Showing posts with label ಧಾರ್ಮಿಕ ಕೃತಿ. Show all posts
Showing posts with label ಧಾರ್ಮಿಕ ಕೃತಿ. Show all posts

ದೀಪ ಪ್ರಜ್ವಲನೆಯಿಂದ ಉದ್ಘಾಟನೆ

ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ.

ದೀಪ ಪ್ರಜ್ವಲನದ ಭಾವಾರ್ಥ

೧. ದೀಪಪ್ರಜ್ವಲನ (ದೀಪ ಬೆಳಗಿಸುವುದು) ಮಾಡುವುದು ಎಂದರೆ ನಮ್ಮಲ್ಲಿನ ಆತ್ಮಶಕ್ತಿಯನ್ನು ಜಾಗೃತ ಮಾಡುವುದು.
೨. ದೀಪದ ಸುತ್ತಲಿರುವ ಶಾಂತ ಪ್ರಭಾವಳಿಯು ನಮ್ಮ ಆತ್ಮಪ್ರಕಾಶದ ಪ್ರತೀಕವಾಗಿದೆ ಮತ್ತು ದೀಪದ ರಜೋಗುಣಿ ಪ್ರಕಾಶವು ನಮ್ಮ ಆತ್ಮತೇಜದ ಪ್ರತೀಕವಾಗಿದೆ. ಆತ್ಮತೇಜವು ಈಶ್ವರನ ಪ್ರತ್ಯಕ್ಷ ಕಾರ್ಯನಿರತ ಸಗುಣ ಶಕ್ತಿಯ ಪ್ರತೀಕವಾಗಿದೆ ಮತ್ತು ಆತ್ಮಪ್ರಕಾಶವು ತೇಜದ ಹಿಂದೆ ಕಾರ್ಯನಿರತವಾಗಿರುವ ಈಶ್ವರನ ಸಂಕಲ್ಪಶಕ್ತಿಯ ಪ್ರತೀಕವಾಗಿದೆ.

ದೀಪ ಪ್ರಜ್ವಲನದ ಮಹತ್ವ

೧. ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುವುದು: ಯಾವಾಗ ನಾವು ದೀಪ ಪ್ರಜ್ವಲನವನ್ನು ಮಾಡಿ ಕಾರ್ಯವನ್ನು ಪ್ರಾರಂಭಿಸುತ್ತೇವೆಯೋ, ಆಗ ಆತ್ಮಜ್ಯೋತಿಯ ಬಲದಿಂದ ಮಾಡಿದ ಪೂಜೆಯಿಂದ ನಾವು ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ತತ್ತ್ವಗಳನ್ನು ಆವಾಹನೆ ಮಾಡುತ್ತೇವೆ ಮತ್ತು ದೇವತೆಗಳ ಲಹರಿಗಳಿಗೆ ಕಾರ್ಯಸ್ಥಳದಲ್ಲಿ ಆಸೀನರಾಗಲು ಪ್ರಾರ್ಥನೆಯನ್ನು ಮಾಡುತ್ತೇವೆ. ಇದರಿಂದ ನಾವು ಮಾಡುತ್ತಿರುವ ಕಾರ್ಯದ ಹಿಂದೆ ಈಶ್ವರನ ಸಂಕಲ್ಪಶಕ್ತಿಯು ಕಾರ್ಯನಿರತವಾಗುತ್ತದೆ ಮತ್ತು ನಾವು ಇಚ್ಛಿಸಿದ ಕಾರ್ಯವು ಪೂರ್ಣಗೊಳ್ಳುತ್ತದೆ.

೨. ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗುವುದು: ಬ್ರಹ್ಮಾಂಡದಲ್ಲಿನ ಈಶ್ವರನ ಕ್ರಿಯಾಶಕ್ತಿಯ ಬಲದಲ್ಲಿ ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಾಣ ಮಾಡುತ್ತವೆ. ಅಂದರೆ ಒಂದು ರೀತಿಯಲ್ಲಿ ನಾವು ದೀಪಪ್ರಜ್ವಲನವನ್ನು ಮಾಡಿ ಕಾರ್ಯಸ್ಥಳದ ಶುದ್ಧಿಯನ್ನು ಮಾಡುತ್ತಿರುತ್ತೇವೆ. ಸಂರಕ್ಷಣಾ ಕವಚದಿಂದ ಕಿರಣಗಳ ರೂಪದಲ್ಲಿ ಪ್ರಕ್ಷೇಪಿತವಾಗುವ ಗತಿಮಾನ ಮತ್ತು ವಲಯಾಂಕಿತ ತೇಜೋಲಹರಿಗಳಿಂದಾಗಿ ವರಿಷ್ಠ ಕೆಟ್ಟ ಶಕ್ತಿಗಳಿಗೆ (ಹೆಚ್ಚು ಕ್ಷಮತೆಯಿರುವ ಕೆಟ್ಟ ಶಕ್ತಿ) ಕಾರ್ಯಸ್ಥಳದಲ್ಲಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಮ್ಮ ಕಾರ್ಯವು ದೇವತೆಗಳ ಆಶೀರ್ವಾದದಿಂದ ಒಳ್ಳೆಯ ರೀತಿಯಿಂದ ನೆರವೇರುತ್ತದೆ.


