Showing posts with label ಸಾತ್ತ್ವಿಕ ಉತ್ಪಾದನೆಗಳು. Show all posts
Showing posts with label ಸಾತ್ತ್ವಿಕ ಉತ್ಪಾದನೆಗಳು. Show all posts

'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಕರ್ಪೂರ’ದ ಪುಡಿಯನ್ನು ಹಚ್ಚುವುದು ಅಥವಾ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುವುದು 
(ತತ್ತ್ವ : ತೇಜತತ್ತ್ವ)


ಅ. ‘ಸನಾತನ ಕರ್ಪೂರ’ದ ವೈಶಿಷ್ಟ್ಯಗಳು

೧. ‘ಸನಾತನ ಕರ್ಪೂರ’ವು ಭೀಮಸೇನಿ ಕರ್ಪೂರವಾಗಿದೆ. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ.
೨. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಕ್ಷಮತೆಯೂ ಹೆಚ್ಚಿರುತ್ತದೆ.

ಆ. ಉಪಯುಕ್ತತೆ /ಲಾಭ

೧. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಶ್ವಾಸಮಾರ್ಗದಲ್ಲಿನ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.
೨. ಕರ್ಪೂರದ ಸುಗಂಧವನ್ನು ತೆಗೆದುಕೊಂಡರೆ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗಿ ಬುದ್ಧಿಯ ತೀಕ್ಷ್ಣತೆ ಹೆಚ್ಚಾಗುತ್ತದೆ: ಕರ್ಪೂರದ ಸುಗಂಧದಿಂದ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಅದರಲ್ಲಿ ಆಧ್ಯಾತ್ಮಿಕ ಶಕ್ತಿಯು ಸಂಗ್ರಹವಾಗುವುದರಿಂದ ಅದರ ತೀಕ್ಷ್ಣತೆಯೂ ಹೆಚ್ಚಾಗುತ್ತದೆ. ಕರ್ಪೂರದ ಸುಗಂಧದಿಂದ ಸೇವೆಯಲ್ಲಿನ ಬುದ್ಧಿಯ ಅಡಚಣೆಯು ದೂರವಾಗುವುದರಿಂದ ಸೇವೆಯ ಪರಿಣಾಮವೂ ಹೆಚ್ಚಾಗುತ್ತದೆ.
೩. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ದೂಷಿತ ವಾಯು ನಾಶವಾಗಿ ಕಣ್ಣುಗಳು ಶಾಂತವಾಗಲು ಮತ್ತು ಮುಖಚರ್ಯೆ ಮತ್ತು ಮನಸ್ಸು ಪ್ರಸನ್ನವಾಗಲು ಸಹಾಯವಾಗುತ್ತದೆ.
೪. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ, ಕಣ್ಣುಗಳಿಗೆ ಮಸುಕಾಗಿ ಕಾಣಿಸುತ್ತಿದ್ದರೆ ದೃಷ್ಟಿಯು ಸ್ಪಷ್ಟವಾಗುತ್ತದೆ, ನಿದ್ರೆಯು ಪೂರ್ಣವಾಗಿದ್ದರೂ ಬರುವಂತಹ ನಿದ್ರೆಯು ದೂರವಾಗುತ್ತದೆ, ಮನಸ್ಸಿನ ನಿರಾಶೆ ದೂರವಾಗುತ್ತದೆ; ಇವೇ ಮುಂತಾದ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೧.೧೨.೨೦೧೦)
೫. ಸನಾತನದ ‘ಭೀಮಸೇನಿ ಕರ್ಪೂರ’ವು ದೃಷ್ಟಿಯನ್ನು ತೆಗೆಯಲೂ ಉಪಯುಕ್ತವಾಗಿದೆ.
(‘ಕರ್ಪೂರದಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು?’ ಈ ವಿಷಯದ ವಿವೇಚನೆಯನ್ನು ಸನಾತನ ನಿರ್ಮಿತ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ಇ. ಕರ್ಪೂರವನ್ನು ಹೇಗೆ ಉಪಯೋಗಿಸಬೇಕು?

೧. ಕರ್ಪೂರದ ಪುಡಿಯನ್ನು ಮುಖಕ್ಕೆ ಹಚ್ಚಿ ಅದರ ಪರಿಮಳವನ್ನೂ ತೆಗೆದುಕೊಳ್ಳಬೇಕು.
ಅ. ಚಿಟಿಕೆಯಷ್ಟು ಪುಡಿಯಾಗುವಷ್ಟು ಕರ್ಪೂರದ ತುಂಡನ್ನು ಕೈಯಲ್ಲಿ ತೆಗೆದುಕೊಂಡು ನಾಮಜಪ ಮಾಡುತ್ತಾ ಅದನ್ನು ಅಂಗೈಯಲ್ಲಿ ಪುಡಿ ಮಾಡಬೇಕು. ಕಣ್ಣುಗಳನ್ನು ಮುಚ್ಚಿ ಪುಡಿಯನ್ನು ಕಣ್ಣುಗಳೊಂದಿಗೆ ಇಡೀ ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಮುಖದ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ಕಡಿಮೆಯಾಗುತ್ತದೆ.
ಆ. ಈ ಪುಡಿಯನ್ನು ಆಜ್ಞಾಚಕ್ರದ ಮೇಲೆ (ಎರಡೂ ಹುಬ್ಬುಗಳ ನಡುವೆ) ಹೆಚ್ಚು ಪ್ರಮಾಣದಲ್ಲಿ ತಿಕ್ಕಬೇಕು. ಇದರಿಂದ ಆಜ್ಞಾಚಕ್ರ ಜಾಗೃತವಾಗಲು ಸಹಾಯವಾಗುತ್ತದೆ.
ಇ. ಉಳಿದ ಪುಡಿಯನ್ನು ಎರಡೂ ಅಂಗೈಗಳಿಗೆ ತಿಕ್ಕಬೇಕು. ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮೂಗಿನೊಂದಿಗೆ ಮುಖವನ್ನು ಮುಚ್ಚಿಕೊಳ್ಳಬೇಕು.
ಈ. ಎರಡೂ ಕೈಗಳ ಬೊಗಸೆಯಲ್ಲಿ ಕಣ್ಣುಗಳ ರೆಪ್ಪೆಗಳನ್ನು ೪-೫ ಬಾರಿ ಮುಚ್ಚುವುದು ತೆರೆಯುವುದು ಮಾಡಬೇಕು. ಬೊಗಸೆಯ ಟೊಳ್ಳಿನಿಂದ ದೀರ್ಘಶ್ವಾಸವನ್ನು ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಒಂದು ಸಲಕ್ಕೆ ೩-೪ ಬಾರಿ ಮಾಡಬೇಕು.

೨. ಇತರ ಉಪಯೋಗಗಳು
ಅ. ಖಾಲಿ ಡಬ್ಬಿಯಲ್ಲಿ ಕರ್ಪೂರದ ತುಂಡುಗಳನ್ನಿಟ್ಟು ಆ ಡಬ್ಬಿಯ ಟೊಳ್ಳಿನ ಸುಗಂಧವನ್ನು ಆಗಾಗ ತೆಗೆದುಕೊಳ್ಳಬೇಕು, ನಮ್ಮ ಮೇಲೆ ಸತತವಾಗಿ ಬರುವ ತ್ರಾಸದಾಯಕ ಶಕ್ತಿಯ ಆವರಣದೊಂದಿಗೆ ಹೋರಾಡಲು ಈ ಉಪಾಯವನ್ನು ನಡೆದಾಡುವಾಗ, ಇತರರೊಂದಿಗೆ ಚರ್ಚೆ ಮಾಡುವಾಗ, ಸಭೆ / ಸತ್ಸಂಗ ಇವುಗಳಲ್ಲಿಯೂ ಮಾಡಬಹುದು.
ಆ. ವೈದ್ಯಕೀಯ ಉಪಚಾರವನ್ನು ಮಾಡಿಯೂ ಶರೀರ ತುರಿಸುವುದು, ಶರೀರದ ಮೇಲೆ ಗುಳ್ಳೆ ಅಥವಾ ಪರಚಿದ ಗುರುತುಗಳು ಮೂಡುವುದು, ಶರೀರದ ಉಷ್ಣತೆ ಹೆಚ್ಚಾಗುವುದು, ಹಾಗೆಯೇ ತಲೆನೋವು, ಏನೂ ಹೊಳೆಯದಿರುವುದು ಮುಂತಾದ ತೊಂದರೆಯಾಗುತ್ತಿದ್ದಲ್ಲಿ ಆಜ್ಞಾಚಕ್ರದ ಮೇಲೆ ಅಥವಾ ಶಾರೀರಿಕ ತೊಂದರೆಯ ಅರಿವಾಗುತ್ತಿರುವ ಸ್ಥಳದ ಮೇಲೆ ‘ಸನಾತನದ ಕರ್ಪೂರ’ದ ತುಂಡನ್ನು ಹಚ್ಚಿಕೊಳ್ಳಬೇಕು. ಸಾಮಾನ್ಯವಾಗಿ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಆ ತುಂಡು ತಾನಾಗಿಯೇ ಅಂಟಿಕೊಳ್ಳುತ್ತದೆ ಮತ್ತು ತೊಂದರೆ ಕಡಿಮೆಯಾದ ನಂತರ ಕೆಳಗೆ ಬೀಳುತ್ತದೆ.
ಇ. ಶರೀರ ಅಥವಾ ತಲೆಗೆ ಎಣ್ಣೆಯಿಂದ ಮರ್ದನ (ಮಾಲೀಶ್) ಮಾಡುವ ಮೊದಲು ಒಂದು ಕೈಯಲ್ಲಿ ಕರ್ಪೂರದ ಸ್ವಲ್ಪ ಪುಡಿ ಮಾಡಬೇಕು; ಅದರಲ್ಲಿ ಎಣ್ಣೆ ಹಾಕಿ ಅನಂತರ ಮರ್ದನ (ಮಾಲೀಶ್) ಮಾಡಬೇಕು. ಇದರಿಂದ ಕರ್ಪೂರದಲ್ಲಿನ ಶಿವತತ್ತ್ವರೂಪೀ ಗಂಧದಿಂದ ನಮಗೆ ಅತ್ಯಧಿಕ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭ ಸಿಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೫.೧೧.೨೦೧೦)
ಈ. ರಾತ್ರಿ ಮಲಗುವಾಗ ಹಾಸಿಗೆಯ ಮೇಲೆ ಕರ್ಪೂರದ ಪುಡಿಯನ್ನು ಹರಡಬೇಕು

