ವಿನಾಕಾರಣ ತೊಂದರೆ ಕೊಟ್ಟ ಜಲೀಲಖಾನನಿಗೆ ಪಾಠ ಕಲಿಸುವ ಸಮರ್ಥ ರಾಮದಾಸಸ್ವಾಮಿ !


೧. ಹಿಂದೂ ಧರ್ಮ ಮತ್ತು ಹಿಂದೂ ಸಾಧು-ಸಂತರ ಬಗ್ಗೆ ತಿರಸ್ಕಾರವಿರುವ ಸುಭೇದಾರ ಜಲಾಲಖಾನನು ಜಯರಾಮಸ್ವಾಮೀಯವರ ಪ್ರವಚನದ ಸ್ಥಳಕ್ಕೆ ಹೋಗುವುದು : ಒಮ್ಮೆ ಮಹಾರಾಷ್ಟ್ರದ ಮೀರಜ್‌ನ ಸುಭೇದಾರ ಜಲಾಲಖಾನ ತಿರುಗಾಡುತ್ತಾ ಜಯರಾಮಸ್ವಾಮೀಯವರ ಪ್ರವಚನದ ಸ್ಥಳಕ್ಕೆ ತಲುಪಿದನು. ಜಲಾಲಖಾನನು ಬಾಲ್ಯದಿಂದಲೇ ಹಿಂದೂಗಳ ಬಗ್ಗೆ ಮನಸ್ಸಿನಲ್ಲಿ ದ್ವೇಷ ತುಂಬುವ ವಾತಾವರಣದಲ್ಲಿ ಬೆಳೆದಿದ್ದನು. ಅದರಿಂದ ಹಿಂದೂ ಸಾಧು-ಸಂತರ ಮತ್ತು ಹಿಂದೂ ಧರ್ಮದ ಬಗ್ಗೆ ಅವನ ಮನಸ್ಸಿನಲ್ಲಿ ತಿರಸ್ಕಾರವಿತ್ತು. ಅಲ್ಲಿಗೆ ಬಂದಾಗ ಅವನು, ನೋಡೋಣ ಇವನು ಏನು ಹೇಳುತ್ತಾನೆಂದು ವಿಚಾರ ಮಾಡಿದನು !

೨. ಸಂತರ ಮಾರ್ಗದಿಂದ ಹೋಗುವವರು ಭಗವಂತನ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬ ಜಯರಾಮಸ್ವಾಮಿಯವರ ವಾಕ್ಯ ಕೇಳಿ ಜಲಾಲಖಾನನು ಅವರ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿ ಶ್ರೀರಾಮನ ದರ್ಶನ ಮಾಡಿಕೊಡಲು ಹೇಳುವುದು : ಜಯರಾಮಸ್ವಾಮೀಯವರು ಸತ್ಸಂಗದಲ್ಲಿ ಮಾತನಾಡುತ್ತಾ, ಸಂತರ ಮಾರ್ಗದಿಂದ ಹೋಗುವವರು ಭಗವಂತನ ಪ್ರಾಪ್ತಿಮಾಡಿಕೊಳ್ಳಬಹುದು ಎಂದು ಹೇಳಿದರು. (ಸಂತರು ಹೇಳಿದಂತೆ ಆಚರಣೆ ಮಾಡುವರಿಗೆ ಭಗವಂತನ ಪ್ರಾಪ್ತಿಯಾಗಬಹುದು ಎಂದು ಈ ವಚನದ ಭಾವಾರ್ಥವಿದೆ.) ಇದನ್ನು ಕೇಳಿದಾಗ ಜಲಾಲಖಾನನ ಮನಸ್ಸಿನಲ್ಲಿ ಜಯರಾಮಸ್ವಾಮಿಯವರಿಗೆ ಕಳಂಕಿಸುವ ಸಂಚನ್ನು ರೂಪಿಸಿದನು. ಮರುದಿನ ಅವನು ಅವರನ್ನು ಕರೆದು, ನೀವು ನಿನ್ನೆ ಸತ್ಸಂಗದಲ್ಲಿ ಸಂತರು ಹೇಳಿದಂತೆ ಆಚರಣೆ ಮಾಡುವರಿಗೆ ಭಗವಂತನ ಪ್ರಾಪ್ತಿಯಾಗಬಹುದು, ಎಂದಿದ್ದೀರಿ. ನಾನು ನಿಮ್ಮ ಮಾರ್ಗದಲ್ಲಿ ನಡೆಯುತ್ತೇನೆ. ನಂತರ ನೀವು ನಿಮ್ಮ ಇಷ್ಟದೇವರಾದ ಶ್ರೀರಾಮನ ಭೇಟಿ ಮಾಡಿಸಿರಿ ಮತ್ತು ಅವನ ದರ್ಶನ ಮಾಡಿಸಿರಿ. ಹೋಗಿ ವ್ಯವಸ್ಥೆ ಮಾಡಿರಿ. ನಾಳೆ ತನಕ ಸಮಯ ಕೊಡುತ್ತೇನೆ, ಇಲ್ಲದಿದ್ದರೆ ಅರಿತುಕೊಳ್ಳಿರಿ ಎಂದು ಹೇಳಿದನು.