ಮೇಣದ ಬತ್ತಿಯಿಂದ ದೀಪಪ್ರಜ್ವಲನ ಮಾಡುವುದು ಮತ್ತು ಕೈದೀಪದಿಂದ ದೀಪ ಪ್ರಜ್ವಲನ ಮಾಡುವುದು ಇವುಗಳಲ್ಲಿನ ವ್ಯತ್ಯಾಸ

ದೀಪಪ್ರಜ್ವಲನಕ್ಕಾಗಿ ಇಟ್ಟಿರುವ ಕಾಲುದೀಪದಲ್ಲಿ ಎಣ್ಣೆಯಿರುವುದರಿಂದ ಪ್ರಜ್ವಲಿತವಾದ ದೀಪದಿಂದ ರಜ-ಸತ್ತ್ವಗುಣಿ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಇಂತಹ ದೀಪವನ್ನು ಮೇಣದ ಬತ್ತಿಯಂತಹ ತಮೋಗುಣಿ ಘಟಕದಿಂದ ಪ್ರಜ್ವಲಿತಗೊಳಿಸುವುದೆಂದರೆ ರಜ-ಸತ್ತ್ವ ಸ್ಪಂದನಗಳಲ್ಲಿ ತಮೋಗುಣಿ ಸ್ಪಂದನಗಳನ್ನು ಸೇರಿಸುವಂತಾಗಿದೆ. ತದ್ವಿರುದ್ಧ ಕೈದೀಪದಲ್ಲಿ ಎಣ್ಣೆಯಿರುವುದರಿಂದ ಅದರಿಂದ ದೀಪಪ್ರಜ್ವಲನ ಮಾಡುವುದರಿಂದ ಅದರಲ್ಲಿರುವ ರಜ-ಸತ್ತ್ವಗುಣಿ ಸ್ಪಂದನಗಳು ಇನ್ನೊಂದು ದೀಪದಲ್ಲಿ ಪ್ರಕ್ಷೇಪಿಸಿ, ಸಮಾನ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಇದರಿಂದ ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಕೃತಿಯ ಹಿಂದೆ ಏನಾದರೊಂದು ಶಾಸ್ತ್ರವಿರುವುದು ಗಮನಕ್ಕೆ ಬರುತ್ತದೆ.


ಮೇಣದ ಬತ್ತಿಯ ತುಲನೆಯಲ್ಲಿ ಎಣ್ಣೆಯ ದೀಪದಿಂದ (ಕೈದೀಪದಿಂದ) ದೀಪ ಪ್ರಜ್ವಲನ ಮಾಡುವ ಹಿಂದಿನ ಶಾಸ್ತ್ರ

ಮೇಣದ ಬತ್ತಿಯಿಂದ ಪ್ರಕ್ಷೇಪಿತವಾಗುವ ಲಹರಿಗಳು ತಮ-ರಜಯುಕ್ತ (ತ್ರಾಸದಾಯಕ) ವಾಗಿರುತ್ತವೆ. ಈ ಲಹರಿಗಳಿಂದ ವಾತಾವರಣವು ತಾಮಸಿಕ (ಕೆಟ್ಟ ಶಕ್ತಿಗಳಿಂದ ಕೂಡಿ) ವಾಗುತ್ತದೆ. ಹಾಗೆಯೇ ಈ ಲಹರಿಗಳ ಗತಿಯು ಅನಿಯಮಿತ ಮತ್ತು ವೇಗವಾಗಿರುವುದರಿಂದ ಇದರಲ್ಲಿನ ತಮ-ರಜಕಣಗಳ ಘರ್ಷಣೆಯಾಗಿ ಅದರಿಂದ ಉತ್ಪನ್ನವಾಗುವ ಉಷ್ಣ ವಾಯುವಿನಿಂದಾಗಿ ವಾತಾವರಣದಲ್ಲಿನ ಸತ್ತ್ವಕಣಗಳ ವಿಘಟನೆಯಾಗುತ್ತದೆ. ಆದುದರಿಂದ ವಾತಾವರಣದಲ್ಲಿನ ಸಾತ್ತ್ವಿಕತೆಯು ನಾಶವಾಗುತ್ತದೆ. ಮೇಣದ ಬತ್ತಿಯಿಂದ ದೀಪಪ್ರಜ್ವಲನವನ್ನು ಮಾಡುವುದರಿಂದ ಕಾಲುದೀಪದ ಸುತ್ತಲೂ ತಮೋಕಣಗಳ ಮಂಡಲವು ತಯಾರಾಗುತ್ತದೆ. ಆದುದರಿಂದ ಕಾಲುದೀಪದ ಜ್ಯೋತಿಯ ಕಡೆಗೆ ಆಕರ್ಷಿತವಾಗುವ ಬ್ರಹ್ಮಾಂಡದಲ್ಲಿನ ದೇವತೆಗಳ ಕ್ರಿಯಾಲಹರಿಗಳಿಗೆ ಅಡ್ಡಿಯುಂಟಾಗುತ್ತದೆ. ತದ್ವಿರುದ್ಧವಾಗಿ ಎಣ್ಣೆಯು ರಜೋಗುಣದ ಪ್ರತೀಕವಾಗಿದೆ. ಎಣ್ಣೆಯ ಜ್ಯೋತಿಯು ಬ್ರಹ್ಮಾಂಡದಲ್ಲಿನ ದೇವತೆಗಳ ಕ್ರಿಯಾಲಹರಿಗಳನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ; ಆದುದರಿಂದ ದೀಪಪ್ರಜ್ವಲನಕ್ಕಾಗಿ ಎಣ್ಣೆಯ ದೀಪವನ್ನು (ಕೈದೀಪ) ಉಪಯೋಗಿಸುವುದು ಯೋಗ್ಯವಾಗಿದೆ.
(ಮೇಲಿನ ಮಾಹಿತಿಗಳೊಂದಿಗೆ ಇನ್ನೂ ವಿವರವಾದ ಮಾಹಿತಿಯನ್ನು ಗ್ರಂಥದಲ್ಲಿ ಓದಿ.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು?
ಉಡುಗೊರೆ ಕೊಡುವುದು - ಆಧ್ಯಾತ್ಮಿಕ ದೃಷ್ಟಿಕೋನ

ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು?

ದೇವಸ್ಥಾನದಲ್ಲಿರುವ ಆಮೆಯ ಪ್ರತಿಮೆಯ ಮಹತ್ವ ಮತ್ತು ದೇವರ ಮೂರ್ತಿ ಹಾಗೂ ಆಮೆಯ ಪ್ರತಿಮೆಯ ನಡುವೆ ನಿಂತುಕೊಂಡು ಅಥವಾ ಕುಳಿತುಕೊಂಡು ದರ್ಶನವನ್ನು ಪಡೆಯದೇ, ಆಮೆ ಅಥವಾ ನಂದಿಯ ಪ್ರತಿಮೆ ಮತ್ತು ದೇವತೆಯ ಮೂರ್ತಿ ಅಥವಾ ಲಿಂಗವನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಂಡು ದರ್ಶನವನ್ನು ಪಡೆದುಕೊಳ್ಳುವುದು ಮಹತ್ವದ್ದಾಗಿದೆ: ಭುವರ್ಲೋಕದಲ್ಲಿರುವ ಕೆಲವು ಶಾಪಗ್ರಸ್ತ ಪುಣ್ಯಾತ್ಮರು ಪೃಥ್ವಿಯ ಮೇಲೆ ಆಮೆಯ ರೂಪದಲ್ಲಿ ಜನ್ಮತಾಳುತ್ತಾರೆ. ಪ್ರಾಣಿಗಳಲ್ಲಿ ಆಕಳನ್ನು ಬಿಟ್ಟರೆ ಕೇವಲ ಆಮೆಯಲ್ಲಿ ಮಾತ್ರ ವಾತಾವರಣದಲ್ಲಿರುವ ಸಾತ್ತ್ವಿಕತೆಯನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆದುಕೊಳ್ಳುವ ಶಕ್ತಿಯಿದೆ. ಆದುದರಿಂದ ಆಮೆಯು ಇತರ ಪ್ರಾಣಿಗಳ ತುಲನೆಯಲ್ಲಿ ಹೆಚ್ಚು ಸಾತ್ತ್ವಿಕವಾಗಿದೆ.

ದೇವಸ್ಥಾನದಲ್ಲಿನ ಆಮೆಯ ಪ್ರತಿಮೆಯಲ್ಲಿ ವಾತಾವರಣದಲ್ಲಿನ ಸಾತ್ತ್ವಿಕ ಲಹರಿಗಳು ಆಕರ್ಷಿಸಿ, ಅವಶ್ಯಕತೆಗನುಸಾರ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುವುದರಿಂದ ದರ್ಶನಕ್ಕೆ ಬರುವ ಭಕ್ತರಿಗೆ ಈ ಲಹರಿಗಳಿಂದ ತೊಂದರೆಯಾಗುವುದಿಲ್ಲ: ಬಹಳಷ್ಟು ದೇವಸ್ಥಾನಗಳಲ್ಲಿ ದೇವರ ಎದುರಿಗೆ ಆಮೆಯ ಆಕಾರದಲ್ಲಿನ ಕಲ್ಲನ್ನು ಅಥವಾ ಲೋಹದ ಆಮೆಯನ್ನು ಇಟ್ಟಿರುತ್ತಾರೆ. ದೇವರಿಂದ ಬರುವ ಸಾತ್ತ್ವಿಕ ಲಹರಿಗಳು ಆಮೆಯ ಬಾಯಿಯಿಂದ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ಅದರ ನಾಲ್ಕು ಕಾಲು ಮತ್ತು ಬಾಲದಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಆಮೆಯ ಬಾಲದಿಂದ ಸಾತ್ತ್ವಿಕ ಲಹರಿಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಸಾತ್ತ್ವಿಕ ಲಹರಿಗಳು ಅವಶ್ಯಕತೆಗನುಸಾರ ಆಮೆಯ ಪ್ರತಿಮೆಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವತೆಯಿಂದ ಬರುವ ಸಾತ್ತ್ವಿಕ ಲಹರಿಗಳು ನೇರವಾಗಿ ಸಿಗುವುದಿಲ್ಲ ಮತ್ತು ಭಕ್ತರಿಗೆ ಈ ಲಹರಿಗಳಿಂದ ತೊಂದರೆಯಾಗುವುದಿಲ್ಲ.