ಈ. ಅನುಭೂತಿ

೧. ‘ಸನಾತನ ಕರ್ಪೂರ’ದ ಸುಗಂಧ ತೆಗೆದುಕೊಂಡ ನಂತರ ಶೀತ (ನೆಗಡಿ) ದೂರವಾಗುವುದು : ೧೭.೧೦.೨೦೦೭ರಂದು ಬೆಳಗ್ಗಿನಿಂದ ನನಗೆ ನೆಗಡಿಯಿಂದ ತೊಂದರೆಯಾಗುತ್ತಿತ್ತು. ನಾನು ‘ಸನಾತನ ಕರ್ಪೂರ’ದ ತುಂಡನ್ನು ಕೈಯಲ್ಲಿ ತೆಗೆದುಕೊಂಡೆ. ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿ ಆ ಕರ್ಪೂರದ ಪುಡಿ ಮಾಡಿ ಅದರ ಸುಗಂಧವನ್ನು ತೆಗೆದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ನನ್ನ ನೆಗಡಿ ನಿಂತಿತು. - ಶ್ರೀ.ದತ್ತಾತ್ರೇಯ ಅಣ್ಣಪ್ಪ ಲೋಹಾರ, ಖಡಕೆವಾಡಾ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ.
೨. ಕರ್ಪೂರದ ಉಪಾಯ ಮಾಡಿದ ನಂತರ ಶರೀರ ತುರಿಸುವುದು ನಿಂತಿತು : ಒಂದು ಸಲ ನನಗೆ ಹಾಸಿಗೆಯ ಮೇಲೆ ಮಲಗಿದ ಕೂಡಲೆ ಶರೀರ ತುರಿಸಲು ಪ್ರಾರಂಭವಾಯಿತು. ನಾನು ‘ಸನಾತನ ಕರ್ಪೂರ’ದ ಪುಡಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರಾರ್ಥನೆಯನ್ನು ಮಾಡಿ ಶರೀರದ ಮೇಲೆ ಹಚ್ಚಿದೆ. ಕೂಡಲೇ ತುರಿಸುವುದು ನಿಂತಿತು. ಹೀಗೆ ಸತತವಾಗಿ ಮೂರು ದಿನ ಮಾಡಿದ ಮೇಲೆ ನಾಲ್ಕನೆಯ ದಿನದಿಂದ ತುರಿಸಲೇ ಇಲ್ಲ.
- ಕು.ವತ್ಸಲಾ ರೆವಂಡಕರ, ಮಾಝಗಾವ, ಮುಂಬೈ (ಜೂನ್ ೨೦೦೯)

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ,  ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಅತ್ತರು’ (ಸುಗಂಧದ್ರವ್ಯ) ಹಚ್ಚಿಕೊಂಡು ಅದರ ಸುಗಂಧ ತೆಗೆದುಕೊಳ್ಳುವುದು 
(ತತ್ತ್ವ : ಪೃಥ್ವಿ-ಆಪತತ್ತ್ವ)


ಅ. ಕಾರ್ಯ/ಉಪಯುಕ್ತತೆ

೧.ಶ್ವಾಸಮಾರ್ಗದ ಶುದ್ಧಿಯಾಗುತ್ತದೆ : ಶ್ವಾಸದೊಂದಿಗೆ ‘ಸನಾತನ ಅತ್ತರ’ನಲ್ಲಿರುವ ಸುಗಂಧವು ಶರೀರದೊಳಗೆ ಹೋಗಿ ಶ್ವಾಸಮಾರ್ಗವು ಚೈತನ್ಯದ ಸ್ತರದಲ್ಲಿ ಶುದ್ಧವಾಗುತ್ತದೆ. ಇದರಿಂದ ವಾತಾವರಣದಲ್ಲಿನ ರಜ-ತಮ ಕಣಗಳು, ನಕಾರಾತ್ಮಕ ವಿಚಾರ ಮತ್ತು ತ್ರಾಸದಾಯಕ ಶಕ್ತಿಯು ಶ್ವಾಸದ ಮಾರ್ಗದಿಂದ ಒಳಗೆ ಬರುವುದು ತಡೆಗಟ್ಟಲ್ಪಡುತ್ತದೆ.
೨.ಮನಸ್ಸಿನಲ್ಲಿನ ನಕಾರಾತ್ಮಕತೆಯನ್ನು ದೂರಗೊಳಿಸಲು ಮತ್ತು ಸೇವೆಯಲ್ಲಿ ಮನಸ್ಸನ್ನು ಪ್ರಸನ್ನವಾಗಿರಿಸಲು ‘ಸನಾತನ ಅತ್ತರಿನ’ ದೈವೀ ಸುಗಂಧವು ಉಪಯುಕ್ತವಾಗಿದೆ.
೩.‘ಸನಾತನ ಅತ್ತರ’ ಇದರಲ್ಲಿನ ಸುವಾಸನೆಯ ಸಹವಾಸದಲ್ಲಿ ಮಾಡಿದ ಕರ್ಮವು ಸಾತ್ತ್ವಿಕವಾಗುತ್ತದೆ.

ಆ. ‘ಸನಾತನ ಅತ್ತರ’ನ್ನು ಹೇಗೆ ಉಪಯೋಗಿಸಬೇಕು?

೧. ಸನಾತನ ಅತ್ತರನ್ನು ಕೈಗೆ ಹಚ್ಚಿಕೊಂಡು ಅದರ ಪರಿಮಳವನ್ನು ದೀರ್ಘ ಶ್ವಾಸದೊಂದಿಗೆ ತೆಗೆದುಕೊಳ್ಳಬೇಕು.
೨. ಹತ್ತಿಯ ಚಿಕ್ಕ ಉಂಡೆಗೆ ಅತ್ತರು ಹಚ್ಚಿ ಆ ಉಂಡೆಯನ್ನು ಕಿವಿಯ ಹಾಲೆಯ ಮೇಲಿನ ಭಾಗದಲ್ಲಿ ಇಡಬೇಕು ಮತ್ತು ಆಗಾಗ ಆ ಉಂಡೆಯಿಂದ ಕೈಗೆ ಅತ್ತರು ಹಚ್ಚಿಕೊಂಡು ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೩. ಕರವಸ್ತ್ರಕ್ಕೆ (ರುಮಾಲು) ಸ್ವಲ್ಪ ಅತ್ತರು ಹಚ್ಚಿ ಆಗಾಗ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೪. ಶರೀರಕ್ಕೆ ದುರ್ಗಂಧ ಬರುತ್ತಿದ್ದಲ್ಲಿ ಎಣ್ಣೆಯಲ್ಲಿ ಒಂದು ಹನಿ ಸನಾತನದ ‘ಚಮೇಲಿ’ ಅತ್ತರು ಹಾಕಿ ಅದರ ಮೂಲಕ ಮರ್ದನ (ಮಾಲಿಶ್) ಮಾಡಿದರೆ ಶರೀರದ ಆಯಾ ಭಾಗದಲ್ಲಿನ ದುರ್ಗಂಧಯುಕ್ತ ವಾಯು ನಾಶವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೩.೪.೨೦೦೯)

ಇ. ಲೋಲಕದ ಮೂಲಕ ದೃಢಪಟ್ಟಿರುವ ‘ಸನಾತನ ಅತ್ತರ’ನ ಸಾತ್ತ್ವಿಕತೆ : 

ಅಂತರರಾಷ್ಟ್ರೀಯ ಸ್ತರದಲ್ಲಿ ಮಾನ್ಯತೆ ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತುಗಳು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿನ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿದ್ದಲ್ಲಿ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಪೇಟೆಯಲ್ಲಿ (ಮಾರುಕಟ್ಟೆ) ನ ಅತ್ತರು ಮತ್ತು ‘ಸನಾತನ ಅತ್ತರು’ ಇವುಗಳ ಬಾಟಲಿಗಳ ಮೇಲೆ ಪ್ರತ್ಯೇಕವಾಗಿ ಲೋಲಕವನ್ನು ಹಿಡಿದಾಗ ನನಗೆ ಮುಂದಿನಂತೆ ಅರಿವಾಯಿತು.

ಇ೧. ಪೇಟೆಯಲ್ಲಿನ ಅತ್ತರು : ಇದರ ಮೇಲೆ ಲೋಲಕವು ನಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ವಿರುದ್ಧ ದಿಕ್ಕಿನಲ್ಲಿ) ತಿರುಗಿತು.
ಇ೨. ಸನಾತನ ಅತ್ತರು : ಇದರ ಮೇಲೆ ಲೋಲಕವು ಸಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ದಿಕ್ಕಿನಲ್ಲಿ) ತಿರುಗಿತು. ಇದರಿಂದ ‘ಸನಾತನದ ಅತ್ತರಿನಲ್ಲಿ’ ಚೈತನ್ಯವಿದೆ ಎಂದು ಸ್ಪಷ್ಟವಾಗುತ್ತದೆ.
- ಶ್ರೀ.ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ (೨೦೦೯)

ಈ. ಅನುಭೂತಿ - ಕುತ್ತಿಗೆಯ ನರ ನೋಯುವುದು ಮತ್ತು ತಲೆ ಜೋಮುಗಟ್ಟಿದಂತಾಗುವುದು, ಔಷಧಿಗಳಿಂದ ಕಡಿಮೆಯಾಗದೇ, ಸನಾತನದ ಅತ್ತರು ಹಚ್ಚಿದ ಒಂದು ಗಂಟೆಯಲ್ಲಿ ಕಡಿಮೆಯಾಗುವುದು : ಬಹಳಷ್ಟು ದಿನಗಳಿಂದ ನನ್ನ ಕುತ್ತಿಗೆಯ ಬಲಬದಿಯ ನರವು ಬಹಳ ನೋಯುತ್ತಿತ್ತು ಮತ್ತು ತಲೆಯೂ ಜೋಮುಗಟ್ಟುತ್ತಿತ್ತು. ವೈದ್ಯಕೀಯ ಔಷಧೋಪಚಾರ ಮಾಡಿಯೂ ನೋವು ಕಡಿಮೆಯಾಗುತ್ತಿರಲಿಲ್ಲ. ಅನಂತರ ಸನಾತನದ ಓರ್ವ ಸಾಧಕರು ನನಗೆ ಸನಾತನದ ‘ಚಂದನ’ ಅತ್ತರನ್ನು ಕುತ್ತಿಗೆಗೆ ಹಚ್ಚಲು ಹೇಳಿದರು. ನಾನು ಹಾಗೆ ಮಾಡಿದ ಒಂದು ಗಂಟೆಯೊಳಗೆ ಕುತ್ತಿಗೆಯ ನರದ ನೋವು ಮತ್ತು ತಲೆ ಜೋಮುಗಟ್ಟುವುದು ಸಂಪೂರ್ಣ ನಿಂತು ಹೋಯಿತು. - ಶ್ರೀ.ಅಮೋಲ ಪಾಟೀಲ, ಸಾಂಗ್ಲಿ.

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
"ಸನಾತನ ಅತ್ತರ್"ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ


ಅ. ಸನಾತನದ ಉತ್ಪಾದನೆಗಳಲ್ಲಿ ದೈವೀ ತತ್ತ್ವವಿರುವುದರ ಕಾರಣಗಳು
೧. ಪರಾತ್ಪರಗುರುಗಳಾದ ಪ.ಪೂ.ಡಾ.ಜಯಂತ ಆಠವಲೆಯವರು ಸಾತ್ತ್ವಿಕ ಉತ್ಪಾದನೆಗಳ ನಿರ್ಮಿತಿಯ ಸಂಕಲ್ಪವನ್ನು ಮಾಡಿದ್ದಾರೆ. ಅವರ ಸಂಕಲ್ಪಶಕ್ತಿಯಿಂದ ಈ ಉತ್ಪಾದನೆಗಳಲ್ಲಿನ ದೈವೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ.
೨. ಬಹಳಷ್ಟು ಉತ್ಪಾದನೆಗಳಲ್ಲಿ ಗೋಮೂತ್ರ ಮತ್ತು ಯಜ್ಞದ ವಿಭೂತಿಯಂತಹ ಸಾತ್ತ್ವಿಕ ಘಟಕಗಳನ್ನು ಉಪಯೋಗಿಸಲಾಗಿದೆ.
೩. ಸನಾತನ ಊದುಬತ್ತಿ, ಅತ್ತರು ಮುಂತಾದ ಉತ್ಪಾದನೆಗಳಲ್ಲಿನ ಸುಗಂಧವು ಯಾವುದಾದರೊಂದು ದೇವತೆಯ ತತ್ತ್ವವನ್ನು ಆಕರ್ಷಿಸುವಂತಹದ್ದಾಗಿದೆ.
೪. ಹೆಚ್ಚಿನ ಉತ್ಪಾದನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲಾಗಿದೆ ಮತ್ತು ಕೆಲವು ವಸ್ತುಗಳಲ್ಲಿ ಆವಶ್ಯಕತೆಗನುಸಾರ ರಾಸಾಯನಿಕಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ. ನೈಸರ್ಗಿಕ ವಸ್ತುಗಳಲ್ಲಿ ದೈವೀ ತತ್ತ್ವಗಳ ಪ್ರಮಾಣವು ಹೆಚ್ಚಿರುತ್ತದೆ.

ಆ. ಓರ್ವ ತಜ್ಞರು ಸನಾತನದ ಸಾತ್ತ್ವಿಕ ಉತ್ಪಾದನೆಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ: ಬೆಂಗಳೂರಿನಲ್ಲಿ ಶ್ರೀ.ಸುಬ್ರಹ್ಮಣ್ಯಮ್ ಅಯ್ಯರ್ ಎಂಬ ಹೆಸರಿನ ಓರ್ವ ‘ಹೀಲಿಂಗ್ ಮಾಸ್ಟರ್’ ಇದ್ದಾರೆ. ಸನಾತನದ ಸಾಧಕಿ ಸೌ.ಶೈಲಜಾ ಫಡ್ಕೆಯವರು ಅವರಿಗೆ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಮಹತ್ವ ಮತ್ತು ‘ಅವುಗಳನ್ನು ಹೇಗೆ ಉಪಯೋಗಿಸಬೇಕು’ ಎಂಬುದನ್ನು ಹೇಳಿದರು. ಶ್ರೀ.ಅಯ್ಯರ್‌ರವರು ‘ಸನಾತನ ಕರ್ಪೂರ’ ಮತ್ತು ‘ಸನಾತನ ಉದುಬತ್ತಿ’ಗಳನ್ನು ಕೂಡಲೇ ಉಪಯೋಗಿಸಲು ಪ್ರಾರಂಭಿಸಿದರು. ಅನಂತರ ಅವರು ಸೌ.ಫಡ್ಕೆಯವರಿಗೆ, ‘ಈ ವಸ್ತುಗಳಿಂದ ಬಹಳ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ನಾನು ಇತರರಿಗೆ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ನನ್ನ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಆವರಣವನ್ನು ಸನಾತನದ ಊದುಬತ್ತಿಯಿಂದ ತೆಗೆಯುತ್ತೇನೆ, ಹಾಗೆಯೇ ಸನಾತನದ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ಈಗ ಅವರು ಪ್ರತಿವಾರ ಸನಾತನ ನಿರ್ಮಿತ ಊದುಬತ್ತಿ, ಕರ್ಪೂರ ಮತ್ತು ಸನಾತನದ ಇತರ ಉತ್ಪಾದನೆಗಳನ್ನು ಖರೀದಿಸುತ್ತಾರೆ ಮತ್ತು ಅವರಲ್ಲಿಗೆ ಬರುವ ರೋಗಿಗಳಿಗೂ ವಿತರಿಸುತ್ತಾರೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು. (೪.೧೧.೨೦೧೧)

ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಗಮನದಲ್ಲಿಡಬೇಕಾದ ಸಾಮಾನ್ಯ ಸೂಚನೆಗಳು

ಅ. ಆಧ್ಯಾತ್ಮಿಕ ಉಪಾಯದ ಆರಂಭದಲ್ಲಿ ಪ್ರಾರ್ಥನೆ, ಉಪಾಯವನ್ನು ಮಾಡುವಾಗ ನಾಮಜಪ ಮತ್ತು ಉಪಾಯ ಮುಗಿದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು

ಅ೧. ಪ್ರಾರ್ಥನೆ ಮಾಡುವುದು
ಅ೧ಅ. ಪ್ರಾರ್ಥನೆ : ಆಧ್ಯಾತ್ಮಿಕ ಉಪಾಯವನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು, ‘ಹೇ ದೇವತೆಯೇ, ನಿನ್ನ ಕೃಪೆಯಿಂದ ಈ ವಸ್ತುವಿನ ಮೂಲಕ (ವಸ್ತು ಇದ್ದಲ್ಲಿ ಅದನ್ನು ಉಲ್ಲೇಖಿಸಬೇಕು) ನನ್ನ ಮೇಲೆ (ತಮ್ಮ ಹೆಸರು ಹೇಳಬೇಕು) ಹೆಚ್ಚೆಚ್ಚು ಆಧ್ಯಾತ್ಮಿಕ ಉಪಾಯವಾಗಿ ನನ್ನ ಆಧ್ಯಾತ್ಮಿಕ ತೊಂದರೆಗಳು ಬೇಗನೇ ನಾಶವಾಗಲಿ.’
ಆಧ್ಯಾತ್ಮಿಕ ಉಪಾಯ ನಡೆಯುತ್ತಿರುವಾಗ ಆಗಾಗ ಪ್ರಾರ್ಥನೆ ಮಾಡಬೇಕು.

