ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಮೊದಲಿನ ಹೆಸರು ’ನರೇಂದ್ರ’. ಮುಂದೆ ಅವರು ಸ್ವಾಮಿ ವಿವೇಕಾನಂದರಾದರು.

ನರೇಂದ್ರ ಚಿಕ್ಕವನಿದ್ದಾಗ ಆಟದಲ್ಲಿ ಮುಳುಗಿ ಬಿಡುತ್ತಿದ್ದನೆಂದು ಅಪ್ಪ ಚಿಂತಿಸುತ್ತಿದ್ದರು
ನರೇಂದ್ರರ ತಂದೆ ಕಲಕತ್ತಾದಲ್ಲಿ ಒಬ್ಬ ಪ್ರಸಿದ್ಧ ವಕೀಲರಾಗಿದ್ದರು. ಒಂದು ಸಲ ಅವರಿಗೆ ನ್ಯಾಯಾಲಯದಿಂದ ಮನೆಗೆ ಬರಲು ತಡವಾಯಿತು. ಆಗಲೂ ನರೇಂದ್ರ ಹೊರಗೇ ಆಡುತ್ತಿದ್ದ. ಇದನ್ನು ನೋಡಿ ಅವರು ತಮ್ಮ ಪತ್ನಿಯನ್ನು ಕರೆದು ಹೇಳಿದರು, "ನಿಮಗೆ ಇವನ ಬಗ್ಗೆ ಕಾಳಜಿ ಇದೆ ಎಂದು ನನಗನಿಸುವುದಿಲ್ಲ. ಇದ್ದಿದ್ದರೆ ನೀವು ಇವನನ್ನು ಇಷ್ಟು ಹೊತ್ತಿನಲ್ಲಿ ಹೀಗೆ ಹೊರಗೆ ಬಿಡುತ್ತಿರಲಿಲ್ಲ". ಇದನ್ನು ಕೇಳಿ ತಾಯಿಯು ನರೇಂದ್ರನನ್ನು ಮನೆಯ ಒಳಗೆ ಕರೆದುಕೊಂಡು ಹೋದರು.

ಧರ್ಮ-ಅಧರ್ಮದ ಯುದ್ಧದಲ್ಲಿ ಶ್ರೀಕೃಷ್ಣನಂತೆ ಸಾರಥಿಯಾಗಬೇಕೆಂದು ತಾಯಿಯು ಮಗನಿಗೆ ತಿಳಿಸುವುದು
ರಾತ್ರಿ ಊಟವಾದ ನಂತರ ಎಲ್ಲರು ಮಲಗಿದರು. ನರೇಂದ್ರ ಮತ್ತು ಅವನ ತಾಯಿ ಮಾತ್ರ ಎದ್ದಿದ್ದರು. ಏನೂ ಹೇಳದೆ ತಾಯಿಯು ನರೇಂದ್ರನನ್ನು, ಗೀತೋಪದೇಶ ಮಾಡುತ್ತಿರುವ ಕೃಷ್ಣನ ದೊಡ್ಡ ಚಿತ್ರದ ಮುಂದೆ ಕರೆದುಕೊಂಡು ಹೋದರು. ಅರ್ಜುನನಿಗೆ ಗೀತೆಯನ್ನು ಉಪದೇಶ ಮಾಡುತ್ತಿರುವ ಚಿತ್ರ ಅವಳಿಗೆ ತುಂಬಾ ಆಧಾರವೆನಿಸುತ್ತಿತ್ತು. ತಾಯಿಯು ನರೇಂದ್ರನನ್ನು ಕೇಳಿದರು, "ಮಗು ನಿನಗೆ ಇವರಿಬ್ಬರಲ್ಲಿ ಯಾರಂತೆ ಆಗಬೇಕೆಂದು ಅನಿಸುತ್ತದೆ?" ಆಗ ನರೇಂದ್ರ ಉತ್ತರಿಸಿದನು, "ಟಾಂಗ ಓಡಿಸುವವನಂತೆ". ಆಗ ತಾಯಿಯು ಹೇಳಿದರು, "ಮಗನೇ ನಿನಗೆ ಟಾಂಗಾ ಓಡಿಸುವವನಂತೆ ಆಗಬೇಕೆಂಬ ಇಚ್ಛೆ ಇದೆ ಅಲ್ಲವೇ ಹಾಗಿದ್ದರೆ ನೋಡು ಭಗವಾನ ಶ್ರೀಕೃಷ್ಣನು ಸಹ ಸಾರಥಿಯೇ ಆಗಿದ್ದಾರೆ ಆದರೆ ಯಾರದ್ದು? ಅಧರ್ಮ ನಾಶಕ್ಕಾಗಿ ಸಜ್ಜಾಗಿ ನಿಂತ ಅರ್ಜುನನದ್ದು."