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು ಚಿತ್ರವನ್ನು ಕ್ಲಿಕ್ ಮಾಡಿ)

ಇಲ್ಲಿ ಗಮನದಲ್ಲಿಡಬೇಕಾದ ವಿಷಯವೇನೆಂದರೆ ದೇವತೆಯಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ಭಕ್ತರ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದಿರುವುದರಿಂದ ಈ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಅವರಿಗೆ ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ. ಆದುದರಿಂದ ಸಾಮಾನ್ಯ ಭಕ್ತರು ದೇವತೆಯ ಮೂರ್ತಿ ಮತ್ತು ಆಮೆಯ ಪ್ರತಿಮೆಯ ನಡುವೆ ನಿಂತುಕೊಂಡು ಅಥವಾ ಕುಳಿತುಕೊಂಡು ದರ್ಶನವನ್ನು ಪಡೆಯಬಾರದು. ಯಾವಾಗಲೂ ಆಮೆ ಅಥವಾ ನಂದಿಯ ಪ್ರತಿಮೆ ಮತ್ತು ದೇವತೆಯ ಮೂರ್ತಿ ಅಥವಾ ಲಿಂಗವನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಂಡು ದರ್ಶನವನ್ನು ಪಡೆಯಬೇಕು.

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು ಚಿತ್ರವನ್ನು ಕ್ಲಿಕ್ ಮಾಡಿ)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?')

ಸಂಬಂಧಿತ ವಿಷಯಗಳು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?
ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು?
ಶಿವಲಿಂಗದ ವಿಧಗಳು
ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಜ್ಯೋತಿರ್ಲಿಂಗಗಳು
Dharma Granth

ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

೧. ಅರ್ಥ: ವಾಸ್ತುವಿನ ತೊಂದರೆದಾಯಕ ಸ್ಪಂದನಗಳನ್ನು ನಾಶ ಮಾಡಿ ಒಳ್ಳೆಯ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುಶುದ್ಧಿ.
೨. ವಾಸ್ತುದೋಷ: ವಾಸ್ತುವಿನ ಅಯೋಗ್ಯ ರಚನೆ, ವಾಸ್ತುವಿನ ಮೇಲೆ ಸತತವಾಗಿ ಆಗುವ ರಜ-ತಮ ಕಣಗಳ ಆಘಾತ, ವಾಸ್ತುವಿನಲ್ಲಿ ರಾಜಸಿಕ-ತಾಮಸಿಕ ಪ್ರವೃತ್ತಿಯ ವ್ಯಕ್ತಿಗಳಿರುವುದರಿಂದ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನಗಳು, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿಗಳಿಂದ ವಾಸ್ತುವಿನ ಮೇಲೆ ಅಯೋಗ್ಯ ಪರಿಣಾಮವಾಗುತ್ತದೆ. ಅದರಿಂದ ವಾಸ್ತುವಿನಲ್ಲಿ ತೊಂದರೆ ದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ, ಅಂದರೆ ವಾಸ್ತುದೋಷವು ನಿರ್ಮಾಣವಾಗುತ್ತದೆ.
 ೩. ವಾಸ್ತುಶುದ್ಧಿಯ ಅವಶ್ಯಕತೆ: ವಾಸ್ತುದೋಷದಿಂದಾಗಿ ವಾಸ್ತುವಿನಲ್ಲಿರುವವರ ಜೀವನದಲ್ಲಿ ಶಾರೀರಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಅಡಚಣೆಗಳುಂಟಾಗುತ್ತವೆ. ವಾಸ್ತುದೋಷದಿಂದ ಸಾಧಕರ ಸಾಧನೆಯಲ್ಲಿಯೂ ಅಡಚಣೆಗಳು ನಿರ್ಮಾಣವಾಗುತ್ತವೆ.

