Showing posts with label ಆಧ್ಯಾತ್ಮಿಕ ಸಾಧನೆ. Show all posts
Showing posts with label ಆಧ್ಯಾತ್ಮಿಕ ಸಾಧನೆ. Show all posts

ಭಾವ ಎಂದರೇನು ಮತ್ತು ಭಾವದ ಲಕ್ಷಣಗಳು


‘ಭಾವ’ ಈ ಶಬ್ದದ ವ್ಯಾಖ್ಯೆ ಮತ್ತು ಅರ್ಥ

ದೈನಂದಿನ ಜೀವನವನ್ನು ನಡೆಸುತ್ತಿರುವಾಗ, ಜೀವನದಲ್ಲಿನ ಪ್ರತಿಯೊಂದು ಕೃತಿಯನ್ನೂ ಮಾಡುತ್ತಿರುವಾಗ ನಮಗೆ ನಮ್ಮ ಅಸ್ತಿತ್ವದ ಅರಿವು ಸದಾ ಇರುತ್ತದೆ; ಏಕೆಂದರೆ ಅದು ನಮ್ಮ ವೃತ್ತಿಯಲ್ಲಿ ಬೇರೂರಿರುತ್ತದೆ. ಈ ಅಸ್ತಿತ್ವಕ್ಕೆ ಸಂಬಂಧಪಟ್ಟಂತೆಯೇ, ಇದರ ಹಿನ್ನಲೆಯಲ್ಲಿಯೇ ನಮ್ಮಿಂದ ಎಲ್ಲವೂ ನಡೆಯುತ್ತಿರುತ್ತದೆ ಮತ್ತು ನಾವು ಎಲ್ಲವನ್ನೂ ಅನುಭವಿಸುತ್ತಿರುತ್ತೇವೆ. ಜೀವನದಲ್ಲಿ ‘ನಾನು’ ಎನ್ನುವ ಜಾಗದಲ್ಲಿ ಮತ್ತು ಅಷ್ಟೇ ತೀವ್ರವಾಗಿ ಈಶ್ವರನ ಅಥವಾ ಈಶ್ವರನ ರೂಪದ ಅರಿವು ನಿರ್ಮಾಣವಾಗುವುದೆಂದರೆ ಭಾವ. ಈಶ್ವರನ ಅಥವಾ ಗುರುಗಳ ಅಸ್ತಿತ್ವದ ಬಗೆಗಿನ, ಯಾವುದೇ ಸ್ವರೂಪದಲ್ಲಿನ ಅರಿವು ಉತ್ಕಟವಾಗಿರುವುದು, ಆ ಅರಿವಿನಿಂದಾಗಿ ಜೀವನದಲ್ಲಿನ ಕಾರ್ಯಗಳನ್ನು ಮಾಡುವುದು ಮತ್ತು ಆ ಅರಿವಿನ ಹಿನ್ನೆಲೆಯ ಮೇಲೆಯೇ ಜೀವನವನ್ನು ಅನುಭವಿಸುವುದು, ಇದನ್ನು ಈಶ್ವರನ ಅಥವಾ ಗುರುಗಳ ಬಗ್ಗೆ ಭಾವ ಇರುವುದು ಎನ್ನುತ್ತಾರೆ. ಈಶ್ವರನ ಬಗೆಗಿನ ಭಾವವು ‘ಭಾವ’ ಈ ಶಬ್ದಕ್ಕೂ ಮೀರಿರುವಂತಹದ್ದಾಗಿದೆಯಲ್ಲದೆ ಅದು ಭಾವಕ್ಕೆ ಸಂಬಂಧಿಸಿದಂತಹ ಎಲ್ಲ ಸಂಕಲ್ಪನೆಗಳಿಗೂ ಮೀರಿರುವಂತಹದ್ದಾಗಿದೆ. ಭಾವವು ನಿರ್ಮಾಣವಾಯಿತೆಂದರೆ ಜೀವವು ಸದಾ ಈಶ್ವರಸನ್ಮುಖವಾಗಿರುತ್ತದೆ.

ವಿಶ್ವಾಸ, ಶ್ರದ್ಧೆ, ಭಾವ ಮತ್ತು ಭಕ್ತಿ

ಅಧ್ಯಾತ್ಮದ ಮಹತ್ವವು ತಿಳಿಯುವುದಕ್ಕಾಗಿ ಹಾಗೂ ಸಾಧನೆಯನ್ನು ಪ್ರಾರಂಭಿಸಲು ಮೊಟ್ಟಮೊದಲು ವಿಶ್ವಾಸ ಇರಬೇಕು. ವಿಶ್ವಾಸವು ಶಬ್ದಜನ್ಯ ಮಾಹಿತಿಯಿಂದ ನಿರ್ಮಾಣ ಆಗುತ್ತದೆ. ವಿಶ್ವಾಸವು ನಿರ್ಮಾಣವಾದ ನಂತರ ಸಾಧನೆ ಮಾಡಿದಾಗ ಅನುಭೂತಿ ಬರುತ್ತದೆ. ಅನುಭೂತಿಗಳು ಬಂದ ನಂತರವೇ ಶ್ರದ್ಧೆ ಉಂಟಾಗುತ್ತದೆ. ಶ್ರದ್ಧೆ ನಿರ್ಮಾಣವಾಯಿತೆಂದರೆ ಸಾಧನೆಯು ಇನ್ನೂ ಹೆಚ್ಚಾಗುತ್ತದೆ. ಸಾಧನೆಯು ಇನ್ನೂ ಹೆಚ್ಚಾದ ನಂತರ ಇನ್ನೂ ಹೆಚ್ಚಿನ ಮಟ್ಟದ ಅನುಭೂತಿಗಳು ಬರುತ್ತವೆ. ಈ ವಿಧವಾಗಿ ಶ್ರದ್ಧೆ-ಸಾಧನೆ-ಅನುಭೂತಿ ಹೆಚ್ಚುತ್ತಾ ಹೋಗಿ ಕೊನೆಗೆ ಭಾವವು ನಿರ್ಮಾಣವಾಯಿತೆಂದರೆ ಆತ್ಮಾನುಭೂತಿಯು ಬರುತ್ತದೆ, ಎಂದರೆ ಆನಂದಾವಸ್ಥೆಯು ಪ್ರಾಪ್ತವಾಗುತ್ತದೆ.

ಭಾವ ಮತ್ತು ಭಾವನೆ ಇವುಗಳಲ್ಲಿನ ವ್ಯತ್ಯಾಸ

‘ಭಾವವು ಚಿತ್ತದ ಒಂದು ಅವಸ್ಥೆಯಾಗಿದೆ. ಗುಣಗಳು ಮತ್ತು ಗುಣಧಾರಕ ಇವುಗಳ ಸಂಯೋಗಸ್ವರೂಪದಲ್ಲಿ ಯಾವಾಗ ಚಿತ್ತದ ಏಕಾಗ್ರ ಸ್ಥಿತಿಯು ನಿರ್ಮಾಣವಾಗುತ್ತದೆಯೋ ಅದನ್ನು ಭಾವ ಎನ್ನಬಹುದು ಮತ್ತು ಭಾವನೆಯು ಮನಸ್ಸಿನ ಸ್ತರದ ವೃತ್ತಿಯ ವಿಧವಾಗಿದೆ. ವಾಸನೆಗಳೂ, ಭಾವನೆಗಳೂ ಮನಸ್ಸಿನ ಅಲೆಗಳಾಗಿವೆ.’ -ಪ.ಪೂ.ಭಕ್ತರಾಜ ಮಹಾರಾಜರು
ಕಣ್ಣುಗಳಿಂದ ಅಶ್ರುಗಳು ಸುರಿಯುವುದು ಭಾವ ಅಥವಾ ಭಾವನೆ ಇವೆರಡರಿಂದಲೂ ಅನುಭವಿಸಲ್ಪಡುವಂತಹ ಒಂದು ಲಕ್ಷಣವಾಗಿದೆ. ಮನಸ್ಸಿಗೆ ದುಃಖವಾದಾಗ ಅಳು ಬರುವುದು ಭಾವನೆಯಾದರೆ, ಗುರುಗಳ ಅಥವಾ ದೇವತೆಗಳ ನೆನಪು ಬಂದು ಕಣ್ಣೀರು ಬರುವುದು ಭಾವ.

ಭಾವದ ಮಹತ್ವ

ಭಾವ ಎಂದರೆ ದೇವರ ಅಸ್ತಿತ್ವ
ನ ಕಾಷ್ಠೇ ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ|
ಭಾವೇ ತು ವಿದ್ಯತೇ ದೇವೋ ತಸ್ಮದ್ಭಾವೋ ಹಿ ಕಾರಣಮ್||
ಅರ್ಥ : ದೇವರು ಮರದ, ಕಲ್ಲಿನ ಅಥವಾ ಮಣ್ಣಿನ ಮೂರ್ತಿಯಲ್ಲಿರುವುದಿಲ್ಲ. ದೇವರು ಭಾವದಲ್ಲಿರುತ್ತಾರೆ; ಆದ್ದರಿಂದ ಭಾವವು ಮಹತ್ವದ್ದಾಗಿರುತ್ತದೆ.

ಭಾವದ ಲಕ್ಷಣಗಳು
  1. ಸ್ತಂಭ (ಸ್ತಂಭಿತರಾಗುವುದು)
  2. ಸ್ವೇದ (ಬೆವರುವುದು)
  3. ರೋಮಾಂಚನ
  4. ವೈಸ್ವರ್ಯ (ಸ್ವರಭಂಗ, ಧ್ವನಿ ಬದಲಾಗುವುದು)
  5. ಕಂಪನ
  6. ವೈವರ್ಣ್ಯ (ವರ್ಣ ಬದಲಾಗುವುದು)
  7. ಅಶ್ರುಪಾತ (ಕಣ್ಣೀರು ಸುರಿಯುವುದು)
  8. ಮೂರ್ಛೆ ಬರುವುದು

ಹೆಚ್ಚಿನ ಸಾಧಕರಿಗೆ ದೇವರ ಆರತಿಯ ಸಮಯದಲ್ಲಿ ಅಥವಾ ಗುರುಗಳ ಇಲ್ಲವೇ ಈಶ್ವರನ ಸ್ಮರಣೆಯಾದಾಗ ಅಥವಾ ಅವರಿಗೆ ಸಂಬಂಧಪಟ್ಟ ಯಾವುದಾದರೊಂದು ಬೇರೆ ವಿಷಯದಿಂದಾಗಿ ಕಣ್ಣುಗಳಿಂದ ಅಶ್ರುಗಳು ಸುರಿಯುತ್ತವೆ. ಇದು ಮೇಲೆ ಕೊಟ್ಟಿರುವ ಭಾವದ ಎಂಟು ಲಕ್ಷಣಗಳ ಪೈಕಿ ‘ಅಶ್ರುಪಾತ’ ಈ ಲಕ್ಷಣವಾಗಿದೆ. ಎಂಟೂ ಲಕ್ಷಣಗಳು ಕಂಡು ಬಂದಾಗ ‘ಅಷ್ಟಸಾತ್ತ್ವಿಕಭಾವವು’ ಜಾಗೃತವಾಯಿತು ಎನ್ನುತ್ತಾರೆ.

ಭಾವವು ನಿರ್ಮಾಣವಾಗುವುದರಲ್ಲಿನ ಅಡಚಣೆಗಳು

ಭಾವವು ನಿರ್ಮಾಣವಾಗುವುದರಲ್ಲಿ ಕೆಳಗೆ ಕೊಟ್ಟಿರುವ ಮೂರು ಅಡಚಣೆಗಳಿರುತ್ತವೆ - ಅಜ್ಞಾನ, ಕರ್ತೃತ್ವ ಮತ್ತು ಅಹಂಭಾವ. ಇವುಗಳ ಪೈಕಿ ಅಜ್ಞಾನವು ಈಶ್ವರನ ಗುಣಗಳು, ಸ್ವರೂಪ, ಆತನ ಕಾರ್ಯವೈಖರಿ ಇವುಗಳಿಗೆ ಸಂಬಂಧಪಟ್ಟದ್ದಾಗಿದೆ. ಕರ್ತೃತ್ವವು, ಜೀವನದಲ್ಲಿನ ವಿವಿಧ ಸಂಗತಿಗಳು ಈಶ್ವರನಿಂದಾಗಿ ಆಗುತ್ತಿರದೆ ಬೇರೆ ಯಾರಿಂದಲಾದರೂ, ಬಹಳಷ್ಟು ಬಾರಿ ತನ್ನಿಂದ ಆಗುತ್ತಿವೆ ಎಂದೆನಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ. ‘ತಾನು ಈಶ್ವರನಿಂದ ಬೇರೆ ಆಗಿದ್ದೇನೆ’ ಎನ್ನುವುದರ ಅರಿವೆಂದರೆ ಅಹಂಭಾವ. ಅಹಂಭಾವವು ಭಾವ ನಿರ್ಮಾಣವಾಗುವುದರಲ್ಲಿನ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ.

ಅಹಂಭಾವವು ಎಷ್ಟು ಹೆಚ್ಚು ಇರುವುದೋ ಅಷ್ಟೇ ಪ್ರಮಾಣದಲ್ಲಿ ಈಶ್ವರನ ಬಗ್ಗೆ ಭಾವವು ನಿರ್ಮಾಣವಾಗುವ ಸಾಧ್ಯತೆಯು ಕಡಿಮೆ ಇರುತ್ತದೆ. ಅಹಂಭಾವವು ಹೆಚ್ಚು ಇರುವುದರಿಂದಾಗುವ ಇನ್ನೊಂದು ನಷ್ಟವೆಂದರೆ ಇಂತಹ ವ್ಯಕ್ತಿಗೆ ಅನಿಷ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯು ಇನ್ನೂ ಹೆಚ್ಚು ಇರುತ್ತದೆ. ಅಂತೆಯೇ ಅನಿಷ್ಟ ಶಕ್ತಿಗಳಿಗೆ, ಇಂತಹ ವ್ಯಕ್ತಿಗಳ ಮಾಧ್ಯಮದಿಂದ ಇತರರಿಗೆ ತೊಂದರೆ ಕೊಡುವುದು ಹಾಗೂ ಸಮಷ್ಟಿ ಕಾರ್ಯದಲ್ಲಿ ಅಡ್ಡಿಗಳನ್ನುಂಟು ಮಾಡುವುದು ಸುಲಭವಾಗಿರುತ್ತದೆ. ಮಾನವಸಹಜವಾಗಿರುವ ಸ್ವಭಾವದೋಷಗಳೂ ಸಹ ಭಾವನಿರ್ಮಿತಿಯಲ್ಲಿ ಅಡ್ಡಿಯನ್ನುಂಟು ಮಾಡುತ್ತವೆ.

ಕೆಲವೊಮ್ಮೆ ಸಾಧಕರಿಗೆ ಸಹಾಯ ಮಾಡುವ ಭುವಲೋಕದಲ್ಲಿನ ಒಳ್ಳೆಯ ಶಕ್ತಿಗಳು ಭಾವಕ್ಕೆ ಸಂಬಂಧಿಸಿದ ಅಥವಾ ಇನ್ನಿತರ ಸಾತ್ತ್ವಿಕ ವಿಚಾರಗಳನ್ನು ಪ್ರಕ್ಷೇಪಿಸುತ್ತವೆ. ಆದರೆ ಸ್ವಭಾವದೋಷಗಳು ಹೆಚ್ಚು ಇದ್ದರೆ ಈ ವಿಚಾರಗಳನ್ನು ಗ್ರಹಿಸಲಾಗುವುದಿಲ್ಲ.

ಅಜ್ಞಾನ, ಕರ್ತೃತ್ವ ಮತ್ತು ಅಹಂಭಾವ ಈ ಅಡಚಣೆಗಳ ಪೈಕಿ ಯಾವುದಾದರೊಂದು ಅಡಚಣೆಯು ನಿಜವಾದ ಅರ್ಥದಲ್ಲಿ ದೂರವಾದರೆ ಇನ್ನುಳಿದ ಎರಡು ಅಡಚಣೆಗಳು ಸಹಜವಾಗಿ ದೂರವಾಗುತ್ತವೆ. ಈ ಅಡಚಣೆಗಳನ್ನು ಹಂತಹಂತವಾಗಿ ದೂರ ಮಾಡುವ ಪ್ರಕ್ರಿಯೆ ಎಂದರೇನೆ ಭಾವಜಾಗೃತಿಗಾಗಿ ಪ್ರಯತ್ನ.

(ಆಧಾರ ಗ್ರಂಥ : ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ "ಭಾವದ ವಿಧಗಳು ಮತ್ತು ಜಾಗೃತಿ")

ನಾಮಜಪದ ಉಪಯುಕ್ತತೆ


ಈ ವಿಶ್ವವನ್ನು ಸೃಷ್ಟಿಸಿ, ಸಕಲ ಜೀವರಾಶಿಗಳ ಪಾಲನೆ, ಪೋಷಣೆ ಮತ್ತು ಲಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸರ್ವೇಶ್ವರನನ್ನು ಹೊಂದಿ ಆತನಲ್ಲಿ ಏಕರೂಪವಾಗಲು ಇರುವ ಯೋಗ ಮಾರ್ಗಗಳು ಅನೇಕ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠ ಜ್ಞಾನಿಗಳಾಗಿದ್ದು ಜ್ಞಾನಯೋಗದ ಮೂಲಕ ಪರಮಾತ್ಮನನ್ನು ಹೊಂದಲು ಸಮರ್ಥರಾಗಿದ್ದರೂ ಪರಮಾತ್ಮನ ಆಧ್ಯಾತ್ಮಿಕ ಮಟ್ಟವು ಶೇಕಡಾ ೧೦೦ ಎಂದು ಭಾವಿಸುವುದಾದರೆ ಅಂದಿನ ಜನರ ಮಟ್ಟವು ಶೇಕಡಾ ೮೦ ಆಗಿದ್ದಿತು. ಮುಂದಿನ ತ್ರೇತಾಯುಗದಲ್ಲಿ ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಕಾಲ ನಿರಂತರ ತಪಸ್ಸು ಮಾಡಿ ತಾವು ಕಂಡುಕೊಂಡ ಸತ್ಯವನ್ನು ಜನರಿಗೆ ಬೋಧಿಸುತ್ತಿದ್ದರು. ಆಗ ಧ್ಯಾನ ಯೋಗವು ಪ್ರಚಲಿತವಾಯಿತು. ಅಂದಿನ ಜನಸಾಮಾನ್ಯರ ಆಧ್ಯಾತ್ಮಿಕ ಮಟ್ಟವು ೬೦% ಆಗಿತ್ತು. ಶ್ರೀರಾಮನಂತಹ ಆದರ್ಶ ರಾಜನಿಗೆ ವಸಿಷ್ಠರಂತಹ ಋಷಿ ವರೇಣ್ಯರು ಮಾರ್ಗದರ್ಶಕ ಗುರುಗಳಾಗಿದ್ದು ರಾಜ್ಯಭಾರದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ರಾಜನೂ ಧರ್ಮಭೀರುವಾಗಿ ಧರ್ಮದಂಡದ ಅಂಕುಶಕ್ಕೆ ಒಳಗಾಗಿರುತ್ತಿದ್ದನು. ಮುಂದಿನ ದ್ವಾಪರಯುಗದಲ್ಲಿ ಸಾತ್ವಿಕತೆಯು ನಶಿಸುತ್ತ ಜನತೆಯ ಆಧ್ಯಾತ್ಮಿಕ ಮಟ್ಟವು ಶೇಕಡಾ ೪೦ಕ್ಕೆ ಕುಸಿಯಿತು. ಜನರು ಕರ್ಮಯೋಗದ ಅನುಸಾರ, ಪೂಜೆ, ಹೋಮಹವನ, ತೀರ್ಥಯಾತ್ರೆಗಳಂತಹ ವಿಧಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಕಾಲಕ್ರಮೇಣ ಜನರು ಉತ್ತಮ ಜ್ಞಾನಿಗಳೂ ಆಗಿರದೆ, ಸುದೀರ್ಘ ಆಯಸ್ಸಿಲ್ಲದೆ ಜಪತಪಗಳನ್ನೂ ಆಚರಿಸಲಾಗದೆ, ಕರ್ಮಕಾಂಡದ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ನಡೆಸಬಲ್ಲ ತಪೋಧನರಾದ, ಆಚಾರವಂತರಾದ, ಸುವಿಚಾರೀ ಪುರೋಹಿತರೂ ಪರಿಶುದ್ಧವಾದ ಸಮಿತ್ತು, ಹಾಲು, ತುಪ್ಪ, ದರ್ಭೆ ಮೊದಲಾದ ಯೋಗ್ಯ ಉತ್ಪನ್ನಗಳು ಸಿಗದೆ ನಿರೀಕ್ಷಿತ ಮಟ್ಟದಲ್ಲಿ ಆಧ್ಯಾತ್ಮಿಕ ಸಾಧನೆಯ ಫಲ ದೊರೆಯದಾಯಿತು. ಕಲಿಯುಗವು ಆರಂಭವಾದಾಗ ವಿಧಿ ನಿಯಮದಂತೆ ಅಧಿಕಾರ ಹೊಂದಿದ ಕಲಿಯ ಪ್ರಭಾವಕ್ಕೊಳಗಾಗಿ ಜನ ಸಾಮಾನ್ಯರು ಜೂಜಾಟ, ಸುರಾಪಾನ, ವೇಶ್ಯೇಯರ ಸಹವಾಸ ಹಾಗೂ ಹಿಂಸಾ ಪ್ರವೃತ್ತಿಯಲ್ಲಿ ನಿರತರಾಗತೊಡಗಿದಾಗ ಅವರ ಆಧ್ಯಾತ್ಮಿಕ ಮಟ್ಟವು ಶೇಕಡಾ ೨೦ಕ್ಕೆ ಕುಸಿಯಿತು. ಆದರೂ ಧರ್ಮಭೀರುಗಳಾದ ಮಂದಿ ಭಕ್ತಿಯೋಗದ ಅನುಸಾರ ಸಂತರು, ದಾಸವರೇಣ್ಯರು ತೋರಿದ ಋಜುಮಾರ್ಗದಲ್ಲಿ ನಡೆಯುತ್ತ ಪರಮಾತ್ಮನಲ್ಲಿ ಉತ್ಕಟ ಪ್ರೇಮವಿರಿಸಿ ನವವಿಧ ಭಕ್ತಿಯೆನಿಸಿದ  ೧) ಶ್ರವಣ, ೨) ಕೀರ್ತನ, ೩) ಸ್ಮರಣ, ೪) ಪಾದ ಸೇವನ ೫) ಅರ್ಚನ ೬) ವಂದನ ೭) ದಾಸ್ಯ ೮) ಸಖ್ಯ ಮತ್ತು ೯) ಆತ್ಮ ನಿವೇದನಗಳೆನಿಸಿದ ಪ್ರಕಾರಗಳಿಂದ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸತೊಡಗಿದರು.

ಸಂಜೆಯ ಹೊತ್ತು ಮನೆ ಮನೆಗಳಲ್ಲೂ ತಾಳ ತಂಬೂರಿಗಳ ಸುಶ್ರಾವ್ಯ ನಾದದೊಂದಿಗೆ ಭಜನೆಯ ಹಾಡುಗಳು ಮನೆಮಂದಿಯನ್ನು ಭಕ್ತಿ ರಸದ ಹೊನಲಲ್ಲಿ ತೇಲಾಡಿಸುತ್ತಿದ್ದವು. ಶಾಲೆಗಳಲ್ಲಿ ಪ್ರತೀ ವಾರ ಭಜನೆ, ದೇವಸ್ಥಾನಗಳಲ್ಲಿ, ಮಠ ಮಂದಿರಗಳಲ್ಲಿ ಹರಿಕಥಾಕಾಲಕ್ಷೇಪ, ಪ್ರವಚನ ನಡೆಯುತ್ತಿದ್ದವು. ಆದರೆ ಕಲಿಯುಗವು ದಾಂಗುಡಿಯಿಡುತ್ತ ೫೦೦೦ ವರ್ಷಗಳು ಸಮೀಪಿಸುವ ಹೊತ್ತಿಗೆ ರಾಜ್ಯಾಡಳಿತವು ಜಾತ್ಯತೀತ, ಭ್ರಷ್ಟ, ಧರ್ಮದ್ರೋಹೀ ರಾಜಕಾರಣಿಗಳ ತೆಕ್ಕೆಗೆ ಬಂದಿದ್ದು ಎಲ್ಲೆಲ್ಲೂ ಧರ್ಮ ಹಾನಿಯಾಗತೊಡಗಿತು. ಎಲ್ಲೂ ಭಜನೆಗಳಿಲ್ಲ-ಹರಿಕಥೆ ಪ್ರವಚನಗಳ ಸದ್ದು ಅಡಗಿ ಹೋಯಿತು. ಇಂತಹ ಸಂದರ್ಭದಲ್ಲಿ ಜ್ಞಾನ ಯೋಗ, ಧ್ಯಾನ ಯೋಗ, ಕರ್ಮ ಯೋಗ ಹಾಗೂ ಭಕ್ತಿ ಯೋಗ ಇವೆಲ್ಲವುಗಳ ಸಾರವಾಗಿರುವ ಗುರುಕೃಪಾಯೋಗ ಹಾಗೂ ಕ್ಷಾತ್ರಧರ್ಮ ಇವುಗಳ ಅನುಸಾರ ಆಧ್ಯಾತ್ಮಿಕ ಸಾಧನೆ ಮಾಡುವುದೇ ಪರಿಣಾಮಕಾರಿಯಾಗಿದೆ. ಗುರುಕೃಪಾಯೋಗಾನುಸಾರ ಸಾಧನೆಗೆ ನಾಮ ಸಂಕೀರ್ತನ ಯೋಗವೂ ಪೂರಕವಾಗಿದೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯಂತೆ ಗುರುಗಳ ಮಾರ್ಗದರ್ಶನದಂತೆ ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ (ನಿರಪೇಕ್ಷ ಪ್ರೇಮ), ಸ್ವಭಾವ ದೋಷ ನಿರ್ಮೂಲನ, ಅಹಂ ನಿರ್ಮೂಲನ ಮತ್ತು ಭಾವ ಜಾಗೃತಿ- ಇವುಗಳನ್ನು ಮಾಡಿ ಗುರುವಿನ ಕೃಪೆ ಪಡೆದು ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಪ್ರಸ್ತುತ ಕಾಲದಲ್ಲಿ ಮುಗಿಲು ಮುಟ್ಟಿರುವ ಭ್ರಷ್ಟಾಚಾರ, ಲಂಚಕೋರತನ, ದಂಗೆ, ಕೊಲೆ ಇತ್ಯಾದಿಗಳ ವಿರುದ್ಧ ಈಶ್ವರ ಪ್ರಾಪ್ತಿಗಾಗಿ ಆಧ್ಯಾತ್ಮಿಕ ಸಾಧನೆಯೆಂದು ಮಾಡಬೇಕಾದ ಧರ್ಮ ಯುದ್ಧದ ಮಹತ್ವವನ್ನು ಕ್ಷಾತ್ರ ಧರ್ಮವು ಕಲಿಸುತ್ತದೆ. ಆಧ್ಯಾತ್ಮಿಕ ಸಾಧನೆಯ ಅಡಿಪಾಯವಾಗಿರುವ ನಾಮ ಸ್ಮರಣೆಯ ಮಹತ್ವ, ಆಚರಿಸುವ ರೀತಿ ಇತ್ಯಾದಿಗಳನ್ನು ನಾಮಸಂಕೀರ್ತನಯೋಗವು ಕಲಿಸುತ್ತದೆ. ಈ ಲೇಖನದಲ್ಲಿ ಸರಳವೂ ಸುಲಭವೂ ಆಗಿರುವ ನಾಮ ಸ್ಮರಣೆಯ ಮಹತ್ವವನ್ನು ಸರಳ ಭಾಷೆಯಲ್ಲಿ ಓದುಗರಿಗೆ ವಿವರಿಸುವ ಕಿರು ಪ್ರಯತ್ನ ಮಾಡಲಾಗಿದೆ.

ನಾಮ ಸ್ಮರಣೆ / ನಾಮ ಜಪ ಎಂದರೇನು?

