ಸನಾತನದ ಅಮೂಲ್ಯ ಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನ !


ಸದ್ಯ ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆಯಂತಹ ಸಮಸ್ಯೆಗಳ ಹಾವಳಿ ಎಲ್ಲೆಡೆ ಹೆಚ್ಚಾಗುತ್ತಿದೆ. ಜನಸಾಮಾನ್ಯರಿಗೆ ಅವರ ವೈಯಕ್ತಿಕ ಜೀವನದಲ್ಲಿಯೂ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿದೆ. ಇಂತಹ ಒತ್ತಡಮಯ ಜೀವನದಲ್ಲಿ ಆನಂದದಿಂದಿರಲು ಹೇಗೆ ಸಾಧ್ಯ? ಎಂಬುದನ್ನು ತಿಳಿಸುವ, ಅದೇ ರೀತಿ ಎಲ್ಲ ಸಮಸ್ಯೆಗಳಿಗೆ ಉತ್ತರಿಸುವ ಸನಾತನದ ಅಮೂಲ್ಯ ಗ್ರಂಥ ಸಂಪತ್ತು ಮತ್ತು ಸಾತ್ತ್ವಿಕ ಉತ್ಪಾದನೆಯ ಧರ್ಮರಥವು ನಿಮ್ಮ ನಗರಕ್ಕೆ ಬಂದಿದೆ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ.ಡಾ.ಜಯಂತ ಬಾಳಾಜಿ ಆಠವಲೆ ಇವರು ಮನುಷ್ಯ ಜೀವನದ ಆದರ್ಶ ಮತ್ತು ಆಧಾರಸ್ತಂಭವಾಗುವಂತಹ ವಿವಿಧ ವಿಷಯಗಳ ಗ್ರಂಥ ಸಂಪತ್ತನ್ನು ಸಂಕಲನ ಮಾಡಿದ್ದಾರೆ. ‘ನಮ್ಮ ದೈನಂದಿನ ಜೀವನವು ಒತ್ತಡ ಮುಕ್ತ ಮತ್ತು ಆನಂದದಿಂದಿರಲು ಹೇಗೆ ಸಾಧ್ಯ? ಮಕ್ಕಳ ಮೇಲಿನ ಯೋಗ್ಯ ಸಂಸ್ಕಾರಗಳಾವವು ಮತ್ತು ಅದನ್ನು ಹೇಗೆ ಮೂಡಿಸಬೇಕು?, ಅಲಂಕಾರ, ಕೇಶ ವಿನ್ಯಾಸ, ವಸ್ತ್ರ ವಿನ್ಯಾಸ, ಅದೇ ರೀತಿ ಆಹಾರವು ಸಾತ್ತ್ವಿಕವಾಗಿ ಏಕೆ ಮತ್ತು ಹೇಗೆ ಇರಬೇಕು? ಈ ರೀತಿಯ ದೈನಂದಿನ ವಿಷಯದ ಜೊತೆಗೆ ಆಚಾರ ಧರ್ಮ, ಯಾವ ರೀತಿಯ ರಂಗೋಲಿಯನ್ನು ಬಿಡಿಸಬೇಕು? ನಮಸ್ಕಾರವನ್ನು ಹೇಗೆ ಮಾಡಬೇಕು? ದೃಷ್ಟಿಯನ್ನು ಹೇಗೆ ನಿವಾಳಿಸಬೇಕು?  ಈ ವಿಷಯದ ಗ್ರಂಥಗಳು ಇವೆ. ಈ ವಿಷಯಗಳಿಂದ ಹಿಡಿದು ಷೋಡಶೋಪಚಾರ ಪೂಜೆಯ ಶಾಸ್ತ್ರ ಏನಿದೆ? ಶ್ರಾದ್ಧ ವಿಧಿಯ ಮಹತ್ವವೇನು? ಇಲ್ಲಿಯ ವರೆಗಿನ ಹಿಂದೂಗಳ ಎಲ್ಲ ಧಾರ್ಮಿಕ ಕೃತಿಯ ಹಿನ್ನೆಲೆಯ ಶಾಸ್ತ್ರವನ್ನು ಅತ್ಯಂತ ಸರಳ ಭಾಷೆಯಲ್ಲಿ ಹೇಳುವ ಸನಾತನದ ಗ್ರಂಥವು ಕಲಿಯುಗದ ಐದನೇ ವೇದವಾಗಿದೆ! ವಿವಿಧ ದೇವತೆಗಳ ಮಹತ್ವ ಮತ್ತು ಪ್ರಸ್ತುತ ಕಾಲದ ಯೋಗ್ಯ ಸಾಧನೆ ಯಾವುದು ಮತ್ತು ಅದನ್ನು ಹೇಗೆ ಮಾಡಬೇಕು, ಎಂಬುದನ್ನು ತೋರಿಸಿಕೊಡುವ ಸನಾತನದ ಗ್ರಂಥವು ಇಂದು ಸಾಧನೆಯನ್ನು ಮಾಡುವವರಿಗೆ ವರದಾನವೇ ಆಗಿದೆ!!