೪. ವಾಸ್ತುಶುದ್ಧಿಯ ಕೆಲವು ಪದ್ಧತಿಗಳು
ಅ. ವಾಸ್ತುವಿನಲ್ಲಿ ಪ್ರತಿನಿತ್ಯ ಗೋಮೂತ್ರ ಅಥವಾ ವಿಭೂತಿಯ ನೀರನ್ನು (ವಿಭೂತಿಯನ್ನು ಸೇರಿಸಿದ ನೀರು) ಸಿಂಪಡಿಸಬೇಕು ಮತ್ತು ವಿಭೂತಿಯನ್ನು ಊದಬೇಕು.
ಆ. ವಾಸ್ತುವಿನಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ತುಪ್ಪದ ಅಥವಾ ಎಣ್ಣೆಯ ದೀಪ ಮತ್ತು ಊದುಬತ್ತಿಗಳನ್ನು ಹಚ್ಚಬೇಕು, ಹಾಗೆಯೇ ಧೂಪವನ್ನು ಹಾಕಬೇಕು.
ಇ. ದೇವರ ಕೋಣೆಯಲ್ಲಿ (ಮಂಟಪದಲ್ಲಿ) ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ ದೇವತೆಗಳ ಭಾವಚಿತ್ರಗಳನ್ನಿಡಬೇಕು.
ಈ. ಮನೆಯಲ್ಲಿರುವವರೆಲ್ಲರೂ ಒಟ್ಟಿಗೆ ಸೇರಿ ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು. ಸ್ವಲ್ಪ ಹೊತ್ತು ನಾಮಜಪ ಮಾಡಬೇಕು, ದೇವತೆಗಳ ಸ್ತೋತ್ರಗಳನ್ನು ಪಠಿಸಬೇಕು.
ಉ. ಗೋಡೆಯ ಮೇಲೆ ದೇವತೆಗಳ ನಾಮಪಟ್ಟಿಗಳ ಮಂಡಲವನ್ನು ಮಾಡಿ ಸೂಕ್ಷ್ಮಛಾವಣಿಯನ್ನು ನಿರ್ಮಿಸಬೇಕು. (ಈ ವಿಷಯದಲ್ಲಿನ ಸವಿಸ್ತಾರವಾದ ಮಾಹಿತಿಯನ್ನು ಈ ಕೊಂಡಿಯಲ್ಲಿ ಕೊಡಲಾಗಿದೆ.)
ಊ. ಮನೆಯಲ್ಲಿರುವವರೆಲ್ಲರೂ ಒಳ್ಳೆಯ ಆಚಾರ-ವಿಚಾರಗಳನ್ನಿಟ್ಟುಕೊಳ್ಳಬೇಕು.
ಎ. ತೀವ್ರ ವಾಸ್ತುದೋಷವಿದ್ದರೆ ವಾಸ್ತುಶಾಂತಿಯನ್ನು ಮಾಡಬೇಕು.

(ಸನಾತನ ಸಂಸ್ಥೆಯ ಗ್ರಂಥ ‘ಆಚಾರಧರ್ಮದ ಪ್ರಾಸ್ತಾವಿಕ’)

ಸಂಬಂಧಿತ ವಿಷಯಗಳು
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
Dharma Granth

ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

೧. ದೇವಿಯ ಉಡಿ ತುಂಬುವುದರ ಮಹತ್ವವೇನು?
ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ) ಅರ್ಪಿಸಿ) ಮುಕ್ತಾಯ ಮಾಡಬೇಕು, ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು. ದೇವಿಗೆ ಸೀರೆ ಮತ್ತು ಖಣವನ್ನು ಅರ್ಪಿಸುವಾಗ, ದೇವಿಗೆ ಕಾರ್ಯವನ್ನು ಮಾಡಲು ಪ್ರಾರ್ಥನೆ ಮಾಡುವುದರಿಂದ ನಾವು ಮೊದಲು ಮಾಡಿದ ಪಂಚೋಪಚಾರ ಪೂಜೆಯ ವಿಧಿಗಳಿಂದ ಕಾರ್ಯನಿರತವಾದ ದೇವಿಯ ನಿರ್ಗುಣ ತತ್ತ್ವಕ್ಕೆ ಸೀರೆ ಮತ್ತು ಖಣದ ಮಾಧ್ಯಮದಿಂದ ಸಗುಣ ರೂಪದಲ್ಲಿ ಸಾಕಾರವಾಗಲು ಸಹಾಯವಾಗುವುದು.