’ನಾಮ’ ಎಂದರೇನು? ದೇವರ ಅಸಂಖ್ಯ ಹೆಸರುಗಳಲ್ಲೊಂದು. ’ಸ್ಮರಣೆ’ ಎಂದರೆ ’ಧ್ಯಾನ’ ಅಥವಾ ನೆನಪು. ’ಜಪ’ ಎಂದರೆ ಯಾವುದೇ ಒಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದು. ’ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕ: ಎಂದರೆ ಯಾವುದು ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡಿ ಜನನ ಮರಣಗಳ ಚಕ್ರದಿಂದ ನಮ್ಮನ್ನು ಬಿಡಿಸುತ್ತದೆಯೋ ಅದುವೇ ’ಜಪ’. ಒಟ್ಟಿನಲ್ಲಿ ’ನಾಮ ಜಪ’ವೆಂದರೆ ದೇವರ ನಾಮವನ್ನು ಈಶ್ವರ ಪ್ರಾಪ್ತಿಯ ಸಾಧನೆಯೆಂದು ಪುನಃ ಪುನಃ ಹೇಳುತ್ತಿರುವುದು.

ನಾಮಜಪ / ನಾಮಸ್ಮರಣೆಯ ವೈಶಿಷ್ಟ್ಯಗಳು:
  • ವೇದಗಳಿಗಿಂತ ನಾಮವು ಶ್ರೇಷ್ಠವಾಗಿದೆ. ಏಕೆಂದರೆ ಓಂಕಾರವೆಂಬ ನಾಮದಿಂದಲೇ ವೇದಗಳ ಉತ್ಪತ್ತಿಯಾಗಿದೆ. ವೇದಗಳು, ಉಪನಿಷತ್ತುಗಳು, ಗೀತೆ ಇತ್ಯಾದಿಗಳ ಅಭ್ಯಾಸವು ಎಲ್ಲರಿಂದಲೂ ಸಾಧ್ಯವಾಗದು. ಆದರೆ ನಾಮದ ಅಭ್ಯಾಸವನ್ನು ಯಾರೂ ಮಾಡಬಲ್ಲರು. ಅದರಿಂದ ಸತತವಾಗಿ ದೇವರೊಂದಿಗೆ ಅನುಸಂಧಾನ ಹೊಂದಬಲ್ಲರು.
  • ಪರಮೇಶ್ವರನ ರೂಪವು ತೇಜ ತತ್ವಕ್ಕೆ ಸಂಬಂಧಿಸಿದ್ದರೆ, ಆತನ ನಾಮವು ತೇಜ ತತ್ವಕ್ಕಿಂತಲೂ ಶ್ರೇಷ್ಠವಾದ ಆಕಾಶ ತತ್ವಕ್ಕೆ ಸಂಬಂಧಿಸಿದೆ.
  • ವಾನರರು ಜೈ ಶ್ರೀರಾಮ್ ಎಂದು ನಾಮ ಸ್ಮರಣೆ ಮಾಡುತ್ತ ಬಂಡೆಗಳನ್ನು ಸಮುದ್ರದಲ್ಲಿ ಎಸೆದಾಗ ಬಂಡೆಗಳು ತೇಲುತ್ತ ಒಂದನ್ನೊಂದು ಜತೆಗೂಡಿ ಭವ್ಯ ರಾಮಸೇತುವಿನ ನಿರ್ಮಾಣವಾಯಿತು. ಆದರೆ ನಾಮ ಸ್ಮರಣೆ ಮಾಡದೆ ಸ್ವತಃ ಶ್ರೀರಾಮನೇ ಸಮುದ್ರಕ್ಕೆ ಬಂಡೆಯನ್ನೆಸೆದಾಗಲೂ ಅದು ಮುಳುಗಿ ಹೋಯಿತು! ಆದುದರಿಂದ ದೇವನಿಗಿಂತಲೂ ದೇವ ನಾಮವೇ ದೊಡ್ಡದು ಎಂಬುದು ಸ್ಪಷ್ಟವಾಯಿತು!
  • ಪುರಂದರ ದಾಸರ ಕೀರ್ತನೆಗಳಲ್ಲಿ ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು ಸಾರುತ್ತ ನಮಗೆ ನಾಮದ ಹಿರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ನರನಾದ ಮೇಲೆ ಶ್ರೀ ಹರಿಯ ನಾಮ ಜಿಹ್ವೆ(ನಾಲಿಗೆ)ಯೊಳಿರಬೇಕೆಂಬುದು ಅವರ ಮತವಾಗಿದೆ.
  • ’ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲ ಕೋಟಿಗಳುದ್ಧರಿಸುವುವು’ ಎನ್ನುವ ಮೂಲಕವೂ ಕಲಿಯುಗದಲ್ಲಿ ನಾಮ ಸ್ಮರಣೆಯ ಮಹತ್ವವನ್ನು ಅವರು ನಿರೂಪಿಸಿದ್ದಾರೆ.
  • ’ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ, ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ’ ಎನ್ನುವ ಹಾಡೂ ನಾಮ ಸ್ಮರಣೆಯು ಆನಂದವನ್ನು ದೊರಕಿಸಿ ಕೊಡುವುದು ಎಂದು ಸಾರಿದೆ.
  • ಬ್ರಾಹ್ಮಣ ಪುತ್ರನಾಗಿದ್ದೂ ಬೇಡರ ದುಸ್ಸಂಗದಿಂದ ದರೋಡೆಕೋರನಾದ ರತ್ನಾಕರನೂ ನಾರದ ಮುನಿಗಳ ಸತ್ಸಂಗದಿಂದ ಶ್ರೀ ರಾಮನ ಸ್ಮರಣೆ ಮಾಡುತ್ತ ವಾಲ್ಮೀಕಿ ಮಹರ್ಷಿಯೆನಿಸಿದನು.
  • ಭಗವಂತನು ಗುಪ್ತನಾಗಿದ್ದರೂ ಆತನ ’ನಾಮ’ವು ಗುಪ್ತವಾಗಿಲ್ಲ. ಆದುದರಿಂದ ನಾಮದ ಬಲದಿಂದ ಆತನನ್ನು ಕಂಡು ಹಿಡಿಯಬಹುದು. ಮೇಯಲು ಬಿಟ್ಟ ದನವು ಸಂಜೆ ಹಟ್ಟಿಗೆ ಮರಳದಿದ್ದಾಗ ಅದು ಮೇಯುವ ಜಾಗಗಳಲ್ಲಿ ಹುಡುಕಿಯೂ ಕಂಡು ಬಾರದಿರಲು ಅದರ ಹೆಸರನ್ನು ಕೂಗಿ ಕರೆದಾಗ ಅದು ತಾನಿರುವ ಗುಪ್ತ ಜಾಗದಿಂದ ಕರೆಗೆ ಓಗೊಡುವಂತೆ.
  • ವೇದ ಪಠಣದಲ್ಲಿ ಅಕ್ಷರಗಳು ಲೋಪವಾದರೆ/ಉಚ್ಛಾರವು ಅಶುದ್ಧವಾದರೆ ತೊಂದರೆಯುಂಟಾಗುತ್ತದೆ. ಅನಕ್ಷರಂ ಅನಾಯುಷ್ಯಂ ವಿಸ್ವರಂ ವ್ಯಾಧಿಪೀಡಿತಮ್ ಎಂದರೆ ವೇದಾಕ್ಷರಗಳ ಉಚ್ಛಾರವು ಅಶುದ್ಧವಾಗಿದ್ದರೆ ಆಯುಷ್ಯವು ಕ್ಷೀಣಿಸುತ್ತದೆ. ಅದು ಸ್ವರಹೀನವಾಗಿ ಆದರೆ ವ್ಯಾಧಿಗಳುಂಟಾಗುತ್ತವೆ. ಆದರೆ ಅರಿವಿಲ್ಲದೆ ನಾಮ ಸ್ಮರಣೆಯಲ್ಲಿ ನಾಮವನ್ನು ಭಕ್ತಿಯಿಂದ ತಪ್ಪಾಗಿ ಉಚ್ಚರಿಸಿದಾಗಲೂ ಅದು ಪಾಪವನ್ನು ಸುಟ್ಟು ಹಾಕುತ್ತದೆ!
  • ನಾಮಜಪಕ್ಕೆ ವ್ಯಕ್ತಿ, ಸ್ಥಳ, ಕಾಲ, ಮಡಿಮೈಲಿಗೆ ಇತ್ಯಾದಿಗಳ ಬಂಧನವಿಲ್ಲ. ವಾದ್ಯ, ಪರಿಕರಗಳ ಅವಶ್ಯಕತೆಯಿಲ್ಲ. ಭಜನೆಯಲ್ಲಿರುವಂತೆ ರಾಗ, ತಾಳ, ಆಲಾಪನೆಗೆ ಮಹತ್ವವಿಲ್ಲ. ಒಬ್ಬನೇ ಎಲ್ಲೇ ಇದ್ದರೂ ನಾಮ ಜಪಿಸಬಹುದು.
  • ನಾಮವು ಸಾಧಕನಿಗೂ ಮೋಕ್ಷಕ್ಕೆ ಹೊಂದಲು ಆಸಕ್ತನಿಗೂ ಜ್ಞಾನ ಪ್ರಾಪ್ತಿ ಮಾಡಿಕೊಡುತ್ತದೆಯಾದರೆ ಜ್ಞಾನಿಗೆ ಜ್ಞಾನದ ಪರಿಪಕ್ವತೆ ಕೊಡುವಂತಹದ್ದಾಗಿದೆ.

ಆದುದರಿಂದ ನಾಮಜಪವು ಸಾಧನೆ ಹಾಗೂ ಸಾಧಿಸಬೇಕಾದ ಗುರಿ(ಧ್ಯೇಯ) ಇವೆರಡೂ ಆಗಿದೆ. - ಈಶ್ವರ ಪ್ರಾಪ್ತಿ ಮಾಡಿಸಿಕೊಡುವ ಪರಮೋಚ್ಚ ಗುರುವಾಗಿದೆ.

ಹೆಚ್ಚಿನ ಮಾಹಿತಿಗೆ ಸನಾತನ ಸಂಸ್ಥೆಯ ’ನಾಮಸಂಕೀರ್ತನಯೋಗ’ ಗ್ರಂಥ ಓದಿರಿ.

ಸಂಕಲನ: ಬಿ. ರಾಮ ಭಟ್, (ನಿವೃತ್ತ ಉಪ ತಹಶೀಲ್ದಾರ್), ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ ದ.ಕ.ಜಿಲ್ಲೆ. ದೂ. ಕ್ರ: ೯೪೮೧೭೫೬೦೨೮

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
Dharma Granth

ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ

ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ. ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ ದುಃಖ. ಏಕೆಂದರೆ ನಮಗೆ ಸಿಗುವ ಸುಖವು ಒಂದು ಭಾಗದಷ್ಟಿದ್ದರೆ, ದುಃಖವು ಅದರ ಮೂರು ಭಾಗ ಯಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಸುಖಕ್ಕೆ ದುಃಖದ ಜೊತೆ ಇದ್ದೇ ಇರುತ್ತದೆ. ಅದರ ಅನುಭವ ಕ್ಷಣಿಕ- ದುಃಖದ ಅನುಭವ ಅಧಿಕ. ಉದಾ: ತೀರಾ ಸೆಕೆಗೆ ಫೇನ್ ಹಾಕಿ ಕುಳಿತಾಗ ವಿದ್ಯುತ್ ಪೂರೈಕೆ ನಿಂತು ಹೋದರೆ ದುಃಖ ಆವರಿಸುತ್ತದೆ. ಆನಂದವೆಂದರೆ ದುಃಖದ ಜೊತೆಯಿಲ್ಲದ, ನಿರಂತರವಾಗಿ ಸಾಧಕರಿಗೆ ಸಿಗುವ ಅತ್ಯುಚ್ಚ ಮಟ್ಟದ ಸುಖ. ಪ್ರಾಣಿಮಾತ್ರರು ಬಯಸುತ್ತಿರುವುದು ಇದನ್ನೇ - ಅಂದರೆ ಆನಂದವನ್ನೇ. ಆದರೆ ಕ್ಷಣಿಕ ಸುಖವನ್ನೇ ಆನಂದವೆಂದು ಭ್ರಮಿಸಿ ರಮಿಸುತ್ತಾರೆ. ಆನಂದವನ್ನು ಪಡೆಯುವುದು ಹೇಗೆ ಎಂಬುದನ್ನು ಯಾವುದೇ ಶಾಲಾ ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಕಲಿಸುವುದಿಲ್ಲ. ಏಕೆಂದರೆ ವಿಜ್ಞಾನವು ಈ ವಿಷಯವನ್ನು ಕಲಿಸಲಾರದು. ಬದಲಾಗಿ ಆಧ್ಯಾತ್ಮಿಕ ವಿಶ್ವವಿದ್ಯಾಲಯವು ಮಾತ್ರ ಇದನ್ನು ಕಲಿಸಬಲ್ಲದು.

ಕುಪ್ರಭಾತವಾಗುವ ಸುಪ್ರಭಾತ
    ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದೊಡನೆ ಇಂದಿನ ದಿನವು ಆನಂದದಾಯಕವಾಗಿರಬೇಕು ಎಂದು ಆಶಿಸುತ್ತಾರೆ. ಆದರೆ ಬೆಳಗ್ಗಿನ ಚಹಾ ಹೀರುತ್ತ ಕುಳಿತಿದ್ದಂತೆ ಮನೆ ಬಾಗಿಲಿಗೆ ಬಂದು ಬೀಳುವ ಪತ್ರಿಕೆಯನ್ನು ಓದಿದಾಗ ಅಥವಾ ಟಿ.ವಿ.ಯಲ್ಲಿನ ವಾರ್ತೆ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮೋಸ, ವಂಚನೆ, ಮಹಿಳೆಯರ ಮೇಲಿನ ಅತ್ಯಾಚಾರ, ಆತ್ಮಹತ್ಯೆ ಇತ್ಯಾದಿಗಳ ದೃಶ್ಯಗಳು ಕಣ್ಣ ಮುಂದೆ ಸುಳಿದಾಗ ನಾವು ಹತಾಶರಾಗಿ ದುಃಖಿತರಾಗುತ್ತೇವೆ. ಸುಪ್ರಭಾತದಿಂದ ಆರಂಭವಾಗಬೇಕಾದ ದಿನವು ಕುಪ್ರಭಾತದಿಂದಲೇ ಪ್ರಾರಂಭವಾಗುತ್ತದೆ. ಅನಂತರ ನಡೆಯುವ ಘಟನೆಗಳಿಂದ, ಅನುಭವಿಸುವ ಯಾತನೆಗಳಿಂದ ಮನಸ್ಸು ದಿನವಿಡೀ ದುಃಖಮಯವಾಗುತ್ತದೆ. ಇದನ್ನು ನಿವಾರಿಸುವುದು ಕಾರ್ಯಕಾರಣಭಾವ ತಿಳಿಯದ ವಿಜ್ಞಾನದಿಂದ ಸಾಧ್ಯವಿಲ್ಲ. ಹೀಗಿರುವಾಗ ದುಃಖಿತರಾಗದೆ ಆನಂದಮಯ ಜೀವನವನ್ನು ಹೇಗೆ ನಡೆಸುವುದು, ಎಂಬುದನ್ನು ವಿಜ್ಞಾನವು ಕಲಿಸಲಾರದು. ಬದಲಾಗಿ ಅಧ್ಯಾತ್ಮವು ಮಾತ್ರ ಕಲಿಸಬಲ್ಲದು. ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಪ್ರಸಂಗಗಳು ನಡೆಯುತ್ತವೆ. ಉದಾಹರಣೆಗೆ ನಮ್ಮ ಆಪ್ತರು ಆಕಸ್ಮಾತ್ತಾಗಿ ಅಪಮೃತ್ಯುವಿಗೀಡಾಗುತ್ತಾರೆ, ಎಷ್ಟೇ ಪ್ರಯತ್ನಿಸಿದರೂ ಕೆಲವು ಮಂದಿಗೆ ಮದುವೆಯೇ ಆಗುವುದಿಲ್ಲ. ಮದುವೆಯಾದವರಿಗೆ ಸಂತಾನ ಭಾಗ್ಯವೇ ಲಭಿಸುವುದಿಲ್ಲ. ಮಕ್ಕಳಿದ್ದರೆ ಎಲ್ಲರೂ ಹೆಣ್ಣು ಮಕ್ಕಳಾಗಿರುತ್ತಾರೆ. ಕೆಲವರು ಚಿನ್ನ ಹಿಡಿದರೂ ಅದೆಲ್ಲ ಮಸಿಯಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸೋಲೇ ಕಾದಿರುತ್ತದೆ. ಇಂತಹ ಘಟನೆಗಳ ಹಿಂದಿರುವ ಕಾರ್ಯಕಾರಣಭಾವವನ್ನು ಅಧ್ಯಾತ್ಮ ಶಾಸ್ರ್ತವು ಮಾತ್ರ ಕಲಿಸಬಲ್ಲುದು. ಅಂದರೆ ಈ ಶಾಸ್ತ್ರವು ಸೀಮಿತ ಮಂದಿಗಲ್ಲ- ಎಲ್ಲರಿಗೂ ಅವಶ್ಯವಾಗಿದೆ ಎಂಬುದನ್ನು ತಿಳಿಯಬಹುದು.

ಅಧ್ಯಾತ್ಮವು ಕಹಿಗುಳಿಗೆಯಲ್ಲ.
    ಅಧ್ಯಾತ್ಮ ಅಂದರೆ ಏನು? ಅಧಿ+ಆತ್ಮ ಅಂದರೆ ಪರಮಾತ್ಮನ ಅಂಶವಾದ ಆತ್ಮನ ಬಗೆಗಿನ ಶಾಸ್ತ್ರ. ಜಗತ್ತಿನ ಎಲ್ಲ ಜೀವಿಗಳಲ್ಲಿ ಶ್ರೇಷ್ಠವೆನಿಸಿದ ಮಾನವನ ಜನ್ಮವು ಕೇವಲ ವ್ಯಾಪಾರ, ವ್ಯವಹಾರ, ನೌಕರಿ, ಸಂಪಾದನೆಗಾಗಿ ಅಲ್ಲ. ಬದಲಾಗಿ ಪರಮಾತ್ಮನ ಮನೆಯಿಂದ ಬಂದ ನಾವು ನಮ್ಮ ಪ್ರಾರಬ್ಧವನ್ನು ಭೋಗಿಸಿ ಆಧ್ಯಾತ್ಮಿಕ ಸಾಧನೆ ಮಾಡಿ ನಿರಾತಂಕವಾಗಿ ಪರಮಾತ್ಮನ ಮನೆಗೇ ಹಿಂದಿರುಗಬೇಕೆಂಬುದು ನಮ್ಮ ಸೃಷ್ಟಿಕರ್ತನ ಸಂಕಲ್ಪವಾಗಿದೆ. ’ಅಲ್ಲಿರುವುದು ಅದು ನನ್ನ ಮನೆ- ಇಲ್ಲಿಗೆ (ಈ ಜಗತ್ತಿಗೆ) ಬಂದೆ ಸುಮ್ಮನೆ’ ಎಂಬುದು ದಾಸವಾಣಿ. ಎಲ್ಲ ಜೀವಿಗಳಿರುವಂತೆ ನಿದ್ರೆ, ಆಹಾರ, ಭಯ, ಮೈಥುನ ಇವುಗಳೊಂದಿಗೆ ಬುದ್ಧಿ (ವಿವೇಕ) ಎಂಬ ವಿಶೇಷ ಶಕ್ತಿಯನ್ನು ಹೊಂದಿರುವ ಮನುಷ್ಯನು ಮಾತ್ರ ಈಶ್ವರ ಪ್ರಾಪ್ತಿಯನ್ನು ಮಾಡಿಕೊಳ್ಳಬಲ್ಲನು. ಆನಂದವು ಪರಮಾತ್ಮನ ಗುಣಧರ್ಮವೇ ಆಗಿರುವುದರಿಂದ ಈಶ್ವರ ಪ್ರಾಪ್ತಿಯನ್ನು ಅಂದರೆ ಆನಂದ ಪ್ರಾಪ್ತಿಯನ್ನು ಮಾಡಿಕೊಳ್ಳುವ ವಿಶೇಷ ಅವಕಾಶವು ಇತರ ಜೀವಿಗಳಿಗಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ಇದೆ. ಮಾನವನ ಮನಸ್ಸು ಕ್ಷಣಕ್ಷಣವೂ ಯಾವುದೇ ವಿಚಾರದಲ್ಲಿ ಸಂಕಲ್ಪ-ವಿಕಲ್ಪ (ಬೇಕು, ಬೇಡ ಎಂಬ ವಿಚಾರ) ಮಾಡಿದರೆ ಬುದ್ಧಿಯು (ವಿವೇಕವು) ಈ ಬಗ್ಗೆ ಸರಿಯಾಗಿ ವಿಮರ್ಶೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಬಲ್ಲುದು. ಆದುದರಿಂದ ನಮಗೂ ಪರಮಾತ್ಮನು ನೀಡಿರುವ ಬುದ್ಧಿಯನ್ನು ಉಪಯೋಗಿಸಿ ಅವನ ಸಂಕಲ್ಪದಂತೆ ಆಧ್ಯಾತ್ಮಿಕ ಸಾಧನೆ ಮಾಡಿ ಆನಂದ ಪ್ರಾಪ್ತಿಮಾಡಿಕೊಳ್ಳಬೇಕು.

ಹೊರ ಮನಸ್ಸು, ಒಳಮನಸ್ಸು, ಬುದ್ಧಿ, ಚಿತ್ತ ಎಂದರೆ ಏನು?

    ನಮ್ಮ ಮನಸ್ಸಿನಲ್ಲಿ ಹೊರಮನಸ್ಸು, ಒಳಮನಸ್ಸು (ಚಿತ್ತ) ಎಂಬ ಎರಡು ಭಾಗಗಳಿವೆ. ಚಿತ್ತದೊಳಗೆ ಹಿಂದಿನ ಜನ್ಮಜನ್ಮಾಂತರಗಳ ಸುಖ-ದುಃಖ, ಬೇಕು ಬೇಡಗಳು, ಆಸೆ ಆಕಾಂಕ್ಷೆಗಳು ಅಭ್ಯಾಸಗಳು, ಸ್ವಭಾವಗಳು ಇತ್ಯಾದಿಗಳ ಸಂಸ್ಕಾರ(ಪಡಿಯಚ್ಚು)ಗಳ ಕೇಂದ್ರಗಳಿದ್ದು. ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ-ಈ ಪಂಚಜ್ಞಾನೇಂದ್ರಿಯಗಳಿಂದ ಬರುವ ಸಂವೇದನೆಗಳನ್ನು ಹೊರಮನಸ್ಸು ಸ್ವೀಕರಿಸಿ, ಬುದ್ಧಿಯ ಮಾಧ್ಯಮದಿಂದ ಅವುಗಳನ್ನು ವರ್ಗೀಕರಿಸಿ, ಒಳಮನಸ್ಸಿಗೆ ವರ್ಗಾಯಿಸಿದಾಗ ಚಿತ್ತದಲ್ಲಿರುವ ಆಯಾಯ ಕೇಂದ್ರದಲ್ಲಿ ಅವುಗಳು ಸಂಗ್ರಹವಾಗುತ್ತವೆ. ಅಲ್ಲಿಂದ ಅವು ಪುನಃ ಹೊರಮನಸ್ಸಿಗೆ - ಹೀಗೆ ಪಯಣಿಸುತ್ತಿರುತ್ತವೆ. ಹೀಗೆ ನಮ್ಮ ಮನಸ್ಸಿನಲ್ಲಿ ದಿನದ ೨೪ ಗಂಟೆಯ ಕಾಲವೂ ವಿಚಾರ ತರಂಗಗಳು ಏಳುತ್ತಿರುತ್ತವೆ. ಆದುದರಿಂದ ನಮ್ಮ ಮನಸ್ಸು ಸದಾ ಕಾರ್ಯನಿರತವಾಗಿದ್ದು ನಮ್ಮ ಸೃಷ್ಟಿಕರ್ತನ ಸ್ಮರಣೆ ಮಾಡಲೂ ಸಮಯವಿಲ್ಲದೆ ಅಶಾಂತಿಯಿಂದ ಚಡಪಡಿಸುತ್ತಿರುತ್ತದೆ. ಚಿತ್ತವು ಶುದ್ಧಿಯಾದಾಗ (ನಿರ್ವಿಚಾರ ಸ್ಥಿತಿಗೆ ಹೋದಾಗ) ಮಾತ್ರ ಶಾಂತಿ ನೆಲೆಸುತ್ತದೆ. ಚಿತ್ತ ಶುದ್ಧಿಗೆ ನಾವೇನು ಮಾಡಬಹುದು? ನೋಡೋಣ. ಚಿತ್ತದೊಳಗಿನ ಕೋಟ್ಯಂತರ ಸಂಸ್ಕಾರಗಳನ್ನು ನಾಶಪಡಿಸಲು ಪರಮಾತ್ಮನ ನಾಮಸ್ಮರಣೆಯೆಂಬ ಅಮೂಲ್ಯ ಬೀಜವನ್ನು ಚಿತ್ತದೊಳಗೆ ಬಿತ್ತಿ, ಆಧ್ಯಾತ್ಮಿಕ ಸಾಧನೆಯೆಂಬ ನೀರು ಗೊಬ್ಬರವನ್ನುಣಿಸಿ ನಾಮ ಸ್ಮರಣೆಯ ಕೇಂದ್ರವು ಚಿತ್ತವನ್ನು ಪೂರ್ತಿ ವ್ಯಾಪಿಸಿದಾಗ ನಿರ್ವಿಚಾರ ಸ್ಥಿತಿಯು ನಿರ್ಮಾಣವಾಗಿ ಮನಸ್ಸು ಶಾಂತವಾಗುತ್ತದೆ. ಶಾಯಿ ತುಂಬಿದ ಬಾಟಲಿಯೊಳಗೆ ಶುದ್ಧ ನೀರನ್ನು ನಿರಂತರವಾಗಿ ತುಂಬಿಸುತ್ತಿದ್ದಂತೆ ಶಾಯಿಯೆಲ್ಲವೂ ಹೊರಗೆ ಹರಿದು ಬಾಟಲಿಯಲ್ಲಿ ಶುದ್ಧ ನೀರು ತುಂಬಿಕೊಳ್ಳುವಂತೆಯೇ ಇದು ನಡೆಯುತ್ತದೆ.

ಆನಂದ ಪ್ರಾಪ್ತಿಗೆ ಇರುವ ಇತರ ಅಡಚಣೆಗಳು

೧) ಪ್ರಾರಬ್ಧ - ನಾವು ಮನುಷ್ಯ ಜನ್ಮಕ್ಕೆ ಬರಬೇಕಾದರೆ ಅನೇಕ ಜನ್ಮಗಳನ್ನು ದಾಟಿ ಬಂದಿದ್ದೇವೆ. ಆ ಜನ್ಮಗಳ ಅವಧಿಯಲ್ಲಿ ನಾವು ಮಾಡಿದ ಒಳ್ಳೆಯ - ಕೆಟ್ಟ ಕರ್ಮಗಳ ಫಲವು ಬೇರೆ ಬೇರೆಯಾಗಿ ಒಟ್ಟು ಸೇರಿ ಸಂಚಿತವೆನಿಸುತ್ತದೆ. (ಸಂಚಿತ ಠೇವಣಿ ಇದ್ದಂತೆ). ಅದರ ಒಂದು ಭಾಗವನ್ನು ಪಡೆದು ಈ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ. ಅದುವೇ ಪ್ರಾರಬ್ಧ. ಯೋಗ್ಯವಾದ ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಹೋದಂತೆ ಪ್ರಾರಬ್ಧವು ಹಾಗೂ ಸಂಚಿತವು ನಶಿಸುತ್ತದೆ. ತದ್ವಿರುದ್ಧವಾಗಿ ವರ್ತಿಸಿದರೆ ಸಂಚಿತದ ಮೂಟೆ ದೊಡ್ಡದಾಗುತ್ತ ಮುಂದಿನ ಅನೇಕ ಜನ್ಮಗಳನ್ನು ದುಃಖದಿಂದ ಕಳೆಯಬೇಕಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಸಾಧ್ಯವಾಗದಿದ್ದರೂ ಆದಷ್ಟು ಹೆಚ್ಚು ನಾಮಸ್ಮರಣೆ (ನಾಮಜಪ) ಮಾಡಬೇಕು.