೩. ಜಯರಾಮಸ್ವಾಮಿಯವರು ಸಮರ್ಥ ರಾಮದಾಸಸ್ವಾಮಿಯವರ ಸಹಾಯ ಕೇಳುವುದು
ಅರಿತುಕೊಳ್ಳಿರಿ, ಅಂದರೆ ಕಠಿಣ ಶಿಕ್ಷೆ ದೊರೆಯುತ್ತದೆ. ಜಯರಾಮಸ್ವಾಮೀಯವರು ಸ್ವಲ್ಪ ಹೆದರಿದರು. ಅವರು ನದಿದಂಡೆಗೆ ಹೋದರು. ಅಲ್ಲಿ ಸಮರ್ಥ ರಾಮದಾಸಸ್ವಾಮೀಯವರು ಸ್ನಾನಕ್ಕೆ ಬಂದಿದ್ದರು. ಸಮರ್ಥ ರಾಮದಾಸಸ್ವಾಮೀಯವರು ಸ್ನಾನ ಮಾಡಿ ನದಿಯಿಂದ ಹೊರಗೆ ಬಂದಾಗ ಜಯರಾಮಸ್ವಾಮೀಯವರು ಅವರಿಗೆ ಎಲ್ಲ ಪ್ರಸಂಗವನ್ನು ಹೇಳಿದರು. ಆಗ ಅವರಲ್ಲಿ ಮುಂದಿನ ಸಂಭಾಷಣೆಯಾಯಿತು.
ಸಮರ್ಥ ರಾಮದಾಸಸ್ವಾಮೀ (ಸ್ವಲ್ಪ ಸಿಟ್ಟುಗೊಂಡು) : ನಾನು ಏನು ಮಾಡಲಿ ? ಇಂತಹ ಶ್ರದ್ಧಾಭಂಜಕ ಮತ್ತು ನಿಂದಕ ಜನರೊಂದಿಗೆ ಮುಂಜಾಗ್ರತೆ ವಹಿಸಿ ಮಾತನಾಡಬೇಕು.
ಜಯರಾಮಸ್ವಾಮೀ : ಮಹಾರಾಜರೇ, ಈಗ ಈ ಬಲಿಷ್ಠನೊಂದಿಗೆ ಗಂಟು ಬಿದ್ದಿದೆ ಮತ್ತು ಇದರಿಂದ ಕೇವಲ ನೀವೇ ನನಗೆ ಉಳಿಸಬಹುದು.
ಸಮರ್ಥ ರಾಮದಾಸಸ್ವಾಮೀ : ಸರಿ. ಬೆಳಗ್ಗೆ ಸಂತರು ಅವರ ಪೂಜೆ-ಪುನಸ್ಕಾರ, ನಿಯಮ ಇತ್ಯಾದಿ ಮಾಡಿ ಹೊರಡುತ್ತಾರೆ. ಆಗ ನೀವು ಅವರ ಹಿಂದೆ ನಡೆಯಿರಿ. ನಾವು ಯಾವ ಮಾರ್ಗದಿಂದ ಹೋಗುವೆವೋ ಅದೇ ಮಾರ್ಗದಿಂದ ನೀವು ಬಂದರೆ ಮಾತ್ರ ಶ್ರೀರಾಮನೊಂದಿಗೆ ನಿಮ್ಮ ಭೇಟಿ ಮಾಡಿಸುವೆವು ಎಂದು ಜಲಾಲಖಾನನಿಗೆ ಸಂದೇಶ ಕಳಿಸಿರಿ.
ಜಲಾಲಖಾನನಿಗೆ ಅದರಂತೆ ಸಂದೇಶವನ್ನು ಕಳುಹಿಸಲಾಯಿತು. ಖಾನನು, ಹೇಗೆ ದರ್ಶನ ಮಾಡಿಸುತ್ತಾನೆ ನೋಡುತ್ತೇನೆ. ಮಾಡಿಕೊಡದಿದ್ದರೆ ಒಬ್ಬನದ್ದಲ್ಲ ಇಬ್ಬರು ಸಂತರ ಅವಸ್ಥೆ ಮಾಡುತ್ತೇನೆ, ಎಂದನು.

