ಗ್ರಂಥ ಪರಿಚಯ - 'ಶಿವ'

ನಮಗೆ ಯಾವುದಾದರೊಂದು ದೇವತೆಯ ಬಗೆಗಿನ ಅಧ್ಯಾತ್ಮಶಾಸ್ತ್ರದ ಮಾಹಿತಿಯು ತಿಳಿದರೆ, ಆ ದೇವತೆಯ ಬಗೆಗಿನ ಶ್ರದ್ಧೆಯು ಹೆಚ್ಚಾಗಲು ಸಹಾಯವಾಗುತ್ತದೆ. ಶ್ರದ್ಧೆಯು ಹೆಚ್ಚಾದರೆ ಉಪಾಸನೆಯು ಭಾವಪೂರ್ಣವಾಗಿ ಆಗುತ್ತದೆ. ಭಾವಪೂರ್ಣವಾಗಿ ಮಾಡುವ ಉಪಾಸನೆಯು ಹೆಚ್ಚು ಲಾಭದಾಯಕವಾಗಿರುತ್ತದೆ. ಆದುದರಿಂದ ಈ ಗ್ರಂಥದಲ್ಲಿ ಇತರ ಕಡೆಗಳಲ್ಲಿ ಎಲ್ಲಿಯೂ ಉಪಲಬ್ಧವಿಲ್ಲದ, ಅಧ್ಯಾತ್ಮಶಾಸ್ತ್ರದ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ.

ಶಿವನ ಕೆಲವು ಹೆಸರುಗಳು ಮತ್ತು ಗಂಗೆ, ಮೂರನೆಯ ಕಣ್ಣು, ನಾಗ, ಭಸ್ಮ, ರುದ್ರಾಕ್ಷಿ ಮುಂತಾದ ಶಿವನ ವೈಶಿಷ್ಟ್ಯಗಳ ಆಧ್ಯಾತ್ಮಿಕ ಅರ್ಥ; ಮಹಾತಪಸ್ವಿ, ಭೂತಗಳ ಸ್ವಾಮಿ, ವಿಶ್ವದ ಉತ್ಪತ್ತಿ ಮಾಡುವವನು ಇಂತಹ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಕಾರ್ಯ; ರುದ್ರ, ಕಾಲಭೈರವ, ನಟರಾಜ ಇತ್ಯಾದಿ ರೂಪಗಳು; ಜ್ಯೋತಿರ್ಲಿಂಗ ಮುಂತಾದವುಗಳ ತಾತ್ತ್ವಿಕ ಮಾಹಿತಿ; ಭಸ್ಮವನ್ನು ಹಚ್ಚಿಕೊಳ್ಳುವುದು, ನಂದಿಯ ಕೊಂಬುಗಳ ಮೂಲಕ ಶಿವಲಿಂಗದ ದರ್ಶನ ಪಡೆಯುವುದು, ಶಿವನಿಗೆ ಬಿಲ್ವ ಮತ್ತು ಅಕ್ಷತೆ ಅರ್ಪಿಸುವುದು; ಆದರೆ ಅರಿಶಿನ-ಕುಂಕುಮ ಅರ್ಪಿಸದಿರುವುದು, ಮುಂತಾದ ಉಪಾಸನೆಗೆ ಸಂಬಂಧಿಸಿದ ಪ್ರಾಯೋಗಿಕ ಮಾಹಿತಿಯನ್ನೂ ಶಾಸ್ತ್ರಸಹಿತ ನೀಡಲಾಗಿದೆ. ಶೃಂಗದರ್ಶನ, ಶಿವನಿಗೆ ಬಿಲ್ವವನ್ನು ಅರ್ಪಿಸುವುದು, ಅಭಿಷೇಕ ಮಾಡುವುದು ಮುಂತಾದವುಗಳ ಸಮಯದಲ್ಲಿ ಸೂಕ್ಷ್ಮದಲ್ಲಿ ನಿರ್ದಿಷ್ಟವಾಗಿ ಏನು ನಡೆಯುತ್ತದೆ ಎಂದು ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಇದನ್ನು ತಿಳಿದುಕೊಳ್ಳುವ ಕ್ಷಮತೆಯಿರುವ ಸನಾತನದ ಸಾಧಕರು ಮಾಡಿದ ‘ಸೂಕ್ಷ್ಮಜ್ಞಾನದ ಪರೀಕ್ಷಣೆ’ ಮತ್ತು ತೆಗೆದಿರುವ ‘ಸೂಕ್ಷ್ಮಜ್ಞಾನದ ಚಿತ್ರ’ಗಳು ಈ ಗ್ರಂಥದ ಒಂದು ವೈಶಿಷ್ಟ್ಯವಾಗಿದೆ.

ಶಿವನ ಬಗೆಗಿನ ಈ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯು ಶಿವಭಕ್ತರಿಗೆ ಹಾಗೂ ಶಿವನ ಸಾಂಪ್ರದಾಯಿಕ ಸಾಧನೆಯನ್ನು ಮಾಡುವವರಿಗೆ ಖಂಡಿತವಾಗಿಯೂ ಉಪಯುಕ್ತವಾಗುವುದು; ಆದರೆ ಸಾಮಾನ್ಯ ವ್ಯಕ್ತಿಯು ಮುಂದಿನ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವರಿಗೆ ರಾಮಾಯಣವನ್ನು ಓದಿದ ಮೇಲೆ ಶ್ರೀರಾಮನ, ಶ್ರೀಗಣಪತಿ ಅಥರ್ವಶೀರ್ಷವನ್ನು ಓದಿದ ಮೇಲೆ ಶ್ರೀಗಣಪತಿಯ ಮತ್ತು ದೇವೀಮಹಾತ್ಮೆಯನ್ನು ಓದಿದ ಮೇಲೆ ದೇವಿಯ ಉಪಾಸನೆಯನ್ನು ಮಾಡಬೇಕೆಂದು ಅನಿಸುತ್ತದೆ. ಅದರಂತೆ ಈ ಪುಸ್ತಕದಲ್ಲಿನ ಮಾಹಿತಿಯನ್ನು ಓದಿ ಕೆಲವರಿಗೆ ಶಿವನ ಉಪಾಸನೆಯನ್ನು ಮಾಡಬೇಕೆಂದು ಅನಿಸಬಹುದು. ಇಂತಹ ವ್ಯಕ್ತಿಗಳು ಗಮನದಲ್ಲಿಡಬೇಕಾದ ವಿಷಯವೇನೆಂದರೆ ಈ ರೀತಿಯ ಉಪಾಸನೆಯಿಂದ ಎಲ್ಲರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗಲಾರದು; ಏಕೆಂದರೆ ಶಿವನ ಉಪಾಸನೆ ಮಾಡುವುದು ಅವರಿಗೆ ಅವಶ್ಯಕವಾಗಿದ್ದರೆ ಮಾತ್ರ ಅದರಿಂದ ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ. ಇಲ್ಲವಾದರೆ ಬಹಳಷ್ಟು ಸಾಧನೆಯನ್ನು ಮಾಡಿಯೂ ಹೆಚ್ಚು ಉನ್ನತಿಯಾಗಲಾರದು. ಶಿವನ ಉಪಾಸನೆಯು ಮುಂದಿನ ಹಂತದ ಉಪಾಸನೆಯಾಗಿದೆ. ಅದು ಆವಶ್ಯಕವಾಗಿದೆಯೋ ಅಥವಾ ಇಲ್ಲವೋ ಎಂಬುದು ಸಾಮಾನ್ಯ ವ್ಯಕ್ತಿಗೆ ತಿಳಿಯುವುದಿಲ್ಲ. ಅದು ಆಧ್ಯಾತ್ಮಿಕ ಉನ್ನತಿ ಹೊಂದಿದವರಿಗೆ ಮಾತ್ರ ತಿಳಿಯುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಯು ಈ ಗ್ರಂಥವನ್ನು ಮಾಹಿತಿಗಾಗಿ ಮಾತ್ರ ಓದಬೇಕು. ಮುಂದೆ ಶಿವನ ಅನುಭೂತಿಯು ಬರಲು ಸಾಧನೆಯ ಮೊದಲನೆಯ ಹಂತವೆಂದು ತಮ್ಮ ಕುಲದೇವತೆಯ ಹೆಸರನ್ನು ‘ಶ್ರೀ.... (ಕುಲದೇವ/ಕುಲದೇವಿಯ ಹೆಸರಿಗೆ ಚತುರ್ಥಿ ವಿಭಕ್ತಿಯ ಪ್ರತ್ಯಯವನ್ನು ಹಾಕಿ) ... ನಮಃ|’ ಈ ಪದ್ಧತಿಯಲ್ಲಿ (ಉದಾ.ಕುಲದೇವಿಯು ಭವಾನಿಯಾಗಿದ್ದರೆ ‘ಶ್ರೀ ಭವಾನೀದೇವ್ಯೈ ನಮಃ’ ಎಂದು) ಜಪಿಸಬೇಕು. ಮುಂದೆ ಗುರುಗಳು ಶಿವನ ಜಪವನ್ನು ಮಾಡಲು ಹೇಳಿದರೆ, ಶಿವನ ಬಗ್ಗೆ ವಿಶ್ವಾಸ ಹೆಚ್ಚಾಗಲು ಈ ಮಾಹಿತಿಯು ಉಪಯೋಗಕ್ಕೆ ಬರಬಹುದು. ಇತರರಿಗೆ ಈ ಪುಸ್ತಕದಲ್ಲಿನ ಮಾಹಿತಿಯನ್ನು ಓದಿ ಶಿವನ ಬಗ್ಗೆ ಹೊಸ ವಿಷಯಗಳು ತಿಳಿದವು ಎಂದೆನಿಸಬಹುದು.

ಶಿವನ ಉಪಾಸಕರ ಶಿವನ ಮೇಲಿನ ಶ್ರದ್ಧೆಯು ಈ ಗ್ರಂಥವನ್ನು ಓದಿ ದೃಢವಾಗಲಿ ಮತ್ತು ಅವರಿಗೆ ಇನ್ನೂ ಹೆಚ್ಚು ಸಾಧನೆಯನ್ನು ಮಾಡಲು ಪ್ರೇರಣೆಯು ಸಿಗಲೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

ಗ್ರಂಥದಲ್ಲಿರುವ ವಿಷಯಗಳ ಪರಿವಿಡಿಯನ್ನು ಡೌನಲೋಡ್ ಮಾಡಿಕೊಳ್ಳಿ - ಶಿವ ಗ್ರಂಥ ಪರಿವಿಡಿ

ಇತರ ವಿಷಯಗಳು
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
© Sanatan Sanstha - All Rights Reser
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು? ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ? ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ? ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು? ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

Original Post from: http://dharmagranth.blogspot.in/2012/11/blog-post_6767.html
© Sanatan Sanstha - All Rights Reserved
Dharma Granth

No comments:

Post a Comment

Note: only a member of this blog may post a comment.