ನಾಮಜಪ ಎಂದರೇನು?
    ನಾಮವೆಂದರೆ ದೇವರ ಹೆಸರು. ಜಪವೆಂದರೆ ಪದೇ ಪದೇ ಅದನ್ನು ಉಚ್ಚರಿಸುವುದು. ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕಃ|| ಅಂದರೆ ನಮ್ಮ ಜನ್ಮಜನ್ಮಾಂತರಗಳ ಪಾಪವನ್ನು ನಾಶಮಾಡಿ ನಮ್ಮನ್ನು ಜನನ - ಮರಣಗಳ ಚಕ್ರದಿಂದ ಮುಕ್ತಗೊಳಿಸುವಂತಹದ್ದೇ ಜಪ

ನಾಮಜಪದ ಲಾಭಗಳು
ಅ) ನಾಮಜಪದಿಂದ ಮನಸ್ಸು ಶಾಂತವಾಗುವುದರಿಂದ ಮಾನಸಿಕ ಒತ್ತಡದಿಂದ ನಿರ್ಮಾಣವಾಗುವ ಶಾರೀರಿಕ ರೋಗಗಳು ಬರುವುದಿಲ್ಲ.
ಆ) ಮನಸ್ಸಿನ ಏಕಾಗ್ರತೆ ಹೆಚ್ಚುವುದು.(ಏಕೆಂದರೆ ನಾಮಜಪದಲ್ಲಿ ಮನಸ್ಸು ತಲ್ಲೀನವಾಗಿರುವುದು)
ಇ) ನಾವು ಮಾಡುವ ಕರ್ಮಗಳ ಫಲವು ಈಶ್ವರನಿಗೆ ಅರ್ಪಿತವಾಗಿ ಕರ್ಮವು ಅಕರ್ಮ ಕರ್ಮವಾಗುತ್ತದೆ.
ಈ) ಅನೇಕ ತೀರ್ಥಕ್ಷೇತ್ರಗಳ ದರ್ಶನದ ಮತ್ತು ಯಜ್ಞಗಳ ಫಲವು ಕೇವಲ ನಾಮಜಪದಿಂದ ಸಿಗುವುದು
ಉ) ಮೃತ್ಯುವಿನ ನಂತರವೂ ನಾಮ ಜಪದ ಲಾಭವು ಸಿಗುವುದು.

ಯಾವ ದೇವತೆಯ ಜಪ ಮಾಡಬೇಕು?
    ಹಿಂದುಗಳಿಗೆ ೩೩ ಕೋಟಿ ದೇವತೆಗಳಿದ್ದಾರೆ. ಗುರುಪ್ರಾಪ್ತಿಯಾಗಿದ್ದರೆ ಗುರುಗಳು ಕೊಟ್ಟ ಜಪವನ್ನು ಮಾಡಬೇಕು. ಇಲ್ಲವಾದರೆ ಕುಲದೇವತೆಯ ನಾಮಸ್ಮರಣೆ ಮಾಡಬೇಕು. ಕುಲದೇವರು ಗಣಪತಿಯಾಗಿದ್ದರೆ  ಶ್ರೀ ಗಣೇಶಾಯ ನಮಃ ವೆಂಕಟ್ರಮಣ ಆಗಿದ್ದರೆ "ಶ್ರೀ ವೆಂಕಟೇಶಾಯ ನಮಃ", ಲಕ್ಷ್ಮಿ ಆಗಿದ್ದರೆ "ಶ್ರೀ ಲಕ್ಷ್ಮೀದೇವ್ಯೈ ನಮಃ";  ಶಿವ ಆಗಿದ್ದರೆ "ನಮಃ ಶಿವಾಯ" ಹೀಗೆ. ಕುಲದೇವರ ಹೆಸರು ಗೊತ್ತಿಲ್ಲವಾದರೆ "ಶ್ರೀ ಕುಲದೇವತಾಯೈ ನಮಃ" ಹೀಗೆ. ಕ್ರಿಶ್ಚಿಯನ್ನರು ’ನಮೋ ಮರಿಯೇ, ನಮೋ ಯೇಸುವೇ’ ಹೀಗೆ. ಮುಸಲ್ಮಾನರು ಯಾ ಅಲ್ಲಾ, ಅಲ್ಲಾಹು ಅಕ್ಬರ್ ಹೀಗೆ. ಜೈನರು ನವಕಾರ ಮಂತ್ರ (ಓಂ ನಮೋ ಅರಿಹಂತಾಣಾಂ...) ಹೇಳಬೇಕು. ದಿನದಲ್ಲಿ ಸ್ಥಳ, ಕಾಲ, ಮಡಿಮೈಲಿಗೆಗಳ ಯಾವುದೇ ನಿಬಂಧನೆಯಿಲ್ಲದೆ ದೈನಂದಿನ ಎಲ್ಲ ಕೆಲಸ ಕಾರ್ಯಗಳೊಂದಿಗೆ ಯಾರು ಬೇಕಾದರೂ ಎಷ್ಟು ಬೇಕಾದರೂ ನಾಮ ಜಪಿಸಬಹುದು. ಮಹಿಳೆಯರು ತಿಂಗಳ ಎಲ್ಲಾ ದಿನಗಳಲ್ಲೂ ನಾಮಸ್ಮರಣೆ ಮಾಡಬಹುದು.

೨. ಎರಡನೆಯ ಅಡಚಣೆಯೆಂದರೆ ಪಿತೃಗಳ ಅವಕೃಪೆ - ಪ್ರಸ್ತುತ ಕಾಲದಲ್ಲಿ ಹೆಚ್ಚಿನವರು ಪಿತೃಗಳ ಆತ್ಮಗಳ ಸದ್ಗತಿಗಾಗಿ ಶ್ರಾದ್ಧ, ಮಹಾಲಯ, ಪಕ್ಷ ಇವುಗಳನ್ನು ಮಾಡುವುದಿಲ್ಲ. ಆದ್ದರಿಂದ ಅವರ ಆತ್ಮಗಳು ಅತೃಪ್ತವಾಗಿರುತ್ತವೆ. ಆದುದರಿಂದ ಕುಟುಂಬದಲ್ಲಿ ಮದುವೆಯಾಗದಿರುವುದು, ಪತಿಪತ್ನಿಯಲ್ಲಿ ಹೊಂದಾಣಿಕೆ ಇಲ್ಲದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಪಾತವಾಗುವುದು, ಪೂರ್ತಿ ಸಮಯವಾಗದೇ ಅವಧಿಪೂರ್ವ ಹೆರಿಗೆಯಾಗುವುದು, ಅಂಗವಿಕಲ ಅಥವಾ ಬುದ್ಧಮಾಂದ್ಯ ಮಕ್ಕಳು ಹುಟ್ಟುವುದು, ಮಕ್ಕಳು ಚಿಕ್ಕ ಪ್ರಾಯದಲ್ಲೇ ತೀರಿ ಹೋಗುವುದು, ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಸೋಲುಂಟಾಗುವುದು, ವ್ಯಸನಗಳು ಹಿಡಿಯುವುದು, ಮಾನಸಿಕ ರೋಗಗಳು ಉಂಟಾಗುವುದು- ಇವೆಲ್ಲ ಸಂಭವಿಸುತ್ತದೆ. ಆದ್ದರಿಂದ ನಮ್ಮ ನಮ್ಮ ಪದ್ಧತಿಯಂತೆ ಶ್ರಾದ್ಧ, ಮಹಾಲಯ, ಪಕ್ಷ ಇಂತಹ ವಾರ್ಷಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪ್ರತಿದಿನ ಶ್ರೀ ಗುರುದತ್ತಾತ್ರೇಯರ ಜಪವನ್ನು ಶ್ರೀ ಗುರುದೇವ ದತ್ತ ಈ ರೀತಿಯಲ್ಲಿ ದಿನಾಲೂ ಸುಮಾರು ಒಂದು ಗಂಟೆಯಷ್ಟಾದರೂ ಹೊತ್ತು ಮಾಡಬೇಕು.

ದತ್ತ ಜಪದಿಂದಾಗುವ ಲಾಭಗಳು
ಅ) ಪಿತೃಗಳಿಗೆ ಸದ್ಗತಿ ಸಿಗುತ್ತದೆ.
ಆ) ಪಿತೃ ಋಣ ತೀರುತ್ತದೆ
ಇ) ಪಿತೃಗಳ ಆಶೀರ್ವಾದ ದೊರೆತು, ಆಧ್ಯಾತ್ಮಿಕ ಉನ್ನತಿ ಸುಗಮವಾಗುತ್ತದೆ.

    ಇವು ಪ್ರಾರಂಭಿಕ ಹಂತದ ಸಾಧನೆಗಳು ಮಾತ್ರ. ಮುಂದಿನ ಹಂತದಲ್ಲಿ ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ (ನಿರಪೇಕ್ಷ ಪ್ರೇಮ), ಸ್ವಭಾವದೋಷ ನಿರ್ಮೂಲನ, ಅಹಂ ನಿರ್ಮೂಲನ, ಗುಣವೃದ್ಧಿ - ಈ ಹಂತಗಳಿವೆ. ಅನೇಕದಿಂದ ಏಕಕ್ಕೆ, ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು, ಮಟ್ಟಾನುಸಾರ, ವರ್ಣಾನುಸಾರ, ಆಶ್ರಮಾನುಸಾರ, ಕಾಲಾನುಸಾರ ಸಾಧನೆ ಮಾಡಲು ಗುರುಗಳು ಮುಂದುಮುಂದಿನ ಮಾರ್ಗದರ್ಶನ ಮಾಡುತ್ತಾರೆ. ಅವರ ಮಾರ್ಗದರ್ಶನದಂತೆ ಸಾಧನೆ ಮಾಡಿ ಎಲ್ಲರೂ ಗುರು ಕೃಪೆಯನ್ನು ಗಳಿಸಿ ಈಶ್ವರ ಪ್ರಾಪ್ತಿ (ಆನಂದ ಪ್ರಾಪ್ತಿ) ಮಾಡಿಕೊಳ್ಳುವಂತಾಗಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.

ಹೆಚ್ಚಿನ ಮಾಹಿತಿಗೆ ಸನಾತನ ಸಂಸ್ಥೆಯ ಗ್ರಂಥಗಳು - ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ, ಅಧ್ಯಾತ್ಮ, ನಾಮಸಂಕೀರ್ತನಯೋಗದ ಮಹತ್ವ ಇವುಗಳನ್ನು ಓದಿರಿ.

ಇತರ ವಿಷಯಗಳು
ಹಿಂದೂ ಧರ್ಮ ಪ್ರತಿಮಾ ಪೂಜೆಯನ್ನು ಹೇಳುತ್ತದೆಯೇ? ಪ್ರತಿಮೆಯೇ ಭಗವಂತನೇ?
ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ!
ಮೂರ್ತಿ ಪೂಜೆ
ಸ್ತ್ರೀಯರು, ಶೂದ್ರರು... ಭಗವದ್ಗೀತೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಹುದೇ?
ಸಂಸಾರಿಗಳಿಗೆ ಸಾಕ್ಷಾತ್ಕಾರ ಹೇಗೆ ಸಾಧ್ಯ?

ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ


ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆ - ಕುಲದೇವರ ನಾಮಜಪ

ನಮಗೆ ಪೂಜೆ, ಆರತಿ, ಭಜನೆ ಇತ್ಯಾದಿ ಉಪಾಸನೆಗಳಿಂದ ದೇವತೆಯ ತತ್ತ್ವದ ಲಾಭವಾಗುತ್ತದೆ; ಆದರೆ ಈ ಎಲ್ಲ ಉಪಾಸನೆಗಳಿಗೆ ಮಿತಿಯಿರುವುದರಿಂದ (ಸಮಯ ಮತ್ತು ಸ್ಥಳದ ಮಿತಿ) ದೊರಕುವ ಲಾಭವೂ ಒಂದು ಮಿತಿಯೊಳಗಿರುತ್ತದೆ. ದೇವತೆಯ ತತ್ತ್ವದ ಲಾಭವು ಸತತವಾಗಿ ದೊರಕಲು ದೇವತೆಯ ಉಪಾಸನೆಯನ್ನೂ ಸತತವಾಗಿ ಮಾಡಬೇಕಾಗುತ್ತದೆ. ಈ ರೀತಿ ಸತತವಾಗಿ ಆಗುವಂತಹ ಏಕೈಕ ಉಪಾಸನೆಯೆಂದರೆ ‘ನಾಮಜಪ’. ಕಲಿಯುಗಕ್ಕಾಗಿ ನಾಮಜಪವು ಸುಲಭ ಮತ್ತು ಸರ್ವೋತ್ತಮ ಉಪಾಸನೆಯಾಗಿದೆ. ನಾಮಜಪವು ಗುರುಕೃಪಾಯೋಗಾನುಸಾರ ಸಾಧನೆಯ ಅಡಿಪಾಯವಾಗಿದೆ.

‘ಕುಲದೇವತೆ’ ಉಪಾಸನೆಯ ಇತಿಹಾಸ : ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು.

ವ್ಯುತ್ಪತ್ತಿ ಮತ್ತು ಅರ್ಥ: ಕುಲ ಎಂದರೆ ಮೂಲಾಧಾರ ಚಕ್ರ, ಶಕ್ತಿ ಅಥವಾ ಕುಂಡಲಿನಿ. ಕುಲ + ದೇವತೆ ಅಂದರೆ ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ.

೧. ಕುಲದೇವತೆಯ ನಾಮಜಪದ ಮಹತ್ವ: ಗುರುಪ್ರಾಪ್ತಿಯಾಗಿದ್ದರೆ ಮತ್ತು ಗುರುಗಳು ಗುರುಮಂತ್ರವನ್ನು ಕೊಟ್ಟಿದ್ದರೆ ಗುರುಮಂತ್ರವನ್ನೇ ಜಪಿಸಬೇಕು, ಇಲ್ಲದಿದ್ದಲ್ಲಿ ಈಶ್ವರನ ಅನೇಕ ಹೆಸರುಗಳ ಪೈಕಿ ಕುಲದೇವತೆಯ ನಾಮಜಪವನ್ನು ಮುಖ್ಯವಾಗಿ ಮುಂದಿನ ಎರಡು ಕಾರಣಗಳಿಗಾಗಿ ಪ್ರತಿದಿನ ಕನಿಷ್ಠ ೧ ರಿಂದ ೨ ಗಂಟೆಗಳ ಕಾಲ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು.
ಅ. ಯಾವ ಕುಲದ ಕುಲದೇವತೆಯು, ಅಂದರೆ ಕುಲದೇವಿ ಅಥವಾ ಕುಲದೇವ, ಇವರು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ.
ಆ. ಕೊನೆಯ ಶ್ವಾಸದವರೆಗೂ ಪ್ರತಿಯೊಬ್ಬರ ಜೊತೆಗಿರುವ ಪ್ರಾರಬ್ಧದ ತೀವ್ರತೆಯು ಕುಲದೇವತೆಯ ನಾಮಜಪದಿಂದಲೇ ಕಡಿಮೆಯಾಗುತ್ತದೆ.

ಕುಲದೇವತೆಯು ಪೃಥ್ವಿತತ್ತ್ವದ ದೇವತೆಯಾಗಿರುವುದರಿಂದ ಅವಳ ನಾಮಜಪದಿಂದಲೇ ಸಾಧನೆಯನ್ನು ಆರಂಭಿಸುವುದರಿಂದ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. ಕ್ಷಮತೆಯಿಲ್ಲದೇ ಮೊದಲು ತೇಜತತ್ತ್ವದ (ಉದಾ. ಗಾಯತ್ರೀ ಮಂತ್ರದ) ಉಪಾಸನೆಯನ್ನು ಮಾಡಿದರೆ ತೊಂದರೆಗಳಾಗಬಹುದು.

೨. ಕುಲದೇವತೆಯ ನಾಮಜಪ ಮಾಡುವ ಪದ್ಧತಿ: ಕುಲದೇವತೆಯ ಹೆಸರಿಗೆ ಪ್ರಾರಂಭದಲ್ಲಿ ‘ಶ್ರೀ’ ಸೇರಿಸಬೇಕು. ಹೆಸರಿಗೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಸೇರಿಸಿ, ಕೊನೆಗೆ ‘ನಮಃ’ ಎನ್ನಬೇಕು. ಉದಾಹರ‍ಣೆಗಾಗಿ, ಕುಲದೇವತೆಯು ‘ಗಣೇಶ’ ಆಗಿದ್ದರೆ ‘ಶ್ರೀ ಗಣೇಶಾಯ ನಮಃ|’, ಕುಲದೇವಿಯು ‘ಭವಾನಿ’ ಆಗಿದ್ದರೆ ‘ಶ್ರೀ ಭವಾನಿದೇವ್ಯೈ ನಮಃ|’ ಎಂದು ಹೇಳಬೇಕು. ಚತುರ್ಥಿ ಪ್ರತ್ಯಯದ ಅರ್ಥವು ‘ಗೆ’ ಎಂದಾಗಿದೆ. ಯಾವ ದೇವತೆಯ ನಾಮಜಪವನ್ನು ಮಾಡುತ್ತೇವೆಯೋ, ಆ ‘ದೇವತೆಗೆ ನಮಸ್ಕಾರ’ ಎಂದು ಇದರ ಅರ್ಥವಾಗಿದೆ.

೩. ಕುಲದೇವತೆಯು ಗೊತ್ತಿಲ್ಲದಿದ್ದರೆ ಯಾವ ನಾಮಜಪ ಮಾಡಬೇಕು?: ಕುಲದೇವತೆಯ ಗೊತ್ತಿಲ್ಲದಿದ್ದರೆ ಇಷ್ಟದೇವತೆಯ ಅಥವಾ ‘ಶ್ರೀ ಕುಲದೇವತಾಯೈ ನಮಃ|’ ಎಂದು ನಾಮಜಪ ಮಾಡಬೇಕು. ಅದು ಪೂರ್ಣವಾದ ನಂತರ ಕುಲದೇವತೆಯ ಹೆಸರು ಹೇಳುವವರು ಭೇಟಿಯಾಗುತ್ತಾರೆ. ಕುಲದೇವತೆಯ ನಾಮಜಪ ಪೂರ್ಣವಾದ ನಂತರ ಗುರುಗಳು ಸ್ವತಃ ಸಾಧಕನ ಜೀವನದಲ್ಲಿ ಬಂದು ಗುರುಮಂತ್ರವನ್ನು ಕೊಡುತ್ತಾರೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಸನಾತನದ ಸತ್ಸಂಗಗಳಲ್ಲಿ ಸಿಗುತ್ತದೆ.)

ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ಕುಲದೇವಿಯ ನಾಮಜಪವನ್ನು ಮಾಡಬೇಕೋ?

ಅ. ಕೇವಲ ಕುಲದೇವರು ಇದ್ದರೆ ಕುಲದೇವರ ನಾಮಜಪವನ್ನು ಮಾಡಬೇಕು ಮತ್ತು ಕೇವಲ ಕುಲದೇವಿ ಇದ್ದರೆ ಕುಲದೇವಿಯ ನಾಮಜಪವನ್ನು ಮಾಡಬೇಕು.
ಆ. ಯಾರಾದರೊಬ್ಬರಿಗೆ ಕುಲದೇವರು ಮತ್ತು ಕುಲದೇವಿ ಹೀಗೆ ಇಬ್ಬರೂ ಇದ್ದರೆ ಅವರು ಮುಂದಿನ ಕಾರಣಗಳಿಗಾಗಿ ಕುಲದೇವಿಯ ನಾಮಜಪವನ್ನು ಮಾಡಬೇಕು. ಚಿಕ್ಕವರಾಗಿದ್ದಾಗ ತಂದೆ-ತಾಯಿ ಇಬ್ಬರೂ ಇದ್ದರೂ ನಾವು ತಾಯಿಯಲ್ಲಿಯೇ ಹೆಚ್ಚು ಹಠ ಮಾಡುತ್ತೇವೆ. ಏಕೆಂದರೆ ತಾಯಿಯು ಬೇಗನೇ ಹಠವನ್ನು ಪೂರೈಸುತ್ತಾಳೆ. ಹಾಗೆಯೇ ಕುಲದೇವರಿಗಿಂತಲೂ ಕುಲದೇವಿಯು ಬೇಗನೇ ಪ್ರಸನ್ನಳಾಗುತ್ತಾಳೆ.
ಇ. ಯಾರಾದರೊಬ್ಬರ ಕುಲದೇವರು ಗಣೇಶಪಂಚಾಯತನ ಅಥವಾ ವಿಷ್ಣುಪಂಚಾಯತನ ಈ ಪ್ರಕಾರ ಇದ್ದರೆ ಆ ಪಂಚಾಯತನದಲ್ಲಿನ ಪ್ರಮುಖ ದೇವತೆಗಳಾದ ಶ್ರೀ ಗಣೇಶ ಅಥವಾ ಶ್ರೀವಿಷ್ಣು ಇವರನ್ನು ಕುಲದೇವರೆಂದು ತಿಳಿದುಕೊಳ್ಳಬೇಕು.
ಈ. ಕುಲದೇವರು ಗೊತ್ತಿಲ್ಲದಿದ್ದರೆ ಕುಟುಂಬದಲ್ಲಿನ ಹಿರಿಯ ವ್ಯಕ್ತಿಗಳು, ಬಂಧುಗಳು, ಜಾತಿಬಾಂಧವರು, ಹಳ್ಳಿಗಳಲ್ಲಿನ ಹಿರಿಯ ವ್ಯಕ್ತಿಗಳು, ಪುರೋಹಿತರು ಮುಂತಾದವರಿಂದ ಕುಲದೇವರು ಯಾರು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಉ. ಸ್ತ್ರೀಯು ವಿವಾಹವಾದ ನಂತರ ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ತವರು ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ?: ಸಾಮಾನ್ಯವಾಗಿ ವಿವಾಹದ ನಂತರ ಸ್ತ್ರೀಯರ ಹೆಸರು ಬದಲಾಗುತ್ತದೆ. ತವರು ಮನೆಯ ಎಲ್ಲವನ್ನೂ ತ್ಯಾಗ ಮಾಡಿ ಸ್ತ್ರೀಯು ಅತ್ತೆ ಮನೆಗೆ ಬರುತ್ತಾಳೆ. ಒಂದು ಅರ್ಥದಲ್ಲಿ ಅದು ಅವಳ ಪುನರ್ಜನ್ಮವೇ ಆಗಿರುತ್ತದೆ; ಆದುದರಿಂದ ಮದುವೆಯಾದ ಮೇಲೆ ಸ್ತ್ರೀಯು ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕು. ಆದರೆ ಯಾರಾದರೊಬ್ಬ ಸ್ತ್ರೀಯು ಚಿಕ್ಕಂದಿನಿಂದಲೇ ನಾಮಜಪವನ್ನು ಮಾಡುತ್ತಿದ್ದರೆ ಅಥವಾ ಉನ್ನತ ಸಾಧಕಳಾಗಿದ್ದರೆ ಅವಳು ತನ್ನ ಮೊದಲಿನ ನಾಮಜಪವನ್ನೇ ಮಾಡಬೇಕು. ಮದುವೆಗಿಂತ ಮೊದಲು ಅವಳಿಗೆ ಗುರುಗಳು ನಾಮಜಪವನ್ನು ಕೊಟ್ಟಿದ್ದರೆ ಆ ಜಪವನ್ನೇ ಮಾಡಬೇಕು.

1. ಕುಲದೇವರ ನಾಮಜಪವನ್ನು ಮಾಡಿ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿ ಹೊಂದಿದ ಇತಿಹಾಸದ ದೊಡ್ಡ ಉದಾಹರಣೆಯೆಂದರೆ ಛತ್ರಪತಿ ಶಿವಾಜಿ ಮಹಾರಾಜರು. ಭವಾನಿದೇವಿಯು ಶಿವಾಜಿ ಮಹಾರಾಜರ ಕುಲದೇವಿಯಾಗಿದ್ದಳು. ಗುರುಪ್ರಾಪ್ತಿಯಾದ ನಂತರವೂ ಸಮರ್ಥ ರಾಮದಾಸಸ್ವಾಮಿಗಳು ಶಿವಾಜಿ ಮಹಾರಾಜರಿಗೆ ಅದೇ ನಾಮಜಪವನ್ನು ಗುರುಮಂತ್ರವನ್ನಾಗಿ ಕೊಟ್ಟಿದ್ದರು.
2. ಸಂತ ತುಕಾರಾಮ ಮಹಾರಾಜರು ಯಾವ ಪಾಂಡುರಂಗನ ಅನನ್ಯಭಕ್ತಿ ಮಾಡಿ ಸದೇಹ ಮುಕ್ತಿ ಹೊಂದಿದರೋ, ಆ ಪಾಂಡುರಂಗನು ಅವರ ಕುಲದೇವನಾಗಿದ್ದನು.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.
 
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ನಾಮಸಂಕೀರ್ತನಯೋಗ')

ಸಂಬಂಧಿತ ವಿಷಯಗಳು
Dharma Granth

ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!

ನಾಮಜಪವನ್ನು ಮುಂದಿನಂತೆ ಹಂತಹಂತವಾಗಿ ಹೆಚ್ಚಿಸಬೇಕು. 
ಪ್ರತಿಯೊಂದು ಹಂತವನ್ನು ದಾಟಲು ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರವಾಗಿ ಅವರಿಗೆ ೬ ತಿಂಗಳಿಂದ ಎರಡು ವರ್ಷಗಳ ಕಾಲ ತಗಲಬಹುದು.

೧. ಪ್ರತಿದಿನ ಕನಿಷ್ಟಪಕ್ಷ ೩ ಮಾಲೆ ಅಥವಾ ೧೦ ನಿಮಿಷ ನಾಮಜಪ ಮಾಡಬೇಕು.
೨. ಯಾವುದೇ ಕೆಲಸವನ್ನು ಮಾಡದೇ ಇರುವಾಗ ನಾಮಜಪವನ್ನು ಮಾಡಬೇಕು.
೩. ಸ್ನಾನ ಮಾಡುವುದು, ಅಡುಗೆ ಮಾಡುವುದು, ನಡೆದಾಡುವುದು, ಬಸ್ಸು ಅಥವಾ ರೈಲಿನಲ್ಲಿ ಪ್ರವಾಸ ಮಾಡುವುದು ಮುಂತಾದ ಶಾರೀರಿಕ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಮಾಡಬೇಕು.
೪. ವರ್ತಮಾನಪತ್ರಿಕೆಗಳನ್ನು ಓದುವಾಗ, ದೂರದರ್ಶನದಲ್ಲಿನ ಕಾರ್ಯಕ್ರಮಗಳನ್ನು ನೋಡುವಾಗ ಅಂದರೆ ನಮ್ಮ ದೈನಂದಿನ ಜೀವನದಲ್ಲಿ ಮಹತ್ವವಿಲ್ಲದಂತಹ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೫. ಕಾರ್ಯಾಲಯದ ಕಾಗದ ಪತ್ರಗಳನ್ನು ಓದುವಾಗ ಅಥವಾ ಬರೆಯುವಾಗ ಅಂದರೆ ದೈನಂದಿನ ಜೀವನದಲ್ಲಿನ ಮಹತ್ವದ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು.
೬. ಇತರರೊಡನೆ ಮಾತನಾಡುವಾಗ ಜಪ ಮಾಡಬೇಕು.

೫ ಮತ್ತು ೬ ನೆಯ ಹಂತದಲ್ಲಿ ಶಬ್ದಗಳಲ್ಲಿ ನಾಮಜಪವನ್ನು ಮಾಡುವುದು ಅಪೇಕ್ಷಿತವಾಗಿರದೇ ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ನಿದ್ದೆಯಲ್ಲಿಯೂ ನಾಮಜಪವು ನಡೆಯುತ್ತದೆ, ಅಂದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ 'ನಾಮಸಂಕೀರ್ತನಯೋಗ')

ಸಂಬಂಧಿತ ವಿಷಯಗಳು

ಗುರುಗಳ ಮಹತ್ವ

ವರ್ತಮಾನ (ಪ್ರಸ್ತುತ) ಜನ್ಮದಲ್ಲಿನ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಪ್ರತಿಯೊಬ್ಬರೂ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾರೆ; ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು’ ಎಂಬುದರ ಕಲ್ಪನೆಯನ್ನೂ ಸಹ ಮಾಡಲು ಆಗುವುದಿಲ್ಲ. ಇದು ಮುಂದಿನ ಅಂಶಗಳಿಂದ ಸ್ಪಷ್ಟವಾಗುವುದು.

ಗುರುಮಹಿಮೆ
೧. ತಂದೆ ಪುತ್ರನಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ, ಆದರೆ ಗುರುಗಳು ಅವನನ್ನು ಜನ್ಮಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

೨. ಒಂದು ಬದ್ಧ ಜೀವ ಇನ್ನೊಂದು ಬದ್ಧ ಜೀವವನ್ನು ಉದ್ಧಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ಧಾರವನ್ನು ಮಾಡಬಲ್ಲರು.