ಅ೧ಆ. ವಾಸ್ತುಶುದ್ಧಿ ಮತ್ತು ವಾಹನಶುದ್ಧಿಗಾಗಿ ಮಾಡಬೇಕಾದ ಪ್ರಾರ್ಥನೆ : ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ‘ಹೇ ದೇವತೆ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ತಮ್ಮ ಹೆಸರನ್ನು ಹೇಳಬೇಕು) ರಕ್ಷಾ ಕವಚ ನಿರ್ಮಾಣವಾಗಲಿ, ಹಾಗೆಯೇ ಈ ವಾಸ್ತುವಿನಲ್ಲಿರುವ / ವಾಹನದಲ್ಲಿರುವ ಕೆಟ್ಟ ಶಕ್ತಿಗಳ ಅಸ್ತಿತ್ವ ಮತ್ತು ಕೆಟ್ಟ ಸ್ಪಂದನಗಳು ನಾಶವಾಗಲಿ’.
ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಮಾಡುವಾಗಲೂ ಮಧ್ಯಮಧ್ಯದಲ್ಲಿ ಪ್ರಾರ್ಥನೆ ಮಾಡಬೇಕು.
ಅ೨. ನಾಮಜಪ ಮಾಡುವುದು: ಉಪಾಯವನ್ನು ಮಾಡುವಾಗ ಮನಸ್ಸಿನಲ್ಲಿ ಅಥವಾ ದೊಡ್ಡ ಧ್ವನಿಯಲ್ಲಿ ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಅ೨ಅ. ವಾಸ್ತುಶುದ್ಧಿಯನ್ನು ಮಾಡುವುದರ ಮೊದಲು ೧೫ ನಿಮಿಷ ಶ್ರೀ ಗಣೇಶನ ಅಥವಾ ಉಪಾಸ್ಯದೇವತೆಯ ನಾಮಜಪ ಮಾಡುವುದು ವಿಶೇಷ ಲಾಭದಾಯಕವಾಗಿದೆ.

ಅ೩. ಕೃತಜ್ಞತೆಯನ್ನು ವ್ಯಕ್ತ ಪಡಿಸುವುದು : ಉಪಾಯ ಪೂರ್ಣವಾದ ನಂತರ ಉಪಾಸ್ಯದೇವತೆ ಮತ್ತು ಉಪಾಯಕ್ಕೆ ಸಹಾಯಕವಾದಂತಹ ವಸ್ತುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು.

ಆ.ಉಪಾಯಗಳ ಬಗ್ಗೆ ಮನಸ್ಸಿನಲ್ಲಿ ಭಾವವಿರಬೇಕು!
೧. ದೇವರ ಕೃಪೆಯಿಂದ ನನಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಅವಕಾಶ ಲಭಿಸಿ ನನ್ನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತಿವೆ ಎಂಬ ಭಾವವಿರಬೇಕು.
೨. ಉಪಾಯಗಳ ವಸ್ತುಗಳ ಬಗ್ಗೆಯೂ ಭಾವವಿರಬೇಕು, ಉದಾ. ‘ಸನಾತನ ಊದುಬತ್ತಿ’ ಎಂದರೆ ‘ದೇವರು ಕಳುಹಿಸಿದ ರಕ್ಷಕ’ವಾಗಿದೆ ಅಥವಾ ‘ಸನಾತನದ ಅತ್ತರಿನ’ ಸುಗಂಧ ತೆಗೆದುಕೊಳ್ಳುವಾಗ ‘ಶ್ರೀ ದುರ್ಗಾದೇವಿಯ ಚರಣಗಳಿಗೆ ಅರ್ಪಿಸಿದ ಹೂವುಗಳ ಸುವಾಸನೆಯನ್ನು ಆಘ್ರಾಣಿಸುತ್ತಿದ್ದೇನೆ’ ಎಂಬ ಭಾವವಿರಬೇಕು.

ಇ.ಆಧ್ಯಾತ್ಮಿಕ ತೊಂದರೆಗಳ ತೀವ್ರತೆಗನುಸಾರ ಉಪಾಯಗಳನ್ನು ಮಾಡಬೇಕು! : ‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?' ಎಂಬುದರಲ್ಲಿ ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ಅವುಗಳಿಂದ ಸಾಧಾರಣ ನಮಗಿರುವ ತೊಂದರೆಗಳ ಅಂದಾಜು ಮಾಡಬಹುದು. ತೊಂದರೆಗಳ ತೀವ್ರತೆಗನುಸಾರ ಆಧ್ಯಾತ್ಮಿಕ ಉಪಾಯಗಳ ವಿಧ ಮತ್ತು ಉಪಾಯಗಳ ಪುನರಾವರ್ತನೆಯನ್ನು ಹೆಚ್ಚಿಸಬೇಕು.

ಈ. ಹುಣ್ಣಿಮೆ ಮತ್ತು ಅಮಾವಾಸ್ಯೆ ಈ ತಿಥಿಗಳಿಗೆ, ಹಾಗೆಯೇ ಈ ತಿಥಿಗಳ ಎರಡು ದಿನ ಮೊದಲು ಹಾಗೂ ಎರಡು ದಿನಗಳ ನಂತರ ಉಪಾಯಗಳನ್ನು ಹೆಚ್ಚಿಸುವುದರೊಂದಿಗೆ ಪ್ರಾರ್ಥನೆ, ನಾಮಜಪ ಮುಂತಾದ ಸಾಧನೆಗಳನ್ನೂ ಹೆಚ್ಚೆಚ್ಚು ಮಾಡಬೇಕು!

ಉ. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಕಾಣಿಸದಿದ್ದರೂ, ಕಡಿಮೆ ಪ್ರಮಾಣದಲ್ಲಾದರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲೇಬೇಕು!

ಊ. ಆಧ್ಯಾತ್ಮಿಕ ಉಪಾಯ ಮಾಡುವಾಗ ‘ಕೆಲವೊಮ್ಮೆ ಏನಾದರೊಂದು ತೊಂದರೆಯಾಗುವುದು’ ಸಹ ಉಪಾಯದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಬೇಕು!
ಊ೧. ಆಧ್ಯಾತ್ಮಿಕ ಉಪಾಯವೆಂದರೆ ಒಂದು ರೀತಿಯಲ್ಲಿ ಕೆಟ್ಟ ಶಕ್ತಿಗಳ ವಿರುದ್ಧದ ಸೂಕ್ಷ್ಮದಲ್ಲಿನ ಯುದ್ಧವೇ ಆಗಿದೆ!
ಊ೨. ಕೆಟ್ಟ ಶಕ್ತಿಗಳ ವಿರುದ್ಧದ ಯುದ್ಧದಿಂದ ವ್ಯಕ್ತಿಯ ಶರೀರ ಮತ್ತು ಮನಸ್ಸಿನ ಮೇಲಾಗುವ ಪರಿಣಾಮಗಳ ಕೆಲವು ಉದಾಹರಣೆಗಳು : ವ್ಯಕ್ತಿಗೆ ಆರಂಭದಲ್ಲಿ ಕೆಲವು ಸಮಯ / ಕೆಲವು ದಿನ ಅಸ್ವಸ್ಥವೆನಿಸುವುದು, ತಲೆ ಭಾರವಾಗುವುದು, ಆಯಾಸಗೊಂಡಂತಾಗುವುದು, ಉಪಾಯ ಮಾಡುವಾಗ ಸತತವಾಗಿ ತೇಗು / ಆಕಳಿಕೆಗಳು ಬರುವುದು ಮುಂತಾದ ತೊಂದರೆಗಳಾಗಬಹುದು. ಇಂತಹ ಸಮಯದಲ್ಲಿ ಹೆದರಬಾರದು. ಏಕೆಂದರೆ ಇವು ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆಗಳ ಮೇಲೆ ಉಪಾಯವಾಗುತ್ತಿರುವುದರ ಲಕ್ಷಣವಾಗಿವೆ.

ಊ೩. ಉಪಾಯಗಳನ್ನು ಮಾಡುವಾಗ ತೊಂದರೆಯಾದರೆ ಅಥವಾ ಅಡಚಣೆಗಳು ಬಂದರೆ ಏನು ಮಾಡಬೇಕು?
ಅ. ಹೇಗೆ ಶರೀರದಲ್ಲಿನ ರೋಗಜಂತುಗಳನ್ನು ನಾಶಗೊಳಿಸಲು ‘ಇಂಜೆಕ್ಷನ್’ ಚುಚ್ಚಿಕೊಳ್ಳುವಾಗ ನಾವು ವೇದನೆಯನ್ನು ಸಹಿಸುತ್ತೇವೆಯೋ, ಹಾಗೆಯೇ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಉಪಾಯಗಳ ಪರಿಣಾಮವೆಂದು ಸ್ವಲ್ಪ ತೊಂದರೆಯಾದರೆ ಅದನ್ನೂ ಸಹಿಸಬೇಕು. ಹೀಗೆ ತೊಂದರೆಗಳಾಗುತ್ತಿದ್ದಲ್ಲಿ ಅಥವಾ ಅಡಚಣೆಗಳು ಉಂಟಾದಲ್ಲಿ ಉಪಾಯಗಳನ್ನು ಜಿಗುಟುತನದಿಂದ ಮಾಡಬೇಕು. ದೃಢನಿಶ್ಚಯದಿಂದ ಉಪಾಯಗಳನ್ನು ಮಾಡುತ್ತಾ ಹೋದರೆ ನಿಧಾನವಾಗಿ ನಮಗಾಗುವ ಸೂಕ್ಷ್ಮದಲ್ಲಿನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗತೊಡಗುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳ ಮೇಲೆ ವಿಜಯ ಸಾಧಿಸುವುದು ಸುಲಭವಾಗುತ್ತದೆ.
ಆ. ಯಾವುದಾದರೊಂದು ಉಪಾಯವನ್ನು ಮಾಡುವಾಗ ಉಪಾಯದ ಪರಿಣಾಮವೆಂದು ಅಸಹನೀಯ ತೊಂದರೆಯಾಗುತ್ತಿದ್ದಲ್ಲಿ (ಉದಾ. ತಲೆ ತುಂಬಾ ನೋಯುತ್ತಿದ್ದಲ್ಲಿ) ಸ್ವಲ್ಪ ಹೊತ್ತು ಆ ಉಪಾಯವನ್ನು ಮಾಡಬಾರದು. ತೊಂದರೆ ಕಡಿಮೆಯಾದ ನಂತರ ಮತ್ತೊಮ್ಮೆ ಉಪಾಯ ಮಾಡಿ ನೋಡಬೇಕು. ಆ ಉಪಾಯದಿಂದ ತೊಂದರೆಯು ಹಾಗೆಯೇ ಆಗುತ್ತಿದ್ದರೆ, ಇತರ ಯಾವುದಾದರೊಂದು ಉಪಾಯ ಮಾಡಿ ನೋಡಬೇಕು. ಪ್ರತಿಯೊಂದು ಉಪಾಯದ ಸಮಯದಲ್ಲಿ ತೀವ್ರ ತೊಂದರೆಯಾಗುತ್ತಿದ್ದಲ್ಲಿ ಅದರ ಬಗ್ಗೆ ತಿಳಿದವರಿಗೆ ಅಥವಾ ಸಂತರನ್ನು ಕೇಳಬೇಕು.

