ಬೇವಿನ ಪ್ರಸಾದ


ಮಹತ್ವ: ಬೇವಿನಲ್ಲಿ ಪ್ರಜಾಪತಿ-ಲಹರಿಗಳನ್ನು ಗ್ರಹಿಸುವ ಕ್ಷಮತೆಯು ಇತರ ಯಾವುದೇ ಪದಾರ್ಥಕ್ಕಿಂತಲೂ ಹೆಚ್ಚಿರುವುದರಿಂದ ಯುಗಾದಿಯ ದಿನ ಬೇವಿನ ಪ್ರಸಾದವನ್ನು ಸೇವಿಸುತ್ತಾರೆ. ಮುಂದಿನ ಕೋಷ್ಟಕದಲ್ಲಿ ಲಹರಿಗಳನ್ನು ಗ್ರಹಿಸುವ ಕೆಲವು ಪದಾರ್ಥಗಳ ಕ್ಷಮತೆಯನ್ನು ನೀಡಲಾಗಿದೆ. ಇದರಿಂದ ಯುಗಾದಿಯಂದು ಬೇವನ್ನು ಏಕೆ ತಿನ್ನುತ್ತಾರೆ ಮತ್ತು ಚೈತ್ರ ಮಾಸದಲ್ಲಿ ಹಾಲು, ಮೊಸರು, ತುಪ್ಪ ಮತ್ತು ಸಕ್ಕರೆಯನ್ನು ಏಕೆ ತಿನ್ನಬಾರದೆಂಬುದು ಗಮನಕ್ಕೆ ಬರುತ್ತದೆ.

(ಸಂಕಲನಕಾರ ಪ.ಪೂ.ಡಾ.ಜಯಂತ ಆಠವಲೆ ಇವರಿಗೆ ಧ್ಯಾನದಲ್ಲಿ ಪ್ರಾಪ್ತವಾದ ಜ್ಞಾನ)

ಬೇವಿನ ಪ್ರಸಾದವನ್ನು ತಯಾರಿಸುವ ಪದ್ಧತಿ: ಬೇವಿನ ಹೂವು, ಬೇವಿನ ಚಿಗುರೆಲೆ, ನೆನೆಸಿದ ಕಡಲೆಕಾಳು ಅಥವಾ ಕಡಲೆಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಹಿಂಗು ಇವೆಲ್ಲವನ್ನು ಬೆರೆಸಿ ಪ್ರಸಾದವನ್ನು ತಯಾರಿಸಬೇಕು ಮತ್ತು ಎಲ್ಲರಿಗೂ ಕೊಡಬೇಕು.

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

No comments:

Post a Comment

Note: only a member of this blog may post a comment.