೩. ಸದ್ಗುರುಗಳು ಲಭಿಸದೇ (ಮೋಕ್ಷಕ್ಕೆ ಹೋಗುವ) ಮಾರ್ಗವು ಸಿಗುವುದಿಲ್ಲ; ಆದುದರಿಂದ ಮೊದಲು ಅವರ ಚರಣಗಳನ್ನು ಹಿಡಿಯಬೇಕು. (ಅವರ ಕೃಪೆ ಪ್ರಾಪ್ತವಾಗಲು ಪ್ರಯತ್ನಿಸಬೇಕು.) ಸದ್ಗುರುಗಳು ಅವರ ಶಿಷ್ಯನನ್ನು ಕ್ಷಣಾರ್ಧದಲ್ಲಿ ತಮ್ಮಂತೆ (ಮೋಕ್ಷದ ಅಧಿಕಾರಿಯನ್ನಾಗಿ) ಮಾಡುತ್ತಾರೆ. ಅವರಿಗೆ ಕಾಲ, ಸಮಯದ ಆವಶ್ಯಕತೆ ಇರುವುದಿಲ್ಲ. ಸದ್ಗುರುಗಳ ಮಹಿಮೆ ಎಷ್ಟು ಅಗಾಧವಾಗಿದೆ ಎಂದರೆ, ಅವರಿಗೆ ಸ್ಪರ್ಶಮಣಿಯ ಉಪಮೆಯೂ ಶೋಭಿಸುವುದಿಲ್ಲ. - ಸಂತ ತುಕಾರಾಮ ಮಹಾರಾಜರು

ಗುರುಗಳ ಆವಶ್ಯಕತೆ
೧. ಒಬ್ಬರೇ ಸಾಧನೆ ಮಾಡಿ ಸ್ವಬಲದ ಮೇಲೆ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾಗಿರುತ್ತದೆ. ಇದಕ್ಕಿಂತ ಅಧ್ಯಾತ್ಮದ ಓರ್ವ ಅಧಿಕಾರಿ ವ್ಯಕ್ತಿಯ, ಅಂದರೆ ಗುರು ಅಥವಾ ಸಂತರ ಕೃಪೆಯನ್ನು ಸಂಪಾದಿಸಿದರೆ, ಈಶ್ವರಪ್ರಾಪ್ತಿಯ ಧ್ಯೇಯವು ಬೇಗನೇ ಸಾಧ್ಯವಾಗುತ್ತದೆ; ಆದುದರಿಂದಲೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಹೇಳುತ್ತಾರೆ, ಇದಕ್ಕಾಗಿ ಗುರುಪ್ರಾಪ್ತಿಯಾಗುವುದು ಆವಶ್ಯಕವಾಗಿದೆ.

೨. ಗುರುಗಳು ಶಿಷ್ಯನ ಅಜ್ಞಾನವನ್ನು ಹೋಗಲಾಡಿಸಿ, ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು, ಅವನಿಗೆ ಸಾಧನೆ ಹೇಳುತ್ತಾರೆ, ಅದನ್ನು ಅವನಿಂದ ಮಾಡಿಸಿಕೊಳ್ಳುತ್ತಾರೆ ಮತ್ತು ಅವನಿಗೆ ಅನುಭೂತಿಗಳನ್ನೂ ಕೊಡುತ್ತಾರೆ. ಗುರುಗಳ ಗಮನವು ಶಿಷ್ಯನ ಲೌಕಿಕ ಸುಖದ ಕಡೆಗೆ ಇರುವುದಿಲ್ಲ (ಏಕೆಂದರೆ ಅದು ಪ್ರಾರಬ್ಧಕ್ಕನುಸಾರ ಇರುತ್ತದೆ), ಆಧ್ಯಾತ್ಮಿಕ ಉನ್ನತಿಯ ಕಡೆಗಿರುತ್ತದೆ.

ಗುರುತತ್ತ್ವವು ಒಂದೇ ಆಗಿರುತ್ತದೆ: ಗುರುಗಳೆಂದರೆ ಸ್ಥೂಲದೇಹವಲ್ಲ. ಗುರುಗಳಿಗೆ ಸೂಕ್ಷ್ಮದೇಹ (ಮನಸ್ಸು) ಮತ್ತು ಕಾರಣದೇಹ (ಬುದ್ಧಿ) ಇರುವುದಿಲ್ಲ, ಅವರು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುತ್ತಾರೆ; ಅಂದರೆ ಎಲ್ಲ ಗುರುಗಳ ಮನಸ್ಸು ಮತ್ತು ಬುದ್ಧಿಯು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಾಗಿರುವುದರಿಂದ ಅವರು ಒಂದೇ ಆಗಿರುತ್ತಾರೆ. ಆದುದರಿಂದ ಎಲ್ಲ ಗುರುಗಳು ಬಾಹ್ಯತಃ (ಹೊರಗಿನಿಂದ) ಸ್ಥೂಲದೇಹದಿಂದ ಪ್ರತ್ಯೇಕವಾಗಿ ಕಂಡರೂ, ಒಳಗಿನಿಂದ ಮಾತ್ರ ಅವರು ಒಂದೇ ಆಗಿರುತ್ತಾರೆ. ಹೇಗೆ ಆಕಳಿನ ಯಾವುದೇ ಕೆಚ್ಚಲಿನಿಂದ ಒಂದೇ ರೀತಿಯ ಶುದ್ಧ ಮತ್ತು ನಿರ್ಮಲ ಹಾಲು ಬರುತ್ತದೆಯೋ, ಹಾಗೆಯೇ ಪ್ರತಿಯೊಬ್ಬ ಗುರುಗಳಲ್ಲಿ ಗುರುತತ್ತ್ವವು ಒಂದೇ ಆಗಿರುವುದರಿಂದ ಅವರಿಂದ ಬರುವ ಆನಂದಲಹರಿಗಳೂ ಒಂದೇ ಆಗಿರುತ್ತವೆ. ಹೇಗೆ ಸಮುದ್ರದ ಅಲೆಗಳು ತೀರದ ಕಡೆಗೆ ಬರುತ್ತವೆಯೋ, ಹಾಗೆಯೇ, ಬ್ರಹ್ಮ/ಈಶ್ವರನ ಅಲೆಗಳು, ಅಂದರೆ ಗುರುಗಳು ಸಮಾಜದ ಕಡೆಗೆ ಬರುತ್ತಾರೆ. ಹೇಗೆ ಎಲ್ಲ ಅಲೆಗಳ ನೀರಿನ ರುಚಿಯು ಒಂದೇ ಆಗಿರುತ್ತದೆಯೋ, ಹಾಗೆಯೇ ಎಲ್ಲ ಗುರುಗಳ ತತ್ತ್ವ ಒಂದೇ, ಅಂದರೆ ಬ್ರಹ್ಮವೇ ಆಗಿರುತ್ತದೆ. ನೀರಿನ ಟ್ಯಾಂಕಿಗೆ ಅನೇಕ ಚಿಕ್ಕ-ದೊಡ್ಡ ನಲ್ಲಿಗಳಿದ್ದರೂ, ಪ್ರತಿಯೊಂದು ನಲ್ಲಿಯಿಂದಲೂ ಟ್ಯಾಂಕಿಯ ನೀರೇ ಬರುತ್ತದೆ. ವಿದ್ಯುತ್ ದೀಪಗಳು ಬೇರೆಬೇರೆ ಆಕಾರಗಳಲ್ಲಿದ್ದರೂ, ಹರಿಯುವ ವಿದ್ಯುತ್‌ನಿಂದಾಗಿ ನಿರ್ಮಾಣವಾಗುವ ಪ್ರಕಾಶವೇ ಅವುಗಳಿಂದ ಹೊರ ಬೀಳುತ್ತದೆ. ಹಾಗೆಯೇ ಗುರುಗಳು ಬಾಹ್ಯತಃ ಬೇರೆಬೇರೆಯಾಗಿ ಕಂಡರೂ, ಅವರಲ್ಲಿರುವ ಗುರುತತ್ತ್ವ, ಅಂದರೆ ಈಶ್ವರೀತತ್ತ್ವವು ಒಂದೇ ಆಗಿರುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ‘ಗುರುಗಳಿಗೆ ಸಂಬಂಧಿಸಿದ ಗ್ರಂಥಮಾಲಿಕೆ’)

ಸಂಬಂಧಿತ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ

ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ

ಪ್ರತಿಯೊಂದು ಜನ್ಮದಲ್ಲಿ ಚಿಕ್ಕವರಿಂದ ಅನೇಕ ವರ್ಷಗಳವರೆಗೆ ಕಲಿತು ಅರಿತುಕೊಂಡ ಬುದ್ಧಿಗೆ ತಿಳಿಯುವ ಜ್ಞಾನವು ಮುಂದಿನ ಜನ್ಮದಲ್ಲಿ ಉಪಯೋಗಕ್ಕೆ ಬರುವುದಿಲ್ಲ, ಉದಾ. ಪ್ರತಿಯೊಂದು ಜನ್ಮದಲ್ಲೂ ಮತ್ತೆ ‘ಅ ಆ ಇ ಈ’ ಕಲಿಯಬೇಕಾಗುತ್ತದೆ.
ಇದಕ್ಕೆ ವಿರುದ್ಧವಾಗಿ ಜೀವಾತ್ಮ ಮತ್ತು ಶಿವಾತ್ಮಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡಿದ ನಂತರ ಬಂದ ಅನುಭೂತಿಗಳ ಸ್ಮರಣೆಯು ಮುಂದಿನ ಜನ್ಮದಲ್ಲಿಯೂ ಇರುತ್ತದೆ ಮತ್ತು ಅಲ್ಲಿಂದಲೇ ನಮ್ಮ ಮುಂದಿನ ಆಧ್ಯಾತ್ಮಿಕ ಸಾಧನೆಯ ಪ್ರಯಾಣವು ಆರಂಭವಾಗುತ್ತದೆ. ಬುದ್ಧಿಗೆ ತಿಳಿಯುವ ಮಾಹಿತಿಯು ಮೆದುಳಿನ ಜೀವಕೋಶಗಳಲ್ಲಿ ಶೇಖರಿಸಲ್ಪಡುತ್ತದೆ. ಮುಪ್ಪು ಬರತೊಡಗಿದಾಗ ಮೆದುಳಿನ ಜೀವಕೋಶಗಳು ನಾಶವಾಗುತ್ತವೆ. ಆಗ ಅನೇಕ ವಿಷಯಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅನುಭೂತಿಯು ಜೀವಾತ್ಮ ಮತ್ತು ಶಿವಾತ್ಮಗಳಿಗೆ ಬರುವುದರಿಂದ ಅದು ಯಾವಾಗಲೂ ನೆನಪಿನಲ್ಲಿರುತ್ತದೆ. ಮುಂದಿನ ಜನ್ಮದಲ್ಲಿಯೂ ಇದೇ ಜೀವಾತ್ಮವು ಹೊಸ ದೇಹವನ್ನು ಧರಿಸಿಬರುತ್ತದೆ ಆದರೆ ಮೆದುಳು ಮಾತ್ರ ಹೊಸದಾಗಿರುತ್ತದೆ. ಹಾಗಾಗಿ ಲೌಕಿಕದ ಎಲ್ಲವನ್ನೂ ಹೊಸದಾಗಿ ಕಲಿಯಬೇಕಾಗುತ್ತದೆ.

ಹಾಗಾಗಿಯೇ ಅನೇಕ ಸಂತರು ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾನಿಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ್ದಾರೆ. ಇಂದೇ ಆಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಿ. ಆಧ್ಯಾತ್ಮಿಕ ಸಾಧನೆಯನ್ನು ಕುಲದೇವರ ನಾಮಜಪ ಮತ್ತು ದತ್ತ ಗುರುಗಳ ನಾಮಜಪದೊಂದಿಗೆ ಆರಂಭಿಸಿ. ಈಗಾಗಲೇ 5-6 ತಿಂಗಳು ಕುಲದೇವರ ನಾಮಜಪವನ್ನು ಮಾಡಿದ್ದರೆ ಮುಂದಿನ ಹಂತದ ಸಾಧನೆಯನ್ನು ತಿಳಿದುಕೊಳ್ಳಲು ಸನಾತನದ ಸತ್ಸಂಗ ಅಥವಾ ಸಾಧಕರನ್ನು ಸಂಪರ್ಕಿಸಿ.

ಲೌಕಿಕ ಜೀವನದಲ್ಲಿ ಹೇಗೆ ನಾವು ಒಂದೊಂದೇ ತರಗತಿಯನ್ನು ಕಲಿತು ತೇರ್ಗಡೆಗೊಂಡು ಮುಂದಿನ ತರಗತಿಗೆ ಹೋಗುತ್ತೇವೆಯೋ, ಹಾಗೆಯೇ ಅಧ್ಯಾತ್ಮದಲ್ಲಿಯೂ ಮುಂದುಮುಂದಿನ ಹಂತವಿರುತ್ತದೆ. ಅದನ್ನು ತಿಳಿದುಕೊಳ್ಳಿ ಮತ್ತು ಅದರಂತೆ ಸಾಧನೆಯನ್ನು ಮಾಡಿ. ಸಾಧನೆ ಮಾಡುವವರಿಗೆ ಸನಾತನ ಸಂಸ್ಥೆಯು ಮಾರ್ಗದರ್ಶನ ಮಾಡಲು ಸದಾ ಸಿದ್ಧವಾಗಿರುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’)

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ

ಮಾನಸಪೂಜೆ


‘ದೇವರ ಕುರಿತು ಶ್ರದ್ಧಾಯುಕ್ತ ಅಂತಃಕರಣದಿಂದ ವಿಧಿವತ್ತಾಗಿ ಮಾಡಿದ ಉಪಚಾರಗಳ ಸಮರ್ಪಣೆಯೆಂದರೆ ಪೂಜೆ’, ಹೀಗೆ ‘ಶ್ರೀಮದ್ಭಾಗವತ’ದಲ್ಲಿ ಪೂಜೆಯ ವ್ಯಾಖ್ಯೆಯನ್ನು ಮಾಡಲಾಗಿದೆ. ದೇವರ ಪ್ರತಿಮೆಗೆ ಉಪಚಾರಗಳ ವಿಧಿವತ್ ಸಮರ್ಪಣೆ ಮಾಡುವುದೆಂದರೆ ಕರ್ಮಕಾಂಡದಲ್ಲಿ ಬರುವ ಸ್ಥೂಲದಲ್ಲಿನ ಪೂಜೆಯಾಗಿದೆ. ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ಸ್ಥೂಲದಲ್ಲಿ ಮಾಡುವ ಪೂಜೆಯು ಪ್ರಾಥಮಿಕ ಹಂತದ್ದಾಗಿದ್ದು ಅನಂತರ ಮನಸ್ಸಿನ ಸ್ತರದಲ್ಲಿ ಉಪಾಸನೆಯು ಆರಂಭವಾಗುತ್ತದೆ. ಈ ಹಂತ ತಲುಪಲು ಸುಲಭವಾದ ಸಾಧನವೆಂದರೆ ಮಾನಸಪೂಜೆ! ಮಾನಸಪೂಜೆಯಲ್ಲಿ ಸ್ಥೂಲದಲ್ಲಿ ಮಾಡುವ ಪೂಜೆಯ ವಿಧಿಗಳನ್ನು ಮಾನಸಿಕವಾಗಿ ಮಾಡುವುದಿರುತ್ತದೆ.

ಮಾನಸಪೂಜೆಯ ಲಾಭ

ಮಾನಸಪೂಜೆಯಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ ದೇವರ ರೂಪದ ಪೂಜೆ ಮಾಡಲು ಸಾಧ್ಯವಾಗುತ್ತದೆ. ಈ ಪೂಜೆಯ ಒಂದು ಲಾಭವೆಂದರೆ ಸ್ಥಳ, ಉಪಕರಣಗಳು, ಶುಚಿತ್ವ ಇತ್ಯಾದಿ ಕರ್ಮಕಾಂಡದಲ್ಲಿ ಬರುವ ಬಂಧನಗಳು ಇಲ್ಲದಿರುವುದರಿಂದ ಯಾವುದೇ ಸ್ಥಳದಲ್ಲಿ ಇದನ್ನು ಮಾಡಬಹುದು. ಎರಡನೆಯ ಲಾಭವೆಂದರೆ ಮಾನಸಪೂಜೆಯ ಮೂಲಕ ಅಖಿಲ ಬ್ರಹ್ಮಾಂಡದಲ್ಲಿ ಯಾವುದೇ ಅತ್ಯುತ್ತಮವಾದ ವಸ್ತುವನ್ನೂ ದೇವರಿಗೆ ಅರ್ಪಣೆ ಮಾಡಬಹುದು. ಇದಕ್ಕಿಂತಲೂ ಶ್ರೇಷ್ಠವಾದ ಮೂರನೆಯ ಲಾಭವೆಂದರೆ ಎಷ್ಟು ಕಾಲ ನಮ್ಮ ಮಾನಸಪೂಜೆಯು ನಡೆಯುತ್ತಿರುತ್ತದೆಯೋ, ಅಷ್ಟು ಕಾಲ ಆ ದೇವರೊಂದಿಗೆ ನಾವು ಅನುಸಂಧಾನದಲ್ಲಿರಬಹುದು. ಸಾಧಕರಿಗೆ ಆಧ್ಯಾತ್ಮಿಕ ಸಾಧನೆಯಲ್ಲಿ ಭಾವಜಾಗೃತವಾಗಲು ಈ ಮಾನಸಪೂಜೆಯು ತುಂಬಾ ಸಹಾಯಕವಾಗಿದೆ.

ಆಧ್ಯಾತ್ಮಿಕ ಸಾಧನೆ ಎಂದರೇನು?

ಅಧ್ಯಾತ್ಮಶಾಸ್ತ್ರದ ಎರಡು ಅಂಗಗಳಿವೆ. ಒಂದು ತಾತ್ತ್ವಿಕ ಅಂಗ ಮತ್ತು ಇನ್ನೊಂದು ಪ್ರಾಯೋಗಿಕ ಅಂಗ. ಭಗವದ್ಗೀತೆ, ಜ್ಞಾನೇಶ್ವರಿ, ದಾಸಬೋಧ ಇತ್ಯಾದಿ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುವುದು ಅಧ್ಯಾತ್ಮದ ತಾತ್ತ್ವಿಕ ಅಂಗವಾಗಿದೆ ಮತ್ತು ಶರೀರ, ಮನಸ್ಸು ಮತ್ತು ಬುದ್ಧಿಯಿಂದ ಏನಾದರೂ ಕೃತಿ ಮಾಡುವುದು ಪ್ರಾಯೋಗಿಕ ಅಂಗವಾಗಿದೆ. ಈ ಪ್ರಾಯೋಗಿಕ ಅಂಗವೇ ‘ಸಾಧನೆ’.

ನಮ್ಮ ಸುತ್ತಮುತ್ತಲಿನ ಜಗತ್ತು ಮಾಯೆಯಾಗಿದೆ. ಮಾಯೆಯಲ್ಲಿನ ಯಾವುದೇ ವಿಷಯದ ಗುಣಧರ್ಮವು ‘ಆನಂದ’ವಾಗಿಲ್ಲ. ಆನಂದಪ್ರಾಪ್ತಿಗಾಗಿ ‘ಆನಂದ’ದ ಗುಣಧರ್ಮವಿರುವ ಏನನ್ನಾದರೂ ಪ್ರಾಪ್ತಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಜಗತ್ತಿನಲ್ಲಿ ಕೇವಲ ಈಶ್ವರೀತತ್ತ್ವವೇ (ಈಶ್ವರ) ಆನಂದಮಯವಾಗಿದೆ. ಅಂದರೆ ಆನಂದಪ್ರಾಪ್ತಿಗಾಗಿ ನಮಗೆ ಈಶ್ವರಪ್ರಾಪ್ತಿಯನ್ನೇ ಮಾಡಿಕೊಳ್ಳಬೇಕು. ಈಶ್ವರಪ್ರಾಪ್ತಿ ಎಂದರೆ ಈಶ್ವರನೊಂದಿಗೆ ಏಕರೂಪವಾಗುವುದು, ಈಶ್ವರನ ಗುಣಗಳನ್ನು ನಮ್ಮಲ್ಲಿ ತರುವುದು. ಈಶ್ವರಪ್ರಾಪ್ತಿಗಾಗಿ ನಿಯಮಿತವಾಗಿ ಕನಿಷ್ಟಪಕ್ಷ ಎರಡು-ಮೂರು ಗಂಟೆಗಳಾದರೂ ಶರೀರ, ಮನಸ್ಸು ಮತ್ತು/ಅಥವಾ ಬುದ್ಧಿ ಇವುಗಳಿಂದ ಪ್ರಯತ್ನಿಸುವುದಕ್ಕೆ ‘ಸಾಧನೆ’ ಎನ್ನುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಗುರುಕೃಪಾಯೋಗಾನುಸಾರ ಸಾಧನೆ')

ಸಂಬಂಧಿತ ಲೇಖನಗಳು
ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
‘ಗುರುಕೃಪಾಯೋಗ’ - ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!

ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ


‘ಜಪ’ ಈ ಶಬ್ದದ ಅರ್ಥ ಮತ್ತು ವಿಧಗಳು

ವ್ಯುತ್ಪತ್ತಿ ಮತ್ತು ಅರ್ಥ

೧. ‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ|’ ಇದರ ಅರ್ಥವೇನೆಂದರೆ, ಯಾವುದು ಪಾಪಗಳನ್ನು ನಾಶ ಮಾಡಿ ಜನ್ಮ-ಮೃತ್ಯುಗಳ ಚಕ್ರದಿಂದ ಬಿಡ್ಕುಗಡೆ ಮಾಡುತ್ತದೆಯೋ ಅದು ಜಪ.

೨. ಜಪವೆಂದರೆ ಯಾವುದಾದರೊಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಪುನಃ ಪುನಃ ಉಚ್ಚರಿಸ್ಕುವುದು.

ವಿಧಗಳು

೧. ನಾಮಜಪ: ನಾಮಜಪವೆಂದರೆ ನಾಮವನ್ನು ಪುನಃ ಪುನಃ ಹೇಳುತ್ತಾ ಇರುವುದು.
೨. ಮಂತ್ರಜಪ: ಮಂತ್ರಜಪವೆಂದರೆ ಯಾವುದಾದರೊಂದು ಮಂತ್ರವನ್ನು ಪುನಃ ಪುನಃ ಹೇಳುತ್ತಾ ಇರುವುದು.

ನಾಮದ ವೈಶಿಷ್ಟ್ಯಗಳು

ಅ. ಅನಾದಿ ಮತ್ತು ಅನಂತ: ವಿಶ್ವದ ಉತ್ಪತ್ತಿಯ ಪ್ರಾರಂಭದಲ್ಲಿ ‘ನಾಮ’ ಇತ್ತು ಮತ್ತು ಅಂತ್ಯದಲ್ಲಿಯೂ ಅದು ಇರುವುದು; ಏಕೆಂದರೆ ಅದು ಸ್ವಯಂಭೂ ಆಗಿದೆ.

ಆ. ವೇದಗಳ ಉತ್ಪತ್ತಿಯು ನಾಮದಿಂದ ಆಗಿದೆ: ವೇದಗಳು ಹಿಂದೂ ಧರ್ಮದ ಮತ್ತು ಸಂಸ್ಕೃತಿಯ ಮೂಲ ಆಧಾರ ಮತ್ತು ಪ್ರಮಾಣ ಧರ್ಮಗ್ರಂಥಗಳಾಗಿವೆ. ಪರಮೇಶ್ವರನು ಸೃಷ್ಟಿಯ ನಿರ್ಮಿತಿಯನ್ನು ಮಾಡಿದನು ಮತ್ತು ಸೃಷ್ಟಿಯ ಕಲ್ಯಾಣಕ್ಕಾಗಿ ವೇದಗಳ ನಿರ್ಮಿತಿಯನ್ನೂ ಮಾಡಿದನು. ವೇದ ಮತ್ತು ನಾಮದ ತುಲನೆಯನ್ನು ಮಾಡುವಾಗ ಪ.ಪೂ.ಭಕ್ತರಾಜ ಮಹಾರಾಜರು, ‘ವೇದಕ್ಕಿಂತಲೂ ನಾಮವು ಶ್ರೇಷ್ಠವಾಗಿದೆ, ಏಕೆಂದರೆ ನಾಮದಿಂದಲೇ (ಓಂಕಾರದಿಂದಲೇ) ವೇದಗಳ ನಿರ್ಮಿತಿಯಾಗಿದೆ; ಆದುದರಿಂದ ವೇದ, ಉಪನಿಷತ್ತು, ಗೀತೆ ಇತ್ಯಾದಿಗಳ ಅಭ್ಯಾಸಕ್ಕಿಂತ ನಾಮದ ಅಭ್ಯಾಸ (ಜಪ) ಮಾಡುವುದು ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.

ಇ. ‘ವೇದಮಂತ್ರಗಳು ಓಂಕಾರದಿಂದಲೇ ಪ್ರಾರಂಭವಾಗುತ್ತವೆ, ಅಂದರೆ ವೇದಗಳ ಆರಂಭದಲ್ಲಿ ‘ನಾಮವೇ’ ಇರುತ್ತದೆ.

ಈ. ನಾಮದ ಬಗೆಗಿನ ವಿಕಲ್ಪವು ನಾಮದಿಂದಲೇ ದೂರವಾಗುವುದು: ‘ನಾಮದ ಬಗ್ಗೆ ಸಂಶಯ ಅಥವಾ ವಿಕಲ್ಪಗಳು ಬಂದರೂ, ಶ್ರದ್ಧೆಯಿಂದ ನಾಮಜಪ ಮಾಡಬೇಕು. ಆಗ ಎಲ್ಲ ಸಂಶಯಗಳು ತಾವಾಗಿಯೇ ದೂರವಾಗುತ್ತವೆ.’

ಉ. ಶ್ರದ್ಧೆಯಿಲ್ಲದಿದ್ದರೂ ಫಲ: ಶ್ರದ್ಧೆ ಇಲ್ಲದೆ ಮಾಡಿದ ಹೋಮ, ದಾನ, ತಪಸ್ಸು ಇತ್ಯಾದಿ ಕರ್ಮಗಳಿಗೆ ಫಲಪ್ರಾಪ್ತಿ ಆಗುವುದಿಲ್ಲವೆಂದು ಗೀತೆಯಲ್ಲಿ ಹೇಳಿದೆ (೧೭:೨೮). ನಾಮಜಪದಲ್ಲಿ ಶ್ರದ್ಧೆಯಿದ್ದರೆ ಅದು ದುಗ್ಧಶರ್ಕರಾಯೋಗ (ಹಾಲಿನಲ್ಲಿ ಸಕ್ಕರೆ ಹಾಕಿದಂತೆ) ವೆಂದು ಸಿದ್ಧವಾಗಬಹುದು; ಆದರೆ, ಶ್ರದ್ಧೆಯಿಲ್ಲದೇ ಮಾಡಿದ ನಾಮಜಪವೂ ವಿಫಲವಾಗುವುದಿಲ್ಲವೆಂದು ನಾರದ ಪುರಾಣದಲ್ಲಿ ಹೇಳಲಾಗಿದೆ.

    ಅಶ್ರದ್ಧಯಾಪಿ ಯನ್ನಾಮ್ನಿ ಕೀರ್ತಿತೇಥ ಸ್ಮ ತೇಪಿ ವಾ|
    ವಿಮುಕ್ತಃ ಪಾತಕೈರ್ಮರ್ತ್ಯೋ ಲಭತೇ ಪದಮವ್ಯಯಮ್||
    ಸಂಸಾರಘೋರಕಾಂತಾರ‍್ಕೃದ್ಕಾವಾಗ್ನಿರ್ಮಧುಸ್ಕೂದನಃ|
    ಸ್ಮರತಾಂ ಸರ್ವಪಾಪಾನಿ ನಾಶಯತ್ಯಾಶುಸತ್ತಮಃ ||

ಅರ್ಥ: ಶ್ರದ್ಧೆಯಿಲ್ಲದೆಯೂ ಭಗವಂತನ ನಾಮಸಂಕೀರ್ತನ ಅಥವಾ ನಾಮಸ್ಮರಣೆಯನ್ನು ಮಾಡ್ಕಿದರೆ, ಮನುಷ್ಯನು ಪಾತಕಗಳಿಂದ ಮುಕ್ತನಾಗಿ ಅವ್ಕಿನಾಶೀಪದವನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಶ್ರೀಹರಿಯು ಈ ಸಂಸಾರರೂಪೀ ಘೋರ ಅರಣ್ಯದ ದಾವಾಗ್ನಿಯಾಗಿದ್ದಾನೆ. ಆ ಸರ್ವಶ್ರೇಷ್ಠ ಪುರುಷೋತ್ತಮನು ನಾಮಸ್ಮರಣೆ ಮಾಡುವ ಮನುಷ್ಯನ ಎಲ್ಲಾ ಪಾಪಗಳನ್ನು ನಾಶ ಮಾಡುತ್ತಾನೆ.’