ಸೂಚನೆ : ಸನಾತನದ ಸಾತ್ತ್ವಿಕ ಉತ್ಪಾದನೆಗಳಿಂದ ಆಧ್ಯಾತ್ಮಿಕ ಉಪಾಯವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ತಮ್ಮ ಸಮೀಪದ ಸನಾತನದ ಸತ್ಸಂಗವನ್ನು ಅಥವಾ ಸನಾತನದ ಸಾಧಕರನ್ನು ಸಂಪರ್ಕಿಸಿರಿ.

(ವಿವರವಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಸಂಬಂಧಿತ ಲೇಖನಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
‘ದೃಷ್ಟಿ ತಗಲುವುದು’ ಎಂದರೇನು?ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
Dharma Granth

ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ‘ಚಿತ್ರ’ ಮತ್ತು ‘ನಾಮಪಟ್ಟಿ’

ಸನಾತನ-ನಿರ್ಮಿತ ‘ಸಾತ್ತ್ವಿಕ ನಾಮಪಟ್ಟಿ’: ಅಕ್ಷರಗಳು ಸಾತ್ತ್ವಿಕವಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅವುಗಳ ಸುತ್ತಲೂ ದೇವತೆಯ ತತ್ತ್ವಕ್ಕೆ ಅನುರೂಪವಾಗಿರುವ ಚೌಕಟ್ಟುಗಳಿಂದ ಕೂಡಿರುವ ಆಯಾ ದೇವತೆಯ ನಾಮಪಟ್ಟಿಗಳನ್ನು ಸನಾತನವು ತಯಾರಿಸುತ್ತದೆ. ಈ ನಾಮಪಟ್ಟಿಗಳು ಆಯಾ ದೇವತೆಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತವೆ ಮತ್ತು ಪ್ರಕ್ಷೇಪಿಸುತ್ತವೆ. ಸನಾತನವು ಇಷ್ಟರವರೆಗೆ ವಿವಿಧ ದೇವತೆಗಳ ಒಟ್ಟು 80ಕ್ಕಿಂತ ಹೆಚ್ಚು ನಾಮಪಟ್ಟಿಗಳನ್ನು ತಯಾರಿಸಿದೆ.


ದೇವತೆಗಳ ನಾಮಪಟ್ಟಿಗಳಿಂದಾಗುವ ಲಾಭಗಳು 

1. ದೇವತೆಗಳ ನಾಮಪಟ್ಟಿಗಳನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ನಾವು ಕೆಲಸ ಮಾಡುವ ಕಡೆ ಅಥವಾ ನಾವು ಓಡಾಡುವಲ್ಲಿ ಕಣ್ಣುಗಳೆದುರು ಕಾಣಿಸುವಂತೆ ಹಾಕುವುದರಿಂದ ನಮಗೆ ಆಯಾ ದೇವತೆಯ ನೆನಪಾಗುತ್ತದೆ ಮತ್ತು ಇದರಿಂದ ಆ ದೇವರ ನಾಮಜಪ ಮಾಡಲು ಸುಲಭವಾಗುತ್ತದೆ.

2. ಮನೆಯಲ್ಲಿ ನಾಲ್ಕೂ ದಿಕ್ಕಿನಲ್ಲಿ ವಿಶಿಷ್ಟ ದಿಕ್ಕಿನಲ್ಲಿ ವಿಶಿಷ್ಟ ದೇವತೆಗಳ ನಾಮಪಟ್ಟಿಗಳನ್ನು ಹಾಕುವುದರಿಂದ ವಾಸ್ತುಶುದ್ಧಿಯಾಗುತ್ತದೆ. ಇದರ ಬಗ್ಗೆ ವಿವರವಾಗಿ ಓದಿ.

3. ರಾತ್ರಿ ಮಲಗುವಾಗ ಶ್ರೀ ಗಣಪತಿ ಮತ್ತು ಶ್ರೀಕೃಷ್ಣನ ನಾಮಜಪದ ಮಂಡಲವನ್ನು ಹಾಕಿ ಮಲಗುವುದರಿಂದ ನಿದ್ರೆಯ ವಿಕಾರಗಳು, ಉದಾ. ನಿದ್ರೆಯಲ್ಲಿ ಭಯಾನಕ ಕನಸುಗಳು ಬೀಳುವುದು, ಕೂಗಾಡುವುದು, ಸುತ್ತಮುತ್ತಲೂ ಯಾರಾದರೂ ಇದ್ದಾರೆ ಎಂದೆನಿಸುವುದು, ನೆರಳು ಕಾಣಿಸುವುದು ಮುಂತಾದ ಅನೇಕ ತೊಂದರೆಗಳು ನಾಶವಾಗುತ್ತವೆ.

ಸನಾತನ ಸಂಸ್ಥೆಯು ದೇವತೆಗಳ ಚಿತ್ರ ಅಥವಾ ನಾಮಪಟ್ಟಿಗಳನ್ನು ಹೇಗೆ ತಯಾರಿಸಿದೆ?

ಪ್ರತಿಯೊಂದು ದೇವತೆಯು ಒಂದು ವಿಶಿಷ್ಟ ತತ್ತ್ವವಾಗಿದೆ. ದೇವತೆಯ ದ್ವಿಮಿತಿಯ ರೂಪ (ಚಿತ್ರ) ಅಥವಾ ತ್ರಿಮಿತಿಯ ರೂಪ (ಮೂರ್ತಿ) ಆ ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೊಂದಾಣಿಕೆಯಾಗುತ್ತದೆಯೋ, ಅಷ್ಟು ಆ ದೇವತೆಯ ತತ್ತ್ವವು ಹೆಚ್ಚಿಗೆ ಆಕರ್ಷಿಸುತ್ತದೆ. ದೇವತೆಯ ತತ್ತ್ವವು ರೂಪದಲ್ಲಿ ಎಷ್ಟು ಹೆಚ್ಚಿಗೆ ಇರುತ್ತದೆಯೋ, ಅಷ್ಟು ಭಕ್ತಿಭಾವವು ಪೂಜೆ ಮಾಡುವವರಲ್ಲಿ ಬೇಗನೇ ಜಾಗೃತವಾಗಲು ಸಹಾಯವಾಗುತ್ತದೆ. ಹಾಗೆಯೇ ಇಂತಹ ರೂಪದಿಂದ ದೇವತೆಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವುದರಿಂದ ವಾತಾವರಣವೂ ಸಾತ್ತ್ವಿಕವಾಗುತ್ತದೆ. ಸನಾತನ ಸಂಸ್ಥೆಯ ಸಾಧಕರು ಅಧ್ಯಾತ್ಮಶಾಸ್ತ್ರಕ್ಕನುಸಾರ, ಪ.ಪೂ.ಡಾ.ಜಯಂತ ಬಾಳಾಜಿ ಆಠವಲೆ (ಸಂಕಲನಕಾರರ) ಯವರ ಮಾರ್ಗದರ್ಶನದಡಿಯಲ್ಲಿ ಸೂಕ್ಷ್ಮ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಸಾತ್ತ್ವಿಕ ಮತ್ತು ಆಯಾಯ ದೇವತೆಯ ಹೆಚ್ಚೆಚ್ಚು ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿತಗೊಳಿಸುವಂತಹ ಚಿತ್ರಗಳು, ಮೂರ್ತಿ ಮತ್ತು ನಾಮಪಟ್ಟಿಗಳನ್ನು ನಿರ್ಮಿಸುತ್ತಾರೆ. (ಶಿವ, ಹನುಮಂತ (ಮಾರುತಿ), ಶ್ರೀಕೃಷ್ಣ, ಶ್ರೀರಾಮ, ದತ್ತ, ಗಣಪತಿ ಶ್ರೀಲಕ್ಷ್ಮೀ ಮತ್ತು ಶ್ರೀ ದುರ್ಗಾದೇವಿ ಈ ದೇವತೆಗಳ ಬೇರೆಬೇರೆ ಆಕಾರದಲ್ಲಿನ ಸಾತ್ತ್ವಿಕ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ಸನಾತನವು ತಯಾರಿಸಿದೆ.)


