ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೊಳ್ಳಬಾರದು - ೩೫೬

ಒಬ್ಬ ಹುಡುಗನು ಮನೆಯಿಂದ ಓಡಿಹೋದನು. ಆಗ ಅವನ ತಾಯಿಯು "ಅವನು ಎಲ್ಲಿಯೇ ಇರಲಿ, ಆದರೆ ಸುಖವಾಗಿರಲಿ", ಎಂದು ಅಂದಳು. ಅದರಂತೆ ನೀವು ಎಲ್ಲಿಯೇ ಇದ್ದರೂ ನಾಮದಲ್ಲಿರಬೇಕು. ನಾಮವನ್ನು ಅತ್ಯಂತ ಆಗ್ರಹದಿಂದ ತೆಗೆದುಕೊಳ್ಳಿರಿ. ಶ್ರದ್ಧೆಯಿಂದ ತೆಗೆದುಕೊಂಡರೆ ಹೆಚ್ಚು ಉತ್ತಮ. ವೃತ್ತಿಗಳನ್ನು ಶಾಂತಗೊಳಿಸಿ ನಾಮದಲ್ಲಿದ್ದರೆ ಇನ್ನೂ ಹೆಚ್ಚು ಉತ್ತಮ; ವನಸ್ಪತಿಯ ಎಲೆಗಳ ರಸ ತೆಗೆಯುವುದಕ್ಕಾಗಿ, ಕೆಲವು ಎಲೆಗಳಲ್ಲಿ ಜೇನುತುಪ್ಪ ಹಾಕಬೇಕಾಗುತ್ತದೆ. ಕೆಲವು ಎಲೆಗಳಲ್ಲಿ ಹಾಲು, ತುಪ್ಪ ಅಥವಾ ನೀರು ಹಾಕಬೇಕಾಗುತ್ತದೆ. ಅದರಂತೆ ಭಗವಂತನ ಪ್ರೇಮ ಪ್ರಾಪ್ತವಾಗುವುದಕ್ಕಾಗಿ ಹಾಗೂ ನಾಮದಲ್ಲಿ ರುಚಿ ನಿರ್ಮಾಣವಾಗುವುದಕ್ಕಾಗಿ, ಆ ನಾಮದಲ್ಲಿ ಸ್ವಲ್ಪ ಶ್ರದ್ಧೆ ಹಾಕಬೇಕು. "ನಾನು ಬ್ರಹ್ಮ ಇರುತ್ತೇನೆ", ಈ ಅನುಭವದಲ್ಲಿಯೂ ಕೂಡ ಅಹಂಭಾವ ಇರುತ್ತದೆ. ನಾಮವು ಅದಕ್ಕೂ ಆಚೆಗೆ ಇರುತ್ತದೆ. ಆದ್ದರಿಂದ ಭಗವಂತನ ನಾಮಸ್ಮರಣೆ ನಿರಂತರ ಮಾಡಬೇಕು; ಅದರಿಂದ ಪ್ರಪಂಚವು ಸುಲಭವಾಗುತ್ತದೆ. ನಾಮದ ಸತ್ತೆಯು ಅತ್ಯಂತ ಬಲವತ್ತರವಾಗಿರುತ್ತದೆ. ಜಗತ್ತಿನಲ್ಲಿ ಎಂಥ ಪಾಪವೂ ನಾಮದ ಮುಂದೆ ನಿಲ್ಲಲು ಶಕ್ಯವಾಗುವುದಿಲ್ಲ. ನಾಮವು ಭಗವಂತನ ಶತ್ರುವಿಗೂ ಸಹಾಯ ಮಾಡುತ್ತದೆ. ಅಂದ ಮೇಲೆ ನಮಗೆ ಸಹಾಯ ಮಾಡೇ ಮಾಡುತ್ತದೆ. ರೂಪದ ಧ್ಯಾನವು ಮನಸ್ಸಿನಲ್ಲಿ ಬರದೆ ಇದ್ದರೂ ನಾಮ ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ಸತ್ಯಕ್ಕೆ ಏನಾದರೂ ರೂಪ ಕೊಡದ ಹೊರತು ನಮಗೆ ಅದರ ಅನುಸಂಧಾನ ಇಟ್ಟುಕೊಳ್ಳಲಿಕ್ಕಾಗುವುದಿಲ್ಲ.. ನಾಮವು ಅದರ ರೂಪವಾಗಿರುತ್ತದೆ. ಆದ್ದರಿಂದ ನಾಮದ ನಿರಂತರ ಅನುಸಂಧಾನವಿರಬೇಕು. ಭಗವಂತನ ನಾಮದಲ್ಲಿ ಪ್ರತಿಫಲದ ಅಪೇಕ್ಷೆ ಇರುವುದಿಲ್ಲ. ಆದ್ದರಿಂದ ಅದು ಅಪೂರ್ಣವಾಗಿರುವುದಿಲ್ಲ. ದಡ್ಡ ಜನರಿಗೆ ನಾಮ ತೆಗೆದುಕೊಳ್ಳಲು ಹೇಳಿದರೆ ಅವರು ಕೂಡಲೇ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ವಿದ್ವಾಂಸರು ಮಾತ್ರ " ನಾಮದ ಪ್ರೇಮವಿದ್ದರೆ, ನಾನು ನಾಮ ತೆಗೆದುಕೊಳ್ಳುತ್ತೇನೆ." ಎಂದು ಅನ್ನುತ್ತಾರೆ. ವಿಷಯರೂಪೀ ಸರ್ಪದ ವಿಷವು ಇಳಿದಿರದಿದ್ದರೆ ಭಗವಂತನ ಅಮೃತದಂತೆ ಮಧುವಾಗಿರುವ ನಾಮವು ನಮಗೆ ರುಚಿಸಲಾರದು. ಇದಕ್ಕಾಗಿ ಈ ಕ್ಷಣದಿಂದಲೇ ನಾಮ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ನಾವು ರಾಮನವರಾಗಬೇಕು ಹಾಗೂ ಅವನಿಗೆ ಏನು ಸೇರುತ್ತದೆಯೋ ಅದನ್ನು ಮಾಡಬೇಕು. ಭಗವಂತನಿಗೆ ಬುಧ್ಧಿವಂತಿಕೆಯಿಂದ ಶರಣು ಹೋಗದೆ ಅಜ್ಞಾನದ ಭಾವದಿಂದ ಶರಣು ಹೋಗಬೇಕು. ಭಗವಂತನಿಗೆ ಅನನ್ಯವಾಗಿ ಶರಣು ಹೋಗಿ ಅನುಭವ ಪಡೆಯಬೇಕು. ನೀತಿಯಿಂದ ನಡೆಯಬೇಕು. ಭಕ್ತಿ ಮಾಡಬೇಕು. ಅಂದರೆ ಭಗವಂತನು ಪ್ರಸನ್ನನಾಗುತ್ತಾನೆ.

