ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು

ಪ್ರತಿಯೊಂದು ದೇವತೆಯು ಒಂದು ತತ್ತ್ವವಾಗಿದೆ. ಈ ತತ್ತ್ವವು ಯುಗಾನುಯುಗ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಾದ ಸಗುಣ ರೂಪದಲ್ಲಿ ಪ್ರಕಟವಾಗುತ್ತದೆ, ಉದಾ.ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಕಾಲಾನುಸಾರ ಶ್ರೀ ಗಣಪತಿಯ ಯಾವ ಯಾವ ವಿವಿಧ ಅವತಾರಗಳಾದವು ಎಂಬುದನ್ನು ಮುಂದೆ ನೀಡಲಾಗಿದೆ.

ಅ. ‘ಮಹೋತ್ಕಟ-ವಿನಾಯಕ: 
ಇವನು ಕೃತಯುಗ, ಎಂದರೆ ಸತ್ಯಯುಗದಲ್ಲಿ ಕಶ್ಯಪ ಮತ್ತು ಅದಿತಿಯರಿಗೆ ಜನಿಸಿದನು. ಅವನು ದೇವಾಂತಕ ಮತ್ತು ನರಾಂತಕರೆಂಬ ರಾಕ್ಷಸರನ್ನು ವಧಿಸಿ ಧರ್ಮಸಂಸ್ಥಾಪನೆ ಮಾಡಿದನು ಮತ್ತು ಅವತಾರವನ್ನು ಸಮಾಪ್ತಿಗೊಳಿಸಿದನು.

ಆ. ಗುಣೇಶ (ಅಪವಾದ - ಗಜಾನನ): 
ತ್ರೇತಾಯುಗದಲ್ಲಿ ಗಣಪತಿಯು ಭಾದ್ರಪದ ಶುಕ್ಲ ಚತುರ್ಥಿಯ ದಿನ ಉಮಾಳ ಉದರದಿಂದ ಗುಣೇಶನೆಂಬ (ಅಪವಾದ - ಗಜಾನನ) ಹೆಸರಿನಿಂದ ಜನ್ಮ ತಾಳಿದನು. ಈ ಅವತಾರದಲ್ಲಿ ಅವನು ಸಿಂಧುದೈತ್ಯನನ್ನು ವಧಿಸಿ ಬ್ರಹ್ಮದೇವರ ಕನ್ಯೆಯರಾದ ಸಿದ್ಧಿ ಮತ್ತು ಬುದ್ಧಿಯರೊಂದಿಗೆ ವಿವಾಹ ಮಾಡಿಕೊಂಡನು.

ಇ. ಗಜಾನನ: 
ದ್ವಾಪರಯುಗದಲ್ಲಿ ಪಾರ್ವತಿಯ ಉದರದಿಂದ ಶ್ರೀ ಗಣಪತಿಯು ಗಜಾನನ ಎಂಬ ಹೆಸರಿನಿಂದ ಮತ್ತೆ ಜನ್ಮ ತಾಳಿದನು. ಈ ಅವತಾರದಲ್ಲಿ ಗಜಾನನನು ಸಿಂದುರಾಸುರನನ್ನು ವಧಿಸಿದನು ಮತ್ತು ಅವನ ಬಂಧೀವಾಸದಲ್ಲಿದ್ದ ಅನೇಕ ರಾಜರನ್ನು ಮತ್ತು ವೀರರನ್ನು ಮುಕ್ತ ಗೊಳಿಸಿದನು. ಇದೇ ಅವತಾರದಲ್ಲಿ ಗಜಾನನನು ವರೇಣ್ಯರಾಜನಿಗೆ ಯೋಗ ಮಾರ್ಗಪ್ರಕಾಶಕ, ಸರ್ವಸಿದ್ಧಿದಾಯಕ, ಅಜ್ಞಾನನಾಶಕ ಮತ್ತು ಮನುಷ್ಯ ಜೀವನದ ಉದ್ದೇಶವನ್ನು ಹೇಳುವ ‘ಗಣೇಶಗೀತೆ’ಯನ್ನು ಹೇಳಿದನು.

ಈ. ಧೂಮ್ರಕೇತು: 
ಕಲಿಯುಗದಲ್ಲಿ ಧೂಮ್ರಕೇತು ಅಥವಾ ಧೂಮ್ರವರ್ಣ ಎಂಬ ಹೆಸರಿನ ಗಣಪತಿಯ ನಾಲ್ಕನೆಯ ಅವತಾರವಾಗಲಿದೆ ಮತ್ತು ಅವನು ಮ್ಲೇಂಚ್ಫರನ್ನು (ದುರ್ಜನರ) ನಾಶ ಮಾಡಲಿದ್ದಾನೆ ಎಂದು ಭವಿಷ್ಯಪುರಾಣದಲ್ಲಿ ಹೇಳಲಾಗಿದೆ.

(ಆಧಾರ ಗ್ರಂಥ: ಸನಾತನ ಸಂಸ್ಥೆಯ ಗ್ರಂಥ ‘ಶ್ರೀ ಗಣಪತಿ’)

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.