೨. ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ
ಅ. ದೇವಿಗೆ ಅರ್ಪಣೆ ಮಾಡುವ ಸೀರೆಯು ನೂಲಿನ ಅಥವಾ ರೇಷ್ಮೆಯದ್ದಾಗಿರಬೇಕು, ಏಕೆಂದರೆ ಇತರ ಯಾವುದೇ ದಾರಗಳಿಗಿಂತ ಹತ್ತಿ ಅಥವಾ ರೇಷ್ಮೆಯ ದಾರಗಳಲ್ಲಿ ದೇವತೆ ಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ.
ಆ. ಒಂದು ತಟ್ಟೆಯಲ್ಲಿ ಸೀರೆ, ಅದರ ಮೇಲೆ ಖಣ (ರವಕೆಯ ಬಟ್ಟೆ) ಮತ್ತು ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿಯ ಜುಟ್ಟು ದೇವಿಯ ಕಡೆಗೆ ಇರಬೇಕು. ನಂತರ ತಟ್ಟೆಯಲ್ಲಿನ ಎಲ್ಲ ವಸ್ತುಗಳು ನಮ್ಮ ಕೈಗಳ ಬೊಗಸೆಯಲ್ಲಿ ತೆಗೆದುಕೊಂಡು, ಅದನ್ನು ನಮ್ಮ ಎದೆಯ ಮುಂದೆ ಬರುವಂತೆ ಹಿಡಿದು ದೇವಿಯೆದುರು ನಿಲ್ಲಬೇಕು.
ಇ. ‘ದೇವಿಯಿಂದ ನಮಗೆ ಚೈತನ್ಯವು ಸಿಗಲಿ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲಿ’ ಎಂದು ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಇದರಿಂದ ದೇವಿತತ್ತ್ವವು ಜಾಗೃತವಾಗಲು ಸಹಾಯವಾಗುತ್ತದೆ.
ಈ. ಉಡಿಯ ವಸ್ತುಗಳನ್ನು ದೇವಿಯ ಚರಣಗಳಲ್ಲಿ ಅರ್ಪಿಸಿದ ನಂತರ ಉಡಿಯ ವಸ್ತುಗಳ ಮೇಲೆ ಅಕ್ಷತೆಯನ್ನು ಅರ್ಪಿಸಬೇಕು.
ಉ. ದೇವಿಗೆ ಅರ್ಪಿಸಿದ ಸೀರೆಯನ್ನು ಸಾಧ್ಯವಿದ್ದಲ್ಲಿ ಧರಿಸಬೇಕು ಮತ್ತು ತೆಂಗಿನಕಾಯಿಯ ಕೊಬ್ಬರಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು.


(ಆಧಾರ : ಸನಾತನ ಸಂಸ್ಥೆಯ ಗ್ರಂಥ "ದೇವಿಯ ಪೂಜೆಗೆ ಸಂಬಂಧಿಸಿದ ಕೃತಿಗಳ ಶಾಸ್ತ್ರ")

ಸಂಬಂಧಿತ ವಿಷಯಗಳು
Dharma Granth

ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು?

೧. ಉದ್ಘಾಟನೆ

ಅ. ವ್ಯಾಖ್ಯೆ: ‘ಉದ್’ ಎಂದರೆ ಪ್ರಕಟ ಮಾಡುವುದು. ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾಗಲು ಪ್ರಾರ್ಥನೆಯನ್ನು ಮಾಡುವುದು ಮತ್ತು ಕಾರ್ಯಾರಂಭವನ್ನು ಮಾಡುವುದು ಎಂದರೆ ಉದ್ಘಾಟನೆ ಮಾಡುವುದು.

ಆ. ಮಹತ್ವ : ಹಿಂದೂಧರ್ಮದಲ್ಲಿನ ಪ್ರತಿಯೊಂದು ಕೃತಿಯು ಅಧ್ಯಾತ್ಮಶಾಸ್ತ್ರದ ಮೇಲೆ ಆಧಾರಿತವಾಗಿರುವುದರಿಂದ ಜೀವಗಳ ಆಸಕ್ತಿಯು ಅಧ್ಯಾತ್ಮಶಾಸ್ತ್ರದಲ್ಲಿ ಹೇಳಿದಂತೆ ಮಾಡುವುದರ ಕಡೆಗೆ ಇರಬೇಕು. ಈ ರೀತಿಯಲ್ಲಿ ಮಾಡಿದರೆ ಮಾತ್ರ ಜೀವಗಳಿಗೆ ನಿಜವಾದ ಲಾಭವು ಸಿಗುತ್ತದೆ. ಯಾವುದೇ ಒಂದು ಸಮಾರಂಭ ಅಥವಾ ಕಾರ್ಯವು ಯಶಸ್ವಿಯಾಗಲು ದೇವತೆಗಳ ಆಶೀರ್ವಾದ ಸಿಗುವುದು ಅವಶ್ಯಕವಾಗಿರುತ್ತದೆ. ಹಿಂದೂಧರ್ಮದಲ್ಲಿ ಹೇಳಿದಂತೆ ಉದ್ಘಾಟನೆಯನ್ನು ಮಾಡಿದರೆ ಕಾರ್ಯಸ್ಥಳದಲ್ಲಿ ದೇವತೆಗಳ ಲಹರಿಗಳು ಬಂದು ಸಂರಕ್ಷಣಾಕವಚವು ನಿರ್ಮಾಣವಾಗಿ ಅಲ್ಲಿರುವ ತೊಂದರೆದಾಯಕ ಸ್ಪಂದನಗಳು ನಿಂತುಹೋಗುತ್ತವೆ. ಆದುದರಿಂದ ಅಧ್ಯಾತ್ಮಶಾಸ್ತ್ರದಲ್ಲಿ ಹೇಳಿದಂತಹ ವಿಧಿಗಳ ಪಾಲನೆಯನ್ನು ಮಾಡಿ ಉದ್ಘಾಟನೆಯನ್ನು ಮಾಡಬೇಕು.