ನಾಮಜಪದಿಂದಾಗುವ ಲಾಭಗಳು
ಮನಃಶಾಸ್ತ್ರದ ದೃಷ್ಟಿಯಿಂದ :

೧. ನಾಮಜಪ ನಡೆಯುತ್ತಿರುವಾಗ ಅಷ್ಟು ಸಮಯಕ್ಕಾದರೂ ಚಿತ್ತದ ಮೇಲೆ ಇತರ ವಿಷಯಗಳ ಸಂಸ್ಕಾರಗಳು ಆಗುವುದಿಲ್ಲ. ಚಿತ್ತದ ಮೇಲೆ ಇತರ ಸಂಸ್ಕಾರಗಳು ಆಗಬಾರದೆಂದು ಜಾಗೃತಾವಸ್ಥೆಯ ಸರ್ವೋತ್ತಮ ಮಾರ್ಗವೆಂದರೆ ನಾಮಸ್ಮರಣೆ.

೨. ನಾಮಸ್ಮರಣೆ ನಡೆಯುತ್ತಿರುವಾಗ ಚಿತ್ತದಲ್ಲಿರುವ ವಾಸನೆಯ ಕೇಂದ್ರ, ಇಷ್ಟ-ಅನಿಷ್ಟ ಕೇಂದ್ರ, ಸ್ವಭಾವಕೇಂದ್ರ ಇತ್ಯಾದಿಗಳಲ್ಲಿರುವ ಸಂಸ್ಕಾರಗಳಿಂದ ಬರುವ ಸಂವೇದನೆಗಳನ್ನು ಬಾಹ್ಯ ಮನವು ಸ್ವೀಕರಿಸುವುದಿಲ್ಲ. ಹೀಗೆ ಸತತವಾಗಿ ಬಹಳಷ್ಟು ಸಮಯ ನಡೆಯುತ್ತಿದ್ದರೆ ಈ ಕೇಂದ್ರಗಳಲ್ಲಿರುವ ಸಂಸ್ಕಾರಗಳು ಕಡಿಮೆಯಾಗುತ್ತಾ ಹೋಗುತ್ತವೆ.

೩.  ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.

ಆಧ್ಯಾತ್ಮಿಕದೃಷ್ಟಿಯಿಂದ :

೧. ಯಾವುದಾದರೊಂದು ದೇವತೆಯ ಜಪ ಮಾಡಿದರೆ ಆ ದೇವತೆಯು ಪ್ರಸನ್ನಳಾಗುತ್ತಾಳೆ.

೨. ಯಾವುದಾದರೊಂದು ವಿಶಿಷ್ಟ ಜಪವನ್ನು ಮಾಡಿದರೆ ವಿಶಿಷ್ಟ ತತ್ತ್ವದ ಮೇಲೆ ಉದಾ. ಗಾಯಂತ್ರಿ ಜಪದಿಂದ ತೇಜತತ್ತ್ವದ ಮೇಲೆ ಹತೋಟಿಯನ್ನು ಪಡೆದುಕೊಳ್ಳಬಹುದು. ಅದಕ್ಕನುಸಾರ ಸಿದ್ಧಿಗಳು ಪ್ರಾಪ್ತವಾಗುತ್ತವೆ.

೩. ಅಕರ್ಮ ಕರ್ಮ: ಕರ್ಮವನ್ನು ನಾಮಜಪ ಸಹಿತ ಮಾಡಿದರೆ ಆ ಕರ್ಮವು ಅಕರ್ಮಕರ್ಮವಾಗುತ್ತದೆ; ಅಂದರೆ ಆ ಕರ್ಮಕ್ಕೆ ಫಲ ಇರುವುದಿಲ್ಲ, ಆದುದರಿಂದ ಪಾಪ-ಪುಣ್ಯ ಉದ್ಭವಿಸುವುದಿಲ್ಲ. ಇಂತಹ ಕರ್ಮಗಳಿಂದ ಸಂಚಿತವು ನಿರ್ಮಾಣವಾಗದೆ ನಮ್ಮ ಪ್ರಾರಬ್ಧ ಭೋಗಗಳು ಬೇಗನೇ ಮುಗಿದು ಜನ್ಮ ಮೃತ್ಯುಗಳ ಚಕ್ರದಿಂದ ಬಿಡುಗಡೆಯಾಗುತ್ತೇವೆ. ಜನ್ಮದ ಸಮಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಪ್ರಾರಬ್ಧ ಭೋಗವು ೧೦೦ಘಟಕಗಳಷ್ಟು (ಯೂನಿಟ್) ಇದೆ ಎಂದು ತಿಳಿದರೆ, ಸಾಧಾರಣವಾಗಿ ಒಂದು ಜನ್ಮದಲ್ಲಿ ೬ ಘಟಕಗಳಷ್ಟು ಕರ್ಮವು ಅನುಭವಿಸಿ ಮುಗಿದು ಹೋಗುತ್ತದೆ. ಹೀಗಾದರೆ ೧೬ರಿಂದ ೧೭ ಜನ್ಮಗಳಲ್ಲಿ ಮನುಷ್ಯನಿಗೆ ಮುಕ್ತಿ ಸಿಗಬೇಕು; ಆದರೆ ಹೀಗಾಗುವುದಿಲ್ಲ. ಏಕೆಂದರೆ ಸಂಚಿತದ ೬ ಘಟಕಗಳನ್ನು ಅನುಭವಿಸಿ ಮುಗಿಸುತ್ತಿರುವಾಗ, ಕ್ರಿಯಮಾಣ ಕರ್ಮದಿಂದ ಸಂಚಿತದಲ್ಲಿ ಇನ್ನೂ ೧೦ ಘಟಕಗಳಷ್ಟು ಕರ್ಮ ಸೇರಿರುತ್ತದೆ. ಇದರಿಂದ ಇನ್ನೂ ಹೆಚ್ಚು ಹೆಚ್ಚು ಜನ್ಮ ಮೃತ್ಯುವಿನ ಚಕ್ರದಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೀಗಾಗದಿರಲು ಅಕರ್ಮಕರ್ಮವಾಗಬೇಕು.

ನಾಮಸ್ಮರಣೆಯ ಮಹತ್ವ ತಿಳಿದುಕೊಂಡಿರಲ್ಲ? ಹಾಗಿದ್ದರೆ ಈಗ ಯಾವ ನಾಮಜಪ ಮಾಡಬೇಕು? ಎಷ್ಟು ಸಮಯ ಮಾಡಬೇಕು? ಹೇಗೆ ಮಾಡಬೇಕು? ಇತ್ಯಾದಿ ವಿಷಯಗಳನ್ನು ಈ ಕೊಂಡಿಯಲ್ಲಿ ಓದಿರಿ.

ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ "ನಾಮಸಂಕೀರ್ತನಯೋಗ"

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ
ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ
Dharma Granth

‘ಗುರುಕೃಪಾಯೋಗ’ - ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!


ನಾವು ಧ್ಯಾನ, ಭಕ್ತಿ, ಕರ್ಮ, ಜ್ಞಾನ ಇತ್ಯಾದಿ ಮಾರ್ಗಗಳಿಂದ ಸಾಧನೆಯನ್ನು ಮಾಡಬಹುದು. ಆದರೆ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗದೆ ಈಶ್ವರಪ್ರಾಪ್ತಿಯಾಗುವುದಿಲ್ಲ. ಗುರು ಎಂಬುದು ಒಂದು ತತ್ತ್ವವಾಗಿದೆ ಮತ್ತು ಅದು ಬೇರೆ ಬೇರೆ ದೇಹಗಳ ಮಾಧ್ಯಮದಿಂದ ಕಾರ್ಯ ಮಾಡುತ್ತದೆ. ಗುರುಕೃಪೆ ಎಂದರೆ ಈ ತತ್ತ್ವವು ನಮ್ಮ ಮೇಲೆ ಮಾಡಿದ ಕೃಪೆ.

ಗುರುಕೃಪೆ ಮತ್ತು ಗುರುಪ್ರಾಪ್ತಿ ಆಗುವುದಕ್ಕೆ ಏನು ಮಾಡಬೇಕು?

ತೀವ್ರ ಮುಮುಕ್ಷತ್ವ (ತನಗೆ ಈ ಜನ್ಮದಲ್ಲಿಯೇ ಮೋಕ್ಷಪ್ರಾಪ್ತಿಯಾಗಬೇಕು) ಅಥವಾ ಗುರುಪ್ರಾಪ್ತಿಗಾಗಿ ತೀವ್ರ ತಳಮಳ, ಈ ಒಂದು ಗುಣದಿಂದಲೇ ಗುರುಪ್ರಾಪ್ತಿಯು ಬೇಗನೆ ಆಗುತ್ತದೆ ಮತ್ತು ಗುರುಕೃಪೆಯು ಸತತವಾಗಿ ಆಗುತ್ತಾ ಇರುತ್ತದೆ. ಸತ್ಯ, ತ್ರೇತಾ ಮತ್ತು ದ್ವಾಪರಯುಗಗಳಂತೆ ಕಲಿಯುಗದಲ್ಲಿ ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗುವುದು ಕಠಿಣವಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ವಿಷಯವೇನೆಂದರೆ ಗುರುಕೃಪೆಯಾಗದ  ಹೊರತು ಗುರುಪ್ರಾಪ್ತಿಯಾಗುವುದಿಲ್ಲ. ಗುರುಗಳಿಗೆ, ಮುಂದೆ ಯಾರು ತಮ್ಮ ಶಿಷ್ಯರಾಗುವವರಿದ್ದಾರೆ ಎಂಬುದರ ಜ್ಞಾನವಿರುತ್ತದೆ. ಗುರುಕೃಪೆ ಮತ್ತು ಗುರುಪ್ರಾಪ್ತಿಗಾಗಿ ಮುಂದೆ ನೀಡಿದ ಸಾಧನೆಯನ್ನು ಮಾಡಬೇಕು.

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ - "ದತ್ತ"


೧. ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಕಾರಣಗಳು ಮತ್ತು ತೊಂದರೆಯ ಸ್ವರೂಪ

ಇತ್ತೀಚಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ಆದುದರಿಂದ ಬಹುತೇಕ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ. ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳುತ್ತವೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕದ ಮಧ್ಯದಲ್ಲಿದೆ) ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ. ಮುಂದೆ ಅವರು ಅವರ ಕರ್ಮಗಳಿಗನುಸಾರ ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.

ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’

ದೇವತೆಗಳ ವಿಡಂಬನೆಯನ್ನು (ಅವಮಾನ) ಏಕೆ ತಡೆಗಟ್ಟಬೇಕು?

ವ್ಯಾಪಕವಾಗಿ ಹೇಳುವುದಾದರೆ, ವಿಡಂಬನೆಯೆಂದರೆ ನಿಜವಾದ ರೂಪ/ಆಕಾರದ ಬದಲು ವಿಕೃತ ಅಥವಾ ಅಶಾಸ್ತ್ರೀಯ ರೂಪ/ಆಕಾರವನ್ನು ತೋರಿಸುವುದು. ಸಾತ್ತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಯಾವುದೇ ಕೃತಿ ಅಥವಾ ವಸ್ತುಗಳಿಗೆ ಅಡಚಣೆಯನ್ನುಂಟು ಮಾಡುವುದನ್ನೂ ವಿಡಂಬನೆಯೆಂದು ಪರಿಗಣಿಸಲಾಗುತ್ತದೆ.

ದೇವತೆಗಳ ಉಪಾಸನೆಯ ಮೂಲದಲ್ಲಿ ಶ್ರದ್ಧೆಯಿರುತ್ತದೆ. ದೇವತೆಗಳನ್ನು ಅವಮಾನಿಸುವುದರಿಂದ ಶ್ರದ್ಧೆಯ ಮೇಲೆ ಪರಿಣಾಮವಾಗುತ್ತದೆ, ಆದುದರಿಂದ ಇದು ಧರ್ಮಹಾನಿಯಾಗುತ್ತದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ, ಅದು ದೇವತೆಗಳ ಸಮಷ್ಟಿ ಸ್ತರದಲ್ಲಿನ ಉಪಾಸನೆಯೇ ಆಗಿದೆ. ನಾವು ಮಾಡುತ್ತಿರುವ ದೇವತೆಯ ಉಪಾಸನೆಗೆ ಪೂರ್ಣತ್ವವು ಪ್ರಾಪ್ತವಾಗಲು ವ್ಯಷ್ಟಿ ಹಾಗೂ ಸಮಷ್ಟಿ ಇವೆರಡೂ ಸಾಧನೆಗಳನ್ನು ಮಾಡುವುದು ಆವಶ್ಯಕವಾಗಿದೆ. ಕಾಲಾನುಸಾರ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವವಿದೆ ಮತ್ತು ಸಮಷ್ಟಿ ಸಾಧನೆಗೆ ಶೇ.೭೦ರಷ್ಟು ಮಹತ್ವವಿದೆ.

ಸಮಷ್ಟಿ ಸಾಧನೆ ಎಂದರೇನು?

ಆಧ್ಯಾತ್ಮಿಕ ಉನ್ನತಿಗಾಗಿ ಸ್ವತಃ ಉಪಾಸನೆ ಮಾಡುವುದು ಮತ್ತು ಧರ್ಮಾಚರಣೆಯನ್ನು ಮಾಡುವುದಕ್ಕೆ ‘ವ್ಯಷ್ಟಿ ಸಾಧನೆ’ ಅಥವಾ ವೈಯಕ್ತಿಕ ಸಾಧನೆ ಎನ್ನುತ್ತಾರೆ. ಸದ್ಯದ ಕಲಿಯುಗದಲ್ಲಿ ಸಮಾಜದಲ್ಲಿ ರಜ-ತಮ ಗುಣಗಳ ಪ್ರಾಬಲ್ಯವು ಹೆಚ್ಚಿದೆ. ಆದುದರಿಂದ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸ್ವತಃ ಸಾಧನೆಯನ್ನು ಮತ್ತು ಧರ್ಮಾಚರಣೆಯನ್ನು ಮಾಡುವುದರೊಂದಿಗೆ ಸಮಾಜವನ್ನೂ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ‘ಸಮಷ್ಟಿ ಸಾಧನೆ’ ಎನ್ನುತ್ತಾರೆ.

ಪ್ರಸ್ತುತ ಹಿಂದೂಗಳಿಗೆ ಧರ್ಮಾಚರಣೆಯನ್ನು ಕಲಿಸುವುದರೊಂದಿಗೆ ಧರ್ಮದ ರಕ್ಷಣೆ ಮಾಡುವುದನ್ನೂ ಕಲಿಸಬೇಕಾಗಿದೆ. ಏಕೆಂದರೆ ಹಿಂದೂಗಳಿಗೇ ತಮ್ಮ ಧರ್ಮದ ಶಿಕ್ಷಣವಿಲ್ಲ, ತಮ್ಮ ಧರ್ಮದ ಬಗ್ಗೆ ಸರಿಯಾದ ಜ್ಞಾನವಿಲ್ಲ ಮತ್ತು ಇದರಿಂದ ಧರ್ಮದ ಮೇಲೆ ಅಭಿಮಾನವಿಲ್ಲ. ಹಾಗಾಗಿ ಹಿಂದೂಗಳೂ ಧರ್ಮದ ಆಧಾರದಲ್ಲಿ ಸಂಘಟಿತರಾಗುವುದಿಲ್ಲ. ಹಿಂದೂಗಳು ಮತ್ತು ಇತರ ಪಂಥದವರು ಹಿಂದೂ ದೇವತೆಗಳನ್ನು, ಶ್ರದ್ಧಾಸ್ಥಾನಗಳನ್ನು ಸಾರಾಸಗಟಾಗಿ ಅವಮಾನ ಮಾಡುತ್ತಾರೆ. ಈ ವಿಡಂಬನೆ ತಡೆಗಟ್ಟುವುದೂ 'ಸಮಷ್ಟಿ ಸಾಧನೆ'ಯೇ ಆಗಿದೆ.
(ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸವಿಸ್ತಾರವಾದ ವಿವೇಚನೆಯನ್ನು ‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ವಿವಿಧ ರೀತಿಯಲ್ಲಾಗುವ ದೇವತೆಗಳ ವಿಡಂಬನೆ !

ಪ್ರಸ್ತುತ ವಿವಿಧ ರೀತಿಯಲ್ಲಿ ದೇವತೆಗಳ ವಿಡಂಬನೆಗಳಾಗುತ್ತಿವೆ, ಉದಾ.ಹಿಂದೂದ್ವೇಷಿ ಚಿತ್ರಕಾರ ಮ.ಫಿ.ಹುಸೇನನು ಹಿಂದೂಗಳ ದೇವತೆಗಳ ನಗ್ನಚಿತ್ರಗಳನ್ನು ಬಿಡಿಸಿ ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡಲು ಇಟ್ಟಿದ್ದನು; ವ್ಯಾಖ್ಯಾನಗಳು, ಪುಸ್ತಕಗಳು ಇತ್ಯಾದಿಗಳ ಮೂಲಕ ದೇವತೆಗಳ ಮೇಲೆ ಟೀಕೆಯನ್ನು ಮಾಡಲಾಗುತ್ತದೆ; ದೇವತೆಗಳ ವೇಷವನ್ನು ಧರಿಸಿ ಭಿಕ್ಷೆ ಬೇಡಲಾಗುತ್ತದೆ, ವ್ಯಾಪಾರದ ದೃಷ್ಟಿಯಿಂದ ಜಾಹಿರಾತುಗಳಲ್ಲಿ ದೇವತೆಗಳನ್ನು ‘ಮಾಡೆಲ್’ ಎಂದು ಉಪಯೋಗಿಸಲಾಗುತ್ತದೆ. ನಾಟಕ, ಚಲನಚಿತ್ರಗಳಿಂದಲೂ ಸರಾಗವಾಗಿ ವಿಡಂಬನೆ ಮಾಡಲಾಗುತ್ತದೆ. ಮತಾಂಧರು ದೇವತೆಗಳ ಮೂರ್ತಿಭಂಜನ ಮಾಡುತ್ತಾರೆ. (ಕೆಳಗಿನ ಚಿತ್ರಗಳನ್ನು ನೋಡಿದರೆ ತಮಗೆ ಹಿಂದೂ ದೇವತೆಗಳನ್ನು ಎಂತಹ ಹೀನಮಟ್ಟದಲ್ಲಿ ಅವಮಾನ ಮಾಡುತ್ತಾರೆಂದು ತಿಳಿಯಬಹುದು. ಇದನ್ನು ಕೇವಲ ಪ್ರಬೋಧನೆಗಾಗಿ ಹಾಕಲಾಗಿದೆ.)


ದೇವತೆಗಳ ವಿಡಂಬನೆಯನ್ನು ತಡೆಗಟ್ಟಲು ಇವುಗಳನ್ನು ಮಾಡಿರಿ!

೧. ದೇವತೆಗಳ ನಗ್ನ/ಅಶ್ಲೀಲ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡುವ ಹಿಂದೂದ್ವೇಷಿಗಳನ್ನು ಮತ್ತು ಇಂತಹ ಚಿತ್ರಗಳ ಪ್ರದರ್ಶನಗಳನ್ನು ನಿಷೇಧಿಸಿರಿ!
೨. ದೇವತೆಗಳ ವಿಡಂಬನೆ ಮಾಡುವ ಜಾಹೀರಾತುಗಳಿರುವ ಉತ್ಪಾದನೆಗಳು, ವಾರ್ತಾಪತ್ರಿಕೆ ಮತ್ತು ಕಾರ್ಯಕ್ರಮ, ಉದಾ.ನಾಟಕ ಇವುಗಳನ್ನು ಬಹಿಷ್ಕರಿಸಿರಿ!
೩. ದೇವತೆಗಳ ವೇಷಭೂಷಣವನ್ನು ಧರಿಸಿ ಭಿಕ್ಷೆ ಬೇಡುವವರನ್ನು ತಡೆಯಿರಿ!
೪. ದೇವತೆಗಳ ವಿಡಂಬನೆಯಿಂದ ಧಾರ್ಮಿಕ ಭಾವನೆಗಳಿಗೆ ನೋವಾಗಿರುವುದರ ಬಗ್ಗೆ ಪೊಲೀಸರಲ್ಲಿ ದೂರು ಕೊಡಿರಿ!
೫. ಮೂರ್ತಿಭಂಜನೆಯ ವಿರುದ್ಧ ಕಾನೂನುರೀತ್ಯಾ ಪ್ರತಿಭಟನೆ, ಆಂದೋಲನ, ಸಹಿ ಅಭಿಯಾನ, ಆರಕ್ಷಕರಲ್ಲಿ, ಶಾಸಕ-ಸಚಿವರಲ್ಲಿ ನಿವೇದನೆ ಕೊಡಿರಿ.

ದೇವಸ್ಥಾನಗಳಲ್ಲಿ ಆಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿರಿ!

ಅ. ದರ್ಶನಕ್ಕಾಗಿ ಜನಸಂದಣಿ ಮಾಡಬೇಡಿರಿ. ಸಾಲಿನಲ್ಲಿ ನಿಂತು ಶಾಂತಿಯಿಂದ ದರ್ಶನ ಪಡೆಯಿರಿ. ಶಾಂತಿಯಿಂದ ಭಾವಪೂರ್ಣ ದರ್ಶನವನ್ನು ಪಡೆಯುವುದರಿಂದ ದರ್ಶನದ ನಿಜವಾದ ಲಾಭವಾಗುತ್ತದೆ.
ಆ. ದೇವಸ್ಥಾನದಲ್ಲಿ ಅಥವಾ ಗರ್ಭಗುಡಿಯಲ್ಲಿ ಗದ್ದಲ ಮಾಡಬೇಡಿರಿ. ಇದರಿಂದ ದೇವಸ್ಥಾನದ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ, ಹಾಗೆಯೇ ಅಲ್ಲಿ ದರ್ಶನ ಪಡೆಯುವ, ನಾಮಜಪ ಮಾಡುವ ಅಥವಾ ಧ್ಯಾನಕ್ಕೆ ಕುಳಿತ ಭಕ್ತರಿಗೂ ತೊಂದರೆಯಾಗುತ್ತದೆ.
ಇ. ಕೆಲವೊಮ್ಮೆ ದೇವರ ಎದುರಿಗೆ ಹಣವನ್ನಿಡಲು ಬಹಳ ಒತ್ತಾಯಿಸಲಾಗುತ್ತದೆ. ಅದಕ್ಕೆ ಮಣಿಯದೇ ನಮ್ರವಾಗಿ ನಿರಾಕರಿಸಿ.
ಈ. ದೇವಸ್ಥಾನದ ಪರಿಸರವನ್ನು ಸ್ವಚ್ಛವಾಗಿಡಿ. ಪ್ರಸಾದದ ಪೊಟ್ಟಣದ ಖಾಲಿ ಹೊದಿಕೆ, ತೆಂಗಿನಕಾಯಿಯ ಗೆರಟೆ ಇತ್ಯಾದಿಗಳು ಆವರಣದಲ್ಲಿ ಕಂಡು ಬಂದರೆ ಅವುಗಳನ್ನು ಕೂಡಲೇ ತೆಗೆದು ಕಸದ ಬುಟ್ಟಿಗೆ ಹಾಕಿರಿ.
ದೇವಸ್ಥಾನದ ಸಾತ್ತ್ವಿಕತೆಯನ್ನು ಉಳಿಸುವುದು, ಪ್ರತಿಯೊಬ್ಬ ಭಕ್ತನ ಕರ್ತವ್ಯವೇ ಆಗಿದೆ; ಆದುದರಿಂದ ಮೇಲಿನ ತಪ್ಪು ಆಚರಣೆಗಳ ಬಗ್ಗೆ, ದೇವಸ್ಥಾನಕ್ಕೆ ಬರುವ ಭಕ್ತರು, ಹಾಗೆಯೇ ದೇವಸ್ಥಾನದ ಅರ್ಚಕರು, ವಿಶ್ವಸ್ಥರು ಮುಂತಾದವರಿಗೆ ನಮ್ರವಾಗಿ ಪ್ರಬೋಧನೆ ಮಾಡಿರಿ.

ಉಪಾಸನೆಯ ಬಗ್ಗೆ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದು

ಅ. ಹೆಚ್ಚಿನ ಹಿಂದೂಗಳಿಗೆ ತಮ್ಮ ದೇವತೆ, ಆಚಾರ, ಸಂಸ್ಕಾರ, ಹಬ್ಬಗಳ ಬಗ್ಗೆ ಗೌರವಾದರ ಮತ್ತು ಶ್ರದ್ಧೆ ಇರುತ್ತದೆ; ಆದರೆ ಹೆಚ್ಚಿನವರಿಗೆ ಅವುಗಳ ಉಪಾಸನೆಯ ಹಿಂದಿನ ಧರ್ಮಶಾಸ್ತ್ರವು ಗೊತ್ತಿರುವುದಿಲ್ಲ. ಶಾಸ್ತ್ರವನ್ನು ಅರಿತುಕೊಂಡು ಯೋಗ್ಯರೀತಿಯಲ್ಲಿ ಧರ್ಮಾಚರಣೆಯನ್ನು ಮಾಡಿದರೆ ಹೆಚ್ಚು ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ದೇವತೆಗಳ ಉಪಾಸನೆಯಲ್ಲಿನ ವಿವಿಧ ಕೃತಿಗಳ ಯೋಗ್ಯ ಪದ್ಧತಿ ಮತ್ತು ಅವುಗಳ ಶಾಸ್ತ್ರದ ಬಗ್ಗೆ ಸಮಾಜಕ್ಕೆ ಧರ್ಮಶಿಕ್ಷಣ ನೀಡಲು ಯಥಾಶಕ್ತಿ ಪ್ರಯತ್ನಿಸುವುದು ಭಕ್ತರ ಕಾಲಾನುಸಾರ ಆವಶ್ಯಕ ಶ್ರೇಷ್ಠ ಸಮಷ್ಟಿ ಸಾಧನೆಯಾಗಿದೆ.
ಆ. ಧರ್ಮರಕ್ಷಣೆಯನ್ನು ಮಾಡಿ ಇತರರಲ್ಲಿಯೂ ಅದರ ಬಗ್ಗೆ ಜಾಗೃತಿ ಮೂಡಿಸಿರಿ !

ಧರ್ಮದ್ರೋಹಿ ವಿಚಾರಗಳನ್ನು ಖಂಡಿಸಿರಿ!

ಇತ್ತೀಚೆಗೆ ವ್ಯಾಖ್ಯಾನ, ಪುಸ್ತಕ ಮುಂತಾದವುಗಳ ಮಾಧ್ಯಮದಿಂದ ದೇವತೆಗಳು, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಆರ್ಯ ಇತ್ಯಾದಿಗಳನ್ನು ಟೀಕಿಸಲಾಗುತ್ತದೆ.
ಇಂತಹ ಟೀಕೆ ಅಥವಾ ಧರ್ಮದ್ರೋಹಿ ವಿಚಾರಗಳಿಗೆ ಕಾನೂನು ಮಾರ್ಗದಿಂದ ಕೂಡಲೇ ಪ್ರತಿವಾದಿಸಬೇಕು; ಇಲ್ಲದಿದ್ದರೆ ಆ ವಿಚಾರಗಳಿಂದಾಗಿ ಹಿಂದೂಗಳ ಶ್ರದ್ಧೆಯು ಡೋಲಾಯಮಾನ ಆಗುತ್ತದೆ. ಈ ಪ್ರತಿವಾದವನ್ನು ನಿರ್ದಿಷ್ಟವಾಗಿ ಹೇಗೆ ಮಾಡಬೇಕು, ಎಂಬುದು ತಿಳಿಯಲು ಸನಾತನದ ಆಯಾ ವಿಷಯಗಳ ಗ್ರಂಥಗಳಲ್ಲಿ ಅದನ್ನು ಪ್ರಕಟಿಸಲಾಗಿದೆ. ಹಿಂದುತ್ವವಾದಿ ನಿಯತಕಾಲಿಕೆ ‘ಸನಾತನ ಪ್ರಭಾತ’ದಲ್ಲಿಯೂ ಅದನ್ನು ಆಗಾಗ ಪ್ರಕಟಿಸಲಾಗುತ್ತದೆ.