ತಾಯಿಯ ವ್ಯಾಪಕ ಉದ್ದೇಶವು ನರೇಂದ್ರನ ಮನದಲ್ಲಿ ಅಚ್ಚೊತ್ತುವುದು ಮತ್ತು ತಾಯಿಯ ಆರ್ತತೆಯ ಅರಿವಾಗುವುದು
ತಾಯಿಯು ಹೇಳಿದಳು, "ಮಗನೇ ಕೇವಲ ವ್ಯಾಪಕ ಧ್ಯೇಯವಷ್ಟೇ ಇದ್ದರೆ ಸಾಲದು ಅದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಶಿಕ್ಷಣವೂ ಅಷ್ಟೇ ಮುಖ್ಯವಾಗಿದೆ. ಶಿಕ್ಷಣವಿಲ್ಲದೆ ಕಲಿಯುವುದು ಹೇಗೆ ಸಾಧ್ಯ? ಹಾಗಿದ್ದರೆ ಈಗ ಮುಖ್ಯವೇನೆಂದರೆ ಸತತವಾಗಿ ನಮ್ಮ ಧ್ಯೇಯದ ಕಡೆ ಲಕ್ಷ್ಯವಿರುವುದು. ನಿನ್ನ ಧ್ಯೇಯದ ಅರಿವು ಸದಾ ನಿನ್ನ ಮನಸ್ಸಿನಲ್ಲಿರಲಿ. ಈಗ ನೀನು ನಿನ್ನ ಸಂಪೂರ್ಣ ಲಕ್ಷ್ಯ ಅಭ್ಯಾಸದ ಕಡೆ ನೀಡು. ತಾಯಿ ಹೇಳುವುದು ನರೇಂದ್ರನಿಗೆ ಅರ್ಥವಾಗಲಿಲ್ಲ ಆದರೆ ಅದರ ಹಿಂದಿನ ಆರ್ತತೆಯ ಅರಿವಾಯಿತು. ತಾಯಿಯು ನರೇಂದ್ರನ ಮನದಲ್ಲಿ ವ್ಯಾಪಕ ಧ್ಯೇಯದ ಚಿತ್ರ ಮೂಡಿಸಿದ್ದರು. ಕಾಲಾಂತರದಲ್ಲಿ ನರೇಂದ್ರನ ವಿದ್ಯಾಭ್ಯಾಸವು ಸಂಪೂರ್ಣವಾಯಿತು. ಕೆಲಸಕ್ಕಾಗಿ ಅವರು ತುಂಬಾ ಹುಡುಕಾಡಿದರು ಆದರೆ ಮನಸ್ಸಿಗೆ ಇಷ್ಟವಾಗುವಂತ ಕೆಲಸ ಸಿಗಲಿಲ್ಲ.

ನರೇಂದ್ರನು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ಧರ್ಮಪ್ರಸಾರ ಮತ್ತು ಕೇವಲ ಹಿಂದೂಸ್ಥಾನದಲ್ಲಿ ಅಲ್ಲದೇ ಸಪ್ತಸಾಗರದಾಚೆಗೂ ’ಸನಾತನ ಧರ್ಮ’ದ ಧ್ವಜವನ್ನು ಹಾರಿಸುವಂತಾಗುವುದು
ಒಂದು ಸಲ ನರೇಂದ್ರನ ಸ್ನೇಹಿತನು ಅವನನ್ನು ರಾಮಕೃಷ್ಣ ಪರಮಹಂಸರ ಕಡೆ ಕರೆದುಕೊಂಡು ಹೋದರು. ನರೇಂದ್ರನನ್ನು ನೋಡಿದ ತಕ್ಷಣ ರಾಮಕೃಷ್ಣರು ಹೇಳಿದರು, "ಎಲ್ಲಿದ್ದೆ ನೀನು ಇಷ್ಟು ದಿವಸ? ಯಾವಾಗದಿಂದ ನಾನು ನಿನ್ನ ದಾರಿ ಕಾಯುತ್ತಿದ್ದೆ." ರಾಮಕೃಷ್ಣರು ಅವರ ಮೇಲೆ ಕೃಪೆಯ ಮಳೆಯನ್ನೇ ಸುರಿಸಿದರು. ಧರ್ಮಪ್ರಸಾರದ ದೊಡ್ಡ ಜವಬ್ದಾರಿಯನ್ನು ಅವರು ನರೇಂದ್ರನಿಗೆ ವಹಿಸಿದರು. ಭಾರತದಲ್ಲಿ ಮಾತ್ರವಲ್ಲದೇ ಸಪ್ತಸಾಗರದ ಆಚೆ ನರೇಂದ್ರನು ’ಸನಾತನ ಧರ್ಮ’ದ ಧ್ವಜವನ್ನು ಹಾರಿಸಿದನು.

- ಶ್ರೀ. ಪ್ರಸಾದ ಮ್ಹೆಸಕರ

ಆಧಾರ - ಬಾಲಸಂಸ್ಕಾರ

1 comment:

Note: only a member of this blog may post a comment.