾಗುತ್ತದೆ.)

ಈ. ವ್ಯಕ್ತಿಗೆ ತೊಂದರೆಗಳು ಹೆಚ್ಚಿದ್ದಲ್ಲಿ ವಸ್ತುಗಳನ್ನು ಮೂರಕ್ಕಿಂತ ಹೆಚ್ಚು ಸಲ ನಿವಾಳಿಸಬೇಕು. ಬಹಳಷ್ಟು ಸಲ ಮಾಂತ್ರಿಕರು ೩, ೫, ೭ ಅಥವಾ ೯ ಹೀಗೆ ಬೆಸ ಸಂಖ್ಯೆಗಳಲ್ಲಿ ಮಾಟವನ್ನು ಮಾಡುತ್ತಾರೆ; ಆದುದರಿಂದ ಆದಷ್ಟು ಬೆಸಸಂಖ್ಯೆಗಳಲ್ಲಿ ವಸ್ತುಗಳನ್ನು ನಿವಾಳಿಸಬೇಕು.

ಉ. ದೊಡ್ಡ ಕೆಟ್ಟ ಶಕ್ತಿಗಳ ತೊಂದರೆಯಿದ್ದರೆ ೨-೩ ಸಲ ದೃಷ್ಟಿ ತೆಗೆದರೂ ತೊಂದರೆಯು ಕಡಿಮೆಯಾಗುವುದಿಲ್ಲ. ಇಂತಹ ಸಮಯದಲ್ಲಿ ತೊಂದರೆಯಿರುವ ವ್ಯಕ್ತಿಯ ಮುಂದಿನಿಂದ ನಿವಾಳಿಸಿದ ನಂತರ, ಅವನ ಹಿಂದಿನಿಂದಲೂ ನಿವಾಳಿಸಬೇಕು. (ಸಾಮಾನ್ಯ ಭೂತಗಳಿದ್ದಲ್ಲಿ ಮುಂದಿನಿಂದ ನಿವಾಳಿಸಿದರೂ ಸಾಕಾಗುತ್ತದೆ. ದೊಡ್ಡ ಕೆಟ್ಟ ಶಕ್ತಿಗಳು ಶರೀರದ ಹಿಂಭಾಗದಲ್ಲಿ ಸ್ಥಾನಗಳನ್ನು ಮಾಡುತ್ತವೆ, ಆದುದರಿಂದ ದೃಷ್ಟಿ ತೆಗೆಯುವಾಗ ಎರಡೂ ಕಡೆಗಳಿಂದ ತೆಗೆಯಬೇಕು.)

ಊ. ದೃಷ್ಟಿಯನ್ನು ತೆಗೆದು, ದೃಷ್ಟಿಯನ್ನು ತೆಗೆದ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಹಿಂತಿರುಗಿ ನೋಡಬಾರದು.

೫. ದೃಷ್ಟಿಯನ್ನು ತೆಗೆದ ಮೇಲೆ, ದೃಷ್ಟಿಯನ್ನು ತೆಗೆದವನು ಮತ್ತು ದೃಷ್ಟಿಯನ್ನು ತೆಗೆಸಿಕೊಂಡವನು, ಯಾರೊಂದಿಗೂ ಮಾತನಾಡದೇ ೧೫-೨೦ ನಿಮಿಷಗಳ ಕಾಲ ಮನಸ್ಸಿನಲ್ಲಿ ನಾಮಜಪ ಮಾಡುತ್ತಾ ಮುಂದಿನ ಕರ್ಮಗಳನ್ನು ಮಾಡಬೇಕು.

೬. ಯಾವ ವಸ್ತುಗಳಿಂದ ದೃಷ್ಟಿಯನ್ನು ತೆಗೆಯಲಾಗಿದೆಯೋ, ಆ ವಸ್ತುಗಳಲ್ಲಿ ಸೆಳೆದುಕೊಂಡಿರುವ ತ್ರಾಸದಾಯಕ ಶಕ್ತಿಯನ್ನು ನಾಶಗೊಳಿಸುವ ಪದ್ಧತಿಯು ಆಯಾ ವಸ್ತುಗಳಿಗನುಸಾರ ವಿಭಿನ್ನವಾಗಿರುತ್ತದೆ, ಉದಾ. ಮೆಣಸಿನಕಾಯಿ ಮತ್ತು ಲಿಂಬೆಕಾಯಿಯನ್ನು ಸುಡಬೇಕು, ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು ಅಥವಾ ನೀರಿನಲ್ಲಿ ವಿಸರ್ಜನೆ ಮಾಡಬೇಕು. (ಸವಿಸ್ತಾರವಾದ ಮಾಹಿತಿಯನ್ನು ಗ್ರಂಥದಲ್ಲಿ ಕೊಡಲಾಗಿದೆ.)

೭. ದೃಷ್ಟಿಯನ್ನು ತೆಗೆದವನು ಮತ್ತು ತೆಗೆಸಿಕೊಂಡವನು ಕೈ-ಕಾಲುಗಳನ್ನು ತೊಳೆದುಕೊಳ್ಳ ಬೇಕು, ಮೈಮೇಲೆ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸಿಕೊಳ್ಳಬೇಕು, ದೇವರ ಅಥವಾ ಗುರುಗಳ ಸ್ಮರಣೆಯನ್ನು ಮಾಡಿ, ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು ಹಾಗೂ ತಮ್ಮ ಮುಂದಿನ ಕರ್ಮಗಳನ್ನು ಮಾಡಬೇಕು.

೮. ತೀವ್ರ ತೊಂದರೆಯಿದ್ದರೆ ಸತತವಾಗಿ ಮೂರು-ನಾಲ್ಕು ಸಲ ಅಥವಾ ಗಂಟೆಗೊಂದು ಸಲ ಅಥವಾ ದಿನದಲ್ಲಿ 3-4 ಸಲ ದೃಷ್ಟಿಯನ್ನು ತೆಗೆಯಬೇಕು.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಗ್ರಂಥ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದರ ಹಿಂದಿನ ಶಾಸ್ತ್ರ’ವನ್ನು ಓದಿ.)

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
Dharma Granth

ಪಟಕಾರದಿಂದ ದೃಷ್ಟಿ ತೆಗೆಯುವುದು

ಬಹುದಿನಗಳಿಂದ ಅನಾರೋಗ್ಯವಿರುವುದು, ಸುಸ್ತಾಗುವುದು, ಮನಸ್ಸು ಅಸ್ವಸ್ಥವಾಗುವುದು ಮುಂತಾದ ತೊಂದರೆಗಳಿಗೆ ಉಪಚಾರವೆಂದು ಪಟಕಾರದಿಂದ ದೃಷ್ಟಿ ತೆಗೆಯಿರಿ!


ಸದ್ಯ ಬಹಳಷ್ಟು ಜನರಿಗೆ ಔಷಧಿ ನೀಡಿಯೂ ಸರ್ವಸಾಮಾನ್ಯ ಕಾಯಿಲೆ, ಉದಾ. ಜ್ವರ, ನೆಗಡಿ, ಕೆಮ್ಮು, ಹೊಟ್ಟೆ ನೋವು ಇಂತಹ ಕಾಯಿಲೆಗಳು ಗುಣವಾದದ್ದು ಕಂಡುಬರುವುದಿಲ್ಲ. ಬಹಳಷ್ಟು ದಿನ ಸುಸ್ತಾಗುತ್ತದೆ. ಅದರಿಂದ ಶರೀರವು ಶಕ್ತಿಹೀನವಾಗುತ್ತದೆ. ಯಾವುದೇ ಕಾರಣ ಇಲ್ಲದೇ ಅನೇಕ ದಿನಗಳಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬಂದು ಮನಸ್ಸು ಅಸ್ವಸ್ಥವಾಗುತ್ತದೆ. ಈ ತೊಂದರೆಗಳ ಕಾರಣ ತಿಳಿಯುವುದಿಲ್ಲ. ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ ಮತ್ತು ಅದರ ಲಾಭ ಮುಂದಿನಂತಿದೆ.