ಜ್ಞಾನವು ಶ್ರೇಷ್ಠವಾದದ್ದೇನೋ ನಿಜ. ಆದರೆ ಅದು ಭಕ್ತಿಯ ಹೊರತಾಗಿ ಜೀವಂತವಾಗಿರಲಾರದು. ಏಕೆಂದರೆ ಭಗವಂತನಿಂದ ಎಂದೂ ವಿಭಕ್ತನಾಗದಿರುವವನೆ ಭಕ್ತನಾಗಿರುತ್ತಾನೆ ಹಾಗೂ ಅದು ಭಕ್ತಿಯ ಆಧಾರದಿಂದಲೇ ಉಳಿಯುತ್ತದೆ. ನಿಜವಾದ ಭಕ್ತನು ಜ್ಞಾನಿಯೇ ಆಗಿರುತ್ತಾನೆ. ಭಗವಂತನಿಗಾಗಿಯೇ ಭಗವಂತನು ಬೇಕೆಂದು ಭಕ್ತಿ ಮಾಡುವವರು ಲಕ್ಷದಲ್ಲಿ ಒಬ್ಬರು. ಇದೇ ನಿಜವಾದ ಭಕ್ತಿ ಎಂದು ತಿಳಿಯಬೇಕು. ನಾಮಕ್ಕಾಗಿಯೇ ನಾವು ನಾಮ ತೆಗೆದುಕೊಳ್ಳಬೇಕು. ರಾಮನು ಇಟ್ಟದ್ದರಲ್ಲಿಯೇ ಸಮಾಧಾನ ಹೊಂದಬೇಕು. ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೂಳ್ಳಬಾರದು. ಅವನು ಸಾಧ್ಯನಾಗಿರಬೇಕು. ಯಾರು ಭಗವಂತನ ನಾಮದಲ್ಲಿ ತಮ್ಮ ಆಯುಷ್ಯವನ್ನು ಕಳೆದಿರುವರೋ, ಅವರು ಹುಟ್ಟಿ ಬಂದು ಎಲ್ಲವನ್ನೂ ಸಾಧಿಸಿದರು ಹಾಗೂ ಜೀವನವನ್ನು ಸಾರ್ಥಕ ಮಾಡಿಕೊಂಡರು.

No comments:

Post a Comment

Note: only a member of this blog may post a comment.