ರಾಷ್ಟ್ರದ ಮುಂದಿರುವ ವಿವಿಧ ಸಮಸ್ಯೆಗಳು, ಅದಕ್ಕೆ ಉತ್ತರ ಮತ್ತು ರಾಷ್ಟ್ರದ ಸದ್ಯದ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಅವಶ್ಯಕತೆ ಏಕಿದೆ, ಇದರ ಬಗ್ಗೆ ಅತ್ಯಂತ ವಿಶ್ಲೇಷಣಾತ್ಮಕ ವಿವೇಚನೆಯನ್ನು ಮಾಡುವ ಸನಾತನದ ರಾಷ್ಟ್ರ ವಿಷಯದ ಗ್ರಂಥಗಳನ್ನು ಇದು ಪ್ರತಿಯೊಬ್ಬ ರಾಷ್ಟ್ರಾಭಿಮಾನಿ ನಾಗರಿಕನು ಓದಲೇ ಬೇಕಾಗಿದೆ. ಹಿಂದೂಗಳಿಗೆ ಅವರ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಅಸಾಧಾರಣ ಮಹತ್ವವನ್ನು ಗಮನಕ್ಕೆ ತಂದುಕೊಟ್ಟು ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಚೇತನವನ್ನು ಜಾಗೃತಗೊಳಿಸುವ ಸನಾತನದ ೨೮೫ ಗ್ರಂಥ ಮತ್ತು ಕಿರುಗ್ರಂಥಗಳನ್ನು ೧೫ ವರ್ಷಗಳಲ್ಲಿ ೧೫ ಭಾಷೆಯಲ್ಲಿ ೬೫ ಲಕ್ಷ ಪ್ರತಿಗಳನ್ನು ಪ್ರಕಾಶಿಸಲಾಗಿದೆ!


ಕುಂಕುಮ, ಊದುಬತ್ತಿ, ಕರ್ಪೂರ, ಅತ್ತರ, ಅಷ್ಟಗಂಧ, ಬತ್ತಿ ಇತ್ಯಾದಿ ಪೂಜೋಪಯೋಗಿ ಮತ್ತು ಸಾಬೂನು, ಸೀಗೇಕಾಯಿ ಇತ್ಯಾದಿ ನಿತ್ಯೋಪಯೋಗಿ ಸನಾತನದ ಸಾತ್ತ್ವಿಕ ಉತ್ಪಾದನೆಯು ಗ್ರಂಥದಂತೆಯೇ ಚೈತನ್ಯದಾಯಕವಾಗಿದೆ, ಅದೇ ರೀತಿ ಸನಾತನ ನಿರ್ಮಿತ ದೇವತೆಯ ಸಾತ್ತ್ವಿಕ ಚಿತ್ರವು ಭಕ್ತರಿಗೆ ಅನುಭೂತಿಯನ್ನು ಕೊಡುತ್ತದೆ! ಚೈತನ್ಯದ ಮೂಲವಾಗಿರುವ ಸನಾತನದ ಅಮೂಲ್ಯ ಮತ್ತು ಸರ್ವಾಂಗಸ್ಪರ್ಷಿ ಗ್ರಂಥವೈಭವ ಮತ್ತು ಸಾತ್ತ್ವಿಕ ಉತ್ಪಾದನೆಯಿರುವ ಈ ಧರ್ಮರಥಕ್ಕೆ ಭೇಟಿಕೊಡಿ ಮತ್ತು ತಮ್ಮ ಜೀವನವನ್ನು ಸಾರ್ಥಕಗೊಳಿಸಿರಿ.

2 comments:

  1. Great news. Please inform whether books in Kannada language available. Please tell me I am interested in the same & I want to get them by VPP

    ReplyDelete
    Replies
    1. ನಮಸ್ಕಾರ ಎಲ್ಲ ಗ್ರಂಥಗಳು ಕನ್ನಡದಲ್ಲಿಯೇ ಇವೆ. ನಮ್ಮ ಗ್ರಂಥಗಳು ಕರ್ನಾಟಕದ ಅನೇಕ ಕಡೆಗಳಲ್ಲಿ ಸಿಗುತ್ತವೆ. ನಿಮ್ಮ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳಲು 8951937332 ಈ ಸಂಖ್ಯೆಗೆ ಕರೆ ಮಾಡಿ ಅಥವಾ ನೀವು ಯಾವ ಊರಿನಲ್ಲಿದ್ದೀರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ತಿಳಿಸಿದರೆ ನಾವೇ ನಿಮ್ಮನ್ನು ಸಂಪರ್ಕಿಸುತ್ತೇವೆ.

      Delete

Note: only a member of this blog may post a comment.