(ಇಲ್ಲಿ ನೀಡಿದ ದತ್ತನ ಸಾತ್ತ್ವಿಕ ಚಿತ್ರವನ್ನು ಸನಾತನ ಸಂಸ್ಥೆಯು ನಿರ್ಮಿಸಿದೆ. ಈ ಚಿತ್ರದಲ್ಲಿ ದತ್ತತತ್ತ್ವವು ಶೇ. 27.5 ರಷ್ಟಿದೆ. ಇತರೆಡೆಗಳಲ್ಲಿ ಸಿಗುವ ದತ್ತನ ಚಿತ್ರದಲ್ಲಿ ಹೆಚ್ಚೆಂದರೆ 1-2% ರಷ್ಟೇ ಸಾತ್ತ್ವಿಕತೆಯಿರುತ್ತದೆ.)

‘ಸನಾತನ ಪಂಚಾಂಗ 2013’ (ಜನರಿಗೆ ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಕೃತಿಶೀಲಗೊಳಿಸುವ ಪಂಚಾಂಗ)

ಉದ್ದೇಶ :
ಜನರು ದಿನದರ್ಶಿಕೆಯನ್ನು ಕೇವಲ ದಿನವನ್ನು ನೋಡಲು ಬಳಸುತ್ತಾರೆ. ಆದರೆ ಸನಾತನ ಪಂಚಾಂಗದ ವೈಶಿಷ್ಟ್ಯವೆಂದರೆ ಅದು ಕೇವಲ ಪಂಚಾಂಗ ಮಾತ್ರವಲ್ಲ ಹಿಂದೂಗಳಿಗೆ ಧರ್ಮಾಚರಣೆಯ ಬಗ್ಗೆ ತಿಳಿಸುವ ಕೈಗನ್ನಡಿಯಾಗಿದೆ. ಅಂದರೆ ಇದು ಕೇವಲ ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗವಾಗಿದೆ. ಹಿಂದೂಗಳಿಗೆ ಎಲ್ಲಿಯೂ ಸಿಗದಿರುವಂತಹ ಧರ್ಮಶಿಕ್ಷಣವನ್ನು ಈ ಪಂಚಾಂಗವು ನೀಡುತ್ತಿದೆ. ಉದಾ : ಧಾರ್ಮಿಕ ಹಬ್ಬವನ್ನು ಹೇಗೆ ಆಚರಿಸಬೇಕು, ಭಾರತೀಯ ಸಂಸ್ಕ ತಿಯಂತೆ ಆಚರಣೆ ಮಾಡುವ ಮಹತ್ವ, ಜಾತ್ರೆ-ಉತ್ಸವಗಳಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟುವುದು ಇತ್ಯಾದಿ.

ಪಂಚಾಂಗ
ಪ್ರತಿದಿನದ ಪಂಚಾಂಗದೊಂದಿಗೆ ಶುಭ-ಅಶುಭ ದಿನ, ವಿವಾಹ ಮುಹೂರ್ತ, ಉಪನಯನ ಮುಹೂರ್ತ, ಸಂಕಷ್ಟ ಚತುರ್ಥಿ, ಚಂದ್ರೋದಯ, ಗ್ರಹಣದ ಮಾಹಿತಿ, ಮಳೆ ನಕ್ಷತ್ರ, ಬೀಜ ಬಿತ್ತನೆ ಹಾಗೂ ಕೊಯ್ಲಿನ ಮುಹೂರ್ತವನ್ನೂ ಕೊಡಲಾಗಿದೆ.

ಹಿಂದೂ ರಾಷ್ಟ್ರ,ಅಂದರೆ ಈಶ್ವರೀ ರಾಜ್ಯದ ಸ್ಥಾಪನೆ
ಇಂದು ದೇಶವು ಎಲ್ಲ ದಿಕ್ಕಿನಿಂದ ಅರಾಜಕತೆಯತ್ತ ಹೊರಳಿದೆ. ಶಾಂತಿ ನೆಮ್ಮದಿ ಇಲ್ಲವಾಗಿದೆ. ದೇಶಕ್ಕೆ ಕಾಡುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಅತಿ ದೊಡ್ಡ ಸಮಸ್ಯೆಯಾಗಿದೆ.  ಭ್ರಷ್ಟಾಚಾರ ನಿರ್ಮೂಲನೆ, ಕಲಬೆರಕೆ, ತೂಕದಲ್ಲಾಗುವ ಅವ್ಯವಹಾರ ಮುಂತಾದವುಗಳ ಬಗ್ಗೆ ಜನಜಾಗೃತಿ ಹಾಗೂ ಅದರ ನಿರ್ಮೂಲನೆಗಾಗಿನ ಮಾರ್ಗದರ್ಶನವು ಈ ಪಂಚಾಂಗದ ಒಂದು ವೈಶಿಷ್ಟ್ಯವಾಗಿದೆ. ಈ ಮೂಲಕ ಒಂದು ಸಮೃದ್ಧ ರಾಮ ರಾಜ್ಯವನ್ನು, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮೈಲುಗಲ್ಲಾಗಿದೆ.

ಹಿಂದೂ ಸಂಸ್ಕೃತಿ ರಕ್ಷಣೆ ಹಾಗೂ ಭಾಷಾಭಿಮಾನ ಹೆಚ್ಚಳ
ಇಂದು ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ ಮಹಾನ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನವಾಗುತ್ತಿದೆ. ಅದರಿಂದಾಗಿ ಸಮಾಜ ಪಾಶ್ಚಾತ್ಯರ ಕುಸಂಸ್ಕೃತಿಯತ್ತ ವಾಲುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇದರಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಉದಾ. ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ ೫ ರಂದಲ್ಲ ಗುರುಪೂರ್ಣಿಮೆಯಂದು ಆಚರಿಸಬೇಕು ಇತ್ಯಾದಿ. ಅಲ್ಲದೇ ಪಾಶ್ಚಾತ್ಯರ ‘ಡೇ’ ಸಂಸ್ಕೃತಿಗೆ ಮಾರು ಹೋಗದಂತೆಯೂ ಮಾಹಿತಿ ನೀಡಲಾಗಿದೆ. ಇಂದು ಆಂಗ್ಲಭಾಷೆಯ ಪ್ರಭಾವದಿಂದಾಗಿ ಮಾತೃಭಾಷೆಯತ್ತ ದುರ್ಲಕ್ಷವಾಗುತ್ತಿದೆ. ಮಾತೃಭಾಷೆಯ ಜೋಪಾಸನೆಯೆಂದರೆ ರಾಷ್ಟ್ರಾಭಿಮಾನದ ಜೋಪಾಸನೆಯಾಗಿದೆ. ಹಾಗಾಗಿ ಮಾತೃಭಾಷೆಯ ಮಹತ್ವವನ್ನು ಇದರಲ್ಲಿ ತಿಳಿಯಪಡಿಸಿದ್ದೇವೆ. ದೇವಭಾಷೆ ಸಂಸ್ಕೃತದ ಮಹತ್ವದ ಬಗ್ಗೆಯೂ ಮಾಹಿತಿ ಇದೆ.

ಹಿಂದೂ ಧರ್ಮದ ಮೇಲಿನ ಆಘಾತದ ಬಗ್ಗೆ ತಿಳುವಳಿಕೆ
ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ಮತಾಂತರವಾಗುತ್ತಿದ್ದಾರೆ. ಅಲ್ಲದೇ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಿ ಒಂದು ರೀತಿ ವೈಚಾರಿಕ ಮತಾಂತರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ಸಿಗಲೆಂದು ಮಾರ್ಗದರ್ಶಕ ಲೇಖನಗಳನ್ನೂ ಅಳವಡಿಸಲಾಗಿದೆ. ಗೋವು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ. ಅದರ ರಕ್ಷಣೆ ಎಂದರೆ ಹಿಂದೂ ಧರ್ಮದ ರಕ್ಷಣೆಯೇ ಆಗಿದೆ. ಈ ಕುರಿತು ಪಂಚಾಂಗದಲ್ಲಿ ಗೋಹತ್ಯೆ ತಡೆಯುವ ಹಾಗೂ ಅದರ ಮಹತ್ವದ ಬಗ್ಗೆ  ಮಾಹಿತಿ ನೀಡಲಾಗಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಸ್ತುತ ಕೃತಿಶೀಲರಾಗಿರುವವರ ಹಾಗೂ ಶಾಲಾಕಾಲೇಜುಗಳಲ್ಲಿಯೂ ನಮ್ಮ ರಾಷ್ಟ್ರಪುರುಷರ, ಕ್ರಾಂತಿಕಾರರ ಬಗ್ಗೆ ಮಾಹಿತಿ ಇಲ್ಲದ್ದರಿಂದ ಅದನ್ನು ಇದರಲ್ಲಿ ಅಳವಡಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗಿದೆ.

ಧರ್ಮ ಶಿಕ್ಷಣ
ಹಿಂದೂ ಧರ್ಮದಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಆಯಾ ಹಬ್ಬಗಳನ್ನು ಹೇಗೆ ಆಚರಿಸಬೇಕು, ಆಚರಣೆಯ ಹಿಂದಿನ ಅಧ್ಯಾತ್ಮಶಾಸ್ತ್ರ, ಸಾರ್ವಜನಿಕ ಗಣೇಶೋತ್ಸವದಲ್ಲಾಗುವ ತಪ್ಪು ಆಚರಣೆಗಳು, ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಹೀಗೆ ಅನೇಕ ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಹಿಂದೂಗಳಿಗೆ ಹಬ್ಬ ಆಚರಣೆಯ ಕುರಿತು ಮಾಹಿತಿ ದೊರೆತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ನಾಮಜಪದ ಮಹತ್ವ, ಪ್ರಾರ್ಥನೆಯ ಮಹತ್ವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ದೇವಸ್ಥಾನಗಳ ಮಾಹಿತಿ
ಕೆಲವು ಮಹತ್ವದ ದೇವಸ್ಥಾನಗಳ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗಿದೆ. ಅದಲ್ಲದೇ ದೇವಸ್ಥಾನದಲ್ಲಿ ದೇವರ ದರ್ಶನ ಹೇಗೆ ಪಡೆಯಬೇಕು, ಶೃಂಗದರ್ಶನದ ಮಹತ್ವ  ತೀರ್ಥಸ್ಥಳಗಳ ಮಹತ್ವವನ್ನೂ ತಿಳಿಸಲಾಗಿದೆ.