ತಾವು ಹೀಗೂ ಧರ್ಮಪ್ರಸಾರ (ಸಮಷ್ಟಿ ಸಾಧನೆ) ಮಾಡಬಹುದು!

ಸನಾತನ ಸಂಸ್ಥೆಯು ದೇವತೆಗಳ ಉಪಾಸನೆಯ ಕೃತಿಗಳ ಯೋಗ್ಯ ಪದ್ಧತಿ ಮತ್ತು ಅವುಗಳ ಶಾಸ್ತ್ರದ ಬಗ್ಗೆ ಮಾರ್ಗದರ್ಶಕವಾಗಿರುವ ಗ್ರಂಥ, ಕಿರುಗ್ರಂಥ, ಧ್ವನಿಮುದ್ರಿಕೆ, ಧ್ವನಿಚಿತ್ರಮುದ್ರಿಕೆ ಮತ್ತು ಧರ್ಮಶಿಕ್ಷಣ ಫಲಕಗಳನ್ನು ತಯಾರಿಸಿದೆ. ತಾವು ತಮ್ಮ ಪರಿಚಯದ ಭಕ್ತರಿಗೆ ಹಾಗೂ ದೇವಸ್ಥಾನಗಳ ಸಮಿತಿಯ ಸದಸ್ಯರು ಮುಂತಾದವರಿಗೆ ಸನಾತನದ ಗ್ರಂಥ, ಕಿರುಗ್ರಂಥ, ಧ್ವನಿಮುದ್ರಿಕೆ, ಧ್ವನಿಚಿತ್ರಮುದ್ರಿಕೆ ಮತ್ತು ‘ಧರ್ಮಶಿಕ್ಷಣ ಫಲಕ’ಗಳ ಮೂಲಕ ದೇವತೆಗಳ ಉಪಾಸನೆಯ ಬಗ್ಗೆ ಮಾರ್ಗದರ್ಶನ ಮಾಡಬಹುದು. ಕೇಬಲ್‌ಗಳ ಮೂಲಕವೂ ಧ್ವನಿಚಿತ್ರಮುದ್ರಿಕೆಗಳ ಪ್ರಸಾರ ಮಾಡಿ ಸಮಾಜಕ್ಕೆ ವ್ಯಾಪಕಸ್ತರದಲ್ಲಿ ಧರ್ಮಶಿಕ್ಷಣವನ್ನು ನೀಡಬಹುದು. ಧರ್ಮಾಭಿಮಾನಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು, ದೇವಸ್ಥಾನಗಳು ತಮ್ಮ ಪರಿಸರದಲ್ಲಿ, ಹಾಗೆಯೇ ಇತರ ಪ್ರದರ್ಶನ ಸ್ಥಳಗಳಲ್ಲಿ ‘ಧರ್ಮಶಿಕ್ಷಣ ಫಲಕ’ಗಳನ್ನು ಪ್ರದರ್ಶಿಸಲು ಸ್ವತಃ ಪ್ರಾಯೋಜಕರಾಗಬೇಕು. ಅದೇರೀತಿ ದೇವಸ್ಥಾನ, ಮಂಗಲ ಕಾರ್ಯಾಲಯ, ಸಭಾಗೃಹ, ವಿವಿಧ ಪ್ರದರ್ಶನ, ಶಾಲೆ-ಮಹಾವಿದ್ಯಾಲಯಗಳಂತಹ ಸ್ಥಳಗಳಲ್ಲಿ ಫಲಕಗಳನ್ನು ಹಾಕಲು ಸ್ಥಳಗಳನ್ನು ಉಪಲಬ್ಧ ಮಾಡಿಸಿಕೊಟ್ಟು ಅಥವಾ ಇಂತಹ ಸ್ಥಳಗಳಲ್ಲಿ ಫಲಕಗಳನ್ನು ಹಾಕುವ ಬಗ್ಗೆ ಪ್ರಬೋಧನೆ ಮಾಡಿ ಸಮಷ್ಟಿ ಸಾಧನೆಯ ಸುಸಂಧಿಯ ಲಾಭವನ್ನು ಪಡೆದುಕೊಳ್ಳಬೇಕು. ಸನಾತನದ ಧರ್ಮಶಿಕ್ಷಣ ಫಲಕಗಳ ಬಗೆಗಿನ ಸವಿಸ್ತಾರ ವಿವರಣೆಯನ್ನು ಅದರ ಕುರಿತಾದ ಗ್ರಂಥದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಸನಾತನದ ಸತ್ಸಂಗಗಳನ್ನು ಸಂಪರ್ಕಿಸಿರಿ.

ಧರ್ಮರಕ್ಷಣೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಸಂಸ್ಥೆ’ಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ! 

‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಸಂಸ್ಥೆ’ಯು ಕಳೆದ ಕೆಲವು ವರ್ಷಗಳಿಂದ ದೇವತೆಗಳು ಮತ್ತು ಸಂತರ ವಿಡಂಬನೆ, ಉತ್ಸವಗಳಲ್ಲಿನ ಅನುಚಿತ ವಿಷಯಗಳು, ದೇವಸ್ಥಾನಗಳ ಸರಕಾರೀಕರಣ ಇತ್ಯಾದಿಗಳ ವಿರೋಧದಲ್ಲಿ ಕಾನೂನು ಮಾರ್ಗದಿಂದ ವ್ಯಾಪಕ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿವೆ. ಭಕ್ತರೇ, ತಾವೂ ಇವುಗಳಲ್ಲಿ ಪಾಲ್ಗೊಂಡು ಧರ್ಮದ ಬಗೆಗಿನ ತಮ್ಮ ಕರ್ತವ್ಯವನ್ನು ನಿಭಾಯಿಸಿರಿ ಮತ್ತು ದೇವತೆಗಳ ಹೆಚ್ಚೆಚ್ಚು ಕೃಪೆಯನ್ನು ಸಂಪಾದಿಸಿರಿ! ತಾವು ಧರ್ಮವನ್ನು ರಕ್ಷಿಸಿದರೆ ಮಾತ್ರ, ಧರ್ಮವು (ಈಶ್ವರನು) ತಮ್ಮನ್ನು ರಕ್ಷಿಸುವುದು!!

ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?


ಅ. ಮೊದಲನೆಯ ಹಂತ : ಸಾಮಾನ್ಯ ವ್ಯಕ್ತಿಯು ತನ್ನ ಕುಲದೇವತೆ ಅಥವಾ ಉಪಾಸ್ಯದೇವತೆಯಲ್ಲಿ ಮತ್ತು ಗುರುಪ್ರಾಪ್ತಿಯಾದ ವ್ಯಕ್ತಿಯು ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

ಆ. ಎರಡನೆಯ ಹಂತ : ಮೊದಲನೆಯ ಹಂತದ ಪ್ರಾರ್ಥನೆಯ ಜೊತೆಗೆ ಆಯಾ ಕಾರ್ಯಕ್ಕೆ ಸಂಬಂಧಿಸಿದ ದೇವತೆಗಳಲ್ಲಿ ಉದಾ. ಸ್ನಾನದ ಮೊದಲು ಜಲದೇವತೆಗೆ ಮತ್ತು ಭೋಜನದ ಮೊದಲು ಶ್ರೀ ಅನ್ನಪೂರ್ಣಾ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ಆಯಾ ದೇವತೆಯ ಮಹತ್ವವು ಗಮನಕ್ಕೆ ಬಂದು ಕೃತಜ್ಞತಾಭಾವವು ಹೆಚ್ಚಾಗುತ್ತದೆ.

ಇ. ಮೂರನೆಯ ಹಂತ : ಮೊದಲನೆಯ ಮತ್ತು ಎರಡನೆಯ ಹಂತದ ಪ್ರಾರ್ಥನೆಗಳ ಜೊತೆಗೆ ಆಯಾ ಕಾರ್ಯಕ್ಕೆ ಸಹಾಯವನ್ನು ಮಾಡುವ ಉಪಕರಣಗಳಿಗೂ ಪ್ರಾರ್ಥನೆಯನ್ನು ಮಾಡಬೇಕು. ಉದಾ. ಸಂಚಾರೀದೂರವಾಣಿ ಉಪಯೋಗಿಸುವವನು ಸಂಚಾರೀದೂರವಾಣಿಗೆ ಮತ್ತು ಗೃಹಿಣಿಯರು ಅಡುಗೆಗೆ ತಗಲುವ ಪಾತ್ರೆಗಳು, ಒಲೆ ಇತ್ಯಾದಿಗಳಿಗೆ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ವ್ಯಕ್ತಿಗೆ ‘ಚರಾಚರದಲ್ಲಿ ಈಶ್ವರೀ ತತ್ತ್ವವಿದೆ’ ಎಂಬುದು ಕಲಿಯಲು ಸಿಗುತ್ತದೆ.

ಸಾಧನೆಯನ್ನು ಮಾಡುವಾಗ ‘ಅನೇಕ ದೇವತೆಗಳ ಉಪಾಸನೆಯಿಂದ ಒಂದು ದೇವತೆಯ ಉಪಾಸನೆಯ ಕಡೆಗೆ’ ಹೋಗುವುದಿರುತ್ತದೆ. ಹೀಗಿರುವಾಗ ವಿವಿಧ ದೇವತೆಗಳಲ್ಲಿ ಮತ್ತು ಉಪಕರಣಗಳಿಗೆ ಪ್ರಾರ್ಥನೆಯನ್ನು ಮಾಡಲು ಹೇಳಲಾಗಿದೆ. ಇದರ ಹಿಂದಿನ ಉದ್ದೇಶವನ್ನೂ ಗ್ರಂಥದಲ್ಲಿ ಸ್ಪಷ್ಟೀಕರಿಸಲಾಗಿದೆ. ‘ಗುರುಚರಣಸ್ಪರ್ಶಾವಿಣ ದುಜಾ ಸುಲಭ ಮಾರ್ಗ ನ ಆಹೆ ರೇ|’ (ಗುರುಚರಣಸ್ಪರ್ಶವನ್ನು ಹೊರತುಪಡಿಸಿ ಬೇರೆ ಯಾವುದೇ ಸುಲಭ ಮಾರ್ಗವಿಲ್ಲ) ಹೀಗೆ ಗುರು ಅಥವಾ ಉಪಾಸ್ಯದೇವತೆಯಲ್ಲಿ ಉತ್ಕಟಭಾವ ನಿರ್ಮಾಣವಾದ ನಂತರ ಎರಡನೆಯ ಅಥವಾ ಮೂರನೆಯ ಹಂತದಲ್ಲಿ ಹೇಳಿದ ಪ್ರಾರ್ಥನೆಗಳನ್ನು ಮಾಡದಿದ್ದರೂ ನಡೆಯುತ್ತದೆ.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ,
ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು

ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗುತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ಅರ್ಥ ಮತ್ತು ಮಹತ್ವ
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?

ಪ್ರಾರ್ಥನೆಯನ್ನು ಹೇಗೆ ಮಾಡಬೇಕು?


ಸಾಮಾನ್ಯ ಪದ್ಧತಿ

೧. ಪ್ರಾರ್ಥನೆಯ ಸಮಯದಲ್ಲಿ ಮನಸ್ಸನ್ನು ಸ್ಥಿರ ಮತ್ತು ಶಾಂತವಾಗಿರಿಸಬೇಕು.

೨. ನಮಸ್ಕಾರದ ಮುದ್ರೆಯಲ್ಲಿ ಕೈಗಳನ್ನು ಜೋಡಿಸಿರಬೇಕು.

೩. ‘ದೇವತೆ ಅಥವಾ ಗುರುಗಳು ಪ್ರತ್ಯಕ್ಷ ನಮ್ಮೆದುರಿಗಿದ್ದಾರೆ’ ಎಂದು ಕಲ್ಪನೆಯನ್ನು ಮಾಡಬೇಕು ಅಥವಾ ದೇವತೆಯ/ ಗುರುಗಳ ಚರಣಗಳನ್ನು ಕಣ್ಣೆದುರು ತಂದುಕೊಳ್ಳಬೇಕು.

೪. ಕೆಲವು ಕ್ಷಣ ದೇವತೆಯ ಅಥವಾ ಗುರುಗಳ ಚರಣಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.

೫. ಪ್ರಾರ್ಥನೆಯನ್ನು ಸ್ಪಷ್ಟ ಶಬ್ದಗಳಲ್ಲಿ ಮಾಡಬೇಕು. ಪ್ರಾರ್ಥನೆಯ ಅಭ್ಯಾಸವಾಗಲು ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ದೊಡ್ಡಸ್ವರದಲ್ಲಿ ಮಾಡುವುದು ಅನುಕೂಲವಾಗಿರುತ್ತದೆ. ಮುಂದೆ ಪ್ರಾರ್ಥನೆಯನ್ನು ಮನಸ್ಸಿನಲ್ಲಿ ಮಾಡಬೇಕು.

೬. ಪ್ರಾರ್ಥನೆಯಲ್ಲಿನ ಶಬ್ದ ಮತ್ತು ಅರ್ಥಗಳ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು.

೭. ಪ್ರಾರ್ಥನೆಯನ್ನು ಕೇವಲ ಓದಿದಂತೆ ಮಾಡದೇ, ಪ್ರಾರ್ಥನೆಯಿಂದ ದೇವತೆಯೊಂದಿಗೆ/ಗುರುಗಳೊಂದಿಗೆ ಆರ್ತತೆಯಿಂದ ಮಾತನಾಡಲು ಪ್ರಯತ್ನಿಸಬೇಕು. ಉದಾ. ‘ನನ್ನ ಸಾಧನೆಯಲ್ಲಿನ ಅಡಚಣೆಗಳು ದೂರವಾಗಲಿ’, ಈ ಪ್ರಾರ್ಥನೆಯನ್ನು ಮಾಡುವಾಗ ಸಾಧನೆಯಲ್ಲಿ ಪದೇಪದೇ ಬರುವ ಅಡಚಣೆಗಳನ್ನು ನೆನಪಿಸಿಕೊಂಡು ಅವುಗಳನ್ನು ಆರ್ತತೆಯಿಂದ ದೇವತೆಗೆ/ಗುರುಗಳಿಗೆ ಹೇಳಬೇಕು.

೮. ‘ದೇವತೆಯೇ/ಗುರುಗಳೇ ಪ್ರಾರ್ಥನೆಯನ್ನು ಮಾಡಿಸಿಕೊಂಡರು’ ಎಂದು ದೇವತೆಯ ಬಗ್ಗೆ/ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ಅರ್ಥ ಮತ್ತು ಮಹತ್ವ
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?

ಪ್ರಾರ್ಥನೆಯ ವಿಧಗಳು


ಅ. ಸಕಾಮ ಮತ್ತು ನಿಷ್ಕಾಮ ಪ್ರಾರ್ಥನೆ

ಅ೧. ಸಕಾಮ ಪ್ರಾರ್ಥನೆ
ಅ. ಅರ್ಥ: ತನ್ನ ಇಚ್ಛೆಗಳ ಪೂರ್ತಿಗಾಗಿ, ಐಹಿಕ ಸುಖ ಇತ್ಯಾದಿಗಳಿಗಾಗಿ ಮಾಡಿದ ಪ್ರಾರ್ಥನೆ.
ಆ. ಉದಾಹರಣೆ:
೧.‘ಹೇ ದೇವರೇ, ನನಗೆ ಯಥೇಚ್ಛ ಹಣ ಸಿಗಲಿ’, ನನಗೆ ಒಳ್ಳೆಯ ಕೆಲಸ ಸಿಗಲಿ,
೨.ಹೇ ದೇವರೇ, ‘ನನ್ನ ಹೊಟ್ಟೆನೋವು ದೂರವಾಗಲಿ’, ಇತ್ಯಾದಿ.

ಅ೨. ನಿಷ್ಕಾಮ ಪ್ರಾರ್ಥನೆ
ಅ.ಅರ್ಥ: ಯಾವುದೇ ಲೌಕಿಕ ಬೇಡಿಕೆಗಳು ಇಲ್ಲದಿರುವ ಪ್ರಾರ್ಥನೆ. ನಿಷ್ಕಾಮ ಪ್ರಾರ್ಥನೆಯಲ್ಲಿ ಯಾವುದೇ ಲೌಕಿಕ ಉದ್ದೇಶ, ಇಚ್ಛೆ ಅಥವಾ ಅಪೇಕ್ಷೆಗಳಿರುವುದಿಲ್ಲ. ಇಂತಹ ಪ್ರಾರ್ಥನೆಯಲ್ಲಿ ಭಗವಂತನಲ್ಲಿ ಆತ್ಮಸಮರ್ಪಣೆ ಇರುತ್ತದೆ. ಇಂತಹ ಪ್ರಾರ್ಥನೆಯಿಂದ ಅಹಂಕಾರ ಮತ್ತು ವಾಸನೆಗಳು ಇಲ್ಲವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
ಆಧ್ಯಾತ್ಮಿಕ ಉನ್ನತಿ ಅಥವಾ ಗುರುಕಾರ್ಯದ ಸಂದರ್ಭ ದಲ್ಲಿನ ಪ್ರಾರ್ಥನೆಗಳು ನಿಷ್ಕಾಮ ಪ್ರಾರ್ಥನೆಗಳೇ ಆಗಿರುತ್ತವೆ.
ಆ.ಉದಾಹರಣೆ: ‘ಹೇ ದೇವರೇ, ನಿನಗೆ ಅಪೇಕ್ಷಿತವಿರುವ ಧರ್ಮಕಾರ್ಯವನ್ನು ನನ್ನಿಂದ ಮಾಡಿಸಿಕೋ.’
- ಪೂಜ್ಯ ಡಾ.ವಸಂತ ಬಾಳಾಜಿ ಆಠವಲೆ, ಚೆಂಬೂರು, ಮುಂಬೈ (೧೯೮೦)

ಸಕಾಮ ಉಪಾಸಕನು ಸಕಾಮ ಪ್ರಾರ್ಥನೆ ಮತ್ತು ನಿಷ್ಕಾಮ ಉಪಾಸಕನು ನಿಷ್ಕಾಮ ಪ್ರಾರ್ಥನೆಯನ್ನು ಮಾಡುತ್ತಾನೆ. ಸಕಾಮ ಪ್ರಾರ್ಥನೆಯನ್ನು ಮಾಡುವವನು ಮಾಯೆಯಲ್ಲಿ ಸಿಲುಕುತ್ತಾನೆ ಮತ್ತು ನಿಷ್ಕಾಮ ಪ್ರಾರ್ಥನೆಯನ್ನು ಮಾಡುವವನು ಮಾಯೆಯನ್ನು ತ್ಯಜಿಸಿ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಾನೆ; ಹಾಗಾಗಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವವನು ನಿಷ್ಕಾಮ ಪ್ರಾರ್ಥನೆ ಮಾಡಬೇಕು.

ವ್ಯಷ್ಟಿ ಮತ್ತು ಸಮಷ್ಟಿ ಪ್ರಾರ್ಥನೆ

೧. ವ್ಯಷ್ಟಿ ಪ್ರಾರ್ಥನೆ: ವೈಯಕ್ತಿಕ ಲಾಭ, ದುಃಖ ಅಥವಾ ಸಂಕಟಗಳ ನಿವಾರಣೆ, ಆಧ್ಯಾತ್ಮಿಕ ಉನ್ನತಿ ಇತ್ಯಾದಿಗಳಿಗಾಗಿ ಮಾಡಿದ ಪ್ರಾರ್ಥನೆ ಎಂದರೆ ‘ವ್ಯಷ್ಟಿ ಪ್ರಾರ್ಥನೆ’.

೨. ಸಮಷ್ಟಿ ಪ್ರಾರ್ಥನೆ: ತಮ್ಮ ಕುಟುಂಬ, ಜಾತಿ ಬಾಂಧವರು, ಸಮಾಜ, ಊರು, ರಾಷ್ಟ್ರ ಮುಂತಾದವುಗಳಿಗೆ ಲಾಭವಾಗಬೇಕು ಮತ್ತು ಅವರ ದುಃಖ ನಿವಾರಣೆಯಾಗಬೇಕು, ಅವರ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂಬುದಕ್ಕಾಗಿ ಮಾಡಿದ ಪ್ರಾರ್ಥನೆಯೆಂದರೆ ‘ಸಮಷ್ಟಿ ಪ್ರಾರ್ಥನೆ’.

ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವವನಲ್ಲಿ ಪ್ರಾಥಮಿಕ ಹಂತದಲ್ಲಿ ‘ನಾನು ಮತ್ತು ನನ್ನ ಸಾಧನೆ’ ಎಂಬ ಸಂಕುಚಿತ ದೃಷ್ಟಿಕೋನವಿರುತ್ತದೆ. ಈಶ್ವರಪ್ರಾಪ್ತಿಗಾಗಿ ‘ವಸುಧೈವ ಕುಟುಂಬಕಮ್|’ ಎಂಬ ಭಾವ ನಿರ್ಮಾಣವಾಗುವುದು ಅವಶ್ಯಕ ವಾಗಿದೆ. ಇದಕ್ಕೆ ಸಮಷ್ಟಿ ಪ್ರಾರ್ಥನೆ ಉಪಯುಕ್ತವಾಗಿದೆ. ಏಕೆಂದರೆ ಸಮಷ್ಟಿ ಪ್ರಾರ್ಥನೆಯನ್ನು ಮಾಡುವುದರಿಂದ ಬೇಗನೇ ವ್ಯಾಪಕತ್ವ ಬರುತ್ತದೆ ಮತ್ತು ಇತರರ ಬಗ್ಗೆ ಪ್ರೇಮ ನಿರ್ಮಾಣವಾಗುತ್ತದೆ.

ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ,
ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು
ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗು ತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ಅರ್ಥ ಮತ್ತು ಮಹತ್ವ
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?

ಪ್ರಾರ್ಥನೆಯ ವೈಜ್ಞಾನಿಕತೆ


 ಪ್ರಾರ್ಥನೆಯಲ್ಲಿ ತುಂಬ ಉತ್ತಮವಾಗಿ ಪ್ರಭಾವ ಬೀರಬಲ್ಲ ಚಿಕಿತ್ಸಕ ಶಕ್ತಿಯಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಪ್ರಾರ್ಥಿಸುವುದರ ಮೂಲಕ ನಮ್ಮ ಅಪೇಕ್ಷಿತ ಉದ್ದೇಶಗಳನ್ನು ಪೂರೈಸಬಲ್ಲ ಪ್ರಕೃತಿಯ ಶಕ್ತಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಪ್ರಾರ್ಥನೆಯು ಒಂದು ಅತ್ಯುತ್ತಮ ಔಷಧಿಯಾಗಬಲ್ಲದು ಎಂಬುದನ್ನು ಈಗೀಗ ವಿಜ್ಞಾನವೂ ಸಹ ನಂಬಲಾರಂಭಿಸಿದೆ. ಇತ್ತೀಚಿನ ಒಂದು ಸಂಶೋಧನೆಯು ‘ನಿಮಗೆ ಆರೋಗ್ಯಕರ ಹಾಗೂ ಸಂತೃಪ್ತ ಬದುಕು ಬೇಕೆಂದಾದಲ್ಲಿ, ಯಾವುದಾದರೂ ಆಧ್ಯಾತ್ಮಿಕ ಕೇಂದ್ರಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸುವುದನ್ನು ರೂಢಿಸಿಕೊಂಡು ಲಾಭ ಪಡೆದುಕೊಳ್ಳಿ’ ಎಂದು ಹೇಳಿದೆ.

ಈಗ ವಿಜ್ಞಾನಿಗಳು ಭಗವಂತನೆಂದರೆ ಏನು ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ವಿಶ್ವದಾದ್ಯಂತ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಸಹ ರೋಗಿಗಳ ಸ್ವಂತದ ಆಧ್ಯಾತ್ಮಿಕ ನಂಬಿಕೆಗಳನ್ನು, ಹೈಟೆಕ್ ವೈದ್ಯಕೀಯ ಚಿಕಿತ್ಸೆಯ ಜೊತೆಗೂಡಿಸಬಹುದಾದಂತಹ ಪ್ರಭಾವಿ ಹಾಗೂ ಅತ್ಯಂತ ನೈತಿಕವೂ ಆಗಿರುವ ವಿಧಾನಗಳ ಶೋಧನೆಯನ್ನು ಆರಂಭಿಸಿದೆ.

ಪ್ರಾರ್ಥನೆಯು ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ, ನಮ್ಮ ತಿಳುವಳಿಕೆ ಮತ್ತು ನಮ್ಮ ಸತ್ವ ಇವುಗಳನ್ನು ನಮ್ಮೊಳಗಿನ ಭಗವಂತ ಅಥವಾ ಅಂತರಾತ್ಮನೊಂದಿಗೆ ಮೇಳವಿಸುವ ಪ್ರಕ್ರಿಯೆಯಾಗಿದೆ. ಅದು ಭಗವಂತನನ್ನು ಆತನ ವಿಶಾಲ ಹಾಗೂ ಶಾಶ್ವತವಾದ ಏಕತೆಯನ್ನು ಜೊತೆಗೂಡಿಸಿ ನಮಗೆ ತಿಳಿಸುವಂತಹ ಮಾರ್ಗವಾಗಿದೆ.

ಪ್ರಾರ್ಥನೆ ಮತ್ತು ಕರ್ಮಪ್ರಾರಬ್ಧ

ಪ್ರಾರ್ಥನೆಯು ಪ್ರಕೃತಿ ನಿಯಮಗಳ ಜೊತೆ ಹೊಂದಿಕೊಂಡಿರುವಂತಹದೂ ಆಗಿರಬೇಕು. ಭಗವಂತನ ದಯೆ ಮತ್ತು ಕೃಪೆ ನಮಗೆ ಬೇಕೆಂದಾದಲ್ಲಿ ನಾವು ಮಾಡುವ ಪ್ರಾರ್ಥನೆಯೂ ಸಹ ಪ್ರಕೃತಿಯ ನಿಯಮಗಳಿಗನುಗುಣವಾಗಿ ಇರಬೇಕು. ಕ್ಷಣಕಾಲ ಯೋಚಿಸಿ, ಬೆಂಕಿಯೊಳಗೆ ಕೈಯನ್ನಿರಿಸಿ, ಬೆಂಕಿಯು ನನ್ನ ಕೈಯನ್ನು ಸುಡದಿರಲಿ ಎಂದು ಪ್ರಾರ್ಥಿಸಿದಲ್ಲಿ ಅದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದುದು. ಅದೇ ರೀತಿಯಲ್ಲಿ ಯಾರಿಗೋ ಡಯಾಬಿಟಿಸ್ ಮತ್ತು ರಕ್ತದೊತ್ತಡದ ಸಮಸ್ಯೆಯಿದೆ ಎಂದಿಟ್ಟುಕೊಳ್ಳಿ. ಅದರ ಪರಿಹಾರಕ್ಕಾಗಿ ಆತ ಪ್ರಾರ್ಥಿಸುವುದಿಲ್ಲ, ಆತ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪು ಹೆಚ್ಚಿರಬಾರದು ಎಂಬ ಸಂಯಮ ಕಾಪಾಡಬೇಕಾದುದು ಸಹ ಅಷ್ಟೇ ಮಹತ್ವದ ಸಂಗತಿ.

ನಮ್ಮ ಬದುಕು ಈಗಾಗಲೇ ನಮ್ಮ ಹಿಂದಿನ ಕರ್ಮಗಳ ಹೊರೆಯಿಂದ ಕೂಡಿರುವಂತಹದು. ಆದರೆ ಪ್ರಸ್ತುತ ಕೃತಿ ಮತ್ತು ಪ್ರಾರ್ಥನೆಯ ಮೂಲಕ ಅದರಲ್ಲಿ ವ್ಯತ್ಯಾಸ ತರಲು ನಮಗೆ ಅವಕಾಶಗಳಿವೆ. ವಿಜ್ಞಾನಿಗಳು ಹೇಳುವಂತೆ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹಾರಾಡುವ ಒಂದು ಚಿಟ್ಟೆಯ ರೆಕ್ಕೆಗಳ ಬಡಿತದ ತರಂಗವು, ಇನ್ನಾವುದೋ ಮೂಲೆಯಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಬಲ್ಲದು. ಆರ್ಕ್‌ಟಿಕ್ ಪ್ರದೇಶದಲ್ಲಿ ಮಂಜುಗಡ್ಡೆ ಕರಗಿದಲ್ಲಿ ಇನ್ನಾವುದೋ ಪ್ರದೇಶದಲ್ಲಿ ಪ್ರವಾಹವೇ ಉಕ್ಕಬಹುದು. ಹಿಮಾಲಯದಲ್ಲಿ ಹಿಮಮಳೆಯಾದಲ್ಲಿ ದೆಹಲ್ಲಿರುವವರಿಗೆ ಚಳಿಯ ನಡುಕವುಂಟಾಗುತ್ತದೆ. ಅದರರ್ಥವೆಂದರೆ, ಭೌತಿಕ ಜಗತ್ತು ಸಹ ಭೌತಿಕ ನಿಯಮಗಳನ್ನುನಸರಿಸಿ ಕಾರ್ಯವೆಸಗುತ್ತದೆ. ಭೌತಿಕ ಜಗತ್ತಿನ ವ್ಯವಸ್ಥೆಯಲ್ಲಿ ಪರಸ್ಪರ ಸಂಬಂಧಗಳಿರುವುದು ಸುಸ್ಪಷ್ಟ.