೪. ಸಮರ್ಥ ರಾಮದಾಸಸ್ವಾಮೀಯವರು ಖಾನನಿಗೆ ಅವರ ಹಿಂದೆ ಬರಲು ಹೇಳುವುದು ಲಘಿಮಾ ಸಿದ್ಧಿಯಿಂದ ಸಮರ್ಥರು ಜಯರಾಮಸ್ವಾಮೀಯವರಿಗೆ ಕರೆದುಕೊಂಡು ಸೂಕ್ಷ್ಮ-ರೂಪದಿಂದ ಕೋಟೆಯ ತೀರಾ ಚಿಕ್ಕ ರಂಧ್ರದಿಂದ ಕೋಟೆಯನ್ನು ಪ್ರವೇಶಿಸುವುದು; ಆದರೆ ಜಲಾಲಖಾನನಿಗೆ ಅದರಂತೆ ಹೋಗಲು ಬರದಿರುವುದು : ಜಲಾಲಖಾನನು ಬಂದನು. ಸಮರ್ಥರು ಅವನಿಗೆ ಹಿಂದೆ ಬರಲು ಹೇಳಿದರು. ಎಲ್ಲರೂ ನಡೆಯುತ್ತಾ ಮೀರಜ ಕೋಟೆಯ ವರೆಗೆ ತಲುಪಿದರು. ಕೋಟೆಯ ಒಳಗಿನಿಂದ ಗುಂಡು ಹಾರಿಸಲು ಚಿಕ್ಕ ಚಿಕ್ಕ ರಣಧ್ರಗಳಿದ್ದವು, ಅವುಗಳ ಪೈಕಿ ಒಂದು ರಂಧ್ರದತ್ತ ನೋಡುತ್ತಾ ಲಘಿಮಾ ಸಿದ್ಧಿಯ ಬಳಕೆ ಮಾಡಿದರು. ಸಂಕಲ್ಪ ಮಾಡಿ ಸಮರ್ಥರು ತೀರಾ ಚಿಕ್ಕವರಾದರು ಮತ್ತು ಆ ರಂಧ್ರದಿಂದ ಕೋಟೆಯೊಳಗೆ ಹೋದರು. ಅವರು ಜಯರಾಮ ಸ್ವಾಮೀಯವರಿಗೂ ಸಂಕಲ್ಪಬಲದಿಂದ ಕೊಂಡೊಯ್ದರು. ನಂತರ ಸಮರ್ಥರು, ‘ಜಲಾಲಖಾನ್, ಯಾವ ಮಾರ್ಗದಿಂದ ನಾವು ಬಂದಿದ್ದೇವೆಯೋ ಅದೇ ಮಾರ್ಗದಿಂದ ನೀವು ಕೂಡಾ ಬನ್ನಿರಿ. ಶ್ರೀರಾಮನು ಇಲ್ಲಿಯೇ ನಿಂತಿದ್ದಾನೆ. ಬನ್ನಿರಿ ನಾವು ನಿಮಗೆ ತೋರಿಸುತ್ತೇವೆ’ ಎಂದು ಹೇಳಿದರು.

೫. ಆಧಿದೈವಿಕ ಮತ್ತು ಆಧ್ಯಾತ್ಮಿಕ ಅಧಿಕಾರವಿರುವ ಸಂತರ ಶ್ರೇಷ್ಠತೆಯು ಖಾನನ ಗಮನಕ್ಕೆ ಬಂದು ಅವನು ಶರಣಾಗಿ ಕ್ಷಮೆ ಕೇಳುವುದು
ಜಲಾಲಖಾನನು ನಾಚಿಕೆಯಿಂದ ತಲೆ ತಗ್ಗಿಸಿದನು. ದೇಹಬುದ್ಧಿಯಲ್ಲಿ ಜೀವಿಸುವ, ಅಹಂಕಾರಿ ಮತ್ತು ಆಧಿಭೌತಿಕ ಬಲವನ್ನೇ ಎಲ್ಲ ಎಂದು ತಿಳಿಯುವ ಜಲಾಲಖಾನನು ಆ ರಂಧ್ರದಿಂದ ಹೇಗೆ ಹೋಗುವನು ? ಮಹಾಪುರುಷರಲ್ಲಿ ಆಧಿದೈವಿಕ ಮತ್ತು ಆಧ್ಯಾತ್ಮಿಕ ಅಧಿಕಾರವಿರುತ್ತದೆ. ಆಧಿಭೌತಿಕದವರ ಬಲವು ಅಲ್ಲೇನು ಮಾಡುವುದು ! ಅವನು ಸಮರ್ಥರಲ್ಲಿ ಕ್ಷಮೆ ಯಾಚಿಸಿದನು ಮತ್ತು ಇನ್ನುಮುಂದೆ ನಾನು ಯಾವುದೇ ಹಿಂದೂ ಸಾಧುವಿನ ಸತ್ಸಂಗದಲ್ಲಿನ ಸಂತ-ವಚನದ ಅಪಾರ್ಥ ಮಾಡಿ ಅವರಿಗೆ ತೊಂದರೆ ಕೊಡುವ ದುಃಸಾಹಸವನ್ನು ಮಾಡುವುದಿಲ್ಲ ಎಂದು ಹೇಳಿದನು. (ಋಷಿಪ್ರಸಾದ, ಫೆಬ್ರವರಿ ೨೦೧೨)

ಕೃಪೆ - ದೈನಿಕ ಸನಾತನ ಪ್ರಭಾತ

No comments:

Post a Comment

Note: only a member of this blog may post a comment.