ದೇವರ ಹಾಗೂ ಸಂತರ ಸಾತ್ತ್ವಿಕ ಚಿತ್ರಗಳು
ಸನಾತನವು ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದೆ. ಸಂತರ ಮಾರ್ಗದರ್ಶನದಲ್ಲಿ ತಯಾರಿಸಲಾದ ಈ ಚಿತ್ರಗಳಿಂದ ಆಯಾ ದೇವತೆಯ ಸ್ಪಂದನವು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಕಲಿಯುಗದಲ್ಲಿ ಈಗಿನ ದೇವತೆಯ ಚಿತ್ರಗಳಲ್ಲಿ ಹೆಚ್ಚೆಂದರೆ ಶೇ.೧-೨ರಷ್ಟೇ ಸಾತ್ತ್ವಿಕ ಸ್ಪಂದನಗಳಿರುತ್ತವೆ. ಆದರೆ ಸನಾತನದ ಪಂಚಾಂಗದಲ್ಲಿನ ಚಿತ್ರಗಳಲ್ಲಿ ಶೇ.೨೮ ಕ್ಕೂ ಹೆಚ್ಚು ಸಾತ್ತ್ವಿಕತೆ ಇರುವುದರಿಂದ ಪಂಚಾಂಗ ಇರುವಲ್ಲಿನ ಸ್ಥಳದ ವಾಸ್ತುವಿನ ಶುದ್ಧೀಕರಣವೂ ಆಗುತ್ತದೆ. ಅಲ್ಲದೇ ವಿವಿಧ ಸಂತರ ಚಿತ್ರಗಳನ್ನೂ ಆಯಾ ಪುಣ್ಯತಿಥಿ, ಜಯಂತಿಯಂದು ಹಾಕಲಾಗಿದೆ. ಅಲ್ಲದೇ ಕೃತಿಶೀಲ ಸಂತರ ಮಾರ್ಗದರ್ಶನವನ್ನೂ ಮುದ್ರಿಸಲಾಗಿದೆ. ಇವೆಲ್ಲದರಿಂದ ಪಂಚಾಂಗದ ಸಾತ್ತ್ವಿಕ ಸ್ಪಂದನಕ್ಕೆ ಇನ್ನೂ ಹೆಚ್ಚಿನ ಮೆರುಗು ಸಿಕ್ಕಿದೆ.

ಪಂಚಾಂಗದ ಅತುಲನೀಯ ಗುಣಮಟ್ಟ
ಇತರ ಪಂಚಾಂಗದಲ್ಲಿ ಸಾಮಾನ್ಯವಾಗಿ ದಿನಾಂಕಗಳಿದ್ದು ಕೇವಲ ೬ ಪುಟಗಳಲ್ಲಿ ೧೨ ತಿಂಗಳ ಮಾಹಿತಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ರೂ. ೩೦ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಸನಾತನ ಪಂಚಾಂಗವನ್ನು ನಾವು ರಾಷ್ಟ್ರ ಮತ್ತು ಧರ್ಮದ ಪ್ರಬೋಧನೆಯ ದೃಷ್ಟಿಯಿಂದ ಮಾಡಿದ್ದರಿಂದ ಮತ್ತು ೧೨ ಪುಟಗಳಲ್ಲಿ ಮೇಲ್ಕಂಡ ವಿವರವಾದ ಮಾಹಿತಿಗಳನ್ನು ಕೊಟ್ಟು ಕೇವಲ ರೂ.೩೦ರ ಅರ್ಪಣೆ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯ ಮಾಡಿಕೊಡುತ್ತಿದ್ದೇವೆ ಹಾಗೂ ಸಗಟು ಖರೀದಿಯಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದನ್ನು ಗ್ಲಾಸಿ ಪೇಪರ್‌ನಲ್ಲಿ ಮುದ್ರಿಸಿದ್ದರಿಂದ ಈ ಪಂಚಾಂಗಗಳನ್ನು ಬಹುಕಾಲದ ತನಕ ಕಾಪಾಡಿಕೊಂಡು ಇಡಬಹುದು ಹಾಗೂ ಇತರರಿಗೂ ಧರ್ಮಾಚರಣೆಯ ದೃಷ್ಟಿಯಿಂದ ತೋರಿಸಬಹುದು.

ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಇರಬೇಕಾದಂತಹ ಪಂಚಾಂಗ!
ಈಗಾಗಲೇ ಲಕ್ಷಾಂತರ ಪ್ರತಿಗಳ ಮಾರಾಟವಾಗಿವೆ. ಸಂಗ್ರಹ ಮುಗಿಯುವ ಮೊದಲೇ ಖರೀದಿಸಿ.

ಅರ್ಪಣೆ ಬೆಲೆ ಕೇವಲ ರೂ. 30/-

ಪಂಚಾಂಗಕ್ಕಾಗಿ ಸಂಪರ್ಕ :
ಬೆಂಗಳೂರು - 72040 82609
ಉತ್ತರ ಕರ್ನಾಟಕ - 72040 82725
ದಕ್ಷಿಣ ಕನ್ನಡ - 93430 17001
ಶಿವಮೊಗ್ಗ - 72040 82673

'ಸನಾತನ ಪಂಚಾಂಗ 2014' (ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಕೃತಿಶೀಲಗೊಳಿಸುವ ದಿನದರ್ಶಿಕೆ)

ಉದ್ದೇಶ : ಜನರು ದಿನದರ್ಶಿಕೆಯನ್ನು ಕೇವಲ ದಿನವನ್ನು ನೋಡಲು ಬಳಸುತ್ತಾರೆ. ಆದರೆ ಸನಾತನ ದಿನದರ್ಶಿಕೆಯ ವೈಶಿಷ್ಟ್ಯವೆಂದರೆ ಅದು ಕೇವಲ ಪಂಚಾಂಗ ಮಾತ್ರವಲ್ಲ ಹಿಂದೂಗಳಿಗೆ ಧರ್ಮಾಚರಣೆಯ ಬಗ್ಗೆ ತಿಳಿಸುವ ಕೈಗನ್ನಡಿಯಾಗಿದೆ. ಅಂದರೆ ಇದು ಕೇವಲ ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗವಾಗಿದೆ. ಹಿಂದೂಗಳಿಗೆ ಎಲ್ಲಿಯೂ ಸಿಗದಿರುವಂತಹ ಧರ್ಮಶಿಕ್ಷಣವನ್ನು ಈ ಪಂಚಾಂಗವು ನೀಡುತ್ತಿದೆ. ಉದಾ : ಧಾರ್ಮಿಕ ಹಬ್ಬವನ್ನು ಹೇಗೆ ಆಚರಿಸಬೇಕು, ಭಾರತೀಯ ಸಂಸ್ಕೃತಿಯಂತೆ ಆಚರಣೆ ಮಾಡುವ ಮಹತ್ವ, ಜಾತ್ರೆ-ಉತ್ಸವಗಳಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟುವುದು ಇತ್ಯಾದಿ.

ಪಂಚಾಂಗ
ಪ್ರತಿದಿನದ ಪಂಚಾಂಗದೊಂದಿಗೆ ಶುಭ-ಅಶುಭ ದಿನ, ವಿವಾಹ ಮುಹೂರ್ತ, ಉಪನಯನ ಮುಹೂರ್ತ, ಸಂಕಷ್ಟ ಚತುರ್ಥಿ, ಚಂದ್ರೋದಯ, ಗ್ರಹಣದ ಮಾಹಿತಿ, ಮಳೆ ನಕ್ಷತ್ರ, ಬೀಜ ಬಿತ್ತನೆ ಹಾಗೂ ಕೊಯ್ಲಿನ ಮುಹೂರ್ತವನ್ನೂ ಕೊಡಲಾಗಿದೆ.

ಹಿಂದೂ ರಾಷ್ಟ್ರ, ಅಂದರೆ ಈಶ್ವರೀ ರಾಜ್ಯದ ಸ್ಥಾಪನೆ
ಇಂದು ದೇಶವು ಎಲ್ಲ ದಿಕ್ಕಿನಿಂದ ಅರಾಜಕತೆಯತ್ತ ಹೊರಳಿದೆ. ಶಾಂತಿ ನೆಮ್ಮದಿ ಇಲ್ಲವಾಗಿದೆ. ದೇಶಕ್ಕೆ ಕಾಡುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಅತಿ ದೊಡ್ಡ ಸಮಸ್ಯೆ ಯಾಗಿದೆ.  ಭ್ರಷ್ಟಾಚಾರ ನಿರ್ಮೂಲನೆ, ಕಲಬೆರಕೆ, ತೂಕದಲ್ಲಾಗುವ ಅವ್ಯವಹಾರ ಮುಂತಾದವುಗಳ ಬಗ್ಗೆ ಜನಜಾಗೃತಿ ಹಾಗೂ ಅದರ ನಿರ್ಮೂಲನೆಗಾಗಿನ ಮಾರ್ಗದರ್ಶನವು ಈ ಪಂಚಾಂಗದ ಒಂದು ವೈಶಿಷ್ಟ್ಯವಾಗಿದೆ. ಈ ಮೂಲಕ ಒಂದು ಸಮೃದ್ಧ ರಾಮ ರಾಜ್ಯವನ್ನು, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮೈಲುಗಲ್ಲಾಗಿದೆ.