ನಮ್ಮ ಸೂಕ್ಷ್ಮ ಜಗತ್ತು ಸಹ ಕರ್ಮದ ನಿಯಮದಂತೆ ಎಂದರೆ ಕಾರ್ಯಕಾರಣದ ನಿಯಮದಂತೆ ಕೆಲಸ ಮಾಡುವಂತಹದು. ನಮ್ಮ ಎಲ್ಲ ಕೃತಿಗಳ ಛಾಪು ನಮ್ಮ ಶರೀರದಲ್ಲಿ ಅನುದ್ದೇಶಿತವಾಗಿಯೇ ಎಲ್ಲೋ ಒಂದು ಕಡೆ ದಾಖಲಾಗಿ ಜಮೆಯಾಗಿರುತ್ತದೆ. ಮುಂದೆ ಸಕಾಲದಲ್ಲಿ ಅದು ತನ್ನ ಫಲವನ್ನು ನೀಡುತ್ತದೆ. ನಮ್ಮೆಲ್ಲ ವಿಚಾರ ಮತ್ತು ಕೃತಿಗಳನ್ನು ಪ್ರಕೃತಿಯು ದಾಖಲು ಮಾಡಿಡುತ್ತದೆ. ಈ ದಾಖಲೆ ನಮ್ಮ ಬದುಕಿನ ವಿಮಾನದ ಎಂದೂ ನಾಶವಾಗದ ಬ್ಲ್ಯಾಕ್ ಬಾಕ್ಸ್ ಇದ್ದಂತೆ. ಅದೇ ರೀತಿಯಲ್ಲಿ ನಮ್ಮ ಅನುದ್ಧಿಷ್ಟಿತ ಶರೀರವೂ ನಮ್ಮ ಹಿಂದಿನ ಎಲ್ಲ ಕೃತಿಗಳ ದಾಖಲೆಗಳನ್ನು ಇರಿಸಿಕೊಂಡಿದ್ದು, ಅದಕ್ಕನುಗುಣವಾಗಿ ಫಲಗಳನ್ನು ನೀಡುತ್ತದೆ. ನಮ್ಮ ಹಿಂದಿನ ಕರ್ಮಗಳಿಗನುಗುಣವಾಗಿ ನಮ್ಮ ಈಗಿನ ಬದುಕು ರೂಪುಗೊಂಡಿರುತ್ತದೆ. ಆದರೆ ಈಗಿನ ಕೃತಿಗಳಿಂದ ಮತ್ತು ಪ್ರಾರ್ಥನೆಯಿಂದ ಅದನ್ನು ಪುನರ್ರೂಪಿಸಲು ಸಹ ನಮಗೆ ಸಾಧ್ಯವಿದೆ.

ಪ್ರಾರ್ಥನೆಯನ್ನು ಒಂದು ಆಧ್ಯಾತ್ಮಿಕ ಸಾಧನವಾಗಿ ಮಾಡಿಕೊಳ್ಳಿ. ಯಾವುದೇ ತೊಂದರೆಯಾದಾಗ ಅಥವಾ ಅಗತ್ಯವೆನಿಸಿದಾಗ ಮೊಟ್ಟಮೊದಲು ಪ್ರತಿಕ್ರಿಯೆಯೆಂದರೆ ಪ್ರಾರ್ಥನೆಯೇ ಆಗಬೇಕು. ಭಗವಂತ ಎಲ್ಲದಕ್ಕೂ ಉತ್ತರಿಸಬಲ್ಲ. ಇನ್ನಾರೂ ನಮ್ಮ ನೆರವಿಗೆ ಬರದಿದ್ದಾಗ, ನಿಜಕ್ಕೂ ನಮ್ಮ ಸಹಾಯಕ್ಕೆ ಬರುವನು ಅವನೊಬ್ಬನೇ. ಪ್ರಾರ್ಥನೆಯಲ್ಲಿ ಅಂತಹ ಸಾಮರ್ಥ್ಯವಿರದಿದ್ದಲ್ಲಿ ಯುಗ ಯುಗಾಂತರಗಳಿಂದ ಜನರು ಅದರಲ್ಲಿ ಭರವಸೆಯಿಡುತ್ತಿದ್ದರೆ? ಪ್ರಾರ್ಥನೆಯಲ್ಲಿರುವ ಶಕ್ತಿಯನ್ನು ನೀವೇ ಗುರುತಿಸಿಕೊಳ್ಳಿ.

ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಮೊದಲೇ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶೀಯರಿಗೆ ಇತ್ತೀಚೆಗೆ ಅರಿವಾಗುವುದು

ಅ. ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಉತ್ತಮ ಪರಿಣಾಮವಾಗುತ್ತದೆ: ಜಪಾನಿನ ವಿಜ್ಞಾನಿ ಡಾ.ಮಾಸಾರೂ ಇಮೋಟೋ ಇವರು, ‘ಪ್ರಾರ್ಥನೆ, ಸಂಗೀತ, ಉತ್ತಮ ಶಬ್ದ, ನಾಮಜಪ ಮತ್ತು ವಾತಾವರಣದಿಂದ ನೀರು ಮತ್ತು ಆಹಾರದ ಮೇಲೆ ಏನು ಪರಿಣಾಮವಾಗುತ್ತದೆ’ ಎಂಬುದರ ಅಧ್ಯಯನವನ್ನು ಮಾಡಿದರು. ಅವುಗಳ ಛಾಯಾಚಿತ್ರಗಳನ್ನೂ ತೆಗೆದರು. ಅದರಲ್ಲಿ ಪ್ರಾರ್ಥನೆಯನ್ನು ಮಾಡದೇ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ, ಪಾಶ್ಚಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಹಾಗೂ ಕೆಟ್ಟ ಶಬ್ದ ಮತ್ತು ಒಳ್ಳೆಯ ಶಬ್ದಗಳ ಪರಿಣಾಮಗಳ ಅಧ್ಯಯನವನ್ನು ಮಾಡಿದರು. ಅವರಿಗೆ ಆಗ ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು. ನಮ್ಮ ಶರೀರದ ರಚನೆಯಲ್ಲ್ಲಿ ಶೇ.೭೨ರಷ್ಟು ನೀರಿರುತ್ತದೆ. ಇದರಿಂದ ಕೆಟ್ಟ ಶಬ್ದಗಳಿಗಿಂತ ಒಳ್ಳೆಯ ಶಬ್ದಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವಾಗುತ್ತದೆ.

ಆ. ಡಾ.ಮಾಸಾರೋ ಇಮೋಟೋ ಇವರಿಗೆ ಚಿಕ್ಕಂದಿನಿಂದ ಅವರ ತಾಯಿಯು ಊಟದ ಮೊದಲು ಪ್ರಾರ್ಥನೆಯನ್ನು ಮಾಡಲು ಕಲಿಸಿದ್ದರು. ಪ್ರಾರ್ಥನೆಯು ಕೇವಲ ಒಳ್ಳೆಯದೆನಿಸಲು ಮಾಡುವ ವಿಷಯವಾಗಿರದೇ ಅದರಿಂದ ತುಂಬಾ ಲಾಭವಾಗುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.

ಇ. ನಾವು ಬಹಳಷ್ಟು ಜನರಿಗೆ ಅವರ ಹುಟ್ಟುಹಬ್ಬದ ದಿನ, ಯಶಸ್ಸು ಪ್ರಾಪ್ತವಾದಾಗ, ಹಬ್ಬಹರಿದಿನಗಳಂದು, ಸಮಾರಂಭ ದಂದು, ಪರೀಕ್ಷೆಗೆ ಹೋಗುವಾಗ ಮುಂತಾದ ಪ್ರಸಂಗಗಳಲ್ಲಿ ಒಳ್ಳೆಯ ಸಕಾರಾತ್ಮಕ ಶಬ್ದಗಳಲ್ಲಿ ಶುಭೇಚ್ಛೆಗಳನ್ನು ನೀಡುತ್ತೇವೆ. ಅದು ಇದಕ್ಕಾಗಿಯೇ ಇದೆ ಎಂದೂ ಡಾ.ಮಾಸಾರೂ ಇಮೋಟೋ ಹೇಳುತ್ತಾರೆ. - ಶ್ರೀ.ನಂದೂ ಮುಳ್ಯೆ, ಸನಾತನ ಆಶ್ರಮ, ದೇವದ, ಪನವೇಲ.
(ಹಿಂದೂ ಧರ್ಮಶಾಸ್ತ್ರದ ಪರ್ಯಾಯವಾಗಿ ಹಿಂದೂ ಧರ್ಮದ ಮಹಾತ್ಮೆಯು ಈ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. - ಸಂಕಲನಕಾರರು)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ಅರ್ಥ ಮತ್ತು ಮಹತ್ವ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ಪ್ರಾರ್ಥನೆಯ ಅರ್ಥ ಮತ್ತು ಮಹತ್ವ


ಉತ್ಪತ್ತಿ ಮತ್ತು ಅರ್ಥ

ಅ. ವ್ಯುತ್ಪತ್ತಿ: ‘ಪ್ರಾರ್ಥನೆ’ ಶಬ್ದವು ‘ಪ್ರ’ (ಅಂದರೆ ಪ್ರಕರ್ಷವಾಗಿ) ಮತ್ತು ‘ಅರ್ಥ’ (ಅಂದರೆ ಯಾಚಿಸುವುದು) ಈ ಶಬ್ದಗಳಿಂದ ತಯಾರಾಗಿದೆ.

ಆ. ಅರ್ಥ: ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎನ್ನುತ್ತಾರೆ. ಪ್ರಾರ್ಥನೆಯಲ್ಲಿ ಆದರ, ಪ್ರೇಮ, ವಿನಯಭಾವ (ನಮ್ರತೆ), ಶ್ರದ್ಧೆ ಮತ್ತು ಭಕ್ತಿಭಾವವಿರುತ್ತದೆ. ಪ್ರಾರ್ಥನೆಯನ್ನು ಮಾಡುವಾಗ ಭಕ್ತನ ಅಸಾಮರ್ಥ್ಯ ಮತ್ತು ಶರಣಾಗತಿ ವ್ಯಕ್ತವಾಗುತ್ತಿರುತ್ತದೆ ಮತ್ತು ಅವನು ಕರ್ತೃತ್ವವನ್ನು ಈಶ್ವರನಿಗೆ ನೀಡುತ್ತಿರುತ್ತಾನೆ.
- ಪೂಜ್ಯ ಡಾ.ವಸಂತ ಬಾಳಾಜಿ ಆಠವಲೆ, ಚೆಂಬೂರು, ಮುಂಬೈ (೧೯೮೦)

ಪ್ರಾರ್ಥನೆಯ ಮಹತ್ವ

ಅ. ದೇವತೆಗಳ ಬಗ್ಗೆ ಪ್ರೇಮ ಮತ್ತು ಆದರ ನಿರ್ಮಾಣವಾಗುತ್ತದೆ: ಈಶ್ವರ ಮತ್ತು ದೇವತೆಗಳೊಂದಿಗೆ ಆತ್ಮೀಯತೆಯನ್ನು ಸಾಧಿಸಲು, ಹಾಗೆಯೇ ಅವರ ಬಗ್ಗೆ ಪ್ರೇಮ ಮತ್ತು ಆದರಭಾವ ನಿರ್ಮಾಣವಾಗಲು ಪ್ರಾರ್ಥನೆಯನ್ನು ಮಾಡಬೇಕು. ‘ಈಶ್ವರ, ದೇವತೆಗಳು ಮತ್ತು ಗುರುಗಳು ನಮ್ಮಿಂದ ಎಲ್ಲವನ್ನೂ ಮಾಡಿಸಿಕೊಳ್ಳುವವರಿದ್ದಾರೆ’ ಎಂಬುದು ಪ್ರಾರ್ಥನೆಯಿಂದ ಅರಿವಾಗುತ್ತದೆ.

ಆ. ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ: ಮಾಡಬೇಕಾದ ಕಾರ್ಯವನ್ನು ದೇವತೆಗೆ ಪ್ರಾರ್ಥಿಸಿ ಮಾಡುವುದರಿಂದ, ಆ ಕಾರ್ಯಕ್ಕೆ ದೇವತೆಯ ಆಶೀರ್ವಾದ ಸಿಗುತ್ತದೆ. ಹಾಗೆಯೇ ಪ್ರಾರ್ಥನೆಯಿಂದ ಆತ್ಮಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಕಾರ್ಯವು ಉತ್ತಮ ರೀತಿಯಲ್ಲಾಗಿ ಯಶಸ್ಸು ಸಿಗುತ್ತದೆ.

ಇ. ಮನಃಶಾಂತಿ ದೊರೆಯುತ್ತದೆ: ಪ್ರಾರ್ಥನೆಯನ್ನು ಮಾಡಿ ಕೃತಿಯನ್ನು ಮಾಡುವಾಗ ಮನಃಶಾಂತಿ ದೊರೆಯುತ್ತದೆ ಮತ್ತು ಶಾಂತ ಮತ್ತು ಸ್ಥಿರ ಮನಸ್ಸಿನಿಂದ ಮಾಡಿದ ಕೃತಿಯು ಉತ್ತಮ ವಾಗಿ ಆಗುತ್ತದೆ. - ಕು.ಅನುರಾಧಾ ವಾಡೇಕರ, ಸನಾತನ ಸಂಸ್ಥೆ

ಈ. ಉಪಾಸಕನನ್ನು ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಕೊಂಡೊಯ್ಯುವ ಒಂದು ಸುಲಭ ಉಪಾಸನಾಪದ್ಧತಿ: ದೈನಂದಿನ ಧಾವಂತದ ಜೀವನದಲ್ಲಿ ಮನಃಶಾಂತಿ ಸಿಗಬೇಕು ಹಾಗೂ ನಿಧಾನವಾಗಿ ಈಶ್ವರನ ಕಡೆಗೆ ಮಾರ್ಗಕ್ರಮಣವಾಗ ಬೇಕೆಂದು ಜನರು ಈಶ್ವರನ ಉಪಾಸನೆಯನ್ನು ಮಾಡುತ್ತಾರೆ. ಹೆಚ್ಚಿನ ಜನರು ತಮ್ಮ ಜೀವನವಿಡೀ ಪೂಜಾರ್ಚನೆ, ಧಾರ್ಮಿಕ ವಿಧಿ ಇತ್ಯಾದಿಗಳನ್ನು, ಅಂದರೆ ಕರ್ಮಕಾಂಡಕ್ಕನುಸಾರ ಮಾಡುವ ಉಪಾಸನೆಯನ್ನೇ ಮಾಡುತ್ತಿರುತ್ತಾರೆ. ಕರ್ಮಕಾಂಡಕ್ಕನುಸಾರ ಮಾಡುವ ಉಪಾಸನೆಯು ಸ್ಥೂಲ ಉಪಾಸನೆಯಾಗಿದೆ. ಈಶ್ವರನ ಸ್ವರೂಪವು ಸೂಕ್ಷ್ಮವಾಗಿದೆ. ಈಶ್ವರಪ್ರಾಪ್ತಿಯಾಗಲು ಉಪಾಸನೆಯೂ ‘ಸ್ಥೂಲದಿಂದ ಸೂಕ್ಷ್ಮಕ್ಕೆ’ ಕೊಂಡೊಯ್ಯುವಂತಹದ್ದಾಗಿರಬೇಕು. ದೇವರಿಗೆ ಪ್ರಾರ್ಥನೆಯನ್ನು ಮನಸ್ಸಿನಿಂದ ಮಾಡಬೇಕಾಗುತ್ತದೆ. ಹಾಗಾಗಿ ಅದು ಸ್ಥೂಲದಿಂದ ಸೂಕ್ಷ್ಮದೆಡೆಗೆ ಕೊಂಡೊಯ್ಯುವ ಒಂದು ಸುಲಭ ಉಪಾಸನೆಯ ಪದ್ಧತಿಯಾಗಿದೆ.

ಉ. ಈಶ್ವರನೊಂದಿಗೆ ಅನುಸಂಧಾನ ಸಾಧಿಸುವ ಸುಲಭ ಮಾರ್ಗ: ಸಾಧನೆಯನ್ನು ಮಾಡುವಾಗ ಈಶ್ವರನ ಅನುಸಂಧಾನ ದಲ್ಲಿರುವುದು ಮಹತ್ವದ್ದಾಗಿದೆ. ಸ್ವಲ್ಪ-ಸ್ವಲ್ಪ ಸಮಯವನ್ನು ಬಿಟ್ಟು ಪ್ರಾರ್ಥನೆಯನ್ನು ಮಾಡಿದರೆ ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸಲು ಸುಲಭವಾಗುತ್ತದೆ.

ಊ. ದೇವತೆಗಳ ಬಗ್ಗೆ ಶ್ರದ್ಧೆ ಮತ್ತು ಭಾವ ನಿರ್ಮಾಣವಾಗುತ್ತದೆ: ಪ್ರಾರ್ಥನೆಯಿಂದ ದೇವತೆಗಳ ಕೃಪೆಯಾಗಿ ಅನುಭೂತಿಗಳು ಬರುತ್ತವೆ. ಇದರಿಂದ ದೇವತೆಗಳ ಬಗ್ಗೆ ಶ್ರದ್ಧೆ ಮತ್ತು ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.

ಎ. ಸಾಮೂಹಿಕ ಪ್ರಾರ್ಥನೆಯ ಮಹತ್ವ: ಮಕ್ಕಳು ಸಾಮೂಹಿಕ ಪ್ರಭುವಂದನೆ ಮತ್ತು ಸಂಕೀರ್ತನೆಯನ್ನು ಮಾಡುವುದರಿಂದ ಒಂದೇ ಸ್ವರದಲ್ಲಿ ನಿರ್ಮಾಣವಾಗುವ ತುಮುಲ (ವಿಶಿಷ್ಟ) ಧ್ವನಿಯು ವಾತಾವರಣದಲ್ಲಿ ಪವಿತ್ರ ಲಹರಿಗಳನ್ನು ನಿರ್ಮಿಸುತ್ತದೆ. ಆ ಸಮಯದಲ್ಲಿ ಮನಸ್ಸು ಧ್ವನಿಯ ಮೇಲೆ ಏಕಾಗ್ರವಾಗುತ್ತದೆ. ಇದರಿಂದ ಸ್ಮರಣಶಕ್ತಿ ಮತ್ತು ಶ್ರವಣಶಕ್ತಿಯ ವಿಕಾಸವಾಗುತ್ತದೆ; ಹಾಗಾಗಿ ಶಾಲೆಗಳಲ್ಲಿ ಸಾಮೂಹಿಕ ಭಗವದ್ ಪ್ರಾರ್ಥನೆಗೆ ಮಹತ್ವವನ್ನು ಕೊಡಲಾಗಿದೆ.

ಸೂಚನೆ - ಪ್ರಾರ್ಥನೆಯ ಅನೇಕ ಉದಾಹರಣೆಗಳನ್ನು ಕಿರುಗ್ರಂಥದಲ್ಲಿ ವಿವರವಾಗಿ ಕೊಡಲಾಗಿದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಮೊದಲೇ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶೀಯರಿಗೆ ಇತ್ತೀಚೆಗೆ ಅರಿವಾಗುವುದು

ಅ. ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಉತ್ತಮ ಪರಿಣಾಮವಾಗುತ್ತದೆ: ಜಪಾನಿನ ವಿಜ್ಞಾನಿ ಡಾ.ಮಾಸಾರೂ ಇಮೋಟೋ ಇವರು, ‘ಪ್ರಾರ್ಥನೆ, ಸಂಗೀತ, ಉತ್ತಮ ಶಬ್ದ, ನಾಮಜಪ ಮತ್ತು ವಾತಾವರಣದಿಂದ ನೀರು ಮತ್ತು ಆಹಾರದ ಮೇಲೆ ಏನು ಪರಿಣಾಮವಾಗುತ್ತದೆ’ ಎಂಬುದರ ಅಧ್ಯಯನವನ್ನು ಮಾಡಿದರು. ಅವುಗಳ ಛಾಯಾಚಿತ್ರಗಳನ್ನೂ ತೆಗೆದರು. ಅದರಲ್ಲಿ ಪ್ರಾರ್ಥನೆಯನ್ನು ಮಾಡದೇ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ, ಪಾಶ್ಚಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಹಾಗೂ ಕೆಟ್ಟ ಶಬ್ದ ಮತ್ತು ಒಳ್ಳೆಯ ಶಬ್ದಗಳ ಪರಿಣಾಮಗಳ ಅಧ್ಯಯನವನ್ನು ಮಾಡಿದರು. ಅವರಿಗೆ ಆಗ ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು. ನಮ್ಮ ಶರೀರದ ರಚನೆಯಲ್ಲ್ಲಿ ಶೇ.೭೨ರಷ್ಟು ನೀರಿರುತ್ತದೆ. ಇದರಿಂದ ಕೆಟ್ಟ ಶಬ್ದಗಳಿಗಿಂತ ಒಳ್ಳೆಯ ಶಬ್ದಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವಾಗುತ್ತದೆ.

ಆ. ಡಾ.ಮಾಸಾರೋ ಇಮೋಟೋ ಇವರಿಗೆ ಚಿಕ್ಕಂದಿನಿಂದ ಅವರ ತಾಯಿಯು ಊಟದ ಮೊದಲು ಪ್ರಾರ್ಥನೆಯನ್ನು ಮಾಡಲು ಕಲಿಸಿದ್ದರು. ಪ್ರಾರ್ಥನೆಯು ಕೇವಲ ಒಳ್ಳೆಯದೆನಿಸಲು ಮಾಡುವ ವಿಷಯವಾಗಿರದೇ ಅದರಿಂದ ತುಂಬಾ ಲಾಭವಾಗುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.

ಇ. ನಾವು ಬಹಳಷ್ಟು ಜನರಿಗೆ ಅವರ ಹುಟ್ಟುಹಬ್ಬದ ದಿನ, ಯಶಸ್ಸು ಪ್ರಾಪ್ತವಾದಾಗ, ಹಬ್ಬಹರಿದಿನಗಳಂದು, ಸಮಾರಂಭ ದಂದು, ಪರೀಕ್ಷೆಗೆ ಹೋಗುವಾಗ ಮುಂತಾದ ಪ್ರಸಂಗಗಳಲ್ಲಿ ಒಳ್ಳೆಯ ಸಕಾರಾತ್ಮಕ ಶಬ್ದಗಳಲ್ಲಿ ಶುಭೇಚ್ಛೆಗಳನ್ನು ನೀಡುತ್ತೇವೆ. ಅದು ಇದಕ್ಕಾಗಿಯೇ ಇದೆ ಎಂದೂ ಡಾ.ಮಾಸಾರೂ ಇಮೋಟೋ ಹೇಳುತ್ತಾರೆ. - ಶ್ರೀ.ನಂದೂ ಮುಳ್ಯೆ, ಸನಾತನ ಆಶ್ರಮ, ದೇವದ, ಪನವೇಲ.
(ಹಿಂದೂ ಧರ್ಮಶಾಸ್ತ್ರದ ಪರ್ಯಾಯವಾಗಿ ಹಿಂದೂ ಧರ್ಮದ ಮಹಾತ್ಮೆಯು ಈ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. - ಸಂಕಲನಕಾರರು)

ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ,
ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು
ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗು ತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!

ಸಾಧನೆಯೆಂದು ನಾಮಜಪ ಮಾಡುವಾಗ ಅಥವಾ ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮಾಡುವುದು ಉಪಯುಕ್ತವಾಗಿದೆ.

೧. ಮುದ್ರೆಗಳ ಉಗಮ : ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆ ಮುದ್ರೆಗಳನ್ನು ಕಂಡುಹಿಡಿದರು. ಹಿಂದೂಗಳ ಪ್ರಾಚೀನ ಧರ್ಮಗ್ರಂಥಗಳಲ್ಲಿಯೂ ರೋಗನಿವಾರಣೆಗಾಗಿ ಹಾಗೂ ಆರೋಗ್ಯ ಚೆನ್ನಾಗಿರಬೇಕೆಂದು ವಿವಿಧ ಮುದ್ರೆಗಳನ್ನು ಹೇಳಲಾಗಿದೆ.

೨. ಮುದ್ರೆ ಮತ್ತು ನ್ಯಾಸದಿಂದ ನಾಮಜಪದ ಫಲನಿಷ್ಪತ್ತಿ ಹೆಚ್ಚಾಗುವುದು : ಅನೇಕ ಸಾಧಕರು ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸ ಮಾಡುವುದಿಲ್ಲ. ಮುದ್ರೆ ಮತ್ತು ನ್ಯಾಸದಿಂದ ನಾಮಜಪದ ಫಲನಿಷ್ಪತ್ತಿ ಶೇ.೧೦ ರಷ್ಟು ಹೆಚ್ಚಾಗುತ್ತದೆ ಹಾಗೂ ತೊಂದರೆಯು ಶೀಘ್ರಗತಿಯಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.

೩. ವಿವಿಧ ತೊಂದರೆಗಳ ನಿವಾರಣೆಗಾಗಿ ಮುದ್ರೆ ಮತ್ತು ನ್ಯಾಸ ಮಾಡುವುದು
೩ಅ. ಮುದ್ರೆಗಳು : ಶಾರೀರಿಕ, ಮಾನಸಿಕ ಇತ್ಯಾದಿ ವಿವಿಧ ತೊಂದರೆಗಳಿಗಾಗಿ ವಿವಿಧ ಮುದ್ರೆಗಳನ್ನು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಸನಾತನದ ಗ್ರಂಥ ಶೀಘ್ರದಲ್ಲಿಯೇ ಮುದ್ರಣವಾಗಲಿದೆ. ಯಾವ ತೊಂದರೆಗೆ ಯಾವ ಮುದ್ರೆ ಮಾಡಬೇಕೆಂಬ ಮಾಹಿತಿಯಿದ್ದರೆ, ಸಾಧಕರು ಹಾಗೆ ಮಾಡಬೇಕು. ಮಾಹಿತಿ ಇಲ್ಲದಿದ್ದರೆ ಗ್ರಂಥ ಮುದ್ರಣವಾಗುವವರೆಗೆ ನಾಮಜಪ ಮಾಡುವಾಗ ಎಲ್ಲಕ್ಕಿಂತ ಸುಲಭವಾದ ಹಾಗೂ ಸರ್ವಪ್ರಚಲಿತ ಇರುವ ಜ್ಞಾನಮುದ್ರೆ ಮಾಡಬೇಕು.

೩ಆ. ನ್ಯಾಸ: ಇನ್ನೊಂದು ಕೈಯಿಂದಲೂ ಮುದ್ರೆ ಮಾಡಿ ಅದರಿಂದ ತನಗಾಗುವ ತೊಂದರೆಗನುಸಾರ ಶರೀರದಲ್ಲಿನ ಸಂಬಂಧಪಟ್ಟ ಚಕ್ರದ ಮೇಲೆ ನ್ಯಾಸ ಮಾಡಬೇಕು, ಉದಾ. ಒಂದು ಕೈಯಿಂದ ಜ್ಞಾನಮುದ್ರೆ ಮಾಡುತ್ತಿದ್ದರೆ ಇನ್ನೊಂದು ಕೈಯ ಹೆಬ್ಬೆರಳು ಮತ್ತು ತರ್ಜನಿಗಳ ತುದಿಯನ್ನು ಪರಸ್ಪರ ಜೋಡಿಸಿ ಅದನ್ನು ಶರೀರದ ಮೇಲಿಟ್ಟು ನ್ಯಾಸ ಮಾಡಬೇಕು. ಸಾಮಾನ್ಯವಾಗಿ ತೊಂದರೆಗನುಸಾರ ಶರೀರದ ಸಂಬಂಧಪಟ್ಟ ಚಕ್ರಗಳು ಯಾವುವು ಎಂಬುದನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.