ಇ. ಉದ್ಘಾಟನೆಯನ್ನು ಮಾಡುವ ಪದ್ಧತಿ: ತೆಂಗಿನಕಾಯಿಯನ್ನು ಒಡೆಯುವುದು ಮತ್ತು ದೀಪಪ್ರಜ್ವಲನವನ್ನು ಮಾಡುವ ವಿಧಿಗಳು ವಾಸ್ತುಶುದ್ಧಿಯಲ್ಲಿನ ಅಂದರೆ ಉದ್ಘಾಟನೆಯಲ್ಲಿನ ಮಹತ್ವದ ವಿಧಿಗಳಾಗಿವೆ.

ಇ೧. ವ್ಯಾಸಪೀಠದ ಮೇಲಿನ ಕಾರ್ಯಕ್ರಮದ ಉದ್ಘಾಟನೆ: ಚರ್ಚಾಗೋಷ್ಠಿಗಳು, ಸಾಹಿತ್ಯ ಸಮ್ಮೇಳನಗಳು, ಸಂಗೀತ ಮಹೋತ್ಸವಗಳು ಇತ್ಯಾದಿಗಳನ್ನು ದೀಪವನ್ನು ಪ್ರಜ್ವಲಿಸಿ ಉದ್ಘಾಟನೆ ಮಾಡುತ್ತಾರೆ. ವ್ಯಾಸಪೀಠದ ತಯಾರಿಯನ್ನು ಮಾಡುವುದಕ್ಕಿಂತ ಮೊದಲು ತೆಂಗಿನಕಾಯಿಯನ್ನು ಒಡೆಯಬೇಕು ಮತ್ತು ಪ್ರತ್ಯಕ್ಷ ಉದ್ಘಾಟನೆಯನ್ನು ಮಾಡುವ ಸಮಯದಲ್ಲಿ ದೀಪಪ್ರಜ್ವಲನವನ್ನು ಮಾಡಬೇಕು. ತೆಂಗಿನಕಾಯಿಯನ್ನು ಒಡೆಯುವುದರ ಹಿಂದೆ ಕಾರ್ಯಸ್ಥಳವು ಶುದ್ಧಿಯಾಗಬೇಕೆಂಬ ಉದ್ದೇಶವಿರುತ್ತದೆ. ವ್ಯಾಸಪೀಠವು ಜ್ಞಾನದಾನಕ್ಕೆ ಸಂಬಂಧಿಸಿರುವುದರಿಂದ, ಅಂದರೆ ಅದು ಜ್ಞಾನಪೀಠವಾಗಿರುವುದರಿಂದ ಅಲ್ಲಿ ದೀಪಕ್ಕೆ ಮಹತ್ವವಿದೆ.

ಇ೨. ಅಂಗಡಿಗಳು, ಕಛೇರಿಗಳು ಇತ್ಯಾದಿಗಳ ಉದ್ಘಾಟನೆ: ಅಂಗಡಿ, ಕಛೇರಿ ಇತ್ಯಾದಿಗಳು ಹೆಚ್ಚಾಗಿ ವ್ಯವಹಾರಕ್ಕೆ ಸಂಬಂಧಿಸಿರುವುದರಿಂದ ಅವುಗಳ ಉದ್ಘಾಟನೆಯನ್ನು ಮಾಡುವಾಗ ದೀಪಪ್ರಜ್ವಲನೆಯನ್ನು ಮಾಡುವುದು ಆವಶ್ಯಕವಾಗಿರುವುದಿಲ್ಲ. ಆದುದರಿಂದ ಕೇವಲ ತೆಂಗಿನಕಾಯಿಯನ್ನು ಒಡೆದು ಉದ್ಘಾಟನೆಯನ್ನು ಮಾಡಬೇಕು.

ಇ೨ಅ. ಸಂತರಿಂದ ಉದ್ಘಾಟನೆ ಮಾಡುವ ಉದ್ದೇಶ: ಸಂತರ ಅಸ್ತಿತ್ವದಿಂದ ಬ್ರಹ್ಮಾಂಡದಲ್ಲಿನ ಆವಶ್ಯಕ ದೇವತೆಗಳ ಸೂಕ್ಷ್ಮತರ ಲಹರಿಗಳು ಕಾರ್ಯಸ್ಥಳದಲ್ಲಿ ಆಕರ್ಷಿತವಾಗುತ್ತವೆ ಮತ್ತು ಕಾರ್ಯನಿರತವಾಗುತ್ತವೆ. ಇದರಿಂದ ವಾತಾವರಣವು ಚೈತನ್ಯಮಯ ಮತ್ತು ಶುದ್ಧವಾಗಿ ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ; ಆದುದರಿಂದ ಸಂತರು ಉದ್ಘಾಟನೆಯನ್ನು ಮಾಡಿದರೆ ತೆಂಗಿನಕಾಯಿಯನ್ನು ಒಡೆಯುವ ಆವಶ್ಯಕತೆಯಿರುವುದಿಲ್ಲ.