ಹಿಂದೂ ಸಂಸ್ಕೃತಿ ರಕ್ಷಣೆ ಹಾಗೂ ಭಾಷಾಭಿಮಾನ ಹೆಚ್ಚಳ
ಇಂದು ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ ಮಹಾನ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನವಾಗುತ್ತಿದೆ. ಅದರಿಂದಾಗಿ ಸಮಾಜ ಪಾಶ್ಚಾತ್ಯರ ಕುಸಂಸ್ಕ ೃತಿಯತ್ತ ವಾಲುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇದರಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಉದಾ. ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5 ರಂದಲ್ಲ ಗುರುಪೂರ್ಣಿಮೆಯಂದು ಆಚರಿಸಬೇಕು ಇತ್ಯಾದಿ. ಅಲ್ಲದೇ ಪಾಶ್ಚಾತ್ಯರ `ಡೇ' ಸಂಸ್ಕ ೃತಿಗೆ ಮಾರು ಹೋಗದಂತೆಯೂ ಮಾಹಿತಿ ನೀಡಲಾಗಿದೆ. ಇಂದು ಆಂಗ್ಲಭಾಷೆಯ ಪ್ರಭಾವದಿಂದಾಗಿ ಮಾತೃಭಾಷೆಯತ್ತ ದುರ್ಲಕ್ಷವಾಗುತ್ತಿದೆ. ಮಾತೃಭಾಷೆಯ ಜೋಪಾಸನೆಯೆಂದರೆ ರಾಷ್ಟ್ರಾಭಿಮಾನದ ಜೋಪಾಸನೆಯಾಗಿದೆ. ಹಾಗಾಗಿ ಮಾತೃಭಾಷೆಯ ಮಹತ್ವವನ್ನು ಇದರಲ್ಲಿ ತಿಳಿಯಪಡಿಸಿದ್ದೇವೆ. ದೇವಭಾಷೆ ಸಂಸ್ಕೃತದ ಮಹತ್ವದ ಬಗ್ಗೆಯೂ ಮಾಹಿತಿ ಇದೆ.

ಹಿಂದೂ ಧರ್ಮದ ಮೇಲಿನ ಆಘಾತದ ಬಗ್ಗೆ ತಿಳುವಳಿಕೆ
ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ಮತಾಂತರವಾಗುತ್ತಿದ್ದಾರೆ. ಅಲ್ಲದೇ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಿ ಒಂದು ರೀತಿ ವೈಚಾರಿಕ ಮತಾಂತರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ಸಿಗಲೆಂದು ಮಾರ್ಗದರ್ಶಕ ಲೇಖನಗಳನ್ನೂ ಅಳವಡಿಸಲಾಗಿದೆ. ಗೋವು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ. ಅದರ ರಕ್ಷಣೆ ಎಂದರೆ ಹಿಂದೂ ಧರ್ಮದ ರಕ್ಷಣೆಯೇ ಆಗಿದೆ. ಈ ಕುರಿತು ಪಂಚಾಂಗದಲ್ಲಿ ಗೋಹತ್ಯೆ ತಡೆಯುವ ಹಾಗೂ ಅದರ ಮಹತ್ವದ ಬಗ್ಗೆ  ಮಾಹಿತಿ ನೀಡಲಾಗಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಸ್ತುತ ಕೃತಿಶೀಲರಾಗಿರುವವರ ಹಾಗೂ ಶಾಲಾಕಾಲೇಜುಗಳಲ್ಲಿಯೂ ನಮ್ಮ ರಾಷ್ಟ್ರಪುರುಷರ, ಕ್ರಾಂತಿಕಾರರ ಬಗ್ಗೆ ಮಾಹಿತಿ ಇಲ್ಲದ್ದರಿಂದ ಅದನ್ನು ಇದರಲ್ಲಿ ಅಳವಡಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗಿದೆ.

ಧರ್ಮ ಶಿಕ್ಷಣ
ಹಿಂದೂ ಧರ್ಮದಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಆಯಾ ಹಬ್ಬಗಳನ್ನು ಹೇಗೆ ಆಚರಿಸಬೇಕು, ಆಚರಣೆಯ ಹಿಂದಿನ ಅಧ್ಯಾತ್ಮಶಾಸ್ತ್ರ, ಸಾರ್ವಜನಿಕ ಗಣೇಶೋತ್ಸವದಲ್ಲಾಗುವ ತಪ್ಪು ಆಚರಣೆಗಳು, ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಹೀಗೆ ಅನೇಕ ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಹಿಂದೂಗಳಿಗೆ ಹಬ್ಬ ಆಚರಣೆಯ ಕುರಿತು ಮಾಹಿತಿ ದೊರೆತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ನಾಮಜಪದ ಮಹತ್ವ, ಪ್ರಾರ್ಥನೆಯ ಮಹತ್ವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಸಂತರ ಮಾಹಿತಿ
ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರಸಿದ್ಧ ಸಂತರ ಮಾಹಿತಿಯನ್ನು ನೀಡಲಾಗಿದೆ. ಸಂತರು ಸಮಾಜವನ್ನು ಆಧ್ಯಾತ್ಮಿಕದತ್ತ ಹೊರಡಿಸಲು ಮಾಡಿದ ಪ್ರಯತ್ನಗಳ ಸಂಕ್ಷಿಪ್ತ ಮಾಹಿತಿಯನ್ನು ಕೊಡಲಾಗಿದೆ.

ದೇವರ ಹಾಗೂ ಸಂತರ ಸಾತ್ತ್ವಿಕ ಚಿತ್ರಗಳು
ಪಂಚಾಂಗದ ಮುಖಪುಟದಲ್ಲಿ ಕರ್ನಾಟಕದ ಪ್ರಸಿದ್ಧ ದೇವಸ್ಥಾನದ ದೇವರ ಹಾಗೂ ವಿವಿಧ ಸಂತರ ಚಿತ್ರಗಳನ್ನೂ ಹಾಕಲಾಗಿದೆ. ಅಲ್ಲದೇ ಸಂತರ ಪುಣ್ಯತಿಥಿ ಹಾಗೂ ಜಯಂತಿಯನ್ನು ಹಾಕಲಾಗಿದೆ. ಅಲ್ಲದೇ ಕೃತಿಶೀಲ ಸಂತರ ಮಾರ್ಗದರ್ಶನವನ್ನೂ ಮುದ್ರಿಸಲಾಗಿದೆ. ಇವೆಲ್ಲದರಿಂದ ಪಂಚಾಂಗದ ಸಾತ್ತ್ವಿಕ ಸ್ಪಂದನಕ್ಕೆ ಇನ್ನೂ ಹೆಚ್ಚಿನ ಮೆರುಗು ಸಿಕ್ಕಿದೆ.

ಪಂಚಾಂಗ (ದಿನದರ್ಶಿಕೆ)ದ ಅತುಲನೀಯ ಗುಣಮಟ್ಟ
ಇತರ ದಿನದರ್ಶಿಕೆಯಲ್ಲಿ ಸಾಮಾನ್ಯವಾಗಿ ದಿನಾಂಕಗಳಿದ್ದು ಕೇವಲ 6 ಪುಟಗಳಲ್ಲಿ 12 ತಿಂಗಳ ಮಾಹಿತಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ರೂ. 30 ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಸನಾತನ ಪಂಚಾಂಗ(ದಿನದರ್ಶಿಕೆ)ವನ್ನು ನಾವು ರಾಷ್ಟ್ರ ಮತ್ತು ಧರ್ಮದ ಪ್ರಬೋಧನೆಯ ದೃಷ್ಟಿಯಿಂದ ಮಾಡಿದ್ದರಿಂದ ಮತ್ತು 12 ಪುಟಗಳಲ್ಲಿ ಮೇಲ್ಕಂಡ ವಿವರವಾದ ಮಾಹಿತಿಗಳನ್ನು ಕೊಟ್ಟು ಕೇವಲ ರೂ.30ರ ಅರ್ಪಣೆ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯ ಮಾಡಿಕೊಡುತ್ತಿದ್ದೇವೆ ಹಾಗೂ ಸಗಟು ಖರೀದಿಯಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದನ್ನು ಗ್ಲಾಸಿ ಪೇಪರ್‍ನಲ್ಲಿ ಮುದ್ರಿಸಿದ್ದರಿಂದ ಈ ಪಂಚಾಂಗಗಳನ್ನು ಬಹುಕಾಲದ ತನಕ ಕಾಪಾಡಿಕೊಂಡು ಇಡಬಹುದು ಹಾಗೂ ಇತರರಿಗೂ ಧರ್ಮಾಚರಣೆಯ ದೃಷ್ಟಿಯಿಂದ ತೋರಿಸಬಹುದು.

ದಿನದರ್ಶಿಕೆಗಾಗಿ ಸಂಪರ್ಕಿಸಿ -
ಉತ್ತರ ಕರ್ನಾಟಕ - 7204082725
ಬೆಂಗಳೂರು  - 8147091873
ಮಂಗಳೂರು - 7204082652
ಹುಬ್ಬಳ್ಳಿ - 7204082730
ನಿಮ್ಮ ಸಮೀಪದ ಊರಿನಲ್ಲಿ ಸಿಗುವ ಬಗ್ಗೆಯೂ ಸಹ ಮೇಲಿನ ಸಂಪರ್ಕ ಕ್ರಮಾಂಕಗಳನ್ನೇ ಸಂಪರ್ಕಿಸಿ.