ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ

‘ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು (ಇಂಧನಾತ್ಮಕ) ಆವಾಹನೆ ಮಾಡುವುದು. ಈ ಪ್ರಾರ್ಥನಾ ಸ್ವರೂಪ ಆವಾಹನೆಯಿಂದ ಬ್ರಹ್ಮಾಂಡದಲ್ಲಿನ ದತ್ತತತ್ತ್ವಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು ಕಾರ್ಯನಿರತವಾಗಿ ಪಿತೃಗಳ ಲಿಂಗದೇಹಕ್ಕೆ ಸಂಬಂಧಿಸಿದ ಯಮಲಹರಿಗಳನ್ನು ತಮ್ಮ ಆಕರ್ಷಣಾಶಕ್ತಿಯಿಂದ ಸೆಳೆದುಕೊಂಡು ಪೃಥ್ವಿಯ ಕಕ್ಷೆಯಲ್ಲಿ ತರುತ್ತವೆ. ಅನೇಕ ಲಿಂಗದೇಹಗಳು ಮೃತ್ಯುಲೋಕದಲ್ಲಿ ಸಿಲುಕಿಕೊಂಡಿರುತ್ತವೆ. ಈ ಲಿಂಗದೇಹಗಳಿಗೆ ಗತಿ ಸಿಗಲು ಕ್ರಿಯಾತ್ಮಕ ಯಮಲಹರಿಗಳ ಆವಶ್ಯಕತೆಯಿರುತ್ತದೆ. ಶ್ರಾದ್ಧಕರ್ಮದಲ್ಲಿ ಈ ಲಹರಿಗಳನ್ನು ಆವಾಹನೆ ಮಾಡಿದಾಗ ಪಿತೃಗಳ ಲಿಂಗದೇಹದ ಸುತ್ತಲೂ ಇರುವ ವಾಯುಮಂಡಲವು ಕಾರ್ಯನಿರತವಾಗಿ ಯಮಲಹರಿಗಳ ಶಕ್ತಿಯಿಂದ ಲಿಂಗದೇಹವು ಮುಂದಿನ ಹಂತಕ್ಕೆ ತಳ್ಳಲ್ಪಡುತ್ತದೆ. ಅಂದರೆ ಲಿಂಗದೇಹಕ್ಕೆ ಸದ್ಗತಿಯು ಸಿಗುತ್ತದೆ.’
(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth