ಘಂಟಾನಾದದ ಮಹತ್ವ

ಘಂಟೆಯ ಕೋಲು ಮತ್ತು ಘಂಟೆಯ ವಿಶಿಷ್ಟ ಆಕಾರದಿಂದಾಗಿ ಭೂಮಿಲಹರಿಗಳು ಘಂಟೆಯ ಕೋಲಿನತ್ತ ಆಕರ್ಷಿತವಾಗುತ್ತವೆ ಮತ್ತು ಈ ಭೂಮಿಲಹರಿಗಳು ಘಂಟೆಯ ವಿಶಿಷ್ಟ ಆಕಾರದಲ್ಲಿ ಘನೀಕರಣಗೊಳ್ಳುತ್ತವೆ. ಘಂಟೆಯ ನಾದವನ್ನು ಮಾಡಿದಾಗ ಘಂಟೆಯಲ್ಲಿ ಘನೀಕರಣವಾದ ವಾಯುಮಂಡಲದಲ್ಲಿನ ಲಹರಿಗಳು ಕಂಪನಗೊಳ್ಳುತ್ತವೆ ಮತ್ತು ಇದರಿಂದ ಉತ್ಪನ್ನವಾದ ನಾದ ಶಕ್ತಿಯ ಕಡೆಗೆ ಬ್ರಹ್ಮಾಂಡದಲ್ಲಿನ ಶಿವತತ್ತ್ವವು ಆಕರ್ಷಿತವಾಗುತ್ತದೆ. ಶಿವತತ್ತ್ವದೊಂದಿಗೆ ಸಂಬಂಧಿತ ಈ ರಜೋಗುಣಯುಕ್ತ ಮಾರಕ ನಾದಲಹರಿಗಳು ಪಾತಾಳದಿಂದ ಹರಡುವ ತೊಂದರೆದಾಯಕ ಲಹರಿಗಳಲ್ಲಿನ ರಜ-ತಮ ಕಣಗಳನ್ನು ವಿಘಟಿಸುತ್ತವೆ.

ಘಂಟೆಯ ನಾದದಿಂದ ಭೂಮಿಗೆ ಸಮೀಪದ ಅಧೋಗಾಮಿ ದಿಶೆಯಲ್ಲಿ ಕಾರ್ಯನಿರತವಾಗಿರುವ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಂಖನಾದದಿಂದ ಊರ್ಧ್ವದಿಶೆಯಲ್ಲಿ ಕಾರ್ಯಮಾಡುವ ವಾಯುಮಂಡಲದಲ್ಲಿನ ಲಹರಿಗಳ ಶುದ್ಧೀಕರಣವಾಗುತ್ತದೆ. ಆದುದರಿಂದ ಪೂಜಾವಿಧಿಯಲ್ಲಿ ಶಂಖನಾದಕ್ಕೆ ಹಾಗೂ ಘಂಟಾನಾದಕ್ಕೆ ಬಹಳ ಮಹತ್ವವಿದೆ. ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೫, ಮಧ್ಯಾಹ್ನ ೧.೪೩)

ಘಂಟೆಯ ನಾದ ಮಾಡುವಾಗ ಆಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ
ಅ. ಸೂಕ್ಷ್ಮಜ್ಞಾನದ ಚಿತ್ರದ ಸತ್ಯತೆ: ಶೇ.೮೦
ಆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಒಳ್ಳೆಯ ಸ್ಪಂದನಗಳು: ಶೇ.೨ - ಪ.ಪೂ.ಡಾ.ಆಠವಲೆ


ಇ. ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ: ಈಶ್ವರೀ ತತ್ತ್ವ ಶೇ.೧.೨೫, ಚೈತನ್ಯ (ಸಗುಣ-ನಿರ್ಗುಣ) ಶೇ.೨ ಮತ್ತು ಶಕ್ತಿ ಶೇ.೩.೨೫

ಈ.ಇತರ ಅಂಶಗಳು
೧. ಈಶ್ವರನ ಪೂಜೆಯಲ್ಲಿ ಆಕರ್ಷಿಸುವ ಸ್ಪಂದನಗಳು ನಿರ್ಗುಣ ಸ್ವರೂಪದಲ್ಲಿರುತ್ತವೆ. ಘಂಟೆಯ ನಾದದಿಂದಾಗಿ ದೇವತೆಯ ಈ ಸ್ಪಂದನಗಳು ಸಗುಣ-ನಿರ್ಗುಣ ಸ್ವರೂಪದಲ್ಲಿ ಬರುತ್ತವೆ ಮತ್ತು ಈ ಸ್ಪಂದನಗಳು ಭಕ್ತರಿಗೆ ದೊರಕುತ್ತವೆ.
೨. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ನಿರ್ಮಿಸಿದ ಕಪ್ಪು ಶಕ್ತಿಯ ಮೋಡಗಳು ಘಂಟೆಯ ನಾದದಿಂದ ದೂರವಾಗುತ್ತವೆ. ಹಾಗೆಯೇ ಸೂರ್ಯಪ್ರಕಾಶದಂತೆ ಚೈತನ್ಯದ ಕಿರಣವು ಭಕ್ತರೆಡೆಗೆ ಬರುತ್ತದೆ.
೩. ಘಂಟೆಯನ್ನು ಅಲುಗಾಡಿಸಿದುದರಿಂದ ವಾಯುತತ್ತ್ವ ಮತ್ತು ಅದರ ನಾದದಿಂದ ಆಕಾಶತತ್ತ್ವ ಕಾರ್ಯನಿರತವಾಗುತ್ತದೆ.
೪. ಘಂಟೆಯ ನಾದದಿಂದ ‘ಣಂ’ ಎಂಬ ಬೀಜಮಂತ್ರವು ಕೇಳಿಸುತ್ತದೆ.
೫. ವ್ಯಕ್ತಿಯು ಘಂಟೆಯನ್ನು ಭಾವಪೂರ್ಣವಾಗಿ ಬಾರಿಸಿದರೆ ಅದರಿಂದ ಸತ್ತ್ವಪ್ರಧಾನ ಸ್ಪಂದನಗಳು ಪ್ರಕ್ಷೇಪಿಸುತ್ತವೆ ಮತ್ತು ಭಾವಪೂರ್ಣವಾಗಿ ಬಾರಿಸದಿದ್ದರೆ ಸತ್ತ್ವ-ಪ್ರಧಾನ ಘಂಟೆಯಿಂದಲೂ ರಜೋಗುಣಿ ಸ್ಪಂದನಗಳು ಪ್ರಕ್ಷೇಪಿಸಬಹುದು.

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಕಿರುಗ್ರಂಥ 'ದೇವರಕೋಣೆ ಮತ್ತು ಪೂಜೆಯ ಉಪಕರಣಗಳು')

ಸಂಬಂಧಿತ ಲೇಖನಗಳು
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

No comments:

Post a Comment

Note: only a member of this blog may post a comment.