೪. ಮುದ್ರೆ ಮಾಡುವ ವಿಷಯದಲ್ಲಿ ಕೆಲವು ಉಪಯುಕ್ತ ಸೂಚನೆಗಳು
ಅ. ಮುದ್ರೆ ಮಾಡುವಾಗ ಹೆಬ್ಬೆರಳು ಮತ್ತು ಇತರ ಬೆರಳುಗಳ ಸ್ಪರ್ಶ ಸಹಜವಾಗಿರಬೇಕು.
ಆ. ಮುದ್ರೆ ಮಾಡುವಾಗ ಹೆಬ್ಬೆರಳಿನಿಂದ ಇತರ ಬೆರಳನ್ನು ಸ್ಪರ್ಶ ಮಾಡಬೇಕು.
ಇ. ಹೆಬ್ಬೆರಳಿಗೆ ಜೋಡಿಸಿದ ಬೆರಳಿನ ಹೊರತು ಇತರ ಬೆರಳುಗಳನ್ನು ಸರಳವಾಗಿಡಬೇಕು.
ಈ. ಸಾಮಾನ್ಯವಾಗಿ ಕೈಯ ಅಂಗೈ ಆಕಾಶದ ದಿಕ್ಕಿನಲ್ಲಿರಬೇಕು.
ಉ. ಒಂದು ಕೈಯಿಂದ ಮುದ್ರೆ ಮತ್ತು ಇನ್ನೊಂದು ಕೈಯಿಂದ ನ್ಯಾಸ ಮಾಡಬೇಕು.

‘ಜ್ಞಾನಮುದ್ರೆ’ಯಿಂದ ಏಕಾಗ್ರತೆ ಹಾಗೂ ಸಾಧನೆ ಒಳ್ಳೆಯ ರೀತಿಯಲ್ಲಿ ಆಗಲು ಸಹಾಯವಾಗುತ್ತದೆ. ಶರೀರ ಮತ್ತು ಮನಸ್ಸಿಗೆ ಸಂಬಂಧಿಸಿದ ತೊಂದರೆಗಳಿಗೆ ತೇಜತತ್ತ್ವಕ್ಕೆ ಸಂಬಂಧಿಸಿದ ಮುದ್ರೆ ಹೆಚ್ಚು ಉಪಯೋಗವಾಗುವುದು. ಈ ಉದ್ದೇಶಕ್ಕಾಗಿ ಸಾಮಾನ್ಯವಾಗಿ ಈ ಮುಂದಿನ ಮುದ್ರೆ ಹಾಗೂ ನ್ಯಾಸ ಮಾಡಬೇಕು.

೧. ಮುದ್ರೆ: ಹೆಬ್ಬೆರಳಿನ ತುದಿ ಮಧ್ಯದ ಬೆರಳಿನ ತುದಿಗೆ ಜೋಡಿಸುವುದು
೨. ನ್ಯಾಸ: ಮೇಲಿನ ಮುದ್ರೆಯಿಂದ ಅವಶ್ಯಕತೆಯಿರುವ ಸ್ಥಳದಲ್ಲಿ ನ್ಯಾಸ ಮಾಡುವುದು 

- ಪೂಜ್ಯ ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಬಂಧಿತ ವಿಷಯಗಳು
ನಾಮಜಪ ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಕೆಲವು ಪ್ರಯತ್ನಗಳು

ನಾಮಜಪ ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಕೆಲವು ಪ್ರಯತ್ನಗಳು


ಬಹಳಷ್ಟು ಜನರ ನಾಮಜಪವು ಏಕಾಗ್ರತೆಯಿಂದ ಆಗುವುದಿಲ್ಲ. ವಿಶೇಷವಾಗಿ ಕೆಟ್ಟ ಶಕ್ತಿಗಳ ತೊಂದರೆ ಇರುವವರಿಗಂತೂ ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಸಂಘರ್ಷ ಮಾಡಬೇಕಾಗುತ್ತದೆ; ಏಕೆಂದರೆ ತೊಂದರೆ ಇರುವುದರಿಂದ ನಾಮಜಪ ಮಾಡುವಾಗ ಮನಸ್ಸಿನಲ್ಲಿ ಬಹಳ ವಿಚಾರಗಳು ಬರುತ್ತವೆ ಅಥವಾ ವೇದನೆಯಾಗುವುದರತ್ತ ಹೆಚ್ಚು ಗಮನ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ನಾಮ ಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣವಾಗಿ ಆಗಲು ಮುಂದೆ ಹೇಳಿದ ಪ್ರಯತ್ನಗಳನ್ನು ಮಾಡಿ ನೋಡಬೇಕು. ಯಾವ ಪ್ರಯತ್ನದಲ್ಲಿ ತಮ್ಮ ಮನಸ್ಸು ಹೆಚ್ಚು ಸ್ಥಿರವಾಗಿರುವುದೋ, ಆ ಪ್ರಯತ್ನವನ್ನು ಹೆಚ್ಚು ಮಾಡಬೇಕು. ಈ ರೀತಿ ಪ್ರಯತ್ನಿಸುವಾಗ ಬದಲಾಯಿಸಿ ಬದಲಾಯಿಸಿ ಮಾಡಬಹುದು. ಈ ಪ್ರಯತ್ನ, ಅಂದರೆ ನಾಮಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಕೆಲವು ಉದಾಹರಣೆ ಮುಂದೆ ಕೊಡಲಾಗಿದೆ. ಈ ಪ್ರಯತ್ನದ ಜೊತೆ ದೇವರು ಸೂಚಿಸುವ ಪ್ರಯತ್ನವನ್ನೂ ಅವಶ್ಯವಾಗಿ ಮಾಡಬೇಕು.

ಏಕಾಗ್ರತೆಯನ್ನು ಸಾಧಿಸಲು ಕೆಲವು ಮಾರ್ಗಗಳು / ಆಲಂಬನೆ

ಅ. ಧ್ವನಿಮುದ್ರಿಕೆ/ಸಂಚಾರಿವಾಣಿ ಇವುಗಳಲ್ಲಿ ನಾಮಜಪದ ಧ್ವನಿ ಮುದ್ರಿಸಿ ಆ ನಾಮಜಪದ ಜೊತೆಯಲ್ಲಿಯೇ ಸ್ವತಃ ನಾಮಜಪ ಮಾಡಬೇಕು. ಸಾಧ್ಯವಾದರೆ ಸಂತರ ಹಾಗೂ ಉನ್ನತ ಸಾಧಕರ ಧ್ವನಿಯಲ್ಲಿ ಮುದ್ರಿಸಿಟ್ಟುಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಸ್ವತಃ ಧ್ವನಿ ಮುದ್ರಿಸಿಟ್ಟುಕೊಳ್ಳಬೇಕು.

ಆ. ನಾಮಜಪ ಮಾಡುವಾಗ ಪ.ಪೂ. ಭಕ್ತರಾಜ ಮಹಾರಾಜರ (ಸನಾತನ ಸಂಸ್ಥೆಯ ಪ್ರೇರಣಾಸ್ಥಾನ)  ಭಜನೆ ಆಲಿಸಬೇಕು.
೧.ಭಜನೆಯಲ್ಲಿ ಅರ್ಥದ ಕಡೆಗೆ ಗಮನ ನೀಡಿ ನಾಮಜಪ ಮಾಡಬೇಕು.
೨.ಭಜನೆಯಲ್ಲಿ ಬಾಬಾರವರ ಸ್ಥಿತಿ ಸ್ವತಃ ಅನುಭವಿಸುತ್ತಿದ್ದೇನೆ, ಎಂಬ ಭಾವವಿಟ್ಟು ನಾಮಜಪ ಮಾಡಬೇಕು.

ಇ. ನಾಮಜಪ ಮಾಡುವಾಗ ದೇವತೆ/ಪ.ಪೂ. ಭಕ್ತರಾಜ ಮಹಾರಾಜರ/ಪ.ಪೂ.ಡಾಕ್ಟರರ ರೂಪ ಕಣ್ಣೆದುರಿಗೆ ತರಬೇಕು.

ಈ. ನಾಮಜಪ ಮಾಡುವಾಗ ನಾಮಜಪದಲ್ಲಿನ ಅಕ್ಷರ ಕಣ್ಣೆದುರಿಗೆ ತಂದು ಅವನ್ನು ಓದಬೇಕು ಅಥವಾ ಅದರ ಮೇಲೆ ಗಮನ ವಿಡಬೇಕು. ನಾಮಜಪದ ಅಕ್ಷರಗಳ ಒಳಗೆ ಹಾಗೂ ‘ಓಂ’ನ ಒಳಗೆ ನಾವು ಹೋಗುತ್ತಿದ್ದೇವೆ/ಅದರೊಂದಿಗೆ ಏಕರೂಪವಾಗುತ್ತಿದ್ದೇವೆ, ಎಂದು ಕಲ್ಪನೆ ಮಾಡಬೇಕು.

ಉ. ನಾಮಜಪ ಒಂದೇ ಲಯದಲ್ಲಿ ಮಾಡಲು ಪ್ರಯತ್ನಿಸಬೇಕು. ಒಂದೇ ಸಮನಾಗಿ ಮಾಡುವಾಗ ಕೆಲವೊಮ್ಮೆ ಮನಸ್ಸು ಸ್ವಲ್ಪ ಪ್ರಮಾಣದಲ್ಲಿ ಬೇರೆ ಕಡೆಗೆ ಹೋಗುತ್ತದೆ.

ಊ. ನಾಮಜಪವನ್ನು ಶೀಘ್ರಗತಿಯಿಂದ ಮಾಡಲು ಪ್ರಯತ್ನಿಸಬೇಕು. ಇದರಿಂದ ನಾಮ ಜಪದ ಸಮಯದಲ್ಲಿ ಬೇರೆ ವಿಚಾರಗಳು ಮನಸ್ಸಿನಲ್ಲಿ ಬರಲು ಅವಕಾಶವೇ ಇರುವುದಿಲ್ಲ!

ಎ. ನಾಮರೂಪದ ಒಂದೊಂದು ಹೂ/ತುಳಸಿದಳ ನಾನು ಶ್ರೀಕೃಷ್ಣನ ಚರಣಕ್ಕೆ ಅರ್ಪಿಸುತ್ತಿದ್ದೇನೆ, ಎಂಬ ಭಾವ ಇಡಬೇಕು.
ಐ. ಒಂದೊಂದು ನಾಮಜಪ ಮಾಡುತ್ತ ನಾನು ಕೃಷ್ಣನ ಸಮೀಪ ಹೋಗುತ್ತಿದ್ದೇನೆ, ಎಂಬ ಭಾವವಿಡಬೇಕು.

ಓ. ಶ್ರೀಕೃಷ್ಣನು ನನ್ನ ತಲೆಯ ಮೇಲೆ ಕೈ ಇಟ್ಟಿದ್ದಾನೆ ಹಾಗೂ ಅಲ್ಲಿಂದ ನನ್ನ ಶರೀರದೊಳಗೆ ಚೈತನ್ಯ ಹೋಗುತ್ತಿದೆ, ಎಂಬ ಭಾವವಿಡಬೇಕು.

ಔ. ನಾಮಜಪ ಮಾಡುವಾಗ ನನ್ನ ದೇಹದಲ್ಲಿ ನಾಮರೂಪಿ ಚೈತನ್ಯ ತುಂಬುತ್ತಿದೆ, ಎಂಬ ಭಾವವಿಡಬೇಕು

ಅಂ. ಪ್ರತಿಯೊಂದು ನಾಮದೊಳಗಿನ ಚೈತನ್ಯ ನನ್ನ ಪ್ರತಿಯೊಂದು ಅವಯವದಲ್ಲಿ, ಕಣಕಣಗಳಲ್ಲಿ ಹೋಗುತ್ತಿವೆ, ಎಂಬ ಭಾವಇಡಬೇಕು.

ಕ. ನಾಮಜಪ ಮಾಡುವಾಗ ಮೊದಲಿಗೆ ಹೊಕ್ಕುಳಿನ ಜಾಗದಲ್ಲಿ ಮನಸ್ಸು ಏಕಾಗ್ರ ಮಾಡಿ ನಾಮಜಪದಲ್ಲಿನ ಮೊದಲ ಅಕ್ಷರ ಉಚ್ಚರಿಸುವುದು. ಹೊಕ್ಕುಳಿಗಿಂತ ಮೇಲೆ ಸಹಸ್ರಾರ ಚಕ್ರದ ವರೆಗೆ ಬರುತ್ತ ನಾಮಜಪದಲ್ಲಿನ ಮುಂದು ಮುಂದಿನ ಅಕ್ಷರ ಉಚ್ಚರಿಸಬೇಕು.

ಖ. ನಾಮಜಪ ಮಾಡುವಾಗ ಹೃದಯದಲ್ಲಿ ನಾನು ನಾಮಜಪದ ಸ್ಪಂದನವನ್ನು ಅನುಭವಿಸುತ್ತಿದ್ದೇನೆ, ಎಂಬ ಭಾವವಿಡಬೇಕು.

ಗ. ನಾಮಜಪ ಮಾಡುವಾಗ ನನ್ನೊಳಗೆ ದೇವತೆಯ ವಾಸವಿದೆ ಹಾಗೂ ದೇವತೆಯೇ ನನ್ನ ದೇಹದೊಳಗಿಂದ ನಾಮಜಪ ಮಾಡುತ್ತಿದ್ದಾರೆ, ಎಂಬ ಭಾವವಿಡಬೇಕು.

ಘ.  ನಾಮವನ್ನು ಶ್ವಾಸಕ್ಕೆ ಜೋಡಿಸಿ ನಾಮಜಪ ಮಾಡುವ ಪ್ರಯತ್ನ ಮಾಡಬೇಕು, ಇದು ಕಠಿಣವಿದೆ; ಆದುದರಿಂದ ಮೊದಲು ಬೇರೆ ಪ್ರಯತ್ನಗಳಿಂದ ಯಶಸ್ಸು ದೊರಕಿದ ನಂತರವೇ ಈ ಪ್ರಯತ್ನ ಮಾಡಬೇಕು.

ನಾಮಜಪ ಏಕಾಗ್ರತೆಯಿಂದ ಆಗಲು ಪೂರಕ ವಿಚಾರ/ಭಾವ

ಅ. ನಾಮಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಆಗಲು ಆಗಾಗ ದೇವರಿಗೆ ಪ್ರಾರ್ಥನೆ ಮಾಡಬೇಕು.

ಆ. ನಾಮಜಪ ಮಾಡುವಾಗ ಆಗಾಗ ನಮಸ್ಕಾರದ ಮುದ್ರೆ ಮಾಡಬೇಕು. ಇದರಿಂದ ಶರಣಾಗತಿಯ ಭಾವ ನಿರ್ಮಾಣ ವಾಗುವುದರಿಂದ ನಾಮಜಪ ಭಾವಪೂರ್ಣ ವಾಗಲು ನೆರವಾಗುತ್ತದೆ.

ಇ. ನಾಮಜಪ ಮಾಡುವಾಗ ಆಗಾಗ ಬಾಬಾರವರ ಭಜನೆಯಲ್ಲಿನ ‘ಮನ ಗುಂಗೊ ನಾಮಾಪಾಯಿ | ಶರೀರಾಚೆ ಭಾನ ನಾ ರಾಹಿ || (ಮನಸ್ಸು ನಾಮದಲ್ಲಿ ರಮಿಸಲಿ | ಶರೀರದ ಅರಿವು ಇಲ್ಲದಿರಲಿ ||)’ ಎಂಬ ಸಾಲುಗಳನ್ನು ನೆನಪಿಸಬೇಕು. ಇದರಿಂದ ನಾಮಜಪ ಕೇವಲ ಮಾಡಬೇಕೆಂದು ಮಾಡದೇ, ನಾಮಜಪಿಸುವಾಗ ತನ್ನನ್ನು ಮರೆಯುವ ಧ್ಯೇಯದ ವರೆಗೆ ತಲುಪ ಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸ ಬೇಕಾಗುತ್ತದೆ.

ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸುತ್ತಿರುವಾಗ ದೇವರು ಕೆಲವು ಅಂಶಗಳನ್ನು ಕಲಿಸಿದರು. ಆ ಅಂಶಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ದೇವರು ಪ್ರತಿಯೊಬ್ಬರಿಗೂ ಅವರವರ ಸಾಧನಾ ಮಾರ್ಗದಂತೆ ಮತ್ತು ಪ್ರಕೃತಿಯಂತೆ ಬೇರೆ ಬೇರೆ ಅಂಶಗಳನ್ನು ಕಲಿಸುತ್ತಿರುತ್ತಾನೆ. ಈ ಲೇಖನದಿಂದ ನಾಮಜಪ-ಸಾಧನೆಯ ಪ್ರವಾಸವು ಸಾಮಾನ್ಯವಾಗಿ ಹೇಗಿರುತ್ತದೆ, ಎಂಬುದರ ಕಲ್ಪನೆಯು ಬರುತ್ತದೆ. ‘ಈ ಲೇಖನದಿಂದ ವಿಶೇಷವಾಗಿ ತೊಂದರೆಯಿರುವ ಸಾಧಕರಿಗೆ ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರೇರಣೆ ಮತ್ತು ದಿಶೆ ದೊರಕಲಿ,’ ಎಂದು ಪ.ಪೂ. ಡಾಕ್ಟರರ ಚರಣಗಳಲ್ಲಿ ಪ್ರಾರ್ಥನೆ.

೧. ನಾಮಜಪ ಏಕಾಗ್ರತೆಯಿಂದಾಗಲು ‘ಆಲಂಬನೆ’ ಮಾಡುವ ಹಂತಗಳು

‘ಆಲಂಬನೆ’ ಅಂದರೆ ಅನುಸಂಧಾನವಿಡುವ ಒಂದು ಮಾಧ್ಯಮ. ಕೇವಲ ನಾಮಜಪವನ್ನು ಮಾಡುವ ಬದಲು ಯಾವುದಾದರೊಂದು ‘ಆಲಂಬನೆ’ಯನ್ನಿಟ್ಟು ಅದರ ಆಧಾರದಲ್ಲಿ ಮಾಡಿದರೆ ಮನಸ್ಸು ನಾಮಜಪದಲ್ಲಿ ತಕ್ಷಣ ಏಕಾಗ್ರವಾಗುತ್ತದೆ.

ಹಂತ ೧

ಯಾವುದಾದರೊಂದು ಘಟಕದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದು : ಇಲ್ಲಿ ಆಲಂಬನೆಯಲ್ಲಿ ಯಾವುದಾದರೊಂದು ಘಟಕದ ಮೇಲೆ ದೃಷ್ಟಿ ಏಕಾಗ್ರ ಮಾಡಲು ಪ್ರಯತ್ನಿಸುವುದಿರುತ್ತದೆ. ದೃಷ್ಟಿ ಏಕಾಗ್ರ ವಾದರೆ ಮನಸ್ಸೂ ಏಕಾಗ್ರವಾಗುತ್ತದೆ. ಪ್ರತ್ಯಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದೆಂದರೆ ಕಣ್ಣು ತೆರೆದಿಟ್ಟು ಯಾವುದಾದರೊಂದು ಘಟಕಕ್ಕೆ ಉದಾ. ಓಂಅನ್ನು ನೋಡುವುದು. ಪರೋಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದೆಂದರೆ ಕಣ್ಮುಚ್ಚಿ ಯಾವುದಾದ ರೊಂದು ಘಟಕವನ್ನು ಉದಾ. ಓಂಅನ್ನು ನೋಡುವುದು, ಅಂದರೆ ಕಣ್ಣಿನ ದೃಷ್ಟಿಯೆದುರು ಓಂ ಅನ್ನು ತರಲು ಪ್ರಯತ್ನಿಸುವುದು.

ಹಂತ ೨

ಯಾವುದಾದರೊಂದು ಘಟಕದ ಮೇಲೆ ಆಲಂಬನೆ ಮಾಡುತ್ತಿದ್ದೇನೆ, ಎಂದು ಕೇವಲ ವಿಚಾರ ಮಾಡುವುದು: ಇದರಲ್ಲಿ ಯಾವುದಾದರೊಂದು ಘಟಕದ ಮೇಲೆ ದೃಷ್ಟಿಯಿಟ್ಟು ಮನಸ್ಸನ್ನು ಏಕಾಗ್ರ ಮಾಡಬೇಕೆಂದೇನಿಲ್ಲ, ಆದರೆ ಕೇವಲ ಮನಸ್ಸಿನಿಂದ ಆಲಂಬನೆಯ ವಿಚಾರ ಮಾಡಿದರೂ ಮನಸ್ಸು ಏಕಾಗ್ರವಾಗುತ್ತದೆ. ಇದರ ಒಂದು ಉದಾಹರಣೆಯೆಂದರೆ 'ಓಂ'ನೊಂದಿಗೆ ಏಕಾಗ್ರವಾಗಲಿಕ್ಕಿದೆ, ಎಂದು ಕೇವಲ ವಿಚಾರ ಮಾಡಿದರೂ ಮನಸ್ಸು ಏಕಾಗ್ರವಾಗುತ್ತದೆ.

ಹಂತ ೩

ಯಾವುದೇ ಆಲಂಬನೆಯ ಆಧಾರವಿಲ್ಲದೆ ಮನಸ್ಸನ್ನು ಏಕಾಗ್ರಗೊಳಿಸುವುದು: ಇದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಲು ಸ್ಥೂಲದಿಂದ ಆಲಂಬನೆ ಮಾಡುವುದು ಅಥವಾ ಮನಸ್ಸಿನಿಂದ ಆಲಂಬನೆಯ ವಿಚಾರ ಮಾಡುವುದು, ಇವುಗಳ ಆಧಾರ ಬೇಕೆಂದಿಲ್ಲ. ನಾಮಜಪ ಮಾಡಲು ಕುಳಿತರೆ ಮನಸ್ಸು ತನ್ನಿಂತಾನೆ ಏಕಾಗ್ರವಾಗುತ್ತದೆ.

೨. ನಾಮಜಪ ಏಕಾಗ್ರತೆಯಿಂದ ಮಾಡುವ ಪ್ರಕ್ರಿಯೆಯಲ್ಲಿನ ಹಂತಗಳು

೧. ಆಲಂಬನೆಯ ಸ್ಥಿತಿ: ತಾವು ಮನಸ್ಸಿನೊಂದಿಗೆ ನಿರ್ಧರಿಸಿದ ಆಲಂಬನೆಯ ಆಧಾರದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.

೨. ಮನಸ್ಸಿನ ಏಕಾಗ್ರತೆಯ ಸ್ಥಿತಿ: ಆಲಂಬನೆಯ ಸಹಾಯದಿಂದ ನಾಮಜಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏಕಾಗ್ರತೆ ಸಾಧಿಸಲಾಗುತ್ತದೆ. ಈ ಸ್ಥಿತಿಯಲ್ಲಿ ಒಂದೆಡೆ ನಾಮಜಪ ಏಕಾಗ್ರತೆಯಿಂದ ಆಗುತ್ತಿರುವಾಗ ಇನ್ನೊಂದೆಡೆ ಬಾಹ್ಯಮನಸ್ಸಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಚಾರ ಬರುತ್ತದೆ. ಆದರೆ ಆ ವಿಚಾರಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಅದರಿಂದ ನಾಮಜಪದ ಏಕಾಗ್ರತೆಯಲ್ಲಿ ವ್ಯತ್ಯಯವಾಗುವುದಿಲ್ಲ.

ಹಂತ ೨

೧. ತ್ರಾಟಕದ ಸ್ಥಿತಿ : ಹಂತ ಒಂದರಲ್ಲಿ ಆಲಂಬನೆಯ ಆಧಾರದಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾದ ನಂತರ ದೇವರು ಮುಂದುಮುಂದಿನ ಆಲಂಬನೆಯನ್ನು ಸೂಚಿಸುತ್ತಾನೆ, ಉದಾ. ನಾಮಜಪ ಮಾಡುವಾಗ ಯಾವುದಾದರೊಂದು ಬಿಂದು ಅಥವಾ ಪ್ರಕಾಶ ಕಾಣುತ್ತದೆ ಅಥವಾ ಯಾವುದಾದರೊಂದು ಅನುಭೂತಿ ಬರುತ್ತದೆ, ಉದಾ.‘ದೈವೀ ನಾದ ಕೇಳಿಸುತ್ತದೆ’, ಹೀಗಾದರೆ ಆ ಹೊಸ ಆಲಂಬನೆಯಲ್ಲಿ ಗಮನವಿರಿಸಬೇಕು. ಆಲಂಬನೆಯ ಬಗ್ಗೆ ದೇವರೇ ಮುಂದಿನ ಮಾರ್ಗ ತೋರಿಸುತ್ತಿರುವುದರಿಂದ ಅದರ ಮೇಲೆ ಶ್ರದ್ಧೆಯಿಟ್ಟು ಮುಂದಿನ ಪ್ರವಾಸ ಮಾಡಬೇಕು.

೨. ಮನಸ್ಸಿನ ಏಕಾಗ್ರತೆಯ ಸ್ಥಿತಿ : ದೇವರ ಕೃಪೆಯಿಂದ ಮುಂದಿನ ಆಲಂಬನೆಯ ಮೇಲೆ ಗಮನವಿರಿಸುವುದರಿಂದ ಏಕಾಗ್ರತೆ ದೃಢವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸಿನಲ್ಲಿ ವಿಚಾರವೂ ಬರುವುದಿಲ್ಲ. ಕೆಲವೊಮ್ಮೆ ತಾವೇ ನಿರ್ವಾತ ಟೊಳ್ಳಾಗಿದ್ದೇವೆ’, ಎಂಬಂತಹ ಅನುಭೂತಿ ಬಂದು ತಮ್ಮ ಸ್ವಂತದ ಅಸ್ತಿತ್ವವನ್ನೇ ಮರೆಯುತ್ತೇವೆ. 

ವಿಶ್ಲೇಷಣೆ : ನಿರ್ವಾತ ಟೊಳ್ಳಿನಂತೆ ಅನುಭವಿಸುವುದು ಅಂದರೆ, ‘ಶಿವದಶೆ (ಎಲ್ಲವೂ ಶೂನ್ಯವಿದೆ)’ ಎಂದು ಅನುಭವಿಸುವುದು. ಪ.ಪೂ.ಭಕ್ತರಾಜ ಮಹಾರಾಜರು (ಬಾಬಾ) ಸಹಜಸ್ಥಿತಿಯಲ್ಲಿರುವಾಗ ಶೇ.೯೦ ರಷ್ಟು ಸಮಯ ಶಿವದಶೆಯಲ್ಲಿ ಇರುತ್ತಿದ್ದರು. ಪ.ಪೂ. ಡಾಕ್ಟರರು ಶೇ.೫೦ ರಷ್ಟು ಸಮಯ ಶಿವದಶೆಯಲ್ಲಿರುತ್ತಾರೆ ಮತ್ತು ಶೇ.೫೦ ರಷ್ಟು ಸಮಯ ಅವರು ಕಾರ್ಯಕ್ಕಾಗಿ ಜೀವದಶೆಗೆ ಬರಬೇಕಾಗುತ್ತದೆ. ನಾಮಜಪ ಏಕಾಗ್ರತೆಯಿಂದ ಮಾಡುವಾಗ ತಮಗೆ ಕೆಲವೊಮ್ಮೆ ಧ್ಯಾನಾವಸ್ಥೆ ಪ್ರಾಪ್ತವಾಗುವುದರಿಂದ ಕೇವಲ ಸ್ವಲ್ಪ ಸಮಯ ಶಿವದಶೆ ಅನುಭವಿಸಲು ಸಾಧ್ಯವಾಗುತ್ತದೆ. ಪ.ಪೂ. ಡಾಕ್ಟರರಿಗೆ ಸಹಜ ಸ್ಥಿತಿಯಲ್ಲಿಯೂ ಅಖಂಡವಾಗಿ ಶಿವದಶೆ ಅನುಭವಿಸಲು ಸಾಧ್ಯವಿದೆ, ಇದರಿಂದ ಅವರ ಮಹಿಮೆಯ ಇನ್ನೊಂದು ಹಂತ ಗಮನಕ್ಕೆ ಬರುತ್ತದೆ. - ಪೂಜ್ಯ ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಬಂಧಿತ ವಿಷಯಗಳು
ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!