೧ಈ. ಪಾಶ್ಚಾತ್ಯ ಸಂಸ್ಕೃತಿಯಂತೆ ರಿಬ್ಬನ್‌ನ್ನು ಕತ್ತರಿಸಿ ಏಕೆ ಉದ್ಘಾಟನೆ ಮಾಡಬಾರದು?

ಯಾವುದೇ ಒಂದು ವಸ್ತುವನ್ನು ಕತ್ತರಿಸುವುದು ವಿಧ್ವಂಸಕ ವೃತ್ತಿಯ ದ್ಯೋತಕವಾಗಿದೆ. ರಿಬ್ಬನ್‌ನ್ನು ಕತ್ತರಿಸುವುದು ಎಂದರೆ ರಿಬ್ಬನ್‌ನ ಅಖಂಡತೆಯನ್ನು ಭಂಗ ಮಾಡುವುದು ಅಥವಾ ಲಯ ಮಾಡುವುದು. ಯಾವುದರಿಂದ ಲಯವು ಸಾಧ್ಯವಾಗುತ್ತದೆಯೋ ಅಂತಹ ಕೃತಿಯು ತಾಮಸಿಕತೆಯ ಲಕ್ಷಣವಾಗಿದೆ. ರಿಬ್ಬನ್ ಕತ್ತರಿಸುವ ತಾಮಸಿಕ ಕೃತಿಯಿಂದ ಉದ್ಘಾಟನೆಯನ್ನು ಮಾಡಿದರೆ ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಸಾಮಾನ್ಯ ವ್ಯಕ್ತಿಗಳು ರಾಜಸಿಕ ಮತ್ತು ತಾಮಸಿಕ ವೃತ್ತಿಯವರಾಗಿರುತ್ತಾರೆ. ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡುವಾಗ ಅವರಲ್ಲಿನ ಅಹಂಭಾವವು ಜಾಗೃತವಾಗುತ್ತದೆ. ಅವರ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳಿಂದಾಗಿ ಅವರ ಸುತ್ತಲೂ ಇರುವ ವಾಯುಮಂಡಲ ಮತ್ತು ಅವರ ಕೈಯಲ್ಲಿರುವ ಕತ್ತರಿಯೂ ರಜ-ತಮಕಣಗಳಿಂದ ತುಂಬಿಹೋಗುತ್ತದೆ. ಇಂತಹ ಕತ್ತರಿಯ ಸ್ಪರ್ಶದಿಂದ ರಿಬ್ಬನ್‌ನ ಸುತ್ತಲೂ ಇರುವ ವಾಯುಮಂಡಲದಲ್ಲಿನ ರಜ-ತಮ ಕಣಗಳಿಗೆ ವೇಗವು ಪ್ರಾಪ್ತವಾಗುತ್ತದೆ ಮತ್ತು ಕತ್ತರಿಯಿಂದ ರಿಬ್ಬನ್‌ನ್ನು ಕತ್ತರಿಸುವುದರಿಂದ ತುಂಡಾಗುವ ರಿಬ್ಬನ್‌ನಿಂದ ಕಾರಂಜಿಯಂತಹ ರಜ-ತಮಾತ್ಮಕ ಗತಿಮಾನ ಲಹರಿಗಳು ಸಂಪೂರ್ಣ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತವೆ. ಹಿಂದೂ ಧರ್ಮವು ತೊಂದರೆದಾಯಕ ಲಹರಿಗಳನ್ನು ನಿರ್ಮಾಣ ಮಾಡುವ ಕೃತಿಗಳನ್ನು ಮಾಡಲು ಕಲಿಸುವುದಿಲ್ಲ, ಆದುದರಿಂದ ರಿಬ್ಬನ್‌ನ್ನು ಕತ್ತರಿಸಿ ಉದ್ಘಾಟನೆಯನ್ನು ಮಾಡಬಾರದು. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ ೧೮.೧.೨೦೦೫, ಮಧ್ಯಾಹ್ನ ೫.೫೨)

(ಹೆಚ್ಚಿನ ಮಾಹಿತಿ ಮತ್ತು ವಿವರವಾಗಿ ಓದಿ: ಸನಾತನ ಸಂಸ್ಥೆಯ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಯ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಉಡುಗೊರೆ ಕೊಡುವುದು - ಆಧ್ಯಾತ್ಮಿಕ ದೃಷ್ಟಿಕೋನ
ದೀಪ ಪ್ರಜ್ವಲನೆಯಿಂದ ಉದ್ಘಾಟನೆ