ಶ್ರಾದ್ಧವನ್ನು ಯಾವಾಗ ಮಾಡಬೇಕು?

ಅ. ಸಾಧಾರಣ ಯೋಗ್ಯ ತಿಥಿಗಳು : ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.

ಆ. ಶ್ರಾದ್ಧವಿಧಿಯನ್ನು ಒಂದು ವಿಶಿಷ್ಟ ಕಾಲದಲ್ಲಿ ಮಾಡಲು ಆಗಲಿಲ್ಲ, ಆದುದರಿಂದ ಶ್ರಾದ್ಧವನ್ನು ಮಾಡಲಿಲ್ಲ ಎಂದು ಹೇಳಲು ಯಾರಿಗೂ ಅವಕಾಶವನ್ನು ನೀಡದ ಹಿಂದೂ ಧರ್ಮ!

೧. ಸಾಮಾನ್ಯವಾಗಿ ಪ್ರತಿವರ್ಷ ಮರಣ ಹೊಂದಿದ ತಿಥಿಯ ದಿನ (ಆಂಗ್ಲ ದಿನದರ್ಶಿಕೆಯ ದಿನಾಂಕದಂದು ಮಾಡದೇ, ಹಿಂದೂ ಪಂಚಾಂಗದ ಪ್ರಕಾರ ಇರುವ ತಿಥಿಯಂದು) ಶ್ರಾದ್ಧವನ್ನು ಮಾಡಬೇಕು. ಮೃತ್ಯುವಿನ ತಿಥಿಯು ಗೊತ್ತಿಲ್ಲದೇ, ಕೇವಲ ತಿಂಗಳು ಮಾತ್ರ ಗೊತ್ತಿದ್ದರೆ ಆ ತಿಂಗಳ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು.

೨.ಮೃತ್ಯುವಿನ ತಿಥಿ ಮತ್ತು ತಿಂಗಳು ಎರಡೂ ಗೊತ್ತಿಲ್ಲದಿದ್ದರೆ ಮಾಘ ಅಥವಾ ಮಾರ್ಗಶಿರ ಅಮಾವಾಸ್ಯೆಗೆ ಶ್ರಾದ್ಧವನ್ನು ಮಾಡಬೇಕು.

೩. ನಿಶ್ಚಿತವಾಗಿ ಮರಣದ ತಿಥಿಯು ಗೊತ್ತಿಲ್ಲದಿದ್ದರೆ ಮರಣದ ವಾರ್ತೆಯು ತಿಳಿದ ದಿನದಂದು ಶ್ರಾದ್ಧವನ್ನು ಮಾಡಬೇಕು.

೪. ಪಿತೃಗಳ ಶ್ರಾದ್ಧವನ್ನು ಪ್ರತಿದಿನ ಮಾಡಬೇಕು. ಇದನ್ನು ನೀರಿನಿಂದ ಅಂದರೆ ಪಿತೃಗಳಿಗೆ ತರ್ಪಣವನ್ನು ನೀಡಿ ಮಾಡಬಹುದು.

೫. ಪಿತೃಗಳ ಶ್ರಾದ್ಧವನ್ನು ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ, ದರ್ಶಶ್ರಾದ್ಧವನ್ನು ಮಾಡಬೇಕು. ಇದರಿಂದ ನಿತ್ಯ ಶ್ರಾದ್ಧದ ಸಿದ್ಧಿ ಆಗುತ್ತದೆ. ದರ್ಶ ಎಂದರೆ ಅಮಾವಾಸ್ಯೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ಮಾಡುವ ಶ್ರಾದ್ಧವೇ ದರ್ಶಶ್ರಾದ್ಧ.

೬. ಪ್ರತಿ ತಿಂಗಳು ದರ್ಶಶ್ರಾದ್ಧವನ್ನು ಮಾಡಲು ಆಗದಿದ್ದರೆ ಚೈತ್ರ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ಅಮಾವಾಸ್ಯೆಯಂದು ಮಾಡಬೇಕು.

೭. ದರ್ಶಶ್ರಾದ್ಧವನ್ನು ಚೈತ್ರ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ಅಮಾವಾಸ್ಯೆಯಂದು ಮಾಡಲು ಆಗದಿದ್ದರೆ ಭಾದ್ರಪದ ತಿಂಗಳಿನ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನಾದರೂ ಅವಶ್ಯವಾಗಿ ಮಾಡಬೇಕು. ಇದೂ ಸಾಧ್ಯವಾಗದಿದ್ದರೆ ಭಾದ್ರಪದ ಅಮಾವಾಸ್ಯೆಗೆ ಎಂದರೆ (ಸರ್ವಪಿತೃ ಅಮಾವಾಸ್ಯೆಯಂದು) ಶ್ರಾದ್ಧವನ್ನು ಮಾಡಬೇಕು.

(ಹಿಂದೂಧರ್ಮವು ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿದ್ದರೂ ಹಿಂದೂಗಳು ಶ್ರಾದ್ಧ ಮುಂತಾದ ವಿಧಿಗಳನ್ನು ಮಾಡುವುದಿಲ್ಲ. ಹೀಗಿರುವಾಗ ಇಂತಹ ಹಿಂದೂಗಳಿಗೆ ಯಾರು ಸಹಾಯ ಮಾಡಬೇಕು? - ಸಂಕಲನಕಾರರು)

ಇ. ಶ್ರಾದ್ಧವನ್ನು ದಿನದಲ್ಲಿನ ಯಾವ ಸಮಯದಲ್ಲಿ ಮಾಡಬೇಕು (ಯೋಗ್ಯಕಾಲ)
ದಿನವನ್ನು ೫ ಭಾಗಗಳಾಗಿ ಮಾಡಿದರೆ ಅದರ ನಾಲ್ಕನೆಯ ಭಾಗಕ್ಕೆ ‘ಅಪರಾಹ್ನ’ ಎನ್ನುತ್ತಾರೆ. ಇದನ್ನು ಶ್ರಾದ್ಧಕ್ಕೆ ಯೋಗ್ಯಕಾಲವೆಂದು ತಿಳಿಯಬೇಕು.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

No comments:

Post a Comment

Note: only a member of this blog may post a comment.