Showing posts with label ವಾಸ್ತು. Show all posts
Showing posts with label ವಾಸ್ತು. Show all posts

ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!

ಮನುಷ್ಯನ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದರೆ ವಸತಿ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು, ನಿವಾಸವು ಸುಖದಾಯಕವಾಗಲು ಇತ್ತೀಚೆಗೆ ಅನೇಕ ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತದೆ. ಆದರೆ ವಾಸ್ತುವು ಚೈತನ್ಯದಾಯಕವಾಗಿದ್ದರೆ, ಆಧ್ಯಾತ್ಮಿಕ, ಅಂದರೆ ಸೂಕ್ಷ್ಮ ಸ್ತರದಲ್ಲಾಗುವ ಲಾಭಗಳು ಎಷ್ಟೋ ಪಟ್ಟು ಅಧಿಕವಿರುತ್ತವೆ. ವಾಸ್ತುವು ಚೈತನ್ಯದಾಯಕವಾಗಿರಲು ಅದನ್ನು ಸ್ವಚ್ಛ ಹಾಗೂ ಶುದ್ಧವಾಗಿರಿಸುವುದು ಎಷ್ಟು ಮಹತ್ವಪೂರ್ಣವೋ ವಾಸ್ತುವಿನಲ್ಲಿರುವವರು ಆಚಾರ ಧರ್ಮವನ್ನು ಪಾಲಿಸುವುದೂ ಅಷ್ಟೇ ಮಹತ್ವಪೂರ್ಣವಾಗಿದೆ. ಆಚಾರಪಾಲನೆಯಿಂದ ವ್ಯಕ್ತಿಯ ಆಂತರಿಕ ಶುದ್ಧಿಯಾಗತೊಡಗುತ್ತದೆ. ಇದರ ಪರಿಣಾಮವು ವಾಸ್ತುವಿನ ಮೇಲೆಯೂ ಆಗುತ್ತದೆ. ವಾಸ್ತುಶುದ್ಧಿಗಾಗಿ ಸಹಾಯಕವಾಗುವ ಆಚಾರಪಾಲನೆಯ ಕೆಲವು ಕೃತಿಗಳ ಮಾಹಿತಿ ಪಡೆಯೋಣ.

ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

ನಾವು ಕೆಲವೊಂದು ವಾಸ್ತುಗಳಲ್ಲಿ ಹೋದಾಗ ನಮಗೆ ಒಳ್ಳೆಯದೆನಿಸುತ್ತದೆ ಮತ್ತು ಇನ್ನು ಕೆಲವೊಂದು ವಾಸ್ತುಗಳಲ್ಲಿ ಹೋದಾಗ ನಮಗೆ ತೊಂದರೆಯಾಗುತ್ತದೆ (ತೊಂದರೆದಾಯಕ ಸ್ಪಂದನಗಳ ಅರಿವಾಗುತ್ತದೆ). ಇಂತಹ ವಾಸ್ತುಗಳಿಗೆ ತೊಂದರೆದಾಯಕ ವಾಸ್ತುಗಳು ಎಂದು ಹೇಳುತ್ತಾರೆ. ತೊಂದರೆದಾಯಕ ವಾಸ್ತುಗಳು ಆನಂದದಾಯಕವಾಗಲು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು

ವಾಸ್ತುವಿನಲ್ಲಿನ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರಗೊಳಿಸಿ, ಅಲ್ಲಿ ಉತ್ತಮ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುವಿನ ಶುದ್ಧೀಕರಣ ಮಾಡುವುದು. ಇತ್ತೀಚೆಗೆ, ವಾಸ್ತುವಿನಲ್ಲಿ ದೋಷಗಳು ಇರಬಾರದೆಂದು ವಾಸ್ತುಶಾಸ್ತ್ರದ ಬಗ್ಗೆ ಗಂಭೀರವಾಗಿ ವಿಚಾರ ಮಾಡುತ್ತಾರೆ. ಇದಕ್ಕಾಗಿ ವಾಸ್ತುದೋಷದಿಂದಾಗುವ ದುಷ್ಪರಿಣಾಮಗಳ ಕೆಲವು ಉದಾಹರಣೆಗಳು ಮತ್ತು ವಾಸ್ತುದೋಷಗಳನ್ನು ದೂರಗೊಳಿಸಲು ಪ್ರಚಲಿತವಿರುವ ಪದ್ಧತಿಗಳಿಗಿಂತ ಕಡಿಮೆ ಖರ್ಚಿನ ಮತ್ತು ಸುಲಭ ವಿಧಾನಗಳ ಮಾಹಿತಿಯನ್ನು ಮುಂದೆ ಕೊಟ್ಟಿದ್ದೇವೆ.

ವಾಸ್ತುಶಾಂತಿಯ ಮಹತ್ವ

ವಾಸ್ತುವಿನಲ್ಲಿ ವಾಸ್ತುಶಾಂತಿಯನ್ನು ಮಾಡುವುದರ ಮಹತ್ವ, ಅದರಿಂದಾಗುವ ಲಾಭಗಳು ಮತ್ತು ವಾಸ್ತುಶಾಂತಿಯನ್ನು ಮಾಡದಿದ್ದರೆ ಆಗುವ ತೊಂದರೆಗಳ ಬಗ್ಗೆ ಸನಾತನದ ಸಾಧಕಿಯಾದ ಸೌ.ಅಂಜಲೀ ಗಾಡಗೀಳರಿಗೆ ‘ಓರ್ವ ವಿದ್ವಾಂಸ’ರಿಂದ ಮತ್ತು ಸೌ. ಪಾಟೀಲ್ ಇವರಿಗೆ ‘ಬ್ರಹ್ಮತತ್ತ್ವ’ದಿಂದ ದೊರಕಿರುವ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?

ದೇವರಪೂಜೆಯ ನಂತರ ದೇವರಿಗೆ ಧೂಪ ತೋರಿಸುವ ಪದ್ಧತಿಯಿದೆ. ಧೂಪ ತೋರಿಸಿದರೆ ವಾಸ್ತುವಿನ ಶುದ್ಧಿಯಾಗುತ್ತದೆ. ದೇವರಿಗೆ ಸುಗಂಧಿತ ಧೂಪವು ಪ್ರಿಯವಾದ್ದರಿಂದ ಧೂಪ ತೋರಿಸಿದಾಗ ದೇವರು ಪ್ರಸನ್ನರಾಗುತ್ತಾರೆ. ಪ್ರಾತಃಕಾಲದಲ್ಲಿ ಧೂಪ ತೋರಿಸುವುದು ಸಾಧ್ಯವಾಗದಿದ್ದಲ್ಲಿ, ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದ ನಂತರವೂ ಧೂಪ ತೋರಿಸಬಹುದು.

ಧೂಪಕ್ಕಾಗಿ ಬೇಕಾಗುವ ಸಾಮಗ್ರಿಗಳು

ಎಂಟು-ಹತ್ತು ಇದ್ದಿಲು ಅಥವಾ ಎರಡು ಹಸುವಿನ ಬೆರಣಿಗಳು, ಬೆಂಕಿಯನ್ನು ಹಚ್ಚಲು ಧೂಪ ಪಾತ್ರೆ, ಇದ್ದಿಲನ್ನು ಉರಿಸಲು ಕರ್ಪೂರ ಅಥವಾ ತುಪ್ಪ, ಬೆಂಕಿಪೆಟ್ಟಿಗೆ, ಧೂಪ ಮತ್ತು ಕಾರ್ಡ್ ಬೋರ್ಡ್.

ಪ್ರತ್ಯಕ್ಷ ಕೃತಿ

ಧೂಪದ ಪಾತ್ರೆಯಲ್ಲಿ ಇದ್ದಿಲು ಅಥವಾ ಬೆರಣಿಯನ್ನು ಇಡಿರಿ. ಕರ್ಪೂರದ ಮಾಧ್ಯಮದಿಂದ ಅದನ್ನು ಉರಿಸಿರಿ. ಪ್ರಜ್ವಲಿತ ಬೆಂಕಿಯ ಮೇಲೆ ಧೂಪ ಹಾಕಿರಿ. ಈಗ ಧೂಪದ ಪಾತ್ರೆಯನ್ನು ವಾಸ್ತುವಿನ ಎಲ್ಲ ಕಕ್ಷೆಗಳಿಗೆ ಒಯ್ಯಿರಿ. ಆದರೆ ಗಮನದಲ್ಲಿಡಿರಿ, ಧೂಪವನ್ನು ಕೈಯಿಂದ ಹರಡಲೇಬೇಡಿ.

ಕೋಣೆಯಲ್ಲಿ ಧೂಪ ತೋರಿಸುವುದು

೧. ಧೂಪದ ಪಾತ್ರೆಯನ್ನು ಎಡಗೈಯಲ್ಲಿ ಹಿಡಿದುಕೊಳ್ಳಿರಿ.
೨. ಬಲಗೈಯಲ್ಲಿ ಬೀಸಣಿಕೆ ಹಿಡಿದು ಹೊರ ದಿಕ್ಕಿಗೆ ಬೀಸುತ್ತಾ ಹೊಗೆ ಹರಡಿರಿ.

ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ; ಆದರೆ ಪ್ರತಿದಿನ ಧೂಪ ತೋರಿಸುವುದು ಸಾಧ್ಯವಾಗದಿದ್ದರೆ ವಾರದಲ್ಲಿ ಒಮ್ಮೆಯಾದರೂ ಅವಶ್ಯವಾಗಿ ಧೂಪ ತೋರಿಸಿರಿ.

ಬೇವಿನ ಎಲೆ ಮತ್ತು ಧೂಪ ಅಥವಾ ಊದುಬತ್ತಿಯಿಂದ ವಾಸ್ತುಶುದ್ಧಿ ಹೇಗೆ ಮಾಡಬೇಕು ಎಂದು ಈ ವೀಡಿಯೋದಲ್ಲಿ ನೋಡಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ಪ್ರಕಟಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)

ಸಂಬಂಧಿತ ವಿಷಯಗಳು
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?

ಪ್ರತಿಯೊಬ್ಬರ ಜೀವನದಲ್ಲಿಯೂ ಅತೀಂದ್ರೀಯ ಶಕ್ತಿಗಳು ವಿಶೇಷ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆಧುನಿಕ ವಿಜ್ಞಾನವು ಸಂಶೋಧನೆಯನ್ನು ಪ್ರಾರಂಭಿಸಿದೆ. ಆದರೆ ನಮ್ಮ ಋಷಿ-ಮುನಿಗಳಿಗೆ ಈ ವಿಷಯವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ವ್ಯಕ್ತಿಯು ತಾನು ವಾಸ ಮಾಡುವ ಪರಿಸರ, ಮನೆ, ಉದ್ಯೋಗ ಮಾಡುವ ವಾಸ್ತು ಇವು ಅವನ ಮನಸ್ಸು ಮತ್ತು ಶರೀರದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆಯೂ ಅವರು ಆಳವಾದ ಸಂಶೋಧನೆಯನ್ನು ಮಾಡಿದ್ದರು. ಇದನ್ನು ನಾವು ಈಗ ವಾಸ್ತುಶಾಸ್ತ್ರ ಎಂಬ ಹೆಸರಿನಿಂದ ಕರೆಯುತ್ತೇವೆ. ನೂತನ ವಾಸ್ತುವನ್ನು ಕಟ್ಟುವಾಗ, ಭೂಖಂಡವನ್ನು ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ವಾಸ್ತುಶಾಸ್ತ್ರವು ಹೇಳಿರುವ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ವಾಸ್ತುಶಾಸ್ತ್ರ ಎಂದರೇನು?

ವಾತಾವರಣದಲ್ಲಿನ ಅನಿಷ್ಟಶಕ್ತಿಗಳಿಂದ ಮಾನವನ ಶರೀರ ಮತ್ತು ಶರೀರದಲ್ಲಿ ನಡೆಯುವ ಜೀವ-ರಾಸಾಯನಿಕ ಕ್ರಿಯೆಗಳ ಸಂರಕ್ಷಣೆಯಾಗಬೇಕೆಂದು ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಮಾನವನು ನೂತನ ವಾಸ್ತುವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಿದರೆ ನಿಶ್ಚಿತವಾಗಿಯೂ ಅವನಿಗೆ ಮನಃಶಾಂತಿ ಸಿಗುವುದು ಮತ್ತು ಸುಖ ಸಮೃದ್ಧಿಯು ಪ್ರಾಪ್ತವಾಗುವುದು. ಇಂತಹ ಅದ್ಭುತ ಶಾಸ್